HOLY ROSARY CHURCH, KUNDAPUR – 450 th JUBILEE SOUVENIR 2021

ಉಪ್ಪುಂದದಲ್ಲಿ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಕುಂದಾಪುರ ಉಪ್ಪುಂದ ಶಾಖೆ, ರೋಟರಿ ಕುಂದಾಪುರ ದಕ್ಷಿಣ ಸಹಯೋಗದಲ್ಲಿ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಶಂಕರ ಕಲಾ ಮಂದಿರ ಉಪ್ಪುಂದದಲ್ಲಿ ಜುಲೈ 29ರಂದು ನಡೆಯಿತು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಉದ್ಘಾಟಿಸಿದರು. ಶ್ರೀ ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಬ್ರಾಯ ಅಡಿಗರು ಸ್ವಾಗತಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಪ್ರೊ. ಆಡಿ. ನಾಗರಾಜ್ ಎಸ್. ರವರು ಪ್ರಾಸ್ತಾವಿಕ ಭಾಷಣದಲ್ಲಿ ಆಯುರ್ವೇದ ವೈದ್ಯಕೀಯ ಪದ್ಧತಿಯ ಮಹತ್ವ ವಿವರಿಸಿದರು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಗ್ರಾಮೀಣ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ಅಧ್ಯಕ್ಷರಾದ ಅರುಣ್ ಶಾನುಭೋಗ್, ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ನಾಗೇಶ ಹೆಬ್ಬಾರ್, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ಶ್ರೀ ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರಾದ ವಿವೇಕ್ ಯು, ನಿರ್ದೇಶಕರಾದ ರೊ. ಸುಪ್ರೀತ್ ಚಾತ್ರ, ಬ್ರಾಹ್ಮಿ sಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ಉಪ್ಪುಂದ ಶಾಖೆಯ ವ್ಯವಸ್ಥಾಪಕ ಶ್ರೀಕರ ಪುರಾಣಿಕ ಉಪಸ್ಥಿತರಿದ್ದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ್ ಮಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿನ್ ನಕ್ಕತ್ತಾಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಕೆ. ರಮಾನಂದ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ಶಿಬಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ವೈದ್ಯರುಗಳಾದ ಆಡಿ. ವಿಜಯೇಂದ್ರ ಭಟ್, ಆಡಿ. ಸಹನಾ ಕಾಮತ್, ಆಡಿ. ವಿದ್ಯಾಬಲ್ಲಾಳ್, ಆಡಿ. ಅರುಣ್ ಕುಮಾರ್, ಆಡಿ. ಚಿತ್ರಲೇಖ, ಆಡಿ. ರಾಧಿಕಾ ಆಗಮಿಸಿದ 200ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿದರು. ಅಗತ್ಯವುಳ್ಳವರಿಗೆ ಉಚಿತವಾಗಿ

ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಮಂಗಳೂರು ವಾರ್ಷಿಕ ಮಹಾಸಭೆ -ಅಧ್ಯಕ್ಷರಾಗಿ ಹರೀಶ್ ಅಡ್ಯಾರ್ ಆಯ್ಕೆ

