HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ: ಸೆಕ್ಯೂಲರ್ ಧರ್ಮಗುರುಗಳ ಪಾಲಕ ಸಂತ ವಿಯಾನ್ನಿಯ ಸ್ಮರಣೆ : ಧರ್ಮಗುರುಗಳಿಗೆ ಅಭಿನಂದನೆ

ಕುಂದಾಪುರ, ಆ.4: ಸ್ಥಳೀಯ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಕುಂದಾಪುರ ಇಗರ್ಜಿಯ  ಧರ್ಮಗುರುಗಳು ಬಲಿಪೂಜೆಯನ್ನು ಅರ್ಪಿಸಿ ಅವರ ಸ್ಮರಣೆ ಆಚರಿಸಿದರು.
       ಇಗರ್ಜಿಯ ಸಹಾಯಕ ಧರ್ಮಗುರು ವಂ| ಅಶ್ದಿನ್ ಆರಾನ್ನ  ಪವಿತ್ರ ಬಲಿದಾನವನ್ನು ಅರ್ಪಿಸಿ “ನಮಗಾಗಿ ನಿಮ್ಮ ಪ್ರಾರ್ಥನೆಗಳು ಅಗತ್ಯವಾಗಿವೆ, ನಾವು ನಮ್ಮ ಗುರು ದಿಕ್ಷೆಯನ್ನು ಸರಿಯಾಗಿ ಮುನ್ನೆಡೆಸಿಕೊಂಡು ಹೋಗಲು, ನಮಗೆ ನಿಮ್ಮ ಪ್ರಾರ್ಥನೆ ಅಗತ್ಯವಿದೆಯೆಂದು” ತಿಳಿಸಿದರು. ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನವನ್ನು ಸಹ ಬಲಿದಾನವನ್ನು ಅರ್ಪಿಸಿ ದೊಡ್ಡ ಸಂಖ್ಯೆಯಲ್ಲಿ ಪೂಜೆಗೆ ಆಗಮಿಸಿದಕ್ಕೆ ಮತ್ತು ಅಭಿನಂದ ಸಲ್ಲಿಸಿದ್ದಕ್ಕೆ ಕ್ರತ್ಜತೆ ಸಲ್ಲಿಸಿದರು.
     ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಇನ್ನಿತರ ಧರ್ಮ ಭಗಿನಿಯರು, ಪಾಲನ ಮಂಡಳಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆಯಾದ ಸಿಸ್ಟರ್ ಸುಪ್ರಿಯಾ,  ಇತರ ಧರ್ಮ ಭಗಿನಿಯರು, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದು ಧರ್ಮಗುರುಗಳನ್ನು ಅಭಿನಂದಿಸಿದರು.

ಶಿವಮೊಗ್ಗ ಧರ್ಮಪ್ರಾಂತ್ಯದ “ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ (ಆರ್)” 34 ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು

ಶಿವಮೊಗ್ಗ, ಆಗಸ್ಟ್ 3, 2023: ಶಿವಮೊಗ್ಗ ಧರ್ಮಪ್ರಾಂತ್ಯದ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವೀಸ್ ಸೊಸೈಟಿ (ಆರ್) (ಎಸ್‌ಎಂಎಸ್‌ಎಸ್‌ಎಸ್) ತನ್ನ 34 ನೇ ಸಂಸ್ಥಾಪನಾ ದಿನವನ್ನು ಶಿವಮೊಗ್ಗದ ಎಸ್‌ಎಂಎಸ್‌ಎಸ್‌ಎಸ್ – ಚೈತನ್ಯದಲ್ಲಿ ಆಗಸ್ಟ್ 3 ರಂದು ಆಚರಿಸಿತು.

