HOLY ROSARY CHURCH, KUNDAPUR – 450 th JUBILEE SOUVENIR 2021

ನ್ಯಾಯಾಲಯಗಳಲ್ಲೂ ವಿಕಲಚೇತನರಿಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ನ್ಯಾಯದ ಸುಲಭಲಭ್ಯತೆಯನ್ನು ಖಾತರಿ ಪಡಿಸಬೇಕಿದೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೋಪಣ್ಣ

ಬೆಂಗಳೂರು : ನ್ಯಾಯಾಲಯಗಳಲ್ಲಿ ವಿಕಲಚೇತನರಿಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ನ್ಯಾಯದ ಸುಲಭಲಭ್ಯತೆಯನ್ನು ಖಾತರಿ ಪಡಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೋಪಣ್ಣ ಕರೆ ನೀಡಿದರು.

ಅವರು ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ‘ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ)’ ಸಂಸ್ಥೆ ರಾಮಯ್ಯ ಕಾನೂನು ಕಾಲೇಜಿನ ಸಹಕಾರದೊಂದಿಗೆ ಸ್ಥಾಪಿಸಿದ ‘ನೂತನ ಡಿಸೆಬಿಲಿಟಿ ಲಾ ಸೆಂಟರ್‌’ ಅನ್ನು ಉದ್ಘಾಟಿಸಿ ಮಾತನಾಡಿದರು.

ತಮ್ಮ ವಿಕಲಚೇತನ ಸ್ಥಿತಿಯಿಂದಾಗಿ ಅವಕಾಶ ವಂಚಿತರು ಮತ್ತು ಬಡವರು ಹಲವು ವರ್ಷಗಳಿಂದ ನ್ಯಾಯದಿಂದ ವಂಚಿತರಾಗಿದ್ದಾರೆ. ನ್ಯಾಯದ ಸುಲಭ ಲಭ್ಯತೆಯನ್ನು ಅವರಿಗೆ ಪಡೆಯಲು ಸಾಧ್ಯವಾಗಿಲ್ಲ.

ಸಂವಿಧಾನವು ತನ್ನ ಎಲ್ಲ ಪ್ರಜೆಗಳಿಗೆ ಸಮಾನ ನ್ಯಾಯವನ್ನು ನೀಡುತ್ತಿದ್ದರೂ ಕೂಡ ವಿಕಲಚೇತನರಿಗೆ, ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗಗಳಿಗೆ ತಮ್ಮ ಹಕ್ಕುಗಳ ಬಗ್ಗೆಯಾಗಲೀ, ಸಂವಿಧಾನವು ಸಂರಕ್ಷಿಸುತ್ತಿರುವ ಇತರ ಸೌಲಭ್ಯಗಳ ಬಗ್ಗೆಯಾಗಲೀ ತಿಳಿದಿಲ್ಲ ಎಂದು ಎಸ್.ಎ. ಬೋಪಣ್ಣ ಹೇಳಿದರು‌.

ನ್ಯಾಯದ ಸುಲಭ ಲಭ್ಯತೆಯು ನಮ್ಮ ಸಮಾಜದ ಪ್ರಮುಖ ಅಗತ್ಯತೆಯಾಗಿದ್ದು ಅದನ್ನು ಸಾಧಿಸುವಲ್ಲಿ ನಾವು ಮುಂದಡಿ ಇರಿಸಬೇಕಿದೆ ಎಂದು ಅವರು ಕರೆ ನೀಡಿದರು.

ಸಾಮಾಜಿಕ- ಆರ್ಥಿಕ ಸ್ಥರಗಳ ನಡುವೆ ಯಾವುದೇ ತಾರತಮ್ಯವಿಲ್ಲದೇ ನ್ಯಾಯ ನೀಡದಾಗ ಮಾತ್ರ ನ್ಯಾಯದ ಸುಲಭ ಲಭ್ಯತೆಯನ್ನು ಸಾಧಿಸಿದಂತಾಗುತ್ತದೆ ಎಂದು ನಾನು ನಂಬುತ್ತೇ‌ನೆ. ಸಾಮಾಜಿಕ ನ್ಯಾಯವು ನಮ್ಮ ಸಂವಿಧಾನದ ಮೂಲ ರಚನೆಯಾಗಿದೆ.  ಯಾವಾಗ ಎಲ್ಲ ವರ್ಗದ ಜನರನ್ನು ಸಮಾನವಾಗಿ ಪರಿಗಣಿಸಲಾಗುತ್ತದೆಯೋ ಆಗಲೇ ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದಂತಾಗುತ್ತದೆ. ವಿಶೇಷ ಚೇತನರಿಗೂ ನ್ಯಾಯ ದೊರಕಿಸುವುದು ನ್ಯಾಯದ ಸುಲಭಲಭ್ಯತೆಯ ಪ್ರಮುಖ ಅಂಶ‌. ವಿಶೇಷ ಚೇತನರ ಊನತೆಗಳಿಂದಾಗಿ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು, ಅವರ ನ್ಯಾಯ ಸಂರಕ್ಷಣೆಗಾಗಿ ಹೋರಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ನುಡಿದರು.

ಕೆಲವರ ಕೂಗುಮಾರಿ ಮಾತುಗಳು, ಎಲ್ಲರ ಸಂವಿಧಾನಾತ್ಮಕ ಹಕ್ಕುಗಳನ್ನು ಕಾಪಾಡುವ  ಆಶಯದಿಂದ ನಮ್ಮನ್ನು ದೂರೀಕರಿಸಿ ವಿಚಲಿತರನ್ನಾಗಿಸದಿರಲಿ ಎಂದು ಎಸ್.ಎ. ಬೋಪಣ್ಣ ಎಚ್ಚರಿಸಿದರು.

