HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ ಪ್ರದಕ್ಷಿಣೆ ಪ್ರಾರಂಭಗೊಳ್ಳಲಿದೆ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸ ಪ್ರಯುಕ್ತ ಶ್ರೀ ದೇವರ ಪ್ರಿತ್ಯರ್ಥ “ಲಕ್ಷ ಪ್ರದಕ್ಷಿಣೆ” ಜುಲೈ 19ರಿಂದ ಪ್ರಾರಂಭಗೊಳ್ಳಲಿದೆ. ಸಮಾಜ ಬಾಂಧವರು ಈ ಧಾರ್ಮಿಕ ಪ್ರದಕ್ಷಿಣೆಯಲ್ಲಿ ಭಾಗವಹಿಸಿ, ಶ್ರೀದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ. ಪ್ರದಕ್ಷಿಣೆ ಅವಧಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ, ಸಂಜೆ 6 ರಿಂದ ರಾತ್ರಿ 8ರ ತನಕ ಎಂದು ತಿಳಿಸಲಾಗಿದೆ.

ಬಿಕರ್ನಕಟ್ಟೆ ಬಾಲಾ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಕಾರ್ಮೆಲ್ ಮಾತೆಯ ಹಬ್ಬ / The Carmelites of Infant Jesus Shrine, Bikkarnakatte, celebrated the feast of Our Lady of Mount Carmel

ಮಂಗಳೂರು: 2023 ರ ಜುಲೈ 16 ರಂದು “ಉತ್ತರಿಕೆಯ ಹಬ್ಬ”ವೆಂದು ಕರೆಯಲ್ಪಡುವ ಕಾರ್ಮೆಲ್ ಮಾತೆಯ ಹಬ್ಬವನ್ನು ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕಾರ್ಮೆಲ್ ಸಭೆಯ ಗುರುಗಳು ಬಹಳ ವಿಜೃಂಭಣೆಯಿಂದ ಆಚರಿಸಿದರು. ಉತ್ತರಿಕೆಯ ಹಬ್ಬ ಹಾಗು ಕಾರ್ಮೆಲ್ ಮಾತೆಯ ಹಬ್ಬದ ಗೌರವಾರ್ಥವಾಗಿ ಪುಣ್ಯಕ್ಷೇತ್ರದಲ್ಲಿ 9 ದಿನಗಳ ನೊವೇನವನ್ನು ನಡೆಸಲಾಯಿತು. ಈ 9 ದಿನಗಳಲ್ಲಿ, ಕಾರ್ಮೆಲ್ ಸಭೆಯ ಗುರುಗಳು ಆಧ್ಯಾತ್ಮಿಕ ಸುಧಾರಣೆಗಾಗಿ ಮತ್ತು ಹಬ್ಬಕ್ಕೆ ಸಿದ್ಧತೆಗಾಗಿ ವಿವಿಧ ವಿಷಯಗಳ ಕುರಿತು ಪ್ರಭೋದನೆಯನ್ನು ನೀಡಿದರು.

ಜುಲೈ 16 ಹಬ್ಬದ ದಿನದಂದು, ಧರ್ಮಗುರು ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ, ಮತ್ತು ಫಾ. ಮೆಲ್ವಿನ್ ಡಿ’ಕುನ್ಹಾ, ಸಂತ ಜೋಸೆಫ್ ಮಠದ ಮಠಾಧಿಪತಿಗಳು, ಫಾ. ಸ್ಟಿಫಾನ್ ಪಿರೇರಾ, ಬಾಲಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕರು ಹಾಗು ಫಾ. ದೀಪ್ ಫೆರ್ನಾಂಡಿಸ್, ದೈವಶಾಸ್ತ್ರದ ವಿದ್ಯಾರ್ಥಿಗಳ ತರಬೇತುದಾರರು, ಇತರ ಗುರುವೃಂದದವರು ಸೇರಿ ‘ಮಾತೆ ಮರಿಯಳ ಸಹಭಾಗಿತ್ವವು ಮಾನವಕುಲಕ್ಕೆ ಒಂದು ದೊಡ್ಡ ವರದಾನ’ ಎಂಬ ವಿಷಯದ ಬಗ್ಗೆ ಹಬ್ಬದ ಆಡಂಬರ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು.