ಈ ದಿನದ ನೆನಪಿಗಾಗಿ SMSSS – ಚೈತನ್ಯ ಅವರು ಅರ್ಧ ದಿನದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬೆಳಗ್ಗೆ 10 ಗಂಟೆಗೆ ಎಸ್‌ಎಂಎಸ್‌ಎಸ್‌ಎಸ್‌ನಲ್ಲಿ ಧರ್ಮಪ್ರಾಂತ್ಯದ ಧರ್ಮಗುರುಗಳು ಮತ್ತು ಧಾರ್ಮಿಕ ಮತ್ತು ಎಸ್‌ಎಂಎಸ್‌ಎಸ್‌ಎಸ್ ಸಿಬ್ಬಂದಿ ಜಮಾಯಿಸಿದರು. ಎಸ್‌ಎಂಎಸ್‌ಎಸ್‌ಎಸ್‌ನ ನಿರ್ದೇಶಕ ರೆ.ಫಾ. ಕ್ಲಿಫರ್ಡ್ ರೋಶನ್ ಪಿಂಟೋ ಅವರು ಎಸ್‌ಎಂಎಸ್‌ಎಸ್‌ಎಸ್‌ನ ಅಧ್ಯಕ್ಷ ಅತಿ ವಂ. ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ., ಸಂಪನ್ಮೂಲ ವ್ಯಕ್ತಿ ರೆ.ಫಾ. ಸೆಡ್ರಿಕ್ ಪ್ರಲಾಶ್ ಎಸ್.ಜೆ (ಮಾನವ ಹಕ್ಕುಗಳು, ಸಮನ್ವಯ ಮತ್ತು ಶಾಂತಿ ಕಾರ್ಯಕರ್ತ/ಲೇಖಕರು), ಶಿವಮೊಗ್ಗ ಧರ್ಮಪ್ರಾಂತ್ಯದ ವಿಜಿ ಅವರನ್ನು ಸ್ವಾಗತಿಸಿದರು. ಜೋಸೆಫ್ ಫೆಲಿಕ್ಸ್ ನೊರೊನ್ಹಾ, ಪುರೋಹಿತರು ಮತ್ತು ಧಾರ್ಮಿಕರು ಹಾಗೂ ಸಿಬ್ಬಂದಿಗಳು ಜಮಾಯಿಸಿದರು.

ಎಸ್‌ಎಂಎಸ್‌ಎಸ್‌ಎಸ್‌ ಅಧ್ಯಕ್ಷರು ಹಾಗೂ ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್‌ ವಂದನೀಯ ಡಾ. ಫ್ರಾನ್ಸಿಸ್‌ ಸೆರಾವೊ ಎಸ್‌ಜೆ ಅವರನ್ನು ಸಭೆಗೆ ಪರಿಚಯಿಸಿದರು.

ಇಂದಿನ ಸಂದರ್ಭದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸುವಲ್ಲಿ “ಅರಿವು, ಸಿದ್ಧತೆ ಮತ್ತು ಪ್ರತಿಕ್ರಿಯೆ” ಕುರಿತು ರೆ.ಫಾ ಸೆಡ್ರಿಕ್ ಪ್ರಕಾಶ್ ಎಸ್.ಜೆ ಮಾತನಾಡಿದರು. ಸತ್ಯ ಮತ್ತು ನ್ಯಾಯಕ್ಕಾಗಿ ಧ್ವನಿಯಾಗುವಂತೆ ಅವರು ಭಾಗವಹಿಸುವವರಿಗೆ ಸವಾಲು ಹಾಕಿದರು. ನಾವು ಪ್ರಭುವಾದ ಯೇಸುವಿನಿಂದಲೇ ಧೈರ್ಯವನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಮಧ್ಯಾಹ್ನ 12 ಗಂಟೆಗೆ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೋ ಎಸ್.ಜೆ ಅವರು ಪವಿತ್ರ ಯಜ್ಞವನ್ನು ಆಚರಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ರೆ.ಫಾ.ಸೆಡ್ರಿಕ್ ಪ್ರಕಾಶ್ ಎಸ್.ಜೆ ಅರ್ಥಪೂರ್ಣ ಪ್ರವಚನ ಬೋಧಿಸಿದರು. ಅವರು ಗಾಸ್ಪೆಲ್ ಮ್ಯಾಥ್ಯೂ 13:47 – 53 “ದಿ ಪೇಬಲ್ ಆಫ್ ದಿ ನೆಟ್” ಕುರಿತು ಮಾತನಾಡಿದರು. ಅವರು ನಮ್ಮ ಇಂದಿನ ಧ್ಯೇಯೋದ್ದೇಶದಲ್ಲಿ ಈ ಭಾಗವನ್ನು ಸಂದರ್ಭೋಚಿತಗೊಳಿಸಿದರು. ಬಲೆ, ಮೀನು ಮತ್ತು ನೀರು ಸಂಕೇತಿಸುತ್ತದೆ ಎಂದು ಅವರು ಹೇಳಿದರು; ಹೊಸತನ (ಸೇಂಟ್ ಪಾಲ್ – ಜೀಸಸ್ ನಂತಹ ಹೊಸ ವ್ಯಕ್ತಿಯನ್ನು ಧರಿಸುವುದು), ಭ್ರಾತೃತ್ವ (ಕರುಣಾಮಯಿ ಹೃದಯದಿಂದ ನಿರ್ಗತಿಕರನ್ನು ತಲುಪುವುದು) ಮತ್ತು ಸಾಕ್ಷಿ (ಗೋಚರ ಮತ್ತು ಗಾಯನ).