ರಾಷ್ಟೀಯ ಹಾಗೂ ರಾಜ್ಯ ಮಟ್ಟದಲ್ಲಿನ ನ್ಯಾಯಾಂಗ ರಂಗದಲ್ಲಾದ ಬೃಹತ್ ಕ್ರಾಂತಿಯ ಪರಿಣಾಮವಾಗಿ ಇಂದು ವಿಕಲಚೇತನರಿಗೆ ನ್ಯಾಯ ಒದಗಿಸುವ ಬಗ್ಗೆ ತಳಮಟ್ಟದಲ್ಲಿಯೇ ತಿಳಿಸಲಾಗುತ್ತಿದೆ.  ವಿಕಲಚೇತನರ ಲಿಂಗ ಹಾಗೂ ವಯಸ್ಸಿಗೆ ತಕ್ಕಂತೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರಗಳು ಮುಂದಡಿ ಇರಿಸಬೇಕಿದೆ. ವಿಕಲಾಂಗರು ಸೇರಿದಂತೆ ಸಮಾಜದ ಎಲ್ಲ ದುರ್ಬಲ ವರ್ಗಗಳಿಗೆ ನ್ಯಾಯ ಒದಗಿಸಿದಾಗ ಮಾತ್ರ ನ್ಯಾಯದ ನೈಜತೆಯನ್ನು ಕಾಪಾಡಿದಂತಾಗುತ್ತದೆ‌ ಎಂದು ಅವರು ಕರೆ ನೀಡಿದರು.

‘ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ)’ ಸಂಸ್ಥೆಯ ಪ್ರತಿನಿಧಿಗಳಾಗಿ ಗೌರವ ಕಾರ್ಯದರ್ಶಿ ಜೇಕಬ್ ಕುರಿಯನ್, ಸಿಇಓ ಡಾ. ಎನ್.ಎಸ್. ಸೆಂಥಿಲ್ ಕುಮಾರ್ ಭಾಗವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಆಂಧ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ, ಹೈಕೋರ್ಟ್‌ ನ್ಯಾಯಮೂರ್ತಿ ಜಿ.ನರೇಂದ್ರ, ಗೋಕುಲ ಎಜುಕೇಶನ್ ಫೌಂಡೇಷನ್ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಉಪಸ್ಥಿತರಿದ್ದರು.

ಸ್ನೇಹಾಲಯ ಮಾನಸಿಕರ ಪುನರ್ವಸತಿ ಕೇಂದ್ರದ ನಿವಾಸಿಗಳಿಗಾಗಿ “ಸ್ನೇಹಾಲಯ ಫ್ಯಾಷನ್ ಫೆಸ್ಟ್ / “Snehalaya Fashion Fest” for residents of Snehalaya Mental Rehabilitation Centre

ದಿನಾಂಕ 29-07-2023 ರಂದು ಸ್ನೇಹಾಲಯ ಮಾನಸಿಕರ ಪುನರ್ವಸತಿ ಕೇಂದ್ರದ ನಿವಾಸಿಗಳಿಗಾಗಿ “ಸ್ನೇಹಾಲಯ ಫ್ಯಾಷನ್ ಫೆಸ್ಟ್” ನ್ನು ನಡೆಸಲಾಯಿತು . ಮಾನಸಿಕ ಅಸ್ವಸ್ಥರಿಗೆ ನಡೆದ  ಈ ಫ್ಯಾಷನ್ ಫೆಸ್ಟ್ ಭಾರತ ದೇಶದಲ್ಲಿ ನಡೆದ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆಯಿತು. ಮಾತ್ರವಲ್ಲದೆ ರಾಂಪ್ ವಾಕ್ ನಡೆಸಿದ ಸ್ನೇಹಾಲಯದ 49 ನಿವಾಸಿಗಳ ಉತ್ಸಾಹ, ಆತ್ಮವಿಶ್ವಾಸ ಹಾಗೂ ಆಶಾವಾದಿತನ ವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.  ಸ್ನೇಹಾಲಯದ ಸಂಸ್ಥಾಪಕರು ಹಾಗೂ ಟ್ರಸ್ಟಿಗಳು ಆಗಮಿಸಿದ ಗಣ್ಯರನ್ನು ಪ್ರಿತಿಯಿಂದ ಸ್ವಾಗತಿಸಿದರು. ಮುಖ್ಯ ಅಥಿತಿಗಳಾಗಿ ಮಂಜೇಶ್ವರದ ಶಾಸಕರಾದ ಶ್ರೀ ಎ.ಕೆ. ಎಮ್ ಅಶ್ರಫ್ ಹಾಗೂ ಬ್ರದರ್ ಜೋಸೆಪ್ ಕ್ರಾಸ್ತಾ ರವರು ಈ ಫ್ಯಾಷನ್ ಫೆಸ್ಟ್ ನ ಧ್ಯೇಯೋದ್ದೇಶಗಳನ್ನು ತಿಳಿಸುವ ಫಲಕದ ಅನಾವರಣದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಜೀನ್ ಲವಿನ ಮೊಂತೆರೊ, ಖ್ಯಾತ ನಿರೂಪಕರಾದ ವಿ.ಜೆ ಡಿಕ್ಸನ್, ಖ್ಯಾತ ಛಾಯಾಗ್ರಾಹಕ ಶಂಸುದಿನ್ ತಾಂಡಿಲಂ, ಡಿಜೆ ಶಾಡ್ಜ್, ಅಂತರಾಷ್ಟ್ರೀಯ ಫ್ಯಾಷನ್ ಶೋ ನಿರ್ದೇಶಕ ಶನೋಜ್ ಇರಾನಿ, ನೃತ್ಯ ಸಂಯೋಜಕಿ ಸಜ್ನಾ ಸಾಜ್, ವಸ್ತ್ರ ವಿನ್ಯಾಸಕಾರರಾದ ಯಜ್ಞೇಶ್ ಅಮೀನ್ ಉಳ್ಳಾಲ್, ಶ್ರೀ ರೋಶನ್ ಮಾರ್ಟಿಸ್ – ಮುಖ್ಯ ಸಂಪಾದಕರು, ಕರಾವಳಿ ಸುದ್ದಿ, ಶ್ರೀ ಅಲ್ವಿನ್ ಡಿಸೋಜಾ – ಅಧ್ಯಕ್ಷರು, ಕ್ಯಾಥೋಲಿಕ್ ಸಭಾ, ಮಂಗಳೂರು ಪ್ರಾಂತ್ಯ, ಶ್ರೀ ನವೀನ್ ಮೊಂತೆರೊ – ಸೌದಿ ಸ್ನೇಹಿತರ ಸಂಘ, ಶ್ರೀ ಎಂ.ಎಸ್.ಥಾಮಸ್ – ಸಂಸ್ಥಾಪಕ ಅಧ್ಯಕ್ಷರು ಸಂತೋಷ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಸಿತಂಗೋಳಿ, ಶ್ರೀ ಫ್ಯಾಷನ್ ಮಾಡೆಲ್ ಹಾಗು ಶೋ ಡೈರೆಕ್ಟರ್  ಶೋಭಿತ್ ಹಾಗೂ ವಸ್ತ್ರ ವಿನ್ಯಾಸಗಾರ ರಾದ ಶ್ರೀಮತಿ ಅಕ್ಷಯ ಇವರು ಉಪಸ್ಥಿತತರಿದ್ದರು. ಈ ಅಪರೂಪದ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಶ್ರೀ ಶೋಭಿತ್ ಹಾಗು ಶ್ರೀಮತಿ ಅಕ್ಷಯ ರವರನ್ನು ಸನ್ಮಾನಿಸಲಾಯಿತು. ಮಂಗಳೂರಿನ ಖ್ಯಾತ ಕಾರ್ಯನಿರ್ವಾಹಕಿಯಾದ ಶ್ರೀಮತಿ ಲವಿಟ ಮಿನೇಜಸ್ ಕಾರ್ಯಕ್ರಮವನ್ನು ನಿರೂಪಿಸಿದರು.