ಕಾರ್ಮೆಲ್ ಮಾತೆಯ ಹಬ್ಬಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು ಹಾಗು ಅನೇಕ ಗುರುವೃಂದದವರು ಮತ್ತು ಧಾರ್ಮಿಕ ಸಹೋದರ ಸಹೋದರಿಯರು ಕಾರ್ಮೆಲ್ ಮಾತೆಯ ಹಬ್ಬದ ದಿವ್ಯಬಲಿಪೂಜೆಯನ್ನು ಆರ್ಪಿಸಿ, ಮಾತೆಯ ಮಧ್ಯಸ್ಥಿಕೆಗಾಗಿ ಪ್ರಾರ್ಥಿಸಿದರು. ಕಾರ್ಮೆಲ್ ಮಾತೆಯ ರಕ್ಷಣೆ ಹಾಗು ಕಾರ್ಮೆಲ್ ಸಭೆಯ ಸಂಪತ್ತಿನ ಸಂಕೇತವಾದ ಉತ್ತರಿಕೆಯನ್ನು ಎಲ್ಲರಿಗೂ ವಿತರಿಸಲಾಯಿತು. ಇಡೀ ಪುಣ್ಯಕ್ಷೇತ್ರದ ಆವರಣದಲ್ಲಿ ಸಂಭ್ರಮದ ವಾತಾವರಣವು ಆವರಿಸಿತ್ತು.


The Carmelites of Infant Jesus Shrine, Bikkarnakatte, celebrated the feast of Our Lady of Mount Carmel

Mangalore: The Carmelites of Infant Jesus Shrine, Bikkarnakatte, celebrated the feast of Our Lady of Mount Carmel, also known as the Scapular Feast, on the 16th of July, 2023. The Carmelites are a religious Order that cherishes their spiritual legacy as the promoters of the Scapular devotion. The shrine held 9 days of novena in honour of the Blessed Virgin, and on each of these 9 days, priests offered reflection on different themes for spiritual edification and fruitful preparation for the feast. Carmelite priests celebrated three masses on the novena days and gave enlightening homilies, describing the accompaniment Mary offered to the entire domain of humanity in the past as in the present; to apostles, Church, migrants, youth and the persecuted.

On the feast day, the Solemn Mass was celebrated by Rev. Fr. Richard Aloysius Coelho, Director Fr Muller Institutions and was concelebrated by Rev. Fr. Melwin D’Cunha, the Superior of St. Joseph’s Monastery, Rev. Fr. Stifan Periera, the Director of Infant Jesus Shrine, Rev. Fr. Deep Fernandes, the Master of the Theology Students, among others priests. Reflecting on the theme ‘Mary’s accompaniment a Great Boon to Humankind’, Fr. Richard, emphasized her role in the redemptive action of Christ, and her continued assistance to humanity over the years.

The faithful gathered in great numbers for the feast, and the joy of the occasion was enhanced with the presence of many priests and religious. The Scapular, a sign of Mary’s protection and the wealth of the Carmelite Order, was distributed to everyone. The ambience of celebration hovered over the entire Shrine campus.

ಕುಂದಾಪ್ರ ಕನ್ನಡ ಹಬ್ಬ“ಮೂಕ್ ಹಕ್ಕಿ ಹಾಡ್”

ಕಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಕುಂದಾಪ್ರ ಕನ್ನಡ ಕವಯತ್ರಿ “ಸುಮಿತ್ರಾ ಐತಾಳ” ಅವರ ಸ್ಮರಣೆಯಲ್ಲಿ ಕುಂದಾಪ್ರ ಕನ್ನಡ ಹಬ್ಬ ಹಾಗೂ “ಮೂಕ್ ಹಕ್ಕಿ ಹಾಡ್” ಕಾರ್ಯಕ್ರಮ ನಡೆಸಲಾಯಿತು.
ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ, ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆದ ಡಾ. ಉಮೇಶ್ ಪುತ್ರನ್ ಉದ್ಘಾಟಿಸಿ, ಕುಂದ ಕನ್ನಡ ಭಾಷೆಯ ವೈಶಿಷ್ಟ್ಯ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಶ್ರೀರಾಜ್ ಕೊಠಾರಿ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಕುಂದ ಕನ್ನಡ ಬಳಕೆ ಮಾಡುವ ಬಗ್ಗೆ ತಾನು ಪಟ್ಟ ಶ್ರಮ ವಿವರಿಸಿದರು. ಕುಂದ ಕನ್ನಡ ಚಲನಚಿತ್ರ “ಹಜ್” ನಿರ್ಮಾಣ ಮಾಡಿ ರಾಜ್ಯ ಸರಕಾರದಿಂದ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಶ್ರೀರಾಜ್ ಕೊಠಾರಿ ಅವರನ್ನು ಗೌರವಿಸಲಾಯಿತು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ, ಕುಂದಾಪ್ರ ಕನ್ನಡ ಉಳಿಸಿ ಬೆಳೆಸುವ ಅಗತ್ಯತೆ ತಿಳಿಸಿ ಕುಂದಾಪ್ರ ಕನ್ನಡದ ಲೇಖಕಿ ದಿ. ಸುಮಿತ್ರಾ ಐತಾಳ ಅವರನ್ನು ಸ್ಮರಿಸಿದರು.
ವಿದ್ಯಾರ್ಥಿಗಳು ಕುಂದ ಕನ್ನಡ ಕವಿತೆಗಳನ್ನು ಓದಿದರು.
ಉಪನ್ಯಾಸಕ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸುಕೇಶ್ ಚಂದ್ರಶೇಖರ್ ವಂದಿಸಿದರು
.