ಎಸ್‌ಎಂಎಸ್‌ಎಸ್‌ಎಸ್ ನಿರ್ದೇಶಕ ರೆ.ಫಾ. ಕ್ಲಿಫರ್ಡ್ ರೋಶನ್ ಪಿಂಟೊ ಬಿಷಪ್ ಫ್ರಾನ್ಸಿಸ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನೀಡಿದ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದ ಸಲ್ಲಿಸಿದರು. ಅವರು ಸಂಪನ್ಮೂಲ ವ್ಯಕ್ತಿ ಫ್ರಾ ಸೆಡ್ರಿಕ್ ಪ್ರಕಾಶ್ ಎಸ್ ಜೆ ಅವರ ಸ್ಪೂರ್ತಿದಾಯಕ ಭಾಷಣಕ್ಕಾಗಿ ಮತ್ತು ನೆರೆದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

SMSSS ಅನ್ನು 11ನೇ ಆಗಸ್ಟ್ 1989 ರಂದು “ಗೌರವದಿಂದ ಜೀವನದ ಕಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭಿಸಲಾಯಿತು. ಶಿವಮೊಗ್ಗದ ಡಯಾಸಿಸ್ನ ಮೊದಲ ಬಿಷಪ್ ದಿವಂಗತ ಆರ್ಚ್ಬಿಷಪ್ ಮೋಸ್ಟ್ ರೆವ್ ಡಾ ಇಗ್ನೇಷಿಯಸ್ ಪಿಂಟೋ SMSSS ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಶಿವಮೊಗ್ಗ ಧರ್ಮಪ್ರಾಂತ್ಯದ ಎರಡನೇ ಬಿಷಪ್ ಮೋಸ್ಟ್ ರೆವ್ ಡಾ ಜೆರಾಲ್ಡ್ ಐಸಾಕ್ ಲೋಬೋ ಅವರು ಎಸ್‌ಎಂಎಸ್‌ಎಸ್‌ಎಸ್ ಧ್ಯೇಯೋದ್ದೇಶವನ್ನು ಮತ್ತೊಂದು ಹಂತಕ್ಕೆ ಸಾಗಿಸಿದರು. ಶಿವಮೊಗ್ಗ ಧರ್ಮಪ್ರಾಂತ್ಯದ ಪ್ರಸ್ತುತ ಬಿಷಪ್ ಮೋಸ್ಟ್ ರೆವ್ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು SMSSS ಅನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

SMSSS ಸೇವೆ ಸಲ್ಲಿಸಿದ ನಿರ್ದೇಶಕರು:

  1. ರೆವ್ ಫಾದರ್ ಮಾರ್ಕ್ ಪ್ಯಾಟ್ರಿಕ್ ಡಿ’ಸಿಲ್ವಾ
  2. ರೆ.ಫಾ.ಕ್ಲೆಮೆಂಟ್ ಡಿಸೋಜಾ
  3. ರೆ.ಫಾ. ಗಿಲ್ಬರ್ಟ್ ಲೋಬೊ
  4. ಧರ್ಮಗುರು ವೀರೇಶ್ ವಿನ್ಸೆಂಟ್ ಮೊರಾಸ್
  5. ರೆವ್ ಫಾದರ್ ರಿಚರ್ಡ್ ಪೈಸ್
  6. ರೆ. ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ಪ್ರಸ್ತುತ ನಿರ್ದೇಶಕರಾಗಿದ್ದಾರೆ.

SMSSS ನಲ್ಲಿ ಸಂಕ್ಷಿಪ್ತ ಟಿಪ್ಪಣಿ. ಒಳ್ಳೆಯ ಮನಸ್ಸಿನ ಜನರು SMSSS ನೊಂದಿಗೆ ಪಾಲುದಾರರಾಗಬಹುದು.

ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ (ಆರ್) ಶಿವಮೊಗ್ಗ, ಕರ್ನಾಟಕ, ಭಾರತದ ಮೂರು ನಾಗರಿಕ ಜಿಲ್ಲೆಗಳನ್ನು ಒಳಗೊಂಡಿರುವ ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆಯ ಡಯಾಸಿಸ್‌ನ ‘ಅಭಿವೃದ್ಧಿ ಅಂಗವಾಗಿದೆ’. SMSSS ಜಾತ್ಯತೀತ, ಸ್ವಯಂಪ್ರೇರಿತ, ಲಾಭರಹಿತ ಸಂಸ್ಥೆಯಾಗಿದ್ದು, ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ 1960 ರ ಅಡಿಯಲ್ಲಿ ನೋಂದಾಯಿಸಲಾಗಿದೆ; ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ, 2010 ಮತ್ತು ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 12A ಮತ್ತು 80G ಅಡಿಯಲ್ಲಿ. ಸಮಾಜವು ಜಾತಿ, ಮತ, ಲಿಂಗ ಮತ್ತು ಜನಾಂಗವನ್ನು ಲೆಕ್ಕಿಸದೆ ಬಡ ಮತ್ತು ಅಂಚಿನಲ್ಲಿರುವ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಮಾಡಲು ಬದ್ಧವಾಗಿದೆ 11 ಆಗಸ್ಟ್ 1989 ರಂದು “ಗೌರವದಿಂದ ಜೀವನದ ಕಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಅಸ್ತಿತ್ವದಲ್ಲಿದೆ. ಮೂರು ಜಿಲ್ಲೆಗಳ 187 ಗ್ರಾಮ ಪಂಚಾಯಿತಿಗಳ 627 ಗ್ರಾಮಗಳಲ್ಲಿ ಅದರ ಅಭಿವೃದ್ಧಿ ಮಧ್ಯಸ್ಥಿಕೆಗಳ ಮೂಲಕ.

ದೃಷ್ಟಿ: ನ್ಯಾಯ, ಶಾಂತಿ ಮತ್ತು ಪ್ರೀತಿಯನ್ನು ಆಧರಿಸಿದ ಸಮಾಜ

ಧ್ಯೇಯ: ಸಾಮರ್ಥ್ಯ ನಿರ್ಮಾಣ ಮತ್ತು ಹಕ್ಕು ಆಧಾರಿತ ಕ್ರಿಯೆಗಳ ಪ್ರಕ್ರಿಯೆಯ ಮೂಲಕ ಬಡವರು ಮತ್ತು ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸುವುದು

ಗುರಿ: ಅಂಚಿನಲ್ಲಿರುವ ಸಮುದಾಯಗಳು ತಮ್ಮ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜ್ಞಾನ, ಸಂಪನ್ಮೂಲಗಳು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪ್ರವೇಶ ಮತ್ತು ನಿಯಂತ್ರಣವನ್ನು ಹೊಂದಿರುತ್ತಾರೆ

ನಮ್ಮ ಆದ್ಯತೆಯ ಗುಂಪುಗಳು: ಸಣ್ಣ ಮತ್ತು ಅಂಚಿನಲ್ಲಿರುವ ರೈತರು, HIV/AIDS ನೊಂದಿಗೆ ವಾಸಿಸುವ ಜನರು, ಅಂಚಿನಲ್ಲಿರುವ ಮಹಿಳೆಯರು, ಮಕ್ಕಳು ಮತ್ತು ಅವರ ಪೋಷಕರು, ನಿರುದ್ಯೋಗಿ ಯುವಕರು, ಅಸಂಘಟಿತ ಕಾರ್ಮಿಕರು, ಇತ್ಯಾದಿ.

ನಮ್ಮ ವಿಧಾನ:

  • ಅನುಷ್ಠಾನ
  • ಸಾಮರ್ಥ್ಯ ನಿರ್ಮಾಣ
  • ನೆಟ್‌ವರ್ಕಿಂಗ್
  • ಹಕ್ಕುಗಳ ಆಧಾರಿತ ಕ್ರಮಗಳು

SMSSS ನ ಕಾರ್ಯಕ್ರಮಗಳು:

  • ಮಹಿಳಾ ಸಬಲೀಕರಣ
  • ಶಿಕ್ಷಣ ಮತ್ತು ಅಭಿವೃದ್ಧಿ
  • ನೈಸರ್ಗಿಕ ಸಂಪನ್ಮೂಲ ನಿರ್ವಹಣೆ
  • ಉತ್ತಮ ಆಡಳಿತ
  • ಆರೋಗ್ಯ ಮತ್ತು ಅಭಿವೃದ್ಧಿ
  • ಸಾಮರ್ಥ್ಯ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ಮತ್ತು SMSSS ನೊಂದಿಗೆ ಪಾಲುದಾರರಾಗಲು ಬಯಸಿದರೆ ದಯವಿಟ್ಟು ಸಂಪರ್ಕಿಸಿ:

ನಿರ್ದೇಶಕ
ಚೈತನ್ಯ – SMSSS
ಅಲ್ಕೋಲಾ ಸರ್ಕಲ್
ಸಾಗರ್ ರೋಡ್, ಗೋಪಾಲ ಪೋಸ್ಟ್
ಶಿವಮೊಗ್ಗ- 577205
ಕರ್ನಾಟಕ, ಭಾರತ
ಮೊಬೈಲ್: 876213791514 (ಕಚೇರಿ)