ಮಂಗಳೂರು: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋ ಸಿಯೇ ಶನ್ ಮಂಗಳೂರು ವಲಯದ 2022-23ನೇ ಸಾಲಿನ 21 ನೇ ವಾರ್ಷಿ ಕ
ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯ ಕ್ರಮ ಮಂಗಳೂರಿನ ಸೈ ಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ
ನಡೆಯಿತು.
ದೀ ಪಬೆಳಗಿಸಿ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಸೌತ್ ಕೆನರಾ ಫೊಟೋ ಗ್ರಾಫರ್ಸ್ ಅಸೋಸಿಯೇಶನ್
ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾ ಳ್, ಮಂಗಳೂರು ವಲಯ ಅತ್ಯು ತ್ತಮ ಕಾರ್ಯ ಕ್ರಮಗಳನ್ನು ಸಂಘಟಿಸುತ್ತಾ ಸುಭದ್ರ
ಸಂಘಟನೆ ಎಂದೆನಿಸಿದೆ ಎಂದು ಶ್ಲಾಘಿಸಿದರು.
2023-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರರಿಯೆ ನಡೆಯಿತು. ಹರೀಶ್ ಅಡ್ಯಾ ರ್ ಅಧ್ಯಕ್ಷರಾಗಿ, ಅಜಯ್
ಕುಮಾರ್ ಪ್ರಧಾನ ಕಾರ್ಯದರ್ಶಿ , ಕೋ ಶಾಧಿಕಾರಿ ಅರ್ಜುನ್ ಶೃಂಗೇರಿ, ಪ್ರಭಾಕರ್ ಕುಲಾಲ್, ಶ್ರೀಕಾಂತ್ ತಿಲಕ್
ಉಪಾಧ್ಯಕ್ಷರುಗಳು, ಪದ್ಮನಾಭ ಸುವರ್ಣ ಗೌರವಾಧ್ಯಕ್ಷ, ಗಿರೀ ಶ್ ಚಕ್ರಾಪಾಣಿ, ನವೀನ್ ಬಂಗೆರ ಕೋಡಿಕಲ್ ಜೊತೆ
ಕಾರ್ಯದರ್ಶಿಗಳಾಗಿ =,ಪ್ರಕಾಶ್ ಶಬರಿ, ರಾಕೇ ಶ್ ಬಾಯಾರ್, ನಿಖಿಲ್ ಡಿಸೋ ಜಾ, ಸಂಘಟನಾ ಕಾರ್ಯದರ್ಶಿ , ಗೋಡ್ವಿನ್ ಕ್ರಾಸ್ತಾ,
ಮುರಳಿ ರಾಜ್ ಕ್ರೀಡಾ ಕಾರ್ಯದರ್ಶಿಯಾಗಿ , ವಿನೀಶ್ ಗಂಜಿಮಠ, ಸುನಿಲ್ ಪಂಬೆತ್ತಡಿ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ, ಸತೀಶ್ ಇರಾ,
ಶರಣ್, ಪತ್ರಿಕಾ ಪ್ರತಿನಿಧಿ ಮತ್ತು ವಿಶಾಲ್ ವಾಮಂಜೂರು ಛಾಯಾ ಕಾರ್ಯ ದರ್ಶಿಯಾಗಿ ಆಯ್ಕೆ ಯಾದರು.
ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದಸೌತ್ ಕೆನರಾ ಫೊಟೋ ಗ್ರಾಫರ್ಸ್ ಅಸೋಸಿಯೇ ಶನ್ ಮಂಗಳೂರು ಅಧ್ಯಕ್ಷರು
ಸುಧಾಕರ್ ಶೋ ಕೇ ಶ್, ತಮ್ಮ ಅವಧಿಯಲ್ಲಿ ನಡೆದ ಅತ್ಯು ತ್ತಮ ಕಾರ್ಯ ಕ್ರಮಗಳ ಬಗ್ಗೆ ಮೆಲುಕು ಹಾಕುತ್ತಾ ಸಹಕರಿಸಿದ
ಎಲ್ಲರಿಗೂ ಧನ್ಯವಾದ ಗೈದರು.
ಶ್ರೀಮತಿ ಬಬಿತಾ ಲತೀಶ್ ನಿರೂಪಿಸಿದರು. ಕಾರ್ಯ ದರ್ಶಿ ಅರ್ಜು ನ್ ಶೃಂಗೇರಿ ಧನ್ಯವಾದಗೈದರು.

ಬಸ್ರೂರು ಕೆಳಪೇಟೆಯ ಆಶುರ್‌ ಖಾನಾದಲ್ಲಿ ಮೊಹರಂ ಪ್ರಯುಕ್ತ ದುವಾ ಕಾರ್ಯಕ್ರಮ

ಬಸ್ರೂರು: ಬಸ್ರೂರು ಕೆಳಪೇಟೆಯ ಆಶುರ್‌ ಖಾನಾದಲ್ಲಿ ಮೊಹರಂ ಪ್ರಯುಕ್ತ ದುವಾ ಕಾರ್ಯಕ್ರಮ ನಡೆಯಿತು. ಮೊಹರಂ . ಚರಣೆ ಕಾರ್ಯಕ್ರಮದ ಅಧ್ಯಕ್ಷ ಫಾರೂಕ್‌ ಸಾಹೇಬ್‌ ನೀರೋಣಿ, ಉಪಾಧ್ಯಕ್ಷ ಇರ್ಷಾದ್‌ ಸಾಹೇಬ್‌ . ಪಾನಕದಕಟ್ಟೆ ಕಾರ್ಯದರ್ಶಿ ಶೇಖ್‌ ಇರ್ಫಾನ್‌, ದರ್ಗಾ ಕಮಿಟಿ. ಅಧ್ಯಕ್ಷ ಲಾಲಾಅನ್ವರ್, ಜಾಮಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್‌ ಅಜೀಜ್‌ ನೀರೋಣಿ ಮತ್ತುಜಮಾತಿನ ಬಾಂಧವರು ಉಪಸ್ಥಿತರಿದ್ದರು.