ಸುಮಿತ್ರಾ ಐತಾಳ್ ನೆನಪು

ಕುಂದಾಪ್ರ ಕನ್ನಡ ಲೇಖಕಿ, ಕವಯತ್ರಿ ದಿ.ಸುಮಿತ್ರಾ ಐತಾಳರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅವರು ಕುಂದಾಪ್ರ ಕನ್ನಡಕ್ಕೆ ಕೊಟ್ಟ ಕೊಡುಗೆಯನ್ನು ಡಾ. ಉಮೇಶ್ ಪುತ್ರನ್ ಸ್ಮರಿಸಿದರು. ವಿದ್ಯಾರ್ಥಿಗಳು ಅವರ ಕವನಗಳನ್ನು ಓದಿದರು. ಅವರ ಕುಂದಾಪ್ರ ಕನ್ನಡ ಮಾತುಗಳ ಧ್ವನಿ ಮುದ್ರಿಕೆ ಕೇಳಿಸಲಾಯಿತು. ಯು.ಎಸ್.ಶೆಣೈ ಸುಮಿತ್ರಾ ಐತಾಳರ ಕನಸುಗಳ ವಿವರ ನೀಡಿದರು.

ಶಿರ್ವ ಸಂತ ಮೇರಿ ಪ ಪೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟನೆ

ಶಿರ್ವ : ” ರಾಷ್ಟ್ರೀಯ ಸೇವಾ ಯೋಜನೆಯು ವಿಧ್ಯಾರ್ಥಿಗಳಲ್ಲಿ ಸೇವೆಯ ಮೂಲಕ ಸಮಾಜದ ಬಗ್ಗೆ ಅರಿವು ಮೂಡಿಸುತ್ತದೆ. ಎನ್ ಎಸ್ ಎಸ್ ಮೂಲಕ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ.ಇಲ್ಲಿ ವಿಧ್ಯಾರ್ಥಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಸಲ್ಲಿಸುತ್ತಾರೆ. ಇದು ಮುಂದೆ ಸಾರ್ಥಕ ಜೀವನ ನಡೆಸಲು ಪ್ರೆರಣೆ ಯಾಗುತ್ತದೆ” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗದ ಸಂಯೋಜನಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು. ಅವರು ಶ್ರೀರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಕಾರ್ಯಕ್ರಮ ಮತ್ತು ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ವಂದನೀಯ ಗುರು ಡಾ. ಲೆಸ್ಲಿ ಡಿಸೋಜ ವಹಿಸಿದ್ದು, ಪ್ರಾಂಶುಪಾಲರಾದ ಜಯಶಂಕರ ಕೆ ಸ್ವಾಗತಿಸಿ ಕುಮಾರಿ ಸಮೀಕ್ಷಾ ಅತಿಥಿಗಳ ಪರಿಚಯ ಮಾಡಿದರು. ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸಮೀಕ್ಷಾ ಅತಿಥಿಗಳ ಪರಿಚಯ ಮಾಡಿ, ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀಮತಿ ಮರಿಯ ಜೆಸಿಂತಾ ಫುರ್ಟಾಡೊ ವಂದಿದಸಿದರು ,ದೀಕ್ಷಿತ್ ಆಚಾರ್ಯ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜು ಪರಿಸರದಲ್ಲಿ 25 ಔಷಧೀಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಮೇಲ್ವಿನ್ ಅರಾನ್ಹಾ ,ಎನ್ಎಸ್ಎಸ್ ಸ್ವಯಂಸೇವಕರು , ಉಪನ್ಯಾಸಕ ಮತ್ತು ಶಿಕ್ಷಕೇತರ ಬಂಧುಗಳು ಹಾಜರಿದ್ದರು.

