HOLY ROSARY CHURCH, KUNDAPUR – 450 th JUBILEE SOUVENIR 2021

ಉಡುಪಿ – ದಿ ಹಿಂದೂ ವಾಹಿನಿಯ ‘ನಮ್ಮ ರಾಜ್ಯ ನಮ್ಮ ರುಚಿ’ ಅಡುಗೆ ಸ್ಪರ್ಧೆಯ ಪ್ರಾದೇಶಿಕ ಸುತ್ತಿನಲ್ಲಿ ಕಿಯೊಲ್ ಲೋಬೊ ಇವರಿಗೆ ಪ್ರಥಮ ಸ್ಥಾನ

ಉಡುಪಿ: ಶನಿವಾರ ಉಡುಪಿಯಲ್ಲಿ ನಡೆದ ದಿ ಹಿಂದೂ ವಾಹಿನಿಯ ‘ನಮ್ಮ ರಾಜ್ಯ ನಮ್ಮ ರುಚಿ’ ಅಡುಗೆ ಸ್ಪರ್ಧೆಗೆ ಪೂರ್ವಭಾವಿ ಸುತ್ತಿನಲ್ಲಿ ಉತ್ತಮ ಜನಸ್ಪಂದನೆ  ಕಂಡುಬಂತು. ಭಾಗವಹಿಸಿದ್ದ ಬಹುಸಂಖ್ಯಾತರು ತಮ್ಮ ಪಾಕವಿದ್ಯೆಯ ಕೌಶಲ್ಯವನ್ನು ಪ್ರದರ್ಶಿಸಿದರು.

ಈ ಸ್ಪರ್ಧೆಯಲ್ಲಿ, ಭಾಗವಹಿಸುವವರಿಗೆ ಸಾಂಪ್ರದಾಯಿಕ ಕರ್ನಾಟಕದ ಖಾದ್ಯಗಾನ್ನು ತಯಾರಿಸಲು ಅಥವಾ ಕ್ಲಾಸಿಕ್ ರೆಸಿಪಿಯನ್ನು ಸೃಜನಾತ್ಮಕವಾಗಿ ಸೂತ್ರಧಾರಿತ ರೀತಿಯಲ್ಲಿ ತಯಾರಿಸಲೇ ಬೇಕಾದ ಅನಿವಾರ್ಯತೆ ಇಲ್ಲವೆಂದು ಸಾಬಿತು ಪಡಿಸಿದಿರಿಂದ  ಇದು ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಯಿತು.

    ಈ ಸ್ಪರ್ಧೆಯಲ್ಲಿ ಕುಂದಾಪುರ ನಾಡದ ಕಿಯೋಲ್ ಲೋಬೊ ಈ ಸುತ್ತಿನ ವಿಜೇತರಾಗಿ ಹೊರಹೊಮ್ಮಿದರು, 14 ಖಾದ್ಯಗಳಾದ ಚಾಕೊಲೇಟ್ ಹಣ್ಣುಗಳು, ಬೆಣ್ಣೆ ಕುಕೀಸ್, ಆಪಲ್ ರೋಸ್ ಕೇಕ್, ವೆನಿಲ್ಲಾ ಮಫಿನ್‌ಗಳು, ಸ್ವೀಟ್ ಚಿಲ್ಲಿ ಚಿಕನ್ ವಿಂಗ್‌ಗಳು, ಗೋವಾ ಪ್ರಾನ್ಸ್, ಚಿಕನ್ ಘೀ ರೋಸ್ಟ್ ಮತ್ತು ಹಣ್ಣಿನ ಬಿಸ್ಕತ್ ಮತ್ತು ಇತರ ಕೆಲವು ಭಕ್ಷ್ಯಗಳೊಂದಿಗೆ ತೀರ್ಪುಗಾರರನ್ನು ಆಕರ್ಷಿಸಿಸಿತು.