SNEHALAYA FASHION FEST: Breaking Barriers and Celebrating Diversity – Fashion Show Empowers Individuals with Mental Health Challenges.

In a groundbreaking event that combined fashion, inclusivity, and advocacy, Snehalaya Psycho-social Center for Men and Women hosted a fashion show aimed at empowering individuals with mental health challenges. The event, titled “Snehalaya Fashion Fest,” took place at Snehalaya Auditorium on July 29, 2023.

The show was organized by Snehalaya Charitable Trust, a non-profit dedicated to promoting mental health awareness and breaking down the stigmas associated with mental health conditions. The main aim was to provide a platform for individuals with mental health challenges to showcase their talents, boost their self-confidence, and raise awareness about mental health issues.

From the very beginning, the event emphasized inclusivity and diversity. A wide range of models of all ages, genders, body types, and ethnicities participated in the show. Designers also joined hands with the cause and presented a diverse array of outfits, embracing a variety of styles and inspirations.

The show was inaugurated by Mr. AKM Ashraf, MLA Manjeswaram Constituency, along with Joseph Crasta, executive director of Snehalaya Charitable Trust. Guests from various realms of society were present for the event, namely: Mrs. Gean Lavina Monteiro – President, Manjeshwar Grama Panchayath, Mr. V.J. Dixon – Celebrity Host/TV Anchor/Fashion Model, Mr. Shamsudin Thandilam – Celebrity Photographer, Mr. DJ Shadz – International DJ, Mr. Shanoj Irani – International Fashion Show Director, Ms. Sajna Saaj – Choreographer, Mr. Yajnesh Amin Ullal – Fashion Designer, Mr. Shobith – Model and Show Director, Mrs. Akshaya – Costume Designer, Mr. Roshan Martis – Chief Editor, Karavali Suddi, Mr. Alwyn D’Souza – President, Catholic Sabha, Mangalore Province, Mr. Naveen Monteiro – Saudi Friends, Mr. M.S.Thomas – Founder President Santhosh Arts & Sports Club Sithangoli.

As the event concluded, it left a lasting impact on the audience and participants alike. The collective effort to break down barriers and empower individuals with mental health challenges through fashion resonated with many. The hope is that this event will inspire similar initiatives worldwide and continue to foster understanding and support for mental health causes. The backbone of the show, Mr. Shobith, and Mrs. Akshaya, were felicitated during the event. The Programme was hosted by Mrs. Lavita Menezes.

ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲೆಗಳ ವಲಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ


ಕುಂದಾಪುರ, ಜು.31: ‘ಆಟ ಪಾಠ ಊಟ ಇದು ಮನುಷ್ಯನಿಗೆ ಬೇಕಾಗಿರುವ ಅಗತ್ಯವಾದ ವಿಷಯಗಳು, ಅದರಲ್ಲಿ ಮಕ್ಕಳಿಗೆ ಅಚ್ಚು ಮೆಚ್ಚಿನದು ಆಟ, ನಮ್ಮ ಎಳೆಯವಲ್ಲಿ ಇದನ್ನೆ ಶಾಲೆಯಲ್ಲಿ ನಿರೀಕ್ಷಿಸುತ್ತಿದ್ದೆವು. ಆಟಗಳಿಂದ ನಮ್ಮ ಶರೀರ ಸುಧ್ರಡವಾಗುತ್ತದೆ. ಸೋಲು ಗೆಲುವು ಇದ್ದದೆ ಆದರೆ ಆಟದಲ್ಲಿ ನಮ್ಮನು ನಾವು ತೊಡಗಿಕೊಳ್ಳಬೇಕು, ನೀವು ಆಟದಲ್ಲಿ ಶ್ರಮ ಪಟ್ಟು ಸಾಧನೆ ಮಾಡಬೇಕು, ಈ ಆಟ ಇಲ್ಲಿಗೆ ಮುಕ್ತಾಯವಾಗುವುದಿಲ್ಲ, ತಾಲ್ಲೂಕಿನಿಂದ ಜಿಲ್ಲೆ, ಜಿಲ್ಲೆಯಿಂದ ರಾಜ್ಯ, ರಾಜ್ಯದಿಂದ ರಾಷ್ಟ್ರೀಯ ಮಟ್ಟಕ್ಕೆ, ರಾಷ್ಟ್ರೀಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವಂತಹ ಗುರಿಯನ್ನು ಇಟ್ಟುಕೊಳ್ಳಬೇಕು” ಎಂದು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಹಾಗೂ ಸಂತ ಮೇರಿಸ್ ಸಮುಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅ|ವಂ|ಸ್ಟ್ಯಾನಿ ತಾವ್ರೊ ಹೇಳಿದರು.
ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲೆಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಸಂದೇಶ ನೀಡಿದರು. ದೈಹಿಕ ಪರಿವೀಕ್ಷಗಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ, ಕುಂದಾಪುರದ ರವೀಂದ್ರ ನಾಯಕ್ ಪ್ರಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿ ಮತ್ಸ್ಯ ಉದ್ಯಮಿ ಸತ್ಯ ಜಾವಗಲ್ ಮಾತನಾಡಿ “ಕ್ರೈಸ್ತರು ಶಿಕ್ಷಣ ನೀಡುವಲ್ಲಿ ಭಾರೀ ಮುಂದು, ಶಿಕ್ಷಣಕ್ಕಾಅಗಿ ನಾವು ಇವರಿಗೆ ಸಹಾಯ ಹಸ್ತವನ್ನು ನೀಡಬೇಕು. ಕ್ರೈಸ್ತ ಧರ್ಮಗುರುಗಳ ಒಡನಾಟ ಒಂದು ಭಾಗ್ಯವೇ ಸರಿ’ ಎಂದು ಅವರ ಭಾವನೆಯನ್ನು ವ್ಯಕ್ತಪಡಿಸಿದರು. ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಗಾಗಿ ಅವರು ಒಂದು ಟೇಬಲ್ ಟೆನ್ನಿಸ್ ಟೇಬಲನ್ನು ದಾನವಾಗಿ ನೀಡಿದ್ದು, ಅದನ್ನು ಅವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು. ಅವರ ಪರಿಚಯವನ್ನು ಶಿಕ್ಷಕ ಪ್ರಶಾಂತ್ ರೇಬೆರೊ ನೀಡಿದರು. ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಸಂತಮೇರಿಸ್ ವಿದ್ಯಾ ಸಂಸ್ಥೆಯವರು ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಿರ್ವಹೈಸುತ್ತಾರೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ರೆಶ್ಮಾ ಫೆರ್ನಾಂಡಿಸ್, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ, ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಡಿಸೋಜಾ, ಹೋಲಿ ರೋಜರಿ ಕಿಂಟರ್ ಗಾರ್ಟನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ, ಸಂತ ಮೇರಿಸ್ ಸಮುಹ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ಶಾಂತಿ ರಾಣಿ ಬಾರೆಟ್ಟೊ, ಸ್ಪರ್ಧೆಯ ಸಹಾಯಕರಾಗಿ ನಿಶ್ಚಿತಾ ಶೆಟ್ಟಿ ಮತ್ತು ಶ್ರೀಕಾಂತ್ ಉಪಸ್ಥಿತರಿದ್ದರು.
ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಧರ್ಮಭಗಿನಿ ತೆರೆಜಾ ಶಾಂತಿ ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಪ್ರತಿಬಾ ಶೆಟ್ಟಿ ವಂದಿಸಿದರು.
ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ, ದ್ವೀತಿಯ ಸ್ಥಾನ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ, ಬಾಲಕಿಯರ ವಿಭಾಗದಲ್ಲಿ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪ್ರಥಮ ಸ್ಥಾನ, ದ್ವೀತಿಯ ಸ್ಥಾನ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ.
17 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ, ದ್ವೀತಿಯ ಸ್ಥಾನ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ, ಬಾಲಕಿಯರ ವಿಭಾಗದಲ್ಲಿ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಪ್ರಥಮ ಸ್ತಾನ, ಬಾಲಕಿಯರ ವಿಭಾಗದಲ್ಲಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರು ಪಡೆದಿರುತ್ತಾರೆ.

ಕುಂದಾಪುರ ಚರ್ಚ್ ಗಾಯನ ಮಂಡಳಿಯಿಂದ ಸಿ.ಎ. ಪರೀಕ್ಷೆಯಲ್ಲಿ ತೆರ್ಗಡೆಯಾದ ವಿನಾರ್ಡ್ ಡಿಕೋಸ್ತಾರವರಿಗೆ ಸನ್ಮಾನ


ಕುಂದಾಪುರ, ಜು.31: ಈ ಸಾಲಿನ ಭಾರತೀಯ ಚಾರ್ಟೆಟ್ ಅಕೌಂಟೆಡ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಕುಂದಾಪುರ ಚರ್ಚ್ ಗಾಯನ ಪಂಗಡದ ಸದಸ್ಯರಾದ ವಿನಾರ್ಡ್ ಡಿಕೋಸ್ತಾ ಇವರನ್ನು ಜು.30 ರಂದು ಗಾಯನ ಮಂಡಳಿಯ ಪರವಾಗಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವೇದಿಕೆಯಲ್ಲಿದ್ದ ಅಥಿತಿಗಳ ಜೊತೆ ಫಲ, ಪುಷ್ಪ, ಹಾರ, ಶಾಲು ಹೊದಿಸಿ, ಪೇಟ ತೋಡಿಸಿ, ರೋಜರಿ ಮಾತೆಯ ಪ್ರತಿಮೆ ನೀಡಿ ಸನ್ಮಾನಿಸಿದರು