ಕುಂದಾಪುರ ಕಥೊಲಿಕ್ ಸಭಾದಿಂದ ಚಾರ್ಟರ್ಡ್ ಅಕೌಂಟೆಟ್ಸ್ ಪರೀಕ್ಷೆಯಲ್ಲಿ ತೆರ್ಗಡೆಯಾದ ವಿನಾರ್ಡ್ ಡಿಕೋಸ್ತಾರವರಿಗೆ ಸನ್ಮಾನ / Kundapur Catholic Sabha felicitates Vinard DCosta who clears Chartered Accountants exam

ಕುಂದಾಪುರ, ಜು.17: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇವರಿಂದ ಮೇ 2023 ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ತೆರ್ಗಡೆಯಾದ ಕುಂದಾಪುರದ ವಿನಾರ್ಡ್ ಜೆ. ಡಿಕೋಸ್ತಾ ಇವರನ್ನು ಕುಂದಾಪುರ ಕಥೊಲಿಕ್ ಸಭಾ ಘಟಕವು ಭಾನುವಾರ (ಜು.16) ನಡೆದ ಸಮಾರಂಭದಲ್ಲಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಸ್ಟ್ಯಾನಿ ತಾವ್ರೊ ಮುಂದಾಳತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಕೇಂದ್ರಿಯ ಮಾಜಿ ಅಧ್ಯಕ್ಷ ಕಿರಣ್ ಕ್ರಾಸ್ಟೊ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಕುಂದಾಪುರ ಕಥೊಲಿಕ್ ಸಭೆಯ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಕಾರ್ಯದರ್ಶಿ ವಾಲ್ಟರ್ ಡಿಸೋಜಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಿನಾರ್ಡ್ ಡಿಕೋಸ್ತಾರ ತಂದೆ, ಕಥೊಲಿಕ್ ಸಭಾ ನಿರ್ಗಮನ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ತಾಯಿ, ಸ್ತ್ರಿ ಸಂಘಟನೇಯ ನಿರ್ಗಮನ ಅಧ್ಯಕ್ಷೆ ವಿನಯಾ ಡಿಕೋಸ್ತಾ ಮತ್ತು ಇತರರು ಉಪಸ್ಥಿತರಿದ್ದರು.

Kundapur Catholic Sabha felicitates Vinard DCosta who clears Chartered Accountants exam

Kundapur, June 17: Vinard J. of Kundapur passed the examination held in May 2023 by the Institute of Chartered Accountants of India. Vinard DCosta was received by the Kundapur Catholic Church unit in a ceremony held on Sunday (June 16) with the spiritual director of the Catholic Church, Rev. Stany Tavro presided over the felicitation and felicitation. On this occasion, Kiran Crasto, former president of Catholic sabha Central Kundapur Zone Catholic Assembly President Wilson DAlmeida, Kundapur Catholic Assembly President Shaila DAlmeida, Secretary Walter D’Souza, Board of Trustees Vice President Shalette Rebello, Secretary Asha Carvalho, Commissions Coordinator Prema DCunha, Father Vinard DCosta, Catholic Assembly Mother of Outgoing President Bernard DCosta, Outgoing President of Women’s Organization Vinaya DCosta and others were present.