ಎಂ.ಐ.ಟಿ.ಕೆ.ಯಲ್ಲಿ ಎಂ.ಎಸ್ ಎಕ್ಸೆಲ್ ಕಾರ್ಯಾಗಾರ

ಎಂ.ಬಿ.ಎ ವಿಭಾಗ ಎಂ.ಐ.ಟಿ.ಕೆ, ಮೂಡ್ಲಕಟ್ಟೆ, ಕುಂದಾಪುರ ವಿದ್ಯಾರ್ಥಿಗಳಿಗೆ ಎಂ.ಎಸ್ ಎಕ್ಸೆಲ್ ಕುರಿತು ಕಾರ್ಯಾಗಾರ ನಡೆಯಿತು. ಶ್ರೀ ಅನಂತ್ ನಾಯ್ಕ್, ಜನತಾ ಗ್ರೂಪ್ಸ್ ಸಹಾಯಕ ವ್ಯವಸ್ಥಾಪಕ (ವ್ಯವಹಾರ ಬೆಂಬಲ), ಕೋಟ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಂ.ಎಸ್ ಎಕ್ಸೆಲ್ ಕುರಿತು ಸಂಕ್ಷಿಪ್ತ ಪರಿಚಯದೊಂದಿಗೆ ಕಾರ್ಯಾಗಾರವನ್ನು ಪ್ರಾರಂಭಿಸಿದ ಅವರು ಉತ್ತಮ ಉದಾಹರಣೆಗಳೊಂದಿಗೆ ಕಂಪನಿಗಳಲ್ಲಿ ಎಕ್ಸೆಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಿದರು. ಅವರು ಸೆಲ್ ಉಲ್ಲೇಖ ಮತ್ತು ರೆಫರೆನ್ಸ್ ಬೋಡ್‍ಮಾಸ್ ಬಳಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ನೀಡಿದರು. ಪ್ರೊ.ಅಮೃತಮಲಾ ಸ್ವಾಗತಿಸಿ, ಪ್ರೊ.ತಿಲಕಲಕ್ಷ್ಮಿ ಸಂಪನ್ಮೂಲ ವ್ಯಕ್ತಿಯವರಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪನ್ನಗಾ ನಿರೂಪಿಸಿದರು.

ಕರಾವಳಿ ಜಿಲ್ಲೆಯಲ್ಲಿ ಮತ್ತೆ ಮಳೆಯಾಗುವ ಹವಮಾನ ಇಲಾಖೆಯಿಂದ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಇಂದಿನಿಂದ ಮತ್ತೆ ಮಳೆಯ ಆರ್ಭಟ ಜೋರಾಗಲಿದೆ’ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು. ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮಳೆಯಾಗಲಿದೆ.

ಕ್ಯಾಸಲ್ರಾಕ್ ಯಲ್ಲಾಪುರ, ಲೋಂಡಾ, ಕದ್ರಾ, ಜೋಯ್ಡಾ, ಮುಂಡಗೋಡ, ಗುಂಜಿ, ಕಮ್ಮರಡಿ, ತಾಳಗುಪ್ಪ, ಸಕಲೇಶಪುರದಲ್ಲಿ ಮಳೆಯಾಗಲಿದೆ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಹೇಳಿದೆ.