ಬೀಜಾಡಿ:ಮಣ್ಣಿನ ಫಲವತ್ತತೆ, ಸಂರಕ್ಷಣೆ ಮಾಹಿತಿ ಕಾರ್ಯಾಗಾರ


ಬೀಜಾಡಿ:ಪ್ರಾಣಿ,ಪಕ್ಷಿ,ಮಾನವ ಜೀವಿಸುವ ಈ ಭೂಮಿಯಲ್ಲಿ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಲ್ಲಿ ದೊಡ್ಡ ಸಮಸ್ಯೆ ಸೃಷ್ಠಿಯಾಗಲಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರಿಕರು ಜಲ ರಕ್ಷಣೆಗೆ ಬದ್ಧರಾಗಬೇಕು ಎಂದು ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್ ಮಾಜಿ ಅಧ್ಯಕ್ಷ ಮಂಜುನಾಥ ಕೆ.ಎಸ್ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್, ಬೀಜಾಡಿ-ಗೋಪಾಡಿ ರೋಟರಿ ಸಮುದಾಯದಳ ಮತ್ತು ಬೀಜಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ನಡೆದ ಮಣ್ಣಿನ ಫಲವತ್ತತೆ, ಸಂರಕ್ಷಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್, ರೋಟರಿ ಸಮುದಾಯ ದಳದ ಹಿಂದಿನ ಅಧ್ಯಕ್ಷ ಬಿ.ಜಿ.ನಾಗರಾಜ್ ,ನೂತನ ಅಧ್ಯಕ್ಷ ಪ್ರದೀಪ್ ದೇವಾಡಿಗ,ಕಾರ್ಯದರ್ಶಿ ಪಾಂಡುರಂಗ,ಕೋಶಾಧಿಕಾರಿ ಗಜೇಂದ್ರ ಮೊಗವೀರ, ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಹಿಂದಿನ ಕಾರ್ಯದರ್ಶಿ ರೋನಿ ಡಿ.ಸೋಜಾ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ರೈತರಿಗೆ ಸಾವಯವ ರಸಗೊಬ್ಬರು ವಿತರಿಸಲಾಯಿತು.

ಮಣಿಪುರ ಹಿಂಸಾಚಾರ ಅಮಾನವೀಯ ದೌರ್ಜನ್ಯ ಖಂಡಿಸಿ ಬೃಹತ್ ಜಾಥಾ – “ನನ್ನವರಲ್ಲ ಎಂಬವರ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯ” : ಶಿವಸುಂದರ್