ಬಜ್ಜೋಡಿ ಇನ್‌ಫೆಂಟ್ ಮೇರಿ ಚರ್ಚಿನಲ್ಲಿ ಸೆಕ್ಯುಲರ್ ಕಾರ್ಮೆಲೆಟರಿಗೆ ತ್ರಿಸಂಭ್ರಮಾಚರಣೆ

ಜುಲೈ 16, 2023, ಭಾನುವಾರ, ಬಜ್ಜೋಡಿ ಘಟಕದ ಸೆಕ್ಯುಲರ್ ಕಾರ್ಮೆಲೈಟ್‌ಗಳಿಗೆ (OCDs) ವಿಶೇಷ ದಿನವಾಗಿದ್ದು, ಅವರು 15 ರಂದು ಕಾರ್ಮೆಲ್ ಪರ್ವತದ ಅವರ್ ಲೇಡಿ ಅವರ ಹಬ್ಬವನ್ನು ಆಚರಿಸಿದರು, ಅವರ ವಾರ್ಷಿಕ ದಿನ ಮತ್ತು ಅದರಲ್ಲಿ ಆರು ಸದಸ್ಯರು  ಸಹೋದರಿ ಅಸುಂತಾ ಮೆಂಡೊನ್ಸಾ, ಸಹೋದರಿ ಸಿಲ್ವಿಯಾ ಮಸ್ಕರೇನ್ಹಸ್, ಸಹೋದರಿ ಗ್ರೇಸಿ ಫೆರ್ನಾಂಡಿಸ್, ಸಹೋದರಿ ಸಿಂಥಿಯಾ ಡಿಸೋಜಾ, ಸಹೋದರ. ಪ್ಯಾಟ್ರಿಕ್ ಮೆನೆಜಸ್ ಮತ್ತು ಸಹೋದರಿ ಜಾನೆಟ್ ಮೆನೆಜಸ್ ಅವರು ತಮ್ಮ ನಿರ್ಣಾಯಕ ಭರವಸೆಗಳನ್ನು ನೀಡಿದರು ಮತ್ತು ಮೂವರು  ಸದಸ್ಯರು – ಸಹೋದರಿ ರೀಟಾ ಡಿಸಾ, ಸೀನಿಯರ್ ಸ್ಟೆಲ್ಲಾ ಡಿಸೋಜಾ ಮತ್ತು ಸಹೋದರಿ ಮರಿಯಾ ಡಿಸೋಜಾ ಅವರು ಫಾ ದೀಪ್ ಫೆರ್ನಾಂಡಿಸ್ ಒಸಿಡಿ., ಕರ್ನಾಟಕದ ಸೆಕ್ಯುಲರ್ ಕಾರ್ಮೆಲೈಟ್‌ಗಳ ಪ್ರತಿನಿಧಿ ಪ್ರಾಂತೀಯ – ಗೋವಾ  ಪ್ರಾಂತ್ಯ. ಉಪಸ್ಥಿತಿಯಲ್ಲಿ ತಮ್ಮ ಕಾರ್ಮೆಲ್ ಸಹೋದರತ್ವದ ತಾತ್ಕಾಲಿಕ  ಭರವಸೆಗಳನ್ನು ನೀಡಿದರು. ಫಾ. ಡೊಮಿನಿಕ್ ವಾಸ್, ಸಮುದಾಯದ ಆಧ್ಯಾತ್ಮಿಕ  ಸಹಾಯಕ, ಫಾ. ಐವನ್ ಡಿಸೋಜಾ, ನಮಾನ್ ಬಾಳೊಕ್ ಜೆಜು ಪತ್ರದ ಸಂಪಾದಕರಾದ  ಫಾ. ಸಿರಿಲ್ ಮೆನೆಜಸ್, ಫಾ. ರಾಯನ್ ಪಿಂಟೋ ಮತ್ತು Dn. ಸಿಲ್ಟನ್ ಅವರು ಸಂಜೆ 5.30 ಕ್ಕೆ ಪರಮ ಪ್ರಸಾದದ ಆರಾದನೆಯನ್ನು ನೆಡೆಸಿದರು., ಈ ಸಂದರ್ಭದಲ್ಲಿ ಭರವಸೆಗಳ ವಿಧಿವಿಧಾನ ನಡೆಯಿತು.

      ಫಾ. ಡೀಪ್ ಫೆರ್ನಾಂಡಿಸ್ ಅವರು ತಮ್ಮ ಪ್ರವಚನದಲ್ಲಿ ಮಾನವನ ಹಿರಿಮೆಯು ಬೇಡಿಕೆಯಲ್ಲಿಲ್ಲ, ಆದರೆ ತಾಯಿ ಮೇರಿ ಹೇಗೆ ಮಾಡಿದರೋ ಹಾಗೆಯೇ ದೇವರ ಚಿತ್ತಕ್ಕೆ ಶರಣಾಗುವುದರಲ್ಲಿದೆ ಎಂದು ಹೇಳಿದರು. ಅವರು ಜಾತ್ಯತೀತ ಕಾರ್ಮೆಲ್‌ನ ಸದಸ್ಯರಿಗೆ ಮೇರಿಯನ್ನು ತಮ್ಮ ಮಾದರಿಯಾಗಿ ತೆಗೆದುಕೊಳ್ಳುವಂತೆ ಕರೆ ನೀಡಿದರು ಮತ್ತು ಆಕೆಯಂತೆಯೇ ದೇವರ ಚಿತ್ತಕ್ಕೆ ಮತ್ತು ಸುವಾರ್ತೆಯ ಸತ್ಯಗಳಿಗೆ ಶರಣಾಗುವಂತೆ ಮತ್ತು ಇತರರನ್ನು ತಮ್ಮ ಮಾದರಿಯಿಂದ ಕ್ರಿಸ್ತನ ಬಳಿಗೆ ತರಲು ಅವರು ಕರೆ ನೀಡಿದರು.