   ಮೊದಲ ರನ್ನರ್ ಅಪ್ ಸ್ಥಾನ ಪಡೆದ ಅಶ್ವಿನಿ ಆರ್.ಶೆಟ್ಟಿ ಪುದಿನಾ ಮಲ್ಲ ಮೀನು, ಅಕ್ಕಿ ಲಡ್ಡು, ಹಲಸು ಇಡ್ಲಿ, ಅಂಜಲ್ ಪೋಟಿ ಬಿರಿಯಾನಿ, ಮೆಂತೆ ರೈತ, ತೊರ್ಬೆ ಪುಳಿಮ್ಮಚ್ಚಿ ಬೇಯಿಸಿದ ಅಕ್ಕಿ, ಸೀಗಡಿ ಈವಾಯ್, ಸ್ಕ್ವಿಡ್ ಕೋಳಿವಾಡ, ತಯಾರಿಸಿ ಉತ್ತಮ ಹೋರಾಟ ನೀಡಿದರು.

ದ್ವಿತೀಯ ರನ್ನರ್ ಅಪ್ ಎ.ಗೀತಾ ಎಸ್.ನಾಯಕ್ ಅವರು ಸಿಹಿ ಕಿಚಡಿ, ದೋಸೆ, ಸ್ಕ್ವಿಡ್ ಸಬ್ಬ, ಬೀಟ್ರೂಟ್ ಸಲಾಡ್, ದಾಲ್, ಸಾದಾ ಪಾತ್ರೋಡೆ ಆಂಬೋಡೆ ಕರಿ ಮತ್ತು ಇತರ 15 ಭಕ್ಷ್ಯಗಳನ್ನು ತಯಾರಿಸಿದರು.

    ಸೆಲೆಬ್ರಿಟಿ ಬಾಣಸಿಗರಾದ ಒಗ್ಗರಣೆ ಡಬ್ಬಿ ಮುರಳಿ ಮತ್ತು ಸುಚಿತ್ರಾ ಮುರಳಿ, ಸೇಲ್ಸ್ ಎಕ್ಸಿಕ್ಯೂಟಿವ್ ಪ್ರದೀಪ್ ನಾಯ್ಕ್, ಗೋಲ್ಡ್ ವಿನ್ನರ್, ಕೆ.ಎಸ್. ಆರ್‌ಕೆಜಿ ತುಪ್ಪದ ಪ್ರತಿನಿಧಿ ಆಳ್ವಾ, ಎವರೆಸ್ಟ್ ಮಾರುಕಟ್ಟೆ ಪ್ರತಿನಿಧಿ ವಿಶ್ವಾಸ್ ಮತ್ತು ಟಿಎಸ್‌ಎಂ-ಮಂಗಳೂರು ಮತ್ತು ಉಡುಪಿ ಬಟರ್‌ಫ್ಲೈನ ಪ್ರವೀಣ್ ಕುಲಾಲ್ ವಿಜೇತರನ್ನು ಸನ್ಮಾನಿಸಿದರು.

    ಅಂತಿಮ ಹಣಾಹಣಿಯು ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಶ್ರೀ ಮುರಳಿ ಮತ್ತು ಮುರಳೀಧರ್ ತಯಾರಿಸಿದ ಭಕ್ಷ್ಯಗಳ ತೀರ್ಪುದಾರಾಗಿ ವಿಜೇತರನ್ನು ಘೋಷಿಸುತ್ತಾರೆ.

    ಸ್ಪರ್ಧೆಯ ದೊಡ್ಡ ಬಹುಮಾನವನ್ನು ₹ 1 ಲಕ್ಷ ಎಂದು ನಿಗದಿಪಡಿಸಲಾಗಿದೆ, ಎರಡನೇ ಮತ್ತು ಮೂರನೇ ಸ್ಥಾನ ವಿಜೇತರು ಕ್ರಮವಾಗಿ ₹ 60,000 ಮತ್ತು ₹ 40,000 ನಗದು ಬಹುಮಾನವನ್ನು ಪಡೆಯಲಿದ್ದಾರೆ.

    ಆಶೀರ್ವಾದ್, ಪ್ಯಾರಿಸ್ ಶುಗರ್ ಮತ್ತು ಎವರೆಸ್ಟ್ ಸಹಯೋಗದಲ್ಲಿ ಬಟರ್‌ಫ್ಲೈ ನಡೆಸುತ್ತಿರುವ ಆರ್‌ಕೆಜಿ ಸಹ-ಪ್ರಸ್ತುತ ಗೋಲ್ಡ್ ವಿನ್ನರ್ ಮೂಲಕ ‘ನಮ್ಮ ರಾಜ್ಯ ನಮ್ಮ ರುಚಿ’ ಸ್ಪರ್ಧೆ ತಂದಿದೆ. Bambino ವರ್ಮಿಸೆಲ್ಲಿ ಪಾಲುದಾರರಾಗಿ ಮಂಡಳಿಯಲ್ಲಿ ಬಂದಿದ್ದಾರೆ ಮತ್ತು ಸಿರಿ ಕನ್ನಡ ಈವೆಂಟ್‌ನ ಅಧಿಕೃತ ದೂರದರ್ಶನ ಪಾಲುದಾರರಾಗಿದ್ದಾರೆ.