ಉಡುಪಿ.ಜು.2: ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಮತ್ತು ಮಹಿಳೆಯರ ಮೇಲೆ ಅಮಾನವೀಯ ಲೈಗಿಂಕ ಹಲ್ಲೆ ಖಂಡಿಸಿ ಬ್ರಹತ್ ಜಾಥಾಕ್ಕೆ ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಮಾಜಿ ಮಂತ್ರಿ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಿದರು. ನಂತರ ಜಾಥಾ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಷ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಚಿಂತಕ ಖ್ಯಾತ ಮಾಧ್ಯಮ ವಿಶ್ಲೇಷಕ ಶಿವಸುಂದರ್ ಅವರು, ಮಣಿಪುರದ ಹಿಂಸಾಚಾರ ಮತ್ತು ದೌರ್ಜನ್ಯಗಳು ಆಕಸ್ಮಿಕವಲ್ಲ. ಅದರ ಹಿಂದೆ ಮತೀಯ ರಾಜಕಾರಣದ ದುರುದ್ದೇಶವಿದೆ. ಪ್ರಧಾನಿ ಮೌನವನ್ನ ಆಯುಧ ಮಾಡಿಕೊಂಡಾಗ, ನಾವು ಮಾತನ್ನು ಆಯುಧ ಮಾಡಿಕೊಳ್ಳಬೇಕು. ಮಾತನಾಡುವ ಮೂಲಕ, ಪ್ರತಿಭಟನೆಗಳನ್ನು ಮಾಡುವ ಮೂಲಕ ದೇಶವನ್ನು ಎಚ್ಚರಿಸಬೇಕು” ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಚಿಂತಕ ಶಿವಸುಂದರ್ ಅವರು, ಮಣಿಪುರದ ಈ ದುರ್ಘಟನೆಗಳ ಹಿಂದೆ ಇದ್ದದ್ದು ಕೇವಲ ಕಾಮ ಮಾತ್ರವಲ್ಲ. ದ್ವೇಷ, ಅಸೂಯೆಯೂ ಇದೆ. ಇಂತಹ ಘಟನೇಗಳು ಹಲವಷ್ಟು ನಡೆದಿವೆ. ಇಂತಹ ಘಟನೆಗಳು ಹಿಂದೆಯೂ ನಡೆದಿವೆ. ಇದೆಲ್ಲವೂ ನನ್ನವರಲ್ಲ ಎಂಬವರ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯ. ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ನಡೆದಾಗ 900 ಮಂದಿ ಪುರುಷರು ಮೆರವಣಿಗೆ ಹೋಗುತ್ತಿದ್ದರು. ಅವರಾರಿಗೂ ಆ ಹೆಣ್ಣು ಮಕ್ಕಳ ಮೇಲೆ ‘ಅಯ್ಯೋ’ ಅನ್ನಿಸಲಿಲ್ಲ. ಇದು ಬರೇ ಕಾಮಕ್ಕಾಗಿ ನಡೆದಿದ್ದಲ್ಲ. ಮಹಾ ದ್ವೇಷವೂ ಕಾರಣವಾಗಿದೆ.ಮಣೆಪುರದ ವಿಚಾರದಲ್ಲಿ ಪ್ರಧಾನಿಯ ಮೌನದ ಹಿಂದೆ ಇಡೀ ಸರ್ಕಾರವಿದೆ. ಮತೀಯ ರಾಜಕಾರಣವಿದೆ” ಎಂದು ಅವರು ಆರೋಪಿಸಿದರು.
“ಘಟನೆ ನಡೆದಾಗ ಏನಾಯಿತು ಅಂತ ತಿಳಿದುಕೊಳ್ಳುವುದು ಮಾತ್ರವಲ್ಲ. ಯಾಕಾಯಿತು ಎಂಬುದನ್ನು
ತಿಳಿದುಕೊಳ್ಳಬೇಕು. ಮೇ 4ರಂದು ನಡೆದ ದುರಂತ ಘಟನೆ ಬೆಳಕಿಗೆ ಬಂದಿದ್ದು 80 ದಿನಗಳ ಬಳಿಕ. ಇಂತಹ. ನೂರಾರು ಘಟನೆಗಳು ಮಣಿಪುರದಲ್ಲಿ ನಡೆಯುತ್ತಿವೆ. ತಮ್ಮ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸುವಂತೆ ಮಣಿಪುರದ ಜನರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಮೊದಲಿಗೆ ಸುಪ್ರೀಂ ಕೋರ್ಟ್ ಕೂಡ ಅ ಜನರ ಮಾತಿಗೆ ಕಿವಿಗೊಡಲಿಲ್ಲ. ಸುಪ್ರೀಂ ಕೋರ್ಟ್ ಒಳಗೊಂಡಂತೆ ಇಡೀ ದೇಶ ಎಚ್ಚರಗೊಳ್ಳಲು ದುರಂತ ಘಟನೆಯೇ ನಡೆಯಿತು” ಎಂದು ಆಕ್ರೋಶ ವ್ಯಕ್ತಪಡಿಸುತ್ತಾ “ಇಡೀ ಮಣಿಪುರದಲ್ಲಿ ಮೈಥೇಯಿ ಜನಾಂಗ ಪ್ರಬಲವಾಗಿದೆ. ಅವರು ಹಿಂದು ಧರ್ಮದ ಭಾಗವಾಗುವ ಮೊದಲು ಎಲ್ಲರನ್ನೂ ಒಳಗೊಳ್ಳುತ್ತಿದ್ದರು. ಆದರೆ, ಅವರು ಯಾವಾಗ ಬ್ರಾಹ್ಮಣ್ಯದ ಧರ್ಮ ಸೇರಿದರೂ, ಅಂದಿನಿಂದ ತಾವು ಶ್ರೇಷ್ಠರು ಎಂದು ಅಂದುಕೊಳ್ಳುತ್ತಾ, ತಮ್ಮ ಸಮುದಾಯ ಅಲ್ಲದವರನ್ನು ದ್ವೇಷಿಸಲು ಆರಂಭಿಸಿದರು. ಹಾಗಾಗಿ ಅವರು ಕುಕಿ, ನಾಗ. ಸಮುದಾಯಗಳನ್ನು ದ್ವೇಷಿಸುತ್ತಿದ್ದಾರೆ” ತಿಳಿಸಿದರು. ಈ ಹಿಂಸೆ ದೌರ್ಯಜನ್ಯ ಮಾಡಲಿಕ್ಕಾಗೆ ಪೆÇಲೀಸ್ ಇಲಾಖೆಯಿಂದ ಹಲವು ಸಾವಿರ ಮದ್ದುಗುಂಡುಗಳನ್ನು, ಶಶಸ್ತಾತ್ರಗಳನ್ನು ಲೂಟಿ ಮಾಡಲು ಅನುವು ಮಾಡಲಾಯಿತು. ಕುಕಿ ಜನಾಂಗ ಗಾಂಜಾ ಬೆಳೆಯನ್ನು ಬೆಳೆಸುತ್ತಾರೆಂದು ಅವರ ಮೇಲೆ ಆರೋಪ ಹೊರಿಸಲಾಯಿತು. ಆದರೆ ಮೈತೆಯಿ ಜನಾಂಗದವರು ಗಾಂಜಾ ಪ್ರಕರಣದಲ್ಲಿ ಅಪರಾಧಿಗಳೇ ಹೆಚ್ಚು, ಅಲ್ಲಿನ ಡ್ರಗ್ಸ್ ದಂದೆಯ ಮಾಫಿಯ ಕುಳದಲ್ಲಿ ದೊಡ್ಡ ಬಾಸ್ ಅಲ್ಲಿನ ಮುಖ್ಯಮಂತ್ರಿ ವೀರೆಂದರ್ ಸಿಂಗ್ ಆಗಿದ್ದಾರೆ. ಆತನ ಎರಡನೆ ಹೆಂಡತಿಗೂ ಡ್ರಗ್ಸ್ ಮಾಫಿಯಾ ಜಾಲಕ್ಕೂ ಸಂಬಂಧವಿದೆ. ಹಾಗಾಗಿ ಇದ್ದೆಲ್ಲವೂ ಸುಳ್ಳು ಅವರಿಗೆ ಕುಕಿ ಜನಾಂಗದ ಮೇಲೆ ದ್ವೇಷವಿದೆ, ಅದರಿಂದಾಗಿ ಅಲ್ಲಿ ಅಮಾನವೀಯ ಘಟನೆಗಳು ನಡೆಯುತ್ತೀವೆ. ಅದನ್ನು ನಿಲ್ಲಿಸಲಾಗದವರು ಅಧಿಕಾರದಲ್ಲಿ ಇರಲು ಅನರ್ಹರು’ ಎಂದರು.