   ಬಲಿದಾನದ ನಂತರ ಚರ್ಚ್ ಹಾಲ್‌ನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು, ಇದು ಕೆಲವು ಒಸಿಡಿ ಸದಸ್ಯರ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಯಿತು. ಫಾ. ದೀಪ್ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿದ್ದರು. ಫಾ. ಮೆಲ್ವಿನ್ ಡಿ’ಕುನ್ಹಾ, ಬಾಲ ಯೇಸು ಪುಣ್ಯ ಕ್ಷೇತ್ರದ ಸುಪೀರಿಯರ್ ಫಾ. ಐವನ್ ಡಿಸೋಜಾ, ಫಾ. ಡೊಮಿನಿಕ್ ವಾಸ್, ಫಾ. ಸಿರಿಲ್ ಮೆನೆಜಸ್, ಫಾ. ವಿಲ್ಸನ್ ಟೌರೊ, ಫಾ. ರಾಯನ್ ಪಿಂಟೋ, Dn. ಸಿಲ್ಟನ್, PPC ಉಪಾಧ್ಯಕ್ಷ ಶ್ರೀ ಪ್ರಕಾಶ್ ಸಲ್ಡಾನ್ಹಾ, PPC ಕಾರ್ಯದರ್ಶಿ ಶ್ರೀಮತಿ ಎಲಿಜಬೆತ್ ಪಿರೇರಾ ಮತ್ತು OCDs ಸಮುದಾಯದ ಅಧ್ಯಕ್ಷೆ ಸಿಸ್ಟರ್ ಅಸುಂತಾ ಮೆಂಡೋನ್ಸಾ ವೇದಿಕೆಯಲ್ಲಿ ಗಣ್ಯರು. ಓಎಸ್ಎಸ್ ಸಹೋದರಿಯರು, ಸೇಂಟ್ ತೆರೆಸಾ ಘಟಕದ ಕೋರ್ ಸದಸ್ಯರು, ವಿವಿಧ ವಾರ್ಡ್‌ಗಳ ಗುರ್ಕಾರರು, ವಿವಿಧ ಸಂಘಗಳ ಮುಖ್ಯಸ್ಥರು ಮತ್ತು ಒಸಿಡಿಎಸ್ ಸದಸ್ಯರ ಕುಟುಂಬಗಳು, ಮತ್ತು ಇತರರು ಉಪಸ್ಥಿತರಿದ್ದರು.

 ಸಿಸ್ಟರ್ ಅಸುಂತಾ ಮೆಂಡೋನ್ಕಾ ಅವರು ಅತಿಥಿಗಳನ್ನು ಸ್ವಾಗತಿಸಿದರು. 2022-23 ನೇ ಸಾಲಿನ ಸಮುದಾಯದ ವಾರ್ಷಿಕ ವರದಿಯನ್ನು ಸಮುದಾಯ ಕಾರ್ಯದರ್ಶಿ ಸಿಸ್ಟರ್ ಗ್ರೇಸಿ ಫೆರ್ನಾಂಡಿಸ್  ಓದಿದರು. ನಂತರ ವಾರ್ಷಿಕ ಕ್ರೀಡಾ ದಿನಾಚರಣೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಶ್ರೀ ಗ್ಲೆನ್ ಲಾಸ್ರಾಡೊ ವಿಜೇತರ ಹೆಸರನ್ನು ವಾಚಿಸಿದರು. ಫಾ. ದೀಪ್ ಫೆರ್ನಾಂಡಿಸ್, ಫಾ. ಐವನ್ ಡಿಸೋಜಾ ಮತ್ತು ಫಾ. ಡೊಮಿನಿಕ್ ವಾಸ್ ಅವರು ತಮ್ಮ ಸಂದೇಶಗಳಲ್ಲಿ ಸೆಕ್ಯುಲರ್ ಕಾರ್ಮೆಲ್‌ನ ಸದಸ್ಯರನ್ನು ವೃತ್ತಿಗೆ ಅವರ ಬದ್ಧತೆಗಾಗಿ ಅಭಿನಂದಿಸಿದರು, ಅವರ ಏಕತೆ ಮತ್ತು ಸಹಕಾರಕ್ಕಾಗಿ ಅವರನ್ನು ಶ್ಲಾಘಿಸಿದರು ಮತ್ತು ಅವರ ಪ್ರಾರ್ಥನೆ ಮತ್ತು ಸೇವೆಯ ಜೀವನವನ್ನು ಅದೇ ಸಮರ್ಪಣೆಯೊಂದಿಗೆ ಮುಂದುವರಿಸಲು ಮತ್ತು ವೃತ್ತಿಯಲ್ಲಿ ಬೆಳೆಯಲು ಶುಭ ಹಾರೈಸಿದರು.

ಶ್ರೀಮತಿ ಸ್ಟೆಲ್ಲಾ ಡಿಸೋಜಾ ಅವರು ತಮ್ಮ ನಿರ್ಣಾಯಕ ಭರವಸೆಗಳನ್ನು ನೀಡಿದ ಪ್ರತಿಯೊಬ್ಬ ಸದಸ್ಯರ ಬಗ್ಗೆ ಕೆಲವು ಮಾತುಗಳನ್ನು ಮಾತನಾಡಿದರು ಮತ್ತು ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು. ತಮ್ಮ ಭರವಸೆಗಳನ್ನು ನೀಡಿದ ಎಲ್ಲಾ ಸದಸ್ಯರು ನಂತರ ತಮ್ಮ ವಿಶೇಷ ದಿನದ ಆಚರಣೆಯಲ್ಲಿ ಕೇಕ್ ಕತ್ತರಿಸಿದರು. ಇತರ ಸದಸ್ಯರು ಅರ್ಥಪೂರ್ಣವಾದ ಹಾಡನ್ನು ಹಾಡಿ ಅವರ ವೃತ್ತಿಗೆ ಶುಭ ಹಾರೈಸಿದರು.