ಸನ್ಮಾನಿಸಿದ ಅವರು “ವಿನಾರ್ಡ್ ನಮ್ಮ ಕುಂದಾಪುರದ ಸುಪುತ್ರ, ಆತನು ಕಲಿಯಲು ಎಷ್ಟು ಚುರುಕೊ, ಅಷ್ಟೆ ದೈವ ಭಕ್ತಿಯಲ್ಲಿ ಮುಂದು, ಅವನಿಗೆ ಸಂತ ಜೋಸೆಫ್ ವಾಜ್ ಇವರಲ್ಲಿ ಬಹಳ ಭಕ್ತಿ ಚಾರ್ಟೆಡ್ ಅಕೌಂಟೆಡ್ ಪರೀಕ್ಷೆಗಾಗಿ ತಲ್ಲೀನರಾಗುವಾಗಲೂ, ನಮ್ಮ ರೋಜರಿ ಚರ್ಚಿನ ಗಾಯನ ಪಂಗಡದಲ್ಲಿ ಸಕ್ರಿಯವಾಗಿ ಭಾಗವಹಿಸಿ ಚರ್ಚಿನ ಗಾಯನ ಪಂಗಡಕ್ಕೆ ತನ್ನ ಕಂಠದಿಂದ ಶ್ರೀಮಂತವಾಗಿಸಿದ್ದ ಈತ ಈಗ ಬಹು ಕಷ್ಟದ ಸಿ.ಎ. ಪರೀಕ್ಷೆ ತೆರ್ಗಡೆಯಾಗಿ ನಮಗೆ ಹೆಮ್ಮೆ ತಂದಿದ್ದಾನೆ, ಇದರಲ್ಲಿ ಅವರ ಹೆತ್ತವರ ಪಾಲೂ ಇದೆ” ಎಂದು ಅಭಿನಂದನಾ ಮಾತುಗಳನ್ನಾಡಿದರು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಮಾತನಾಡಿ “ವಿನಾರ್ಡ್ ಪ್ರತಿಭಾವಂತ ಯುವಕನಾಗಿದ್ದಾನೆ ಎಂದು ಇತರ ಧರ್ಮಗುರುಗಳಿಂದ ಕೇಳಲ್ಪಟ್ಟಿದ್ದೆ, ಆತ ವೈ.ಸಿ.ಎಸ್. ಕುಂದಾಪುರ ವಲಯದ ಅಧ್ಯಕ್ಷನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾಗಿ ಶ್ಲಾಘನೆ ಕೇಳಿದ್ದು, ನಮ್ಮ ಯುವ ಜನರಿಗೆ ಸ್ಪೂರ್ತಿಯಾಗಲು ಇತ್ತೀಚಿನ ಶಿಬಿರದಲ್ಲಿ ತಿಳುವಳಿಕೆ ಕೊಡಲು ನಾನು ಆತನನ್ನು ಆರಿಸಿದ್ದು ಫಲಫ್ರಬವೆಂಬತ್ತೆ ಇವತ್ತು ಸಿ.ಎ. ಯಾಗಿ ಮಾರ್ಪಟ್ಟಿದ್ದಾನೆ, ನಮ್ಮ ಯುವ ಯುವತಿಯರು ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಉನ್ನತ ಮಟ್ಟದ ಪದವಿ ಪಡೆದುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಮ್ಮಾನ ಸ್ವೀಕರಿಸಿದ ವಿನಾರ್ಡ್ ಡಿಕೋಸ್ತಾ ಮಾತನಾಡಿ ‘ಎಲ್ಲರೂ ಇಂಜಿನಿಯರಿಂಗ್, ವೈಧ್ಯಕೀಯ ಕ್ಷೇತ್ರಗಳನ್ನು ಆರಿಸಿಕೊಳ್ಳುತ್ತಾರೆ, ಆದರೆ ನಾನು ಇತರ ಕ್ಷೇತ್ರಗಳನ್ನು ಪರೀಶಿಲಿಸಿ ವಾಣಿಜ್ಯವನ್ನು ಆರಿಸಿಕೊಂಡು ಸಿ.ಎ. ಆಗಲು ಮುಂದಡಿ ಇಟ್ಟೆ. ಸಿ.ಎ. ಪರೀಕ್ಷೆ ತೆರ್ಗಡೆಯಾಗಲು, ಕಠಿಣ ಪರಿಶ್ರಮದ ಅಗತ್ಯವಿದೆ, ನಾನು ಸಿ.ಎ. ತೆರ್ಗಡೆಯಾಗುಲು ನನ್ನ ಮಾತಾ ಪಿತ ನನ್ನ ಕುಟುಂಬದ ಪ್ರೇರಣೆ ಪೆÇ್ರೀತ್ಸಾಹ ತಂಬಾ ಇದೆ, ಜೊತೆಗೆ ನಾನು ನಂಬಿದ ರೋಜರಿ ಮಾತೆ ಮತ್ತು ಸಂತ ಜೋಸೆಫ್ ವಾಜ್ ಇವರ ದಯೆ ಕೂಡ ಆಗಿದೆಯೆಂದು ನಂಬುತ್ತೇನೆ’ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕುಂದಾಪುರ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಗಾಯನ ಮಂಡಳಿ ಸದಸ್ಯ ಜೆರಾಲ್ಡ್ ಕ್ರಾಸ್ತಾ,  ಕುಂದಾಪುರ ಚರ್ಚಿನ ಸಮಾಜ ಸಂಪರ್ಕ ಮಾಧ್ಯಮದ ಸಂಚಾಲಕರಾದ ವಿನಾರ್ಡ್ ಇವರ ತಂದೆ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ, ಈ ಸಂದರ್ಭದಲ್ಲಿ ಮಾತನಾಡಿದರು. ಗಾಯನ ಮಂಡಳಿ ಅಧ್ಯಕ್ಷೆಯಾದ ವಿನಾರ್ಡ್ ಇವರ ತಾಯಿ ವಿನಯಾ ಡಿಕೋಸ್ತಾ, ಚರ್ಚ್ ಸರ್ವ ಆಯೋಗದ ಸಂಯೋಜಕಿ ಪ್ರೇಮಾ ಡಿಕುನ್ಹಾ, ಗಾಯನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು, ಫೆಲ್ಸಿಯಾನ ಡಿಸೋಜಾ ಸ್ವಾಗತಿಸಿದರು. ಆಲ್ಡ್ರಿನ್ ಡಿಸೋಜಾ ನಿರೂಪಿಸಿ, ಗಾಯನ ಮಂಡಳಿಯ ಕಾರ್ಯದರ್ಶಿ ರೀಮಾ ಡಿಆಲ್ಮೇಡಾ ವಂದಿಸಿದರು.

ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿಜಯ ಕುಮಾರ್ ಶೆಟ್ಟಿ ಆಯ್ಕೆ


ಕೋಟ:ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯು ಸಂಘದ ಅಧ್ಯಕ್ಷ ಪ್ರಭಾಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಉಡುಪಿ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ರಾಜ್ಯ ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಅಧ್ಯಕ್ಷರಾಗಿ ಸಾಯ್ಬರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿಜಯ ಕುಮಾರ್ ಶೆಟ್ಟಿ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕುಂಜೆ ಕೃಷ್ಣ ನಾಯ್ಕ್, ಕೋಶಾಧಿಕಾರಿಯಾಗಿ ನಿಟ್ಟೂರು ಪ್ರೌಢ ಶಾಲೆ ಅಶೋಕ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಮೂಕಾಂಬಿಕಾ ಪ್ರೌಢಶಾಲೆ ಹೊಸೂರು ಬೈಂದೂರಿನ ರವಿಶಂಕರ ಹೆಗ್ಡೆ, ಸೈಂಟ್ ಜೋಸೆಫ್ ಪ್ರೌಢ ಶಾಲೆ ಬೆಳ್ಮಣ್ಣು ಕಾರ್ಕಳ ಹರಿದಾಸ ಪ್ರಭು,ಸರಕಾರಿ ಹಿ.ಪ್ರಾ.ಶಾಲೆ ಹಳ್ಳಾಡಿ ಹರ್ಕಾಡಿ ಕುಂದಾಪುರ ಶರತ್ ಕುಮಾರ್ ಶೆಟ್ಟಿ,ಸರಕಾರಿ ಪ್ರೌಢಶಾಲೆ ಮೂಡುಗಿಳಿಯಾರು ಬ್ರಹ್ಮಾವರದ ಶೇಖರ್, ಎಸ್‍ವಿಎಸ್ ಪ್ರೌಢ ಶಾಲೆ ಕಟಪಾಡಿ ಉಡುಪಿ
ಕಿರಣ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿಯ ಸೌಮ್ಯ ಅಮೀನ್,ಮೂಕಾಂಬಿಕಾ ಪ್ರೌಢ ಶಾಲೆ ಕೊಡ್ಲಾಡಿ ಬೈಂದೂರಿನ ಸಂತೋಷ್ ಕುಮಾರ್ ಶೆಟ್ಟಿ, ಸರಕಾರಿ ಹಿ.ಪಾ.್ರಶಾಲೆ ಬೆಳ್ವೆ ಕುಂದಾಪುರ ಕಿಶನ್‍ರಾಜ್ ಶೆಟ್ಟಿ, ಕ್ರೈಸ್ಟ್ ಕಿಂಗ್ ಹಿ.ಪ್ರಾ. ಶಾಲೆ ಕಾರ್ಕಳ ಪ್ರಕಾಶ್, ಸರಕಾರಿ ಪ.ಪೂ.ಕಾಲೇಜು ಬ್ರಹ್ಮಾವರ ಜಗದೀಶ್,
ಮಾಧ್ಯಮ ಕಾರ್ಯದರ್ಶಿಯಾಗಿ ಸೈಂಟ್ ಮೇರಿಸ್ ಪ್ರೌಢಶಾಲೆ ಕುಂದಾಪುರದ ಚಂದ್ರಶೇಖರ ಬೀಜಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಸ.ಹಿ.ಪ್ರಾ.ಶಾಲೆ ಬಾಳ್ಕುದ್ರು ಬ್ರಹ್ಮಾವರದ ಶ್ರೀಕಾಂತ ಸಾಮಂತ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ಬೈಂದೂರಿನ ಚಂದ್ರಶೇಖರ ಶೆಟ್ಟಿ,ಸ.ಹಿ.ಪ್ರಾ.ಶಾಲೆ ಕುಂದಾಪುರದ ಸುಮಂಗಲಾ ನಾಯಕ್ ಆಯ್ಕೆಗೊಂಡರು.

ಕುಂದಾಪುರ : ಕಾಳಾವರದಲ್ಲಿ ಕಾರು – ಲೂನಾ ಡಿಕ್ಕಿ ಲೂನಾ ಸವಾರ ಸಾವು

ಕುಂದಾಪುರ, ಜು. ೩೦:ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ಮಾರ್ಗದ ಕಾಳಾವರ ಎಂಬಲ್ಲಿ ಭಾನುವಾರ ಸಂಜೆ ಕಾರು ಮತ್ತು ಲೂನಾ ನಡುವೆ ಅಪಘಾತಾವಾಗಿ ಲೂನಾ ಸವಾರ ನರಸಿಂಹ ಶೆಟ್ಟಿ (75) ಮ್ರತ ಪಟ್ಟಿದ್ದಾರೆ.  