ಪ್ರಕೃತಿಯು ಭಗವಂತನ ಮಹಿಮೆ , ಸೌಂದರ್ಯಗಳ ಪ್ರತೀಕವಾಗಿದೆ ಉಳಿಸಿಬೆಳಸೊಣ: ಬಿ.ವಿ.ಶಿವಾರೆಡ್ಡಿ

ಶ್ರೀನಿವಾಸಪುರ : ಪ್ರಕೃತಿಯು ಭಗವಂತನ ಮಹಿಮೆ , ಸೌಂದರ್ಯಗಳ ಪ್ರತೀಕವಾಗಿದೆ . ಪರಮಾತ್ಮನ ಶಕ್ತಿಯೇ ಪ್ರಕೃತಿಯ ಮೂಲಕ ಅಭಿವ್ಯಕ್ತವಾಗಿದೆ . ಇಂಥ ಪರಿಸರವನ್ನು ಆರಾಧಿಸುವುದು ಭಾರತೀಯ ಸಂಸ್ಕøತಿಯಾಗಿದ್ದು ನಾವೆಲ್ಲರೂ ಸೇರಿ ಪರಿಸರವನ್ನು ಆರಾಧಿಸಿ , ಉಳಿಸಿಬೆಳಸೊಣವೆಂದು ಎಂದು ಪರಿಸರ ಪ್ರೇಮಿ ಬೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ ತಿಳಿಸಿದರು.
ತಾಲೂಕಿನ ರಾಯಲ್ಪಾಡು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಗನ ಗಿಡಗಳನ್ನು ವಿತರಿಸಿ ಮಾತನಾಡಿದರು.
ನಮಗಿರುವುದು ಒಂದೇ ಭೂಮಿ. ನಾವು ಪ್ರತಿನಿತ್ಯ ಬಳಸುವ ಸಮಸ್ತ ವಸ್ತುಗಳೂ ಈ ಭೂಮಿಯಿಂದಲೇ ಒದಗಿ ಬರಬೇಕು . ಶುದ್ದವಾದ ಗಾಳಿ, ನೀರು, ವಿವಿಧ ಆಹಾರಪದಾರ್ಥಗಳು , ಬಟ್ಟೆ, ಖನಿಜಗಳು, ಕೈಗಾರಿಕ ಕಚ್ಚಾ ವಸ್ತುಗಳು , ಪೆಟ್ರೋಲಿಯಮ್,ಕಲ್ಲಿದ್ದಲು, ಸೌದೆ, ಮೇವು, ಔಷಧಸಾಮಾಗ್ರಿಗಳು ಮುಂತಾದ ನೂರಾರು ವಸ್ತುಗಳಿಗೆ ಈ ಭೂಮಿಯ ಮೇಲಿರುವ ಅರಣ್ಯ, ನೀರು, ನೆಲಗಳೇ ಆಧಾರವಾಗಿವೆ .
ಆದರೆ ಈ ವೈವಿಧ್ಯಪೂರ್ಣ ವಸ್ತುಗಳನ್ನು ಒದಗಿಸುವ ಭೂಮಿ ಒಂದು ಅಕ್ಷಯಪಾತ್ರೆಯಲ್ಲ, ಇತ್ತೀಚಿನ ದಿನಗಳಲ್ಲಿ ಮಾನವ ನೈಸರ್ಗಿಕ ಸಂಪತ್ತನ್ನು ಉತ್ಪಾದನೆಗಿಂತ ಹೆಚ್ಚು ಬಳಕೆ ಮಾಡುತ್ತಿದ್ದು , ಭೂಮಿಯೇನು ಅಕ್ಷಯಪಾತ್ರೆಯೇ?
ಇದಲ್ಲದೆ ಮಾನವನ ಸ್ವಾರ್ಥ ಹಾಗು ಭೋಗ ಜೀವನದಿಂದಾಗಿ ಓಜೂನ್ ಪದರದಲ್ಲಿ ಬಿರುಕು ಬಿಟ್ಟಿದ್ದು, ಇದರಿಂದಾಗಿ ಸೂರ್ಯನ ಕಿರಣಗಳು ನೇರವಾಗಿ ಮನುಷ್ಯನ ಮೈಮೇಲೆ ಬೀಳುವುದರಿಂದ ಚರ್ಮಕ್ಕೆ ಸಂಬಂದಿಸಿದ ವ್ಯಾದಿಗಳಿಂದ ಬಳಲುತ್ತಿದ್ದು, ಇವುಗಳಿಂದ ಪಾರಗಲೂ ನಾವೆಲ್ಲರೂ ಸೇರಿ ಸ್ವಾರ್ಥ ಹಾಗು ಭೋಗಜೀವನವನ್ನು ಬಿಟ್ಟು ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪತ್ತನ್ನು ಉಳಿಸಿ ಕಾಪಾಡಬೇಕಾಗಿದೆ ಎಂದರು.
ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಯರ್ರಂವಾರಿಪಲ್ಲಿ ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ, ಮುಖಂಡರಾದ ಸಿಮೆಂಟ್ ನಾರಾಯಣಸ್ವಾಮಿ, ಚಕ್ಕಾ ಅಪ್ಪಿ, ಜಗನ್ನಾಥ್, ಪ್ರಸನ್ನ, ಬೈರಗಾನಪಲ್ಲಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ರಾಮಚಂದ್ರ ಇದ್ದರು.
ಪೋಟು; ರಾಯಲ್ಪಾಡು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಗನ ಗಿಡಗಳನ್ನು ಬಿ.ವಿ.ಶಿವಾರೆಡ್ಡಿ ವಿತರಿಸಿ ಮಾತನಾಡಿದರು.