ಶ್ರೀ ರೊನಾಲ್ಡ್ ಗೋವಸ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಥೆರೆಸಾ ಡಿ’ಕುನ್ಹಾ ಧನ್ಯವಾದವನ್ನು ಪ್ರಸ್ತಾವಿಸಿದರು.

Rosa Mystica PU College – Bethany Foundation day celebration

Kinnikambla:  103rdfoundation day of Bethany congregation was  celebrated on 15th July 2023 at Rosa MysticaPU College with the great enthusiasm.The celebration started with the prayersong sung by the students. Students from 2ndcommerce presented a colourful cultural show and the first commerce students presented a small skit on girl education which was one of the core value of the Bethany congregation.The Principal sister Sadhana BS along with the staff members honored the father founder by offering flowers. Sr. Sadhana BS The Principal of Rosa MysticaPU college in her presidential address, She greeted  students,  lecturers and parents. Ms. Carmela Tauroand Mr. AmcilFernandesorganised the entire program. The program was hosted by Sumit from second commerce and welcomed by Vaishnavi from second commerce. Hanok from first commerce proposed the vote of thanks. By distributing sweets program winded up.

ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ

ಶ್ರೀನಿವಾಸಪುರ : ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.

ಮೊಹಲ್ಲಾ , ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಚಿಕ್ಕ ಮಕ್ಕಳು ಮೇಲೆ, ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ.

ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ಗಫರ್ ಖಾನ್ ಮೊಹಲ್ಲಾ, ಜಾಕಿರ್ ಹುಸೇನ್ ಮೊಹಲ್ಲಾ, ಆಜಾದ್ ರಸ್ತೆ, ಹೈದರ್ ಅಲಿ ಮೊಹಲ್ಲಾ ವಾರ್ಡ್‌, ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬೀದಿ ನಾಯಿಗಳು ಉಪಟಳ ಹೆಚ್ಚಾಗಿದೆ.

ಜಾಕಿರ್ ಹುಸೇನ್ ಮೊಹಲ್ಲಾ , ಗಫರ್ ಖಾನ್ ಮೊಹಲ್ಲಾ, ಆಜಾದ್ ರಸ್ತೆ, ಹೈದರ್ ಅಲಿ ಮೊಹಲ್ಲಾ ಮಕ್ಕಳನ್ನು ಮನೆಯಿಂದ ಹೊರಗೆ ಬಿಡುವುದು , ಭಯಾನಕ ಮತ್ತು ಅಸುರಕ್ಷಿತವಾಗಿದೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ನಾಯಿಗಳ ದಾಳಿಯ ಅನೇಕ ಘಟನೆಗಳು ಸಹ ನಡೆದಿವೆ .

ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಪುರಸಭೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ಪುರಸಭೆಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ.

ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾ, ಗಫರ್ ಖಾನ್ ಮೊಹಲ್ಲಾ, ಆಜಾದ್ ರಸ್ತೆ, ಹೈದರ್ ಅಲಿ ಮೊಹಲ್ಲಾದ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ಆಜಾದ್ ರಸ್ತೆ, ಮಾರ್ಗದ ರಸ್ತೆಗಳಲ್ಲಿ ಮಾಂಸದಂಗಡಿಗಳು ಇವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ಕಾಣಿಸುತ್ತವೆ ನಾಯಿಗಳು ಚೆಲ್ಲಾಟ ಹೆಚ್ಚಾಗಿದೆ. ನಾಯಿಗಳ ಹಾವಳಿ ತಡೆಯಲು ಸುಮಾರು ಕೆಲ ವರ್ಷಗಳ ಹಿಂದೆ ಪುರಸಭೆ ವಿಷ ಹಾಕಿ ನಾಯಿಗಳನ್ನು ಕೊಂದಿತ್ತು. ಇದರಿಂದ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದ್ದರಿಂದ ಪುರಸಭೆ ಅಧಿಕಾರಿಗಳ ಬೀದಿ ನಾಯಿಗಳ ನಿಯಂತ್ರಣಕ್ಕೆ ಹೋಗುವುದನ್ನು ಬಿಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ಸಂತಾನ ತಡೆ ಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ಪುರಸಭೆ ಮುಂದಾಗುತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಉಪಟಳಕ್ಕೆ ಜನ ಕಂಗಾಲಾಗಿದ್ದಾರೆ. ಪುರಸಭೆ ಇವುಗಳ ನಿಯಂತ್ರಣ ಮಾಡುವುದಕ್ಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಡ್ಸ್ ನ್ನು ಸಂಪೂರ್ಣ ಸಂಹಾರ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು; ಎನ್.ಎಂ.ನಾಗರಾಜ