ಅಕ್ಷರ ದಾಸೋಹ ಯೋಜನೆ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು-ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ

ಶ್ರೀನಿವಾಸಪುರ: ಅಕ್ಷರ ದಾಸೋಹ ಯೋಜನೆ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು. ಅಡುಗೆ ತಯಾರಿಸುವಾಗ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ ಹೇಳಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಅಕ್ಷರ ದಾಸೋಹ ನೌಕರರಿಗೆ ಬಟ್ಟೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೀಗೆಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ಸುಗಟೂರು ಕ್ಲಸ್ಟರ್‍ನ 40 ಮಂದಿ ನೌಕರರಿಗೆ ಇಷ್ಟದ ಬಟ್ಟೆ ಕೊಡಿಸಿದ್ದಾರೆ. ಅವರು ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಶೈಕ್ಷಣಿ ಅಭಿವೃದ್ದಿಗಾಗಿ ಬಳಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ದಾನಿಗಳ ನೆರವಿನ ಅಗತ್ಯವಿದೆ. ಅದು ಸರ್ಕಾರ ನೀಡುತ್ತಿರುವ ಸೌಲಭ್ಯಕ್ಕೆ ಪೂರಕವಾಗಿದೆ. ಧರ್ಮೇಶ್ ಅವರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ನೆರವು ನೀಡುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಚ್.ಸಿ.ಬೈರೇಗೌಡ ಮಾತನಾಡಿ ವಿದ್ಯಾರ್ಥಿಗಳು ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಮುಂದೆಬರಬೇಕು. ದಾನಿಗಳು ಬಡ ಪೋಷಕರ ಹೊರೆ ಕಡಿಮೆ ಮಾಡುತ್ತಾರೆ. ದಾನಿಗಳ ನೆರವು ಪಡೆದ ಗುರಿ ತಲುಪಿದ ವಿದ್ಯಾರ್ಥಿಗಳು ದಾನ ನೀಡುವುದನ್ನು ಕಲಿಯಬೇಕು. ಕಷ್ಟದಲ್ಲಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರಿಗೆ ಇಷ್ಟದ ಸೀರೆ, ತಟ್ಟೆ ಹಾಗೂ ಸಿಹಿ ವಿತರಿಸಲಾಯಿತು.
ಸಿಆರ್‍ಪಿ ವೆಂಕಟರಾಮ್, ದಾನಿ ಎಸ್.ಆರ್.ಧರ್ಮೇಶ್, ಶಿಕ್ಷಕರಾದ ಮಾರುತಿ, ಸಂಘರ್ಷ, ಶಿಕ್ಷಕಿಯರಾದ ಪದ್ಮಾವತಿ, ಅನುಷಾ, ಪದ್ಮಾವತಮ್ಮ, ಶಶಿಕಲಾ ಇದ್ದರು.

