ಬೆಂಗಳೂರು: ಕಂಟೈನರ್ವೊಂದು ರಸ್ತೆ ತಿರುವಿನಲ್ಲಿ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಭಾರೀ ಗಾತ್ರದ ಯಂತ್ರಗಳನ್ನು ತುಂಬಿಕೊಂಡು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಹಾರೋಹಳ್ಳಿ-ಜಿಗಣಿ ರಸ್ತೆಯಲ್ಲಿ ಕಂಟೈನರ್ ಬರುತ್ತಿದ್ದಾಗ ಉರುಗನದೊಡ್ಡಿ ಸಮೀಪ ರಸ್ತೆ ತಿರುವಿನಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಅವರುಗಳನ್ನು ಚಿಕಿತ್ಸೆಗಾಗಿ ಆನೇಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಜಿಗಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ […]
ಕುಂದಾಪುರ: ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 23.10.2025 ರಂದು ತಂಬಾಕು ಮುಕ್ತ ಶಾಲೆ “ತಂಬಾಕು ಪೋಸ್ಟರ್ ತಯಾರಿಕೆ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಅವರ ನೇತೃತ್ವದಲ್ಲಿ ಮತ್ತು ಸಹಾಯಕ ಶಿಕ್ಷಕಿ ಶ್ರೀಮತಿ ಪವಿತ್ರಾ ಅವರ ಮಾರ್ಗದರ್ಶನದಲ್ಲಿ, 5, 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳು ತಂಬಾಕಿನ ಹಾನಿಕಾರಕ ಪರಿಣಾಮಗಳ ಜಾಗೃತಿ ಕುರಿತು ಪೋಸ್ಟರ್ಗಳನ್ನು ಸಿದ್ಧಪಡಿಸಿದರು. ಶಾಲೆಯಲ್ಲಿ ಆರೋಗ್ಯಕರ ವಾತಾವರಣವನ್ನು ಬೆಳೆಸುವುದು. ಪೋಸ್ಟರ್ಗಳು ಮತ್ತು ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಎಲ್ಲಾ ತರಗತಿಗಳಿಗೆ ಭೇಟಿ […]
ಮಂಗಳೂರು – ಅಕ್ಟೋಬರ್ 24, 2025 ರಂದು ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಕ್ಲಾಸಿಕ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಬಾರ್ಕೂರಿನ ರೋಶನ್ ಲೋಬೊ ತಮ್ಮ ಅದ್ಭುತ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ. ತೊಕ್ಕೊಟ್ಟುವಿನ ಉಳ್ಳಾಲಬೈಲ್ನ ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪವರ್ಲಿಫ್ಟಿಂಗ್ನ ಅತ್ಯಂತ ಬೇಡಿಕೆಯ ವಿಭಾಗಗಳಲ್ಲಿ ಒಂದಾದ ಉನ್ನತ ಗೌರವಗಳಿಗಾಗಿ ರಾಜ್ಯಾದ್ಯಂತದ ಸ್ಪರ್ಧಿಗಳು ಸ್ಪರ್ಧಿಸಿದರು.ಲೋಬೊ ಅವರ ಇತ್ತೀಚಿನ ಸಾಧನೆಯು 2025 ರಲ್ಲಿ ಮಾತ್ರ ಅವರ ಮೂರನೇ ರಾಜ್ಯ ಮಟ್ಟದ ಪದಕವಾಗಿದೆ, ಇದು […]
ಕುಂದಾಪುರ; ಇತ್ತೀಚೆಗೆ ಎಂ ಐ ಟಿ ಕುಂದಾಪುರದಲ್ಲಿ ಎಂ ಪಿ ಎಲ್ 2025( ಎಂ ಐ ಟಿ ಕೆ ಪ್ರೀಮಿಯರ್ ಲೀಗ್ ) ಆಯೋಜಿಸಲಾಗಿತ್ತು. ಇದರಲ್ಲಿ 8 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯ ದಲ್ಲಿ ಹಾವ್ಕ್ ಐಸ್ ತಂಡವು ಎಂಬಿಎ ಡೆಮನ್ಸ್ ತಂಡವನ್ನು ಸೋಲಿಸಿ ವಿಜೇತರಾದರು. ಹುಡುಗಿಯರ ಆರು ತಂಡಗಳಿದ್ದು, ಫೀನಿಕ್ಸ್ ತಂಡ ವಿಜೇತರು ಮತ್ತು ಹಾಕ್ ಐಸ್ ರನ್ನರ್ಸ್ ಆಗಿ ಹೊರಹೊಮ್ಮಿದರು. ಫೈನಲ್ಸ್ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ವಿಕಾಸ್ ಬಿ ಪೂಜಾರಿ, ಬೆಸ್ಟ್ ಬೌಲರ್ […]
ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಒಟ್ಟಿಗೆ ಸ್ನಾನ ಮಾಡುವ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿ ಇಬ್ಬರು ಸಹೋದರಿಯರು ಮೃತಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಗುಲ್ಫಾಮ್ (23), ಸಿಮ್ರಾನ್ ತಾಜ್(20) ಎಂದು ಗುರುತಿಸಲಾಗಿದೆ. ಗುಲ್ಬಾಮ್, ಸಿಮ್ರಾನ್ ತಾಜ್ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದು, ಈ ಸಂದರ್ಭ ಗ್ಯಾಸ್ ಗೀಸರ್ ಸೋರಿಕೆಯಾಗಿ ಅರೆಪ್ರಜ್ಞಾವಸ್ಥೆಗೆ ತಲುಪಿದ್ದರು. ಇತ್ತ ಬಹಳ ಸಮಯವಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ತಂದೆ ಅಲ್ತಾಫ್ ಬಾಗಿಲು ಬಡಿದಿದ್ದಾರೆ. ನಂತರ ಬಾಗಿಲು ಒಡೆದು ನೋಡಿದಾಗ ಗ್ಯಾಸ್ ಗೀಸರ್ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ ಎಂದು […]
ಶ್ರೀನಿವಾಸಪುರ: ಕೋಲಾರದಿಂದ ಬರುವ ರಾಷ್ಟ್ರೀಯ ಹೆದ್ದಾರಿ, ಆಂಧ್ರಪ್ರದೇಶದ ಪುಂಗನೂರು ಮತ್ತು ಮದನಪಲ್ಲಿ ಕಡೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಾದ ಶ್ರೀನಿವಾಸಪುರ ತಾಲೂಕಿನ ರಸ್ತೆಗಳು ಗುಂಡಿಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿವೆ. ಎರಡು ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು — “ಇದೇ ರಸ್ತೆನಾ ಅಥವಾ ಗುಂಡಿಗಳ ಮೇಳನಾ?” ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.ನಗರಾಭಿವೃದ್ಧಿ ಇಲಾಖೆ ಮತ್ತು ಪWಆ ಅಧಿಕಾರಿಗಳ ನಿರ್ಲಕ್ಷ್ಯರಸ್ತೆಗಳ ದುಸ್ಥಿತಿ ಬಗ್ಗೆ ಹಲವರಿಂದ ಮರುವಿಮರ್ಶೆ ಆಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕ್ರಮ ಕೈಗೊಳ್ಳುವಲ್ಲಿ […]
ಶ್ರೀನಿವಾಸಪುರ : ಈ ಹಿಂದೆ ಎಂದು ಕೇಳದ ರೀತಿಯಲ್ಲಿ ಪಟ್ಟಣದಲ್ಲಿ ಶಾಂತಿ ,ನೆಮ್ಮದಿ ನೆಲಸಲು ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸಬೇಕೆಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮನವಿ ಮಾಡಿದರು.ಪಟ್ಟಣ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಗುರುವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಲಕ್ಷ ದೀಪೋತ್ಸವ ಸಮಿತಿ ಹಾಗೂ ಭಕ್ತಮಂಡಲಿ ವತಿಯಿಂದ 25 , ಶನಿವಾರ ರಂದು ಹಮ್ಮಿಕೊಂಡಿರುವ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದರು. ಅಡ್ಡಗಲ್ ಕ್ಷೇತ್ರದ […]
ಬೈಂದೂರು; ಕರ್ನಾಟಕ ಪ್ರಾಂತ್ಯದ ಜೆಜ್ವಿತ್ ಸಭಾದಿಂದ ಯಾಜಕ ತರಬೇತಿಯ ಬಳಿಕ ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಉಪಯಾಜಕರಾಗಿ ಸೇವೆ ಸಲ್ಲಿಸಿದ್ದ ವಂ। ಪೃಥ್ವಿ ರೊಡ್ರಿಗಸ್ ಅವರಿಗೆ ಇತ್ತೀಚಿಗೆ ಮಂಗಳೂರಿನಲ್ಲಿ ಗುರು ದೀಕ್ಷೆ ಲಭಿಸಿತ್ತು. ಅವರು ದೀಕ್ಷೆ ಬಳಿಕ ಬೈಂದೂರು ಚರ್ಚಿಗೆ ಆಗಮಿಸಿ ಪ್ರಥಮ ಬಲಿದಾನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಬೈಂಬೈಂದೂರಿನ ಹೋಲಿಕ್ರಾಸ್ ಚರ್