ರಾಷ್ಟ್ರಧ್ವಜವನ್ನು ಪ್ರತಿಯೊಬ್ಬರೂ ಗೌರವಿಸಬೇಕು ; ಪಿಡಿಓ ಲಕ್ಷ್ಮಿ

ಕೋಲಾರ ಆಗಸ್ಟ್ 2. ಭಾರತದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ನಮ್ಮ ರಾಷ್ಟ್ರಧ್ವಜವನ್ನು ಗೌರವಿಸಬೇಕು. ಈ ಮೂಲಕ ರಾಷ್ಟ್ರಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಹರಟಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ. ಲಕ್ಷ್ಮಿ ಅಭಿಪ್ರಾಯ ಪಟ್ಟರು.
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ರಾಷ್ಟ್ರಧ್ವಜ ವಿನ್ಯಾಸಕಾರ ತಿಂಗಳಿ ವೆಂಕಟಯ್ಯ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಭಕ್ತಿ, ದೇಶಪ್ರೇಮ, ಪ್ರಾಥಮಿಕ ಶಾಲೆಯಿಂದಲೇ ವಿದ್ಯಾರ್ಥಿಗಳಲ್ಲಿ ಮೂಡಿಸುವಂತೆ ಆಗಬೇಕು, ವಿದ್ಯಾರ್ಥಿ ದೆಸೆಯಿಂದಲೇ, ರಾಷ್ಟ್ರೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಎಂದರು.
ರಾಷ್ಟ್ರ ಲಾಂಛನ, ರಾಷ್ಟ್ರ ಚಿನ್ಹೆ, ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಬಗ್ಗೆ ಅಭಿಮಾನ, ಕೌರವ ಮೂಡುವಂತಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಮಾತನಾಡಿ ಪಿoಗಳಿ ವೆಂಕಟಯ್ಯ ಶಿಕ್ಷಣ ತಜ್ಞರಾಗಿ, ಭಾμÁ ದೊಡ್ಡರಾಗಿ, ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು. ಸತತ ಐದು ವರ್ಷಗಳ ಕಾಲ ವಿವಿಧ ರಾಷ್ಟ್ರಧ್ವಜಗಳ ವಿನ್ಯಾಸಗಳನ್ನು ಅಧ್ಯಯನ ಮಾಡಿ ಭಾರತದ ರಾಷ್ಟ್ರಧ್ವಜ ವಿನ್ಯಾಸ ಮಾಡಿದ ಅವನ ವ್ಯಕ್ತಿ ಎಂದು ಬಣ್ಣಿಸಿದರು.
ಅಷ್ಟಧ್ವಜ,ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ನಮ್ಮ ರಾಷ್ಟ್ರದ ಗೌರವದ ಸಂಕೇತಗಳಾಗಿದೆ ಇದನ್ನು ಬಳಸುವ ವಿಧಿ ವಿಧಾನಗಳ ಬಗ್ಗೆ ಜಿಲ್ಲಾ ಭಾರತ ಸೇವಾದಳ ಘಟಕ ಎಂ ಬಿ ದಾನೇಶ್ ತಿಳಿಸಿಕೊಟ್ಟರು.
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಪ್ಪ, ಆರೋಗ್ಯ ಮತ್ತು ಶಿಕ್ಷಣ ಸಾಕ್ಷರತೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು
.

ರಾಜ್ಯ ಹಾಗೂ ರಾಷ್ಟ್ರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಹೆಚ್ಚಾಗುತ್ತಿದೆ ಪ್ರಭಲ ಕಾನೂನು ಜಾರಿಗೆ ತರಬೇಕು – ಎ.ನಳಿನಿಗೌಡ

ಮುಳಬಾಗಿಲು; ಆ.2: ರಾಜ್ಯ ಹಾಗೂ ರಾಷ್ಟ್ರದಲ್ಲಿ ದಿನೇದಿನೇ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದು, ಕೂಡಲೇ ಪ್ರಭಲ ಕಾನೂನು ಜಾರಿಗೆ ತರುವ ಮೂಲಕ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದು ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಮಾಡಿರುವ ಘಟನೆ, ಸೌಜನ್ಯ ಕೊಲೆ ಪ್ರಕರಣಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದರೂ ರಾಜ್ಯ ಸರ್ಕಾರವು
ಸರಿಯಾದ ರೀತಿಯಲ್ಲಿ ಕ್ರಮಕ್ಕೆ ಮುಂದಾಗದೆ ಇದ್ದು, ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪಗಳಿಗಷ್ಟೇ ಸೀಮಿತಗೊಂಡಿದ್ದಾರೆ.
ಇನ್ನು ಮಣಿಪುರದಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತಾಗಿದ್ದರೂ ಕೇಂದ್ರ ಸರಕಾರವು ಮೀನ ಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರದಲ್ಲಿ ದಿನೇದಿನೇ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಾರಣ ಯಾವುದೇ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿಯೂ ಸರ್ಕಾರಗಳು ತ್ವರಿತವಾಗಿ ಕ್ರಮಕೈಗೊಳ್ಳದೆ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸದೇ ಇರುವುದಾಗಿದ್ದು, ಇನ್ನಾದರೂ ಇಂತಹ ಘಟನೆಗಳು ಮರುಕಳಿಸದಿರಲು ಪ್ರಭಲ ಕಾನೂನು ಜಾರಿಗೆ ತರುವ ಜೊತೆಗೆ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ಮಹಿಳೆಯರ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

St Agnes PU College conducted ‘EXORDIUM 2K23’ on 31 July 2023 in the College Auditorium

“Hide not your talents, they were made for use. What’s a sundial in the shades?”

St Agnes PU College conducted ‘EXORDIUM 2K23’ on 31 July 2023 in the College Auditorium. This programme was introduced to welcome the freshers’ of our college and to encourage and enhance their creativity and skills, and the most important part, i.e; to have fun until your cheeks hurt from smiling.

‘Exordium’, popularly known as Fresher’s Day, included numerous events such as, POV(Video Editing),Persona(Character design), Writer’s Box, Bloom (Flower arrangement),Chef De Agnes(Cooking without fire),Fragnestine(an inventor’s investment),Actomania (Acting Competition), Beauty on the beat (Dance) , Miss Fresher , Agnes_ The Voice (Singing), Roadies, Conspiracy theory (public speaking).

The programme started with an   inaugural ceremony hosted by the College Cabinet, followed by the competitions and cleared with the valedictory ceremony held by the student council. SrNorineDSouza,the Principal felicitated the winners of various competitionsand commended students for their enthusiasm and zest. She also urged the students to build fine character that will assist them reach pinnacle of success.

Vice Principal SrJannetSequeira, Mrs Jyothi Pinto, Dept of Humanities co-ordinated the programme.TheStaff, College Cabinet and First PU Students were part for this special occasion. The event evoked an enthusiastic response from the fresher’s throughout the programme.

ಎಂ.ಐ.ಟಿ.ಕೆ ಕುಂದಾಪುರ “ಆರೋಗ್ಯಕ್ಕಾಗಿ ಯೋಗ”

ಕುಂದಾಪುರದ ಎಂ.ಐ.ಟಿ.ಕೆ ಮೂಡ್ಲಕಟ್ಟೆಯ ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗವು ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಯೋಗಾಭ್ಯಾಸವನ್ನು ಆಯೋಜಿಸಿತ್ತು. ಶ್ರೀ ಗೋಪಾಲಕೃಷ್ಣ ದೀಕ್ಷಿತ್ ಮತ್ತು ಶ್ರೀಮತಿ. ಪ್ರಿಯಾಂಕಾ ದೀಕ್ಷಿತ್, ಬ್ರಹ್ಮಾವರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ಸೂರ್ಯನಮಸ್ಕಾರ, ವಜ್ರಾಸನ, ತಾಡಾಸನ, ತ್ರಿಕೋನಾಸನ, ಭುಜಂಗಾಸನ, ಧನುರಾಸನ ಮುಂತಾದ ಯೋಗಾಸನಗಳನ್ನು, ಧ್ಯಾನ ಮತ್ತು ಪ್ರಾಣಾಯಾಮವನ್ನು ಕಲಿತರು. ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ಅವರು ಯೋಗದ ಮಹತ್ವ ಮತ್ತು ಶಕ್ತಿಯನ್ನು ವಿವರಿಸಿದರು ಮತ್ತು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಿಗುವ ಖಚಿತವಾದ ಪ್ರಯೋಜನಗಳನ್ನು ತಿಳಿಸಿದರು. ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆಯವರು ಸತತ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ದಕ್ಷತೆ ಹೆಚ್ಚುತ್ತದೆ ಎಂದು ಹೇಳಿರಲದೇ ಈ ಕಾರ್ಯಕ್ರಮವನ್ನು ಸೈಂಟಿಫಿಕ್ ಫೌಂಡೇಶನ್ ಆಫ್ ಹೆಲ್ತ್ ಕೋರ್ಸ್ ಅಡಿಯಲ್ಲಿ ಆಯೋಜಿಸಿದಕ್ಕಾಗಿ ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಬಿಎಸ್‌ಎಚ್ ವಿಭಾಗದ ಎಚ್‌ಒಡಿ ಪ್ರೊ.ದೀಪಕ್ ಶೆಟ್ಟಿ ಉಪಸ್ಥಿತರಿದ್ದರು. ಡಾ.ನಿಖಿಲಾ ಪೈ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿದ್ಯಾರ್ಥಿ ಸ್ನೇಹ ಗೌಡ ವಂದಿಸಿದರು.