 ಕಾಳಾವರ ಸರಕಾರಿ  ಶಾಲೆಯ ಸಮೀಪದ ಅಡ್ಡರಸ್ತೆಯಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ನರಸಿಂಹ ಶೆಟ್ಟಿ ಮುಖ್ಯ ರಸ್ತೆಗೆ ಹಠಾತ್ ಪ್ರವೇಶಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕೋಟೇಶ್ವರದಿಂದ ಹಾಲಾಡಿ ಕಡೆಗೆ ಸಾಗುತ್ತಿದ್ದ ಬೊಲೆರೋ ಕಾರಿನ ಚಾಲಕ ಲೂನಾ ಹಠಾತ್ ಅಡ್ಡ ಬಂದಿದ್ದರಿಂದ ಅಪಘಾತ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದರಿಂದ ಕಾರು ರಸ್ತೆ ಬದಿಯ ಕಲ್ಲು ಕಂಬಕ್ಕೆ ಗುದ್ದಿದೆ. ಈ ಸಂದರ್ಭದಲ್ಲಿ ಲೂನಾ ಸವಾರ  ಗಂಭೀರ ಗಾಯಗೊಂಡಿದ್ದು, ಸವಾರ ನರಸಿಂಹ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾದಿಂದ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ವಿತರಣೆ

ಕುಂದಾಪುರ, ಜು. 30;  ದಿನಾಂಕ 30-7-2023 ರಂದು ಪಿಯುಸ್ ನಗರ್ ಚರ್ಚಿನ ಕಥೊಲಿಕ್ ಸಭಾದಿಂದ ಮೂರು ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಪಿಯುಸ್ ನಗರ್ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ವಾಮಿ ಆಲ್ಬರ್ಟ್ ಕ್ರಾಸ್ತಾ ಸಹಾಯಧನ ವಿತರಣೆ ಮಾಡಿ  ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾ ಸಂಘಟನೆ ಸೇವೆಗಳ  ಸಹಕಾರ ನಿರಂತರವಾಗಿ ಮಾಡುತ್ತಾ ಇದೆ. ಮುಂದೆ ಕೂಡ ಇಂತಹ ಒಳ್ಳೆ ಕೆಲಸಗಳು ಈ ಸಂಘಟನೆಯಲ್ಲಿ ನಡೆಯಲಿ’ ಎಂದು ಹಾರೈಸಿ ಸಂದೇಶವನ್ನು ನೀಡಿದರು. ಪಿಯುಸ್ ನಗರ ಕಥೊಲಿಕ್ ಸಭಾ ಸಂಘಟನೇಯ ಮಾರ್ಗದರ್ಶಕರಾದ, ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷರಾದ ಡಾ| ಸೋನಿ ಡಿಕೋಸ್ಟಾ ಉಪಸ್ಥಿತರಿದ್ದು ’ಪಿಯುಸ್ ನಗರ್ ಚರ್ಚಿನ ಕಥೊಲಿಕ್ ಸಂಘಟನೆಯ ಬಗ್ಗೆ ತಾನು ಈ ಸಂಘಟನೆಯಲ್ಲಿ ಮಾರ್ಗದರ್ಶಕರಾಗಿ ಸೇವೆ ನೀಡುವುದು ತನಗೆ ತುಂಬಾ ಖುಷಿ ನೀಡುತ್ತದೆ.ಇಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ ಹಾಗೂ ಇಲ್ಲಿ ಇರುವ ಎಲ್ಲಾ ಸದಸ್ಯರು ಸೇವಾ ಮನೋಭಾವ ಉಳ್ಳವರು’ ಎಂದು ತಿಳಿಸಿದರು.

    ಸಂಘಟನೆಯ ಅಧ್ಯಕ್ಷರಾದ ಶ್ರೀ ಅಲೆಕ್ಸಾಂಡರ್ ಲೂವಿಸ್ ಸ್ವಾಗತವನ್ನು ಕೋರಿದರು..ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಹಾಗೂ ಸಂಘಟನೆಯ ರಾಜಕೀಯ ಸಂಚಾಲಕರು ಶ್ರೀ ರೋಶನ್ ಬರೆಟ್ಟೊ  ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ವಿಸ್ತಾರ ರೀತಿಯಲ್ಲಿ ಮಾಹಿತಿ ನೀಡಿದರು ಈ ಕಾರ್ಯಕ್ರಮಕ್ಕೆ ಮಾಜಿ ಅಧ್ಯಕ್ಷರಾದಂತಹ ಶ್ರೀ ರೇಮಿ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷೆ ಶ್ರೀಮತಿ ನ್ಯಾನ್ಸಿ ವಾಜ್ ಹಾಜರಿದ್ದರು.ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಡೆಸಾ ವಂದಿಸಿದರು.

ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತದಲ್ಲಿ ಬಿದ್ದ ಶರತ್‌ ಕುಮಾರನ  ಮೃತದೇಹ ಒಂದು ವಾರದ ಬಳಿಕ  ಪತ್ತೆ

ಕೊಲ್ಲೂರು,ಜು.30: ಸ್ನೇಹಿತರೊಂದಿಗೆ ಕಳೆದ ಭಾನುವಾರ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದ ಸಂದರ್ಭ ಕಾಲುಜಾರಿ ನೀರಿನಲ್ಲಿ ಬಿದ್ದು.ಕಾಣೆಯಾಗಿದ್ದ ಭದ್ರಾವತಿಯ ಯುವಕ ಶರತ್‌ ಕುಮಾರನ [23] ಮೃತದೇಹ ಜಲಪಾತದ ಸಮೀಪದಲ್ಲಿಯೆ ಪತ್ತೆಯಾಗಿದೆ.

ಶರತ್‌ ಹಾಗೂ ಸ್ನೇಹಿತ ಗುರುರಾಜ ಜೊತೆಗೂಡಿ ಜು.23ರ ಭಾನುವಾರದಂದು ಭದ್ರಾವತಿಯಿಂದ ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತ ನೋಡಲು ತೆರಳಿದ್ದರು. ಮಧ್ಯಾಹ್ನ 3-30ರ ಹೊತ್ತಿಗೆ ಜಲಪಾತ ಬಳಿ ವೀಡೀಯೋ ಮಾಡಲು ಹೇಳಿ ಬಂಡೆಯ ಮೇಲೆ ನಿಂತಿದ್ದ ಶರತ್‌ ಕಾಲು ಜಾರಿ ಬಿದ್ದಿದ್ದರು ನೀರಿನ ಸೆಳತಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. ಕಾಲು ಜಾರಿ ಬಿಳುವ ಈ ಈ ಘಟನೆ ಸ್ನೇಹಿತನ ಮೊಬೈಲಿನಲ್ಲಿಯೂ ಸೆರೆಯಾಗಿತ್ತು.