ಒಕ್ಕಲಿಗ ಸಮುದಾಯ ಸಾಂಘಿಕ ಪ್ರಯತ್ನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು : ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಶ್ರೀನಿವಾಸಪುರ: ಒಕ್ಕಲಿಗ ಸಮುದಾಯ ಸಾಂಘಿಕ ಪ್ರಯತ್ನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್‍ನಲ್ಲಿ ಮಾವು ಬೆಳೆಯಲಾಗುತ್ತಿದೆ. ಆದರೆ ಮಾವು ವಹಿವಾಟಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಮಾವು ಸಂಸ್ಕøತಣ ಘಟಕದ ಸ್ಥಾಪನೆ ಅದಕ್ಕೆ ಪರಿಹಾರವಾಗಿದೆ. ಸರ್ಕಾರ ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪಿಸುವುದರ ಮೂಲಕ ಬೆಳೆಗಾರರ ನೆರವಿಗೆ ಬರಬೇಕು. ಅದಕ್ಕೆ ಪೂರಕವಾಗಿ ಇಲ್ಲಿನ ಶಾಸಕರು ಹಾಗೂ ಇತರ ಜನ ಪ್ರತಿನಿಧಿಗಳು ಪ್ರಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕೆಂಪೇಗೌಡರ ದೂರದರ್ಶಿತ್ವ ನಾಡಿನ ಅಭ್ಯುದಯಕ್ಕೆ ಕಾರಣವಾಗಿದೆ. ಮುಖ್ಯವಾಗಿ ಬೆಂಗಳೂರಿನ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದೆ. ಒಕ್ಕಲಿಗ ಸಮುದಾಯ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಕೋಲಾರ ತಾಲ್ಲೂಕಿನ ಸೀತಿ ಬೆಟ್ಟದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ವ್ಯವಸ್ಥೆ ಮಾಡಲಾಗುವುದು. ಎಲ್ಲ ಸಮುದಾಯಗಳ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮಾತನಾಡಿ, ಕೆಂಪೇಗೌಡರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ. ಅವರ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳಬೇಕಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ಕಲ್ಪಿಸಲು 64 ಪೇಟೆಗಳನ್ನು ನಿರ್ಮಿಸಿ, ಬೆಂಗಳೂರು ಸರ್ವ ಜನಾಂಗದ ಸುಂದರ ನಗರವಾಗಿ ಬೆಳೆಯಲು ಅಡಿಪಾಯ ಹಾಕಿದರು ಎಂದು ಹೇಳಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕೆಂಪೇಗೌಡರು ಕೈಗೊಂಡ ಜನಪರ ಕಾರ್ಯಗಳ ಮುಂದುವರಿಕೆಯಿಂದಾಗಿ ಇಂದು ಬೆಂಗಳೂರು ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಅವರ ಹೆಸರಿನ ಬಲದಿಂದ ನಗರ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮುದಾಯದ ಸಾಧಕರಾದ ಎಂ.ಶ್ರೀರಾಮರೆಡ್ಡಿ, ಬಿ.ಎನ್.ರಮೇಶ್, ಡಿ.ದೇವರಾಜ್, ಎಂ.ಎನ್.ಅನುಚೇತ್, ಬಿ.ಎಲ್.ನಾಗೇಶ್, ಸುಭಾಷ್, ವಸಂತ ಕುಮಾರ್, ಎ.ಎನ್.ಕೃಷ್ಣಾರೆಡ್ಡಿ, ಕೆ.ಎಸ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಕಾರ್ಯದರ್ಶಿ ಮೀಸಗಾನಹಳ್ಳಿ ವೆಂಕಟರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಂಕರಪ್ಪ, ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ್, ಮುಖಂಡರಾದ ಎಲ್.ಗೋಪಾಲಕೃಷ್ಣ, ತೂಪಲ್ಲಿ ಆರ್.ಚೌಡರೆಡ್ಡಿ, ಆರ್.ನಾರಾಯಣಸ್ವಾಮಿ, ಬಿ.ವಿ.ಶಿವಾರೆಡ್ಡಿ, ಮಂಜುನಾಥಸ್ವಾಮಿ, ಡಾ. ಕೆ.ಎನ್.ವೇಣುಗೋಪಾಲ್, ಎಂ.ಶ್ರೀರಾಮರೆಡ್ಡಿ, ಎ.ವೆಂಕಟರೆಡ್ಡಿ, ಡಾ. ರಮೇಶ್, ಚಿನ್ನಪ್ಪರೆಡ್ಡಿ, ಶ್ರೀನಾಥರೆಡ್ಡಿ, ಎನ್.ಜಿ.ಬೇಟಪ್ಪ, ರೋಣೂರು ಚಂದ್ರಶೇಖರ್, ರಾಮಚಂದ್ರ ಇದ್ದರು.
ಮೆರಣಿಗೆ: ಪಟ್ಟಣದ ಎಂಜಿ ರಸ್ತೆಯಲ್ಲಿ ಕೆಂಪೇಗೌಡರ ಭಾವ ಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ನೂಕ್ಕೂ ಹೆಚ್ಚು ಕೆಂಪೇಗೌಡರ ಭಾವ ಚಿತ್ರ ಹೊತ್ತ ಪಲ್ಲಕಿಗಳು ಭಾಗವಹಿಸಿದ್ದವು. ಮೆರವಣಿಗೆ ಉದ್ದಕ್ಕೂ ಕಲಾವಿದರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ರಾಘವೇಂದ್ರಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ರಾಘವೇಂದ್ರಸ್ವಾಮಿಗಳ ವಿಗ್ರಹಕ್ಕೆ ವಿಶೇಷ ಅಲಂಕಾರ

ಶ್ರೀನಿವಾಸಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಘವೇಂದ್ರಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಠದಲ್ಲಿ ರಾಘವೇಂದ್ರಸ್ವಾಮಿಗಳ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ವೆಂಕೋಬರಾವ್, ಶ್ರೀನಾಥ್, ಗುರುರಾಕರಾವ್, ಚೇತನ್, ಕಾರ್ತಿಕ್, ದ್ವಾರಕೀಶ್, ವಾದಿರಾಜ್ ಇದ್ದರು.

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ಚಟುವಟಿಕೆ ಮೂಲಕ ಸಮಾಜ ಸೇವೆ ಮಾಡುವ ಸಂಸ್ಥೆಯಾಗಿದೆ

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ಚಟುವಟಿಕೆ ಮೂಲಕ ಸಮಾಜ ಸೇವೆ ಮಾಡುವ ಸಂಸ್ಥೆಯಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ನಿಗಮದ ಮುಖ್ಯಗುರಿಯಾಗಿದೆ ಎಂದು ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಚ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್‍ಐಸಿ ಶಾಖಾ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ 67ನೇ ಎಲ್‍ಐಸಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆ ವ್ಯಕ್ತಿಗು ಎಲ್‍ಐಸಿ ಸೌಲಭ್ಯ ಒದಗಿಸಬೇಕು. ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ಜನರ ಆರ್ಥಿಕ ಸ್ಥಿತಿಗೆ ಅನುಗುಣವಾದ ಪಾಲಿಸಿ ಮಾಡಿಸಬೇಕು ಎಂದು ಹೇಳಿದರು.
ಎಲ್‍ಐಸಿ ವ್ಯವಹಾರ ಪಾರದರ್ಶಕವಾಗಿದ್ದು, ನಂಬಲು ಅರ್ಹವಾಗಿದೆ. ಆದ್ಧರಿಂಲೇ ಜನರು ಹಲವು ದಶಗಳಿಂದ ಈ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಹಣ ತೊಡಗಿಸುತ್ತಿದ್ದಾರೆ. ಆದ್ದರಿಂದ ಎಲ್‍ಐಸಿಯಲ್ಲಿನ ವಿವಿಧ ಯೋಜನೆಗಳನ್ನು ಪರಿಚಯಿಸುವ ಹೊಣೆ ಪ್ರತಿನಿಧಿಗಳ ಮೇಲಿದೆ. ತಾವು ಬೆಳೆಯುವುದರೊಂದಿಗೆ ಸಂಸ್ಥೆ ಬೆಳೆಯಲು ಶ್ರಮಿಸಬೇಕು. ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ಬಾಲಚಂದ್ರ ಮಾತನಾಡಿ, ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಎಲ್‍ಐಸಿ ಪಾತ್ರ ಹಿರಿದು. ಸಾರ್ವಜನಿಕರ ಆರ್ಥಿಕಾಭಿವೃದ್ಧಿಯೊಂದಿಗೆ ದೇಶದ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶ ಹೊಂದಲಾಗಿದೆ. ಎಲ್‍ಐಸಿ ಪ್ರತಿನಿಧಿಗಳು ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ವಿ.ಕುಲಕರ್ಣಿ ಮಾತನಾಡಿ, ಎಲ್‍ಐಸಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ತನ್ನ ಕಾರ್ಯ ವೈಖರಿಯಿಂದಾಗಿ ವಿಶ್ವ ಮಾನ್ಯತೆ ಪಡೆದಿದೆ. ರೂ.45 ಲಕ್ಷ ಕೋಟಿ ಶಾಶ್ವತ ನಿಧಿ ಮೀಸಲಿರಿಸಿದೆ ಎಂದು ಹೇಳಿದರು.
ಉಪ ವ್ಯವಸ್ಥಾಪಕ ಡಿ.ರವಿಶಂಕರ್, ಶ್ರೀನಿವಾಸ್, ಲಿಖಿತ್ ಕುಮಾರ್ ಹಾಗೂ ಪ್ರತಿನಿಧಿಗಳು ಇದ್ದರು.