ಇದೇ ವೇಳೆ ಪ್ರತಿಭಟನೆಯಲ್ಲಿ ಮಾತನಾಡಿದ ಲೇಖಕಿ ಜಾನೇಟ್ ಬಾರ್ಬೋಜಾ ಮಾತನಾಡಿ ಅಲ್ಲಿನ ಮಹಿಳೆಯರ ಮೇಲೆ ಈ ರೀತಿಯ ಮ್ರಗೀಯ ಹಲ್ಲೆ ನಡೆದಾಗ ಯಾರಿಗೂ ಕರುಣೆ ಬರಲಿಲ್ಲವೇ, ಅಲ್ಲಿದ್ದವರಿಗೆ ಯಾರೂ ಅಕ್ಕ ತಂಗಿ, ತಾಯಿ ಇರಲಿಲ್ಲವೇ, ಅವರೆಲ್ಲಾ ಹೆಣ್ಣಿನ ಮೂಲಕವೇ ಹುಟ್ಟಿದ್ದಲ್ಲವೆ, ಪ್ರಧಾನಿ ನರೇಂದ್ರ ಮೋದಿ ಮನ್ಕಿ ಬಾತ್ ಅನ್ನುತ್ತಾ, ಜನರನ್ನು ಮಂಕಿ ಮಾಡಿದರು ಎನ್ನುತ್ತಾ ಆಕ್ರೋಷ ವ್ಯಕ್ತಪಡಿಸಿದರು. ಅವರು “ಬೊಲೊ ಭಾರತ್ ಮಾತಕಿ ಜೈ ಎಂದು ಪ್ರಧಾನಿ ನರೇಂದ್ರ ಮೋದಿಗಳು ಯಾವಾಗಲೂ ಹೇಳುತ್ತಿರುತ್ತಾರೆ, ಆದರೆ ಈಗ ನರೇಂದ್ರ ಮೋದಿಯವರೇ ಮಹಿಳೆಯರನ್ನು ನಗ್ನವಾಗಿ ನೆರವಣಿಗೆ ಮಾಡಿದ್ದಕ್ಕೆ ಭಾರತ್ ಮಾತಕಿ ಜೈ ಎಂದುಕೂಗುವುದೇ? ಮಣಿಪುರದಲ್ಲಿ ಮಹಿಳೆಯರು ನಗ್ನವಾಗಿದ್ದಲ್ಲ, ಅಂರರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸರಕಾರ ನಗ್ನವಾಗಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೇಯಲ್ಲಿ ಹಲವು ಸಾವಿರ ಜನ ಸೇರಿ ಜಾಥಾದ ಸಮಯದಲ್ಲಿ ಅಕ್ರೋಷದಲ್ಲಿ ಬಿಜೆಪಿ ಸರಕಾರಕ್ಕೆ ಅಲ್ಲಿನ ಮಂತ್ರಿ ಮತ್ತು ಮೋದಿಯ ವಿರುಡ್ಡ ಘೋಷಣೆಗಳನ್ನು ಕೂಗಲಾಯಿತು. ಈ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲೆಯ ಬೈಂದುರಿನಿಂದ ಹಿಡಿದು ಅಜೆಕಾರ್ ಪ್ರದೇಶದಿಂದ ಸಮಾನ ಮನಸ್ಕರು ಜಾತಿ ಭೇದ ಮರೆತು ಪಾಲ್ಗೊಂಡರು. ಹಲವಾರು ಧರ್ಮಗುರುಗಳು, ಹಲವಾರು ಧರ್ಮಭಗಿನಿಯರು, ಸಾಮಾಜಿಕ ಕಳಕಳಿ ಇದ್ದವರು, ಹಲವಾರು ಮುಖಂಡರು ಭಾಗಿಯಾದರು. ಮಣಿಪುರ ಗಲಭೆಯಲ್ಲಿಮೃತಪಟ್ಟ ವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ದಸಂಸ ಅಂಬೇಡ್ಕರ್ ಜಿಲ್ಲಾ ಪ್ರಧಾನ ಸಂಚಲಕ ಸುಂದರ ಮಾಸ್ತರ್, ಉಡುಪಿ ಬಿಷಪ್ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೋ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷಯಾಸೀನ್ ಮಲ್ಪೆ ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷ ರೆನಾಲ್ಡ್ ಡಿ’ಅಲ್ಫೇಡಾ, ಭಾರತೀಯ ಕೈಸ್ತಸ ಸಂಘಟನೆಗಳ. ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಲೂವಿಸ್ ಲೋಬೊ, ವೆರೋನಿಕಾ ಕರ್ನೇಲಿಯೊ, ಉಪಸ್ಥಿತರಿದ್ದರು.
ಚಿಂತಕ ಪ್ರೊ. ಫಣಿರಾಜ್, ಪ್ರಸ್ತಾವಿಕ ಮಾತುಗಳನ್ನಾಡಿದರು. ಸಮಾನ ಮಾನಸ್ಕರ ವೇದಿಕೆಯ ಸಂಚಾಲಕ ಪ್ರಶಾಂತ್ ಜತ್ತನ್ನ ನಿರೂಪಿಸಿದರು, ಉಡುಪಿ ಧರ್ಮಪ್ರಾಂತದ ಪಿಅರ್‍ಒ ಡೆನಿಸ್ ಡೇಸಾ ವಂದಿಸಿದರು.