   ಘಟನೆಯ ಮಾಹಿತಿಯನ್ನು ಸ್ನೆಹಿತ ತಿಳಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳೆದೊಂದು ವಾರದಿಂದ ಕೊಲ್ಲೂರು ಠಾಣೆಯ ಪೊಲೀಸ್‌ ತಂಡ, ಅರಣ್ಯ ಇಲಾಖೆ ಸಿಬ್ಬಂದಿಗಳು, ಉಡುಪಿಯ ಎಸ್‌ಡಿಆರ್‌ಎಫ್‌ ತಂಡ, ಕುಂದಾಪುರ ಹಾಗೂ ಬೈಂದೂರು ಅಗ್ವಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ.ನಡೆಸಿದ್ದರು. ಇವರೊಂದಿಗೆ ಮೃತ ಶರತ್‌ನ ಸಂಬಂಧಿ ಹಾಗೂ ಸ್ನೇಹಿತರ ಜೊತೆಗೂಡಿ ಹುಡುಕಾಟ ನಡೆಸಿದ್ದರು.

    ಶರತ್‌ನ ತಂದೆ ತಾಯಿ ಹೇಗಾದರೂ ತಮ್ಮ ಮಗನನ್ನು ಹುಡುಕಿಕೊಡಿ ಎಂದು ಸರಕಾರಕ್ಕೆ ಬೇಡಿಕೆ ಇರಿಸಿದ್ದರು. ನಿನ್ನೆಯಿಂದ ಮಳೆ ಕೊಂಚ ಕಡಿಮೆಯಾದ. ಹಿನ್ನೆಲೆಯಲ್ಲಿ ಹುಡುಕಾಟ ಚುರುಕುಗೊಳಿಸಿದ್ದು, ಶರತ್‌ ಮೃತದೇಹ ಜಲಪಾತದ ಸಮೀಪದ ಕಲ್ಲಿನ ಪೊಟರೆಯಲ್ಲಿ ಸಿಲುಕಿಕೊಂಡ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ನಡುವೆ ಸಾಹಸಿ ಚಿತ್ರದುರ್ಗದ ಜ್ಯೋತಿರಾಜ್‌ ತಂಡ, ಈಶ್ವರ್‌ ಮಲ್ಪೆ ತಂಡವೂ ನೀರಿನ ರಭಸದ ಒತ್ತಡದ ನಡುವೆಯೂ ಹುಡುಕಾಟ ನಡೆಸಿ. ಹಿಂದಿರುಗಿದ್ದರು. ಡ್ರೋನ್‌ ಮೂಲಕವೂ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಕೊಲ್ಲೂರು ಠಾಣೆಯ ಪಿಎಸ್‌ಐಗಳಾದ ಜಯಶ್ರೀ ಹಾಗೂ ಸುಧಾರಾಣಿ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕಪೂಹುಡುಕಾಟ ನಡೆಸಲಾಗಿತ್ತು.

ಜೆಸಿಐ : ಸಾದು ಎಸ್ ಬಿಲ್ಲವರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ನೆಲೆಯಲ್ಲಿ ಸನ್ಮಾನ

ಜೆಸಿಐ ಕುಂದಾಪುರ ಸಿಟಿಯಾ ಆಶ್ರಯದಲ್ಲಿ ಕೃಷಿ ಹಾಗು ಹೈನುಗಾರಿಕೆ ಯಲ್ಲಿ ಸಾಧನೆ ಮಾಡಿದ ಸಾದು ಎಸ್ ಬಿಲ್ಲವ ಇವರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ನೆಲೆಯಲ್ಲಿ ಕುಂದಾಪುರದ ಸಹನಾ ಕನ್ವೆನ್ಷನ್ ಸಭಾಂಗಣ ದಲ್ಲಿ ಸನ್ಮಾನಿಸಲಾಯಿತು ಸಭೆಯ ಅಧ್ಯಕ್ಷ ತೆ ಯನ್ನು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ವಹಿಸಿದರು ಸಮಾರಂಭ ದಲ್ಲಿ ವಲಯ 15 ರ ಪೂರ್ವ ವಲಯಾಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ತ ವಲಯ ಉಪಾಧ್ಯಕ್ಷ ಅಭಿಲಾಶ್ ಬಿ ಏ ಜೇಸಿ ಐ ಶಂಕರನಾರಾಯಣ ಅಧ್ಯಕ್ಷ ರಾಘವೇಂದ್ರ ಚಾತ್ರಮಕ್ಕಿ ಜೆಸಿಐ ಹೆಬ್ರಿ ಯಾ ಅಧ್ಯಕ್ಷ ಪ್ರವೀಣ್ ಶೆಟ್ಟಿ ಜೆಸಿಐ ಕಡಬ ಕದಂಬ ದ ಅಧ್ಯಕ್ಷ ಅಭಿಷೇಕ್ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ ಪ್ರಶಾಂತ್ ಹವಾಲ್ದಾರ್ ನಾಗೇಶ್ ನಾವಡ ಚಂದ್ರಕಾಂತ್ ವಿಜಯ್ ಭಂಡಾರಿ ಗಿರೀಶ್ ಹೆಬ್ಬಾರ್ ರಾಘವೇಂದ್ರ ಕುಲಾಲ್ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಇನ್ನಿತರರು ಉಪಸ್ಥಿತರಿದ್ದರು.