ಕುಂದಾಪುರ ಸಂತ ಮೇರಿ ಪಿ ಯು ಕಾಲೇಜಿನಲ್ಲಿ ಪಾಲಕರ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕುಂದಾಪುರದ ಸಂತ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರಥಮ ಪಿ ಯು ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಂತ ಮೇರಿಸ್ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ಅತಿ .ವಂ.ಫಾದರ್ ಸ್ಟ್ಯಾನಿ ತಾವ್ರೋರವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಪಿ ಯು ಹಂತದಲ್ಲಿ ಚೆನ್ನಾಗಿ ಅಭ್ಯಾಸ ಮಾಡುವದರೊಂದಿಗೆ ಉಲ್ಲಾಸದಿಂದಿರಬೇಕು. ಅಪ್ಪ ಅಮ್ಮ ಗುರು ಹಿರಿಯರನ್ನು ಗೌರವಿಸಬೇಕು.ಎನ್ನುತ್ತಾ ಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಾದ ವಿನಾರ್ಡ್ ಡಿಕೊಸ್ತಾ ಹಾಗೂ ನವೀನ್ ಕುಮಾರ ಪ್ರಸ್ತುತ CA ಪದವಿ ಪೂರ್ಣಗೊಳಿಸಿ ಉತ್ತಮ ಕಂಪೆನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದ ಅವರನ್ನು ಶಿಕ್ಷಣ ಸನ್ಮಾನಿಸಿ ಅವರ ಪ್ರಯತ್ನಕ್ಕೆ ಶ್ಯಾಘನೆ,ಹಾಗೂ ಅವರ ಪಾಲಕರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೇತನಾದ ಇನ್ನೋರ್ವ ಚೆಸ್ ಆಟಗಾರ ನಿಶಾಂತ್ ಡಿಸೋಜ ಈತನಿಗೆ ಪುಷ್ಪ, ಪ್ರಶಸ್ತಿ ನೀಡಿ ಗೌರವಿಸಿಲಾಯಿತು.
ಕಾರ್ಯ ಕ್ರಮದ ಕೇಂದ್ರ ಬಿಂದುಗಳಾಗಿ, CA ಪರೀಕ್ಷೆಯನ್ನು ಉತ್ತಮ ಫಲಿತಾಂಶದೊಂದಿಗೆ ಮುಗಿಸಿ ಕಾಲೇಜಿನ ಇತಿಹಾಸದಲ್ಲಿ CA ಪರೀಕ್ಷೆ ಮುಗಿಸಿದವರಲ್ಲಿ ಮೊದಲಿಗರಾಗಿ ಸಂಸ್ಥೆಗೆ ಕೀರ್ತಿ ತಂದ ವಿನಾರ್ಡ್ ಡಿಕೊಸ್ತಾ ಹಾಗೂ ನವೀನ್ ಕುಮಾರ ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ತಮ್ಮ ಶಿಕ್ಷಣದಲ್ಲಿ,ಪ್ರಯತ್ನ,ಅಪ್ಪ ಅಮ್ಮಂದಿರ ಪ್ರೋತ್ಸಾಹ,,ಗುರು ಹಿರಿಯರಲ್ಲಿ ಗೌರವ ಇವೆಲ್ಲ ಮುಖ್ಯ ಎನ್ನುತ್ತಾ ತಮ್ಮ ಸಾಧನೆಗೆ ಸಂಸ್ಥೆ, ಸಂಸ್ಥೆಯ ಉಪನ್ಯಾಸಕ ವೃಂದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಪ್ರತಿಯೊಬ್ಬರೂ ಪ್ರಯತ್ನಿಸಿದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ಕಾಲೇಜಿನಲ್ಲಿಯ ವಿದ್ಯಾರ್ಥಿಗಳಿಗೆ ಉತ್ತೇಜಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಶ್ಮಾ ಫೆರ್ನಾಂಡಿಸ್ ರವರು ಎಲ್ಲಾ ಪಾಲಕರಿಗೆ, ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಪಾಲಕರಿಗೆ ಕಾಲೇಜಿನ ಕೆಲವು ಸಲಹೆ ಸೂಚನೆಗಳನ್ನು ತಿಳಿಸಿದರು.ಉಪ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ನಾಯರ್ ರವರು ಪ್ರಸ್ತುತ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು.
ವಿದ್ಯಾರ್ಥಿಗಳ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಬಿನು ಜಯಚಂದ್ರನ್ ರವರು ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳ ಪರಿಚಯವನ್ನು ಕನ್ನಡ ಉಪನ್ಯಾಸಕ ನಾಗರಾಜ ಶೆಟ್ಟಿ ನೀಡಿ, ಜೀವಶಾಸ್ತ್ರ ಉಪನ್ಯಾಸಕರಾದ ಪ್ರಫುಲ್ಲ ರವರು ಧನ್ಯವಾದ ಸಮರ್ಪಿಸಿದರು.

ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಜಿಲ್ಲಾ‌ಮಟ್ಟದಲ್ಲಿ ಪ್ರಥಮ‌ ಸ್ಥಾನ‌ ಮತ್ತು ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

ಉಡುಪಿಯ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ದಿ. 28-8-23 ರಂದು ನಡೆದ ಉಡುಪಿ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ  ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಟೇಬಲ್ ಟೆನಿಸ್ ತಂಡ ಪ್ರಥಮ‌ ಸ್ಥಾನವನ್ನು ಪಡೆದಿರುತ್ತದೆ. ತಂಡದಲ್ಲಿ ಪ್ರಥಮ ಪಿ.ಯು.ಸಿ ಯ ದೀಪ್ತಿ‌ ಕೆ, ಸಿಂಚನಾ‌ ಶೆಟ್ಟಿ, ಕ್ಷಮಾ ಗೌತಮ್, ಅಂಕಿತಾ, ಭಾರ್ಗವಿ ಇವರು ಭಾಗವಹಿಸಿರುತ್ತಾರೆ. ಅವರಲ್ಲಿ ಮೂವರು ವಿದ್ಯಾರ್ಥಿನಿಯರಾದ ಅಂಕಿತಾ, ಕ್ಷಮಾ ಗೌತಮ್ ಹಾಗೂ ದೀಪ್ತಿ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗಾಗಿ, ಕಾಲೇಜಿನ ಸಂಚಾಲಕರಾದ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿಯ ಸದಸ್ಯರು,‌ ಪ್ರಾಂಶುಪಾಲರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿರುತ್ತಾರೆ. 

Celebration of Teacher’s day in Catholic Board of Education

On the occasion of Teacher’s day, the Catholic Board of Education had organized a programme of honoring retired teachers and all the institutions with gifted students and those that had obtained the highest results, on 02.09.2023.

Most Rev Dr Peter Paul Saldanha, the Bishop of Mangalore presided over the function. Along with him, the Director of the Bajjodi Pastoral Centre Rev Fr Santosh Rodrigues, the Secretary of the Catholic Board of Education, Rev Fr Anthony Shera, the Designate Secretary, Rev Fr Leo Lasrado graced the dais.

The students of St Lawrence English Medium School, Bondel set the programme in motion with their melodious singing of the Prayer song.

The Secretary of the Catholic Board of Education welcomed everyone. The designate Secretary Rev Fr Leo Lasrado offered the eulogy for the teachers, the non-teaching staff and the students who had passed away in the year 2022-23. The educational institutions that had obtained 100 percent results and the talented students of the year were honoured.

60 teaching and non-teaching staff who had served Catholic institutions for several years and had retired were lauded for their selfless service and honoured with a shawl,  memento and fruits.

In his address, the President of the programme praised the retired teaches for their dedicated service, expressed his gratitude to them and wished them well for their retired life.

At the end of the programme, Sr Anthony Mary, Headmistress of St Bridgit Higher Primary School, Sullya gave the vote of thanks.

Mrs Patricia Lobo, Headmistress of St Peter Higher Primary School, Kottara and Mrs Florine Pereira, Headmistress of St Aloysius Higher Primary School, Urwa read out the names of the retirees.

Among the retirees, Mr Aloysius D’Souza, retired Head Master of Rosario High School, Mangalore and Dr Priscilla D’Souza, retired Head mistress of St Aloysius English Medium School, Urwa expressed their feelings.

The programme was compered by Mrs Preethi D’Souza, teacher of Cassia High School.