ಕುಂದಾಪುರ: ಮಣಿಪುರ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮೌನ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಯ ಝೆಂಕಾರ

ಕುಂದಾಪುರ, 2 93 ದಿನಗಳ ಹಿಂದೆ ಮಣಿಪುರದಲ್ಲಿ ನಡೆದ ಬೆತ್ತಲೆ ಮೆರವಣಿಗೆ ಅತ್ಯಾಚಾರದ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ಮೌನವಾಗುವ ಮೂಲಕ ಇಡೀ ದೇಶವೇ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ ‘ಮಣಿಪುರದ ಜನಾಂಗೀಯ ಕಲಹವನ್ನು ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದ ಅವರು, ಸಂಸತ್ ಕಲಾಪದಲ್ಲಿ ಮೋದಿ ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೇಂದ್ರದ ಬಿಜೆಪಿ ಸರ್ಕಾರ ಬುಡಮೇಲು ಮಾಡಲು ಹೊರಟಿರುವುದು ಆಘಾತಕಾರಿ ವಿಷಯ. ಮಣಿಪುರದ ಬುಕಟ್ಟು ಜನಾಂಗಕ್ಕೆ ನ್ಯಾಯ ಸಿಗುವವರೆಗೆ ಕಾಂಗ್ರೆಸ್ ಹೋರಾಟ ಮುಮದುವರೆಯುತ್ತದೆ ಎಂದರು. ವಿಕಾಸ್ ಹೆಗ್ಡೆ ಮಾತನಾಡಿ, ಮಣಿಪುರದಲ್ಲಿ ಬಿಜೆಪಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ, ಬೇಟಿ ಬಚಾವೋ ಬೇಟಿ ಪಡಾವೋ ಕೇವಲ ಮೋದಿಯವರ ಭಾಷಣಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದರು.

ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ, ದೇಶದಲ್ಲಿ ಸಾಮಾಜಿಕ ಸ್ವಾತಂತ್ರ್ಯವಿಲ್ಲವಾಗಿದೆ. ಸೈನಿಕನೊಬ್ಬನ ಪತ್ನಿಗೇ ಈ ರೀತಿಯ ಸಾಮೂಹಿಕ ಅತ್ಯಾಚಾರ, ಬೆತ್ತಲೆಯಾಗುವ ಪರಿಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು ಎನ್ನುವುದನ್ನು ಯೋಚಿಸಬೇಕಾಗಿದೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಭಾರತ ಅಶಾಂತಿಯಿಂದ ಬಳಲುತ್ತಿದೆ ಎಂದು ಆರೋಪಿಸಿದರು. ಮುಖಂಡ ಶಂಕರ್ ಕುಂದರ್ ಮಾತನಾಡಿದರು ದಾರಿಯುದ್ದಕ್ಕೂ ಮಣಿಪುರದ ಮಹಿಳೆಯರೇ ನಮ್ಮೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆ ಪ್ರತಿಭಟನೇಯ ವೇಳೆ ಮೊಳಗಿತು.