ಕೋಲಾರ,ಜು.15: ಏಡ್ಸ್ ಎಂಬ ವ್ಯಾದಿಯನ್ನು ಸಮಾಜದಿಂದ ಸಂಪೂರ್ಣ ಸಂಹಾರ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕೆಂದು, ರಾಜ್ಯ ಏಡ್ಸ್ ನಿಯಂತ್ರಣ ಸಂಘದ ಯೋಜನಾ ನಿರ್ದೇಶಕರು ಆಗಿರುವ ಐ.ಎ.ಎಸ್.ಅಧಿಕಾರಿ ಎನ್.ಎಂ.ನಾಗರಾಜ ಅವರು ಸೂಚಿಸಿದರು.
ನಗರದ ಎಸ್.ಎನ್.ಆರ್.ಆಸ್ಪತ್ರೆಗೆ ದಿಢೀರ್ ಭೇಟಿನೀಡಿ ಇಲ್ಲಿನ ಏಡ್ಸ್ ನಿಯಂತ್ರಣ ವಿಭಾಗ, ಎ.ಆರ್.ಟಿ.ಕೇಂದ್ರ, ಬ್ಲಡ್ ಬ್ಯಾಂಕ್ ಮತ್ತು ಪಿ.ಪಿ.ಟಿ.ಸಿ ಕೇಂದ್ರಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವೀಕ್ಷಿಸಿ, ವೈದ್ಯಾಧಿಕಾರಿಗಳು, ತಜ್ಞ ಸಿಬ್ಬಂದಿ ಹಾಗೂ ನೌಕರರೊಡನೆ ಸಮಾಲೋಚನೆ ನಡೆಸಿದರು.
ಜಿಲ್ಲೆಯಲ್ಲಿ ಏಡ್ಸ್ ಹಬ್ಬುವಿಕೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಇದನ್ನು ಕೆಲವೇ ವರ್ಷಗಳಲ್ಲಿ ಶೂನ್ಯಕ್ಕೆ ತರಬೇಕು. ಈಗಾಗಲೇ ಇರುವ ಸೋಂಕಿತರಿಗೆ ನಿಯಮದಂತೆ ಚಿಕಿತ್ಸೆ ಮುಂದುವರೆಸಬೇಕು. ಹೊಸ ಸೋಂಕು ಹರಡದಂತೆ ಜನರಲ್ಲಿ ಅದರಲ್ಲೂ ಮುಖ್ಯವಾಗಿ ಯುವ ಜನತೆಯಲ್ಲಿ ಆರೋಗ್ಯದ ಮಹತ್ವದ ಅರಿವು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನದಟ್ಟು ಮಾಡಬೇಕೆಂದು ಒತ್ತಿ ಹೇಳಿದರು.
ಏಡ್ಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ಇಲಾಖೆಯನ್ನೇ ತೆರೆದಿದ್ದು, ಕೋಟ್ಯಂತರ ರೂಗಳನ್ನು ವ್ಯಯಿಸಲಾಗುತ್ತಿದೆ. ಪೊಲಿಯೋ, ಕ್ಷಯ ಸೇರಿದಂತೆ ಇತರೆ ಗಂಭೀರ ಕಾಯಿಲೆಗಳನ್ನು ಕೊನೆಗಾಣಿಸಿದಂತೆ, ಏಡ್ಸ್‍ನ್ನು ಸಹ ಸಮಾಜದಿಂದ ಮುಕ್ತಗೊಳಿಸಬೇಕು, ಹೊಸ ಸೋಂಕು ಹರಡದಂತೆ ಅರಿವು, ಸೂಕ್ತ ಚಿಕಿತ್ಸೆ ಮೂಲಕ ಸಾವುಗಳನ್ನು ತಡೆಯುವಂತೆ ಮಾಡಬೇಕು. ಚಿಕಿತ್ಸೆ ಪ್ರಾರಂಭಿಸಿ ಮತ್ತೆ ಬಾರದಿರುವ ಸೋಂಕಿತರನ್ನು ಟ್ರ್ಯಾಕ್ ಮಾಡಿ ಹುಡುಕಿ ಚಿಕಿತ್ಸೆ ನೀಡುವ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್.ಎನ್.ಆರ್.ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಎನ್.ವಿಜಯಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ.ಬಾಲಸುಂದರ್, ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ರಕ್ತನಿಧಿ ವೈದ್ಯಾಧಿಕಾರಿ ಡಾ.ರೇವತಿ, ಸಿಬ್ಬಂದಿಗಳಾದ ಹೇಮಲತಾ, ಶ್ರೀನಿವಾಸ್, ಶಿವಾರೆಡ್ಡಿ, ಸುಮತಿ, ಸಂಗೀತ ಮತ್ತಿತರರು ಉಪಸ್ಥಿತರಿದ್ದರು.