Lunch was served to all at the end of the programme.

ಬೆಥನಿ ಎಜ್ಯುಕೇಶನಲ್ ಸೊಸೈಟಿಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ

ಮಂಗಳೂರು: ದಿನಾಂಕ 02.09.2023ರಂದು ಸಂತರೇಮಂಡ್ ವಿದ್ಯಾಸಂಸ್ಥೆ ವಾಮಂಜೂರುಇಲ್ಲಿ ಬೆಥನಿ ಎಜ್ಯುಕೇಶನಲ್ ಸೊಸೈಟಿಯ75ನೇ ಅಮೃತ ಮಹೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಬೆಥನಿ ಎಜ್ಯುಕೇಶನಲ್ ಸೊಸೈಟಿಯಕಾರ್ಪೊರೇಟ್ ಮ್ಯಾನೇಜರ್ ವಂದನೀಯ ಭಗಿನಿ ಸಿಸಿಲಿಯ ಮೆಂಡೋನ್ಸಾಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದರು. ಧರ್ಮಗುರುಗಳಾದ ರೇವರೆಂಡ್ ಫಾದರ್ ಮ್ಯಾಕ್ಸಿಮ್‍ಎಲ್ ನೊರೊನ್ಹಾ, ವಿಕಾರ್‍ಜನರಲ್ ಮಂಗಳೂರು ಧರ್ಮಪ್ರಾಂತ್ಯ, ಬೆಥನಿ ಎಜ್ಯುಕೇಶನಲ್ ಸೊಸೈಟಿಯ76ನೇ ವರ್ಷದ ಸಂಭ್ರಮಕ್ಕೆಚಾಲನೆಯನ್ನು ನೀಡಿ ದೀಪ ಬೆಳಗಿಸಿ, ಆಶೀರ್ವಚನ ನೀಡಿದರು. ಮುಖ್ಯಅತಿಥಿಯಾಗಿ ಶ್ರೀಯುತ ಜೇಮ್ಸ್‍ ಕುಟಿನ್ಹೊ, ಕ್ಷೇತ್ರ ಶಿಕ್ಷಣಾಧಿಕಾರಿ, ಮಂಗಳೂರು ಉತ್ತರ ವಲಯ, ಶ್ರೀಮತಿ ಮರಿಯಮ್ಮತೋಮಸ್, ಮಾಜಿಕಾರ್ಪೊರೇಟರ್ ಹಾಗೂ ವಕೀಲರು ಮತ್ತುಡಾ| ಸತೀಶ್‍ಕುಮಾರ್-ಮಣಿಪಾಲ ವಾಣಿಜ್ಯ ವಿಭಾಗದ ಹಿರಿಯಆಧ್ಯಾಪಕರು ಹಾಗೂ ಭಗಿನಿ ಶುಭ, ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಹಾಗೂ ಸೈಂಟ್‍ರೇಮಂಡ್ ಸಂಸ್ಥೆಗಳ ಸಂಚಾಲಕಿ ಮತ್ತು ಸ್ಥಳೀಯ ಕಾನ್ವೆಂಟಿನಸುಪೀರಿಯರ್ ವಂದನೀಯ ಭಗಿನಿ ವಿತಾಲಿಸ್ ಉಪಸ್ಥಿತರಿದ್ದರು. ಡಾ| ಸತೀಶ್‍ಕುಮಾರ್ ಹಾಗೂ ಶ್ರೀಮತಿ ಮರಿಯಮ್ಮತೋಮಸ್‍ಇವರು ಬೆಥನಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು ತಮ್ಮ ಪ್ರಗತಿಗೆಕಾರಣಕರ್ತರಾದ ಬೆಥನಿ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು. ವಂದನೀಯ ಭಗಿನಿ ಶುಭಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಶರ್ಮಿಳ ಹಾಗೂ ಶ್ರೀಮತಿ ರೇಶ್ಮ ವಂದಿಸಿದರು. ಭಗಿನಿ ಜೆಸ್ಸಿ ಪ್ರೀಮ ಮತ್ತು ಶ್ರೀಮತಿ ಡೆಲ್ಸಿ ಡಿ’ಸೋಜಕಾರ್ಯಕ್ರಮ ನಿರೂಪಿಸಿದರು.

ವರದಿ : ನಯನ ಸಹಶಿಕ್ಷಕಿ