  ಪ್ರತಿಭಟನೇಯಲ್ಲಿ ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಶ್ಬಕ್, ಶ್ರೀಧರ್ ಶೇರೆಗಾರ್, ಪಂಚಾಯತ್ ಸದಸ್ಯರಾದ ವಿದ್ಯಾಧರ್, ಸೌಮ್ಯ ಮೊಗವೀರ, ಗಣಪತಿ ಶೇಟ್, ರೋಶನ್ ಬರೆಟ್ಟೊ, ಮಹಿಳಾ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಕ್ರಷ್ಣದೇವ್ ಕಾರಂತ,ಗಣೇಶ್ ಶೇರೆಗಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ, ಚಂದ್ರ ಅಮೀನ್, ಚಂದ್ರ ಶೇಖರ ಶೆಟ್ಟಿ, ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಶನ್ ಶೆಟ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ, ಗಂಗಾಧರ್ ಶೆಟ್ಟಿ, ನಾರಾಯಣ ಆಚಾರ್, ಕೇಶವ್ ಭಟ್, ಅಭಿಜಿತ್ ಪೂಜಾರಿ, ಧರ್ಮಪ್ರಕಾಶ್, ಕುಮಾರ್ ಖಾರ್ವಿ, ಮುನಾಫ್, ಸುನಿಲ್ ಪೂಜಾರಿ, ಸಚ್ಚಿದಾನಂದ , ರೇವತಿ ಶೆಟ್ಟಿ, ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ಸುವರ್ಣ ಅಲ್ಮೇಡಾ, ಪ್ರಭಾವತಿ,ಸುಮನಾ ಪೂಜಾರಿ, ಸವಿತಾ ಸಿಕ್ವೇರಾ, ಜ್ಯೋತಿ ಮೋಗವಿರ, ಪ್ರೇಮಾ, ವೇಲಾ ಬ್ರಗಾಂಜ, ವಿಠಲ ಕಾಂಚನ್, ಹಾರೋನ್ ಸಾಹೇಬ್, ಮೌರಿಸ್ ಕರ್ವಾಲ್ಲೊ, ಅಬ್ದುಲ್ಲಾ ಕೋಡಿ, ಪ್ರೀತಮ್ ಕರ್ವಾಲ್ಲೊ, ಅಶೋಕ್ ಸುವರ್ಣ, ಡೋಲ್ಫಿ ಡಿಕೋಸ್ತಾ, ಜೋಸೆಫ್ ರೆಬೆಲ್ಲೊ, ಕ್ಲಿಫರ್ಡ್ ಡಿಸಿಲ್ವಾ, ಗಣೇಶ್ ನೆಲ್ಲಿ ಬೆಟ್ಟು, ರಾಕೇಶ್ ಶೆಟ್ಟಿ, ಸುರೇಶ್ ಕೆ, ಅರುಣ್ ಪಟೇಲ್, ನಾಗರಾಜ್ ನಾಯ್ಕ್, ವೇಣುಗೋಪಾಲ್, ಶ್ರೀನಿವಾಸ ಶೆಟ್ಟಿ, ಕಿರಣ್ ಕಲ್ಲಾಗಾರ, ಶಶಿ ನಂದಿಬೆಟ್ಟ ಮೊದಲಾದವರಿದ್ದರು. ವಿನೋದ್ ಕ್ರಾಸ್ತಾ ಪ್ರಾಸ್ತಾವಿಸಿ ನಿರೂಪಿಸಿದರು.

ಸಾರ್ವಜನಿಕರು ಯೋಗ ಮತ್ತು ಪ್ರಾಣಾಯಮದ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯಪಡೆದುಕೊಳ್ಳಬೇಕು;ಐಸಿರಿ ಹೀಲಿಂಗ್ ಸೆಂಟರ್‍ನ ಹೀಲರ್

ಶ್ರೀನಿವಾಸಪುರ: ಸಾರ್ವಜನಿಕರು ಯೋಗ ಮತ್ತು ಪ್ರಾಣಾಯಮದ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪಡೆದುಕೊಳ್ಳಬೇಕು ಎಂದು ಐಸಿರಿ ಹೀಲಿಂಗ್ ಸೆಂಟರ್‍ನ ಹೀಲರ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಸಿರಿ ಹೀಲಿಂಗ್ ಸೆಂಟರ್ ಸೆಂಟರ್ ವತಿಯಿಂದ ಉಚಿತ ಚಿಕಿತ್ಸಾ ಶಿಬಿರ ಏರ್ಪಡಿಸಲಾಗುವುದು ಎಂದು ಹೇಳಿದರು.
ಆ.2 ರಿಂದ ಮೂರು ದಿನಗಳ ಕಾಲ ಬೆಳಿಗ್ಗೆ 11 ರಿಂದ 2 ಗಂಟೆ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆ ವರೆಗೆ ಉಚಿತ ಯೋಗ ಹಾಗೂ ಪ್ರಾಣಾಯಾಮ ಶಿಬಿರ ಏರ್ಪಡಿಸಲಾಗುವುದು. ಅಗತ್ಯ ಇರುವ ನಾಗರಿಕರು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಮಾಜ ಸೇವೆ ಹಾಗೂ ಮಾನವೀಯ ನಡೆಗೆ ಹೆಸರಾಗಿದೆ : ಡಾ. ವೈ.ವಿ.ವೆಂಕಟಾಚಲ

ಶ್ರೀನಿವಾಸಪುರ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಮಾಜ ಸೇವೆ ಹಾಗೂ ಮಾನವೀಯ ನಡೆಗೆ ಹೆಸರಾಗಿದೆ ಎಂದು ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಸ್ಕಾರ್ಫ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ಸಂಸ್ಥೆಗೆ ಸ್ವಯಂ ಪ್ರೇರಣೆಯಿಂದ ಸೇರಬೇಕು. ಶಿಸ್ತು ಹಾಗೂ ಸಂಸ್ಕಾರ ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು.
ಸಂಸ್ಥೆಯ ಸ್ಕಾರ್ಫ್ ಧರಿಸುವುದು ಸಮಾಜ ಮುಖಿ ಧೋರಣೆ ಪ್ರತೀಕ. ಶಿಸ್ತಿನ ನಡೆ ಹಾಗೂ ಸಮಾಜ ಸೇವೆಯ ಮೂಲಕ ಸಾರ್ಥಕತೆ ಕಂಡುಕೊಳ್ಳುವ ಒಂದು ವಿಧಾನ. ಸಂಸ್ಥೆಯ ಶಿಕ್ಷಕರು ಮಕ್ಕಳಲ್ಲಿ ದೇಶ ಪ್ರೇಮ ಹಾಗೂ ಸ್ವಚ್ಛತೆ ಮಹತ್ವ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸೇವಾ ಕಾರ್ಯಗಳಲ್ಲಿ ಭಾಗವಹಿಸಬೇಕು. ದೇಹ ಇರುವುದು ಪರೋಪಕಾರ ಮಾಡಲು ಎಂಬ ಸತ್ಯ ಅರಿಯಬೇಕು. ಪೋಷಕರು, ತಮ್ಮ ಮಕ್ಕಳು ಸೇವಾ ಸಂಸ್ಥೆಗಳಲ್ಲಿ ಶ್ರಮಿಸುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಸಂಸ್ಥೆ ಉಪಾದ್ಯಕ್ಷ ಎಂ.ಸೀತರೆಡ್ಡಿ, ಟಿ.ಎಂ.ರಾಮಚಂದ್ರಗೌಡ, ರೆಡ್ಡಮ್ಮ, ಜಿ.ವಿ.ಚಂದ್ರಪ್ಪ, ಗೌರಿಬಾಯಿ, ವಿಶ್ವನಾಥ್, ಟಿ.ರಮೇಶ್, ಮಂಜುಳ, ಗೋಪಿನಾಥ್, ಜಿ.ಕೆ.ನಾರಾಯಣಸ್ವಾಮಿ ಇದ್ದರು.

ಶ್ರೀನಿವಾಸಪುರ ಜೆಡಿಎಸ್‍ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಣಿ ಡಾ|ಎಂ. ಗಾಯಿತ್ರಿ ಮುತ್ತಪ್ಪರವರ ಅಭಿಮಾನ ಬಳಗದಿಂದ ಹುಟ್ಟುಹಬ್ಬ

ಶ್ರೀನಿವಾಸಪುರ ಜೆಡಿಎಸ್‍ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಣಿ ಡಾ|| ಎಂ. ಗಾಯಿತ್ರಿ ಮುತ್ತಪ್ಪ ರವರ ಮುಂದಿನ ರಾಜಕೀಯ ಜೀವನ ಯಶಸ್ವಿಯಾಗಲಿ ಸಾರ್ವಜನಿಕ ಸೇವೆಗಾಗಿ ಭಗವಂತ ಇನ್ನಷ್ಟು ಶಕ್ತಿ ಮತ್ತು ಆರೋಗ್ಯ ನೀಡಲಿ ಎಂದು ಜೆಡಿಎಸ್‍ನ ಯುವ ಮುಖಂಡ ಅಂಬೇಡ್ಕರ್ ಪಾಳ್ಯ ಸಿ. ರವಿ ತಿಳಿಸಿದರು.
ಪಟ್ಟಣದ ಪ್ರವಾಸ ಮಂದಿರದಲ್ಲಿ ಡಾ|| ಎಂ. ಗಾಯಿತ್ರಿ ಮುತ್ತಪ್ಪ ಅಭಿಮಾನ ಬಳಗದಿಂದ ಏರ್ಪಡಿಸಿದ್ದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಶುಭಾಶಯಗಳನ್ನು ತಿಳಿಸಿ ಮಾತನಾಡಿದ ಸಿ.ರವಿ ಕಳೆದ ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಸೇವೆಯನ್ನು ಮಾಡುತ್ತಾ ತಮ್ಮ ಕೈಯಲಾದಷ್ಟು ಬಡವರಿಗೆ, ಮಹಿಳೆಯರಿಗೆ ಸಹಾಯವನ್ನು ಮಾಡಿ ಕ್ಷೇತ್ರಾದ್ಯಾಂತ ತಮ್ಮ ಹೆಸರನ್ನು ಜನರ ಮನದಾಳದಲ್ಲಿ ಸಂಪಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನ ಉತ್ತಮವಾಗಲಿ ಭಗವಂತ ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಡಾ|| ಗಾಯಿತ್ರಿ ಮುತ್ತಪ್ಪ ಅಭಿಮಾನ ಬಳಗದಿಂದ ಬೃಹತ್ ಹಾರ ಹಾಗೂ ಕೇಕ್‍ನ್ನು ಕತ್ತರಿಸಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಅಚರಿಸಿದರು. ಹುಟ್ಟು ಹಬ್ಬಕ್ಕೆ ಬಂದಂತಹ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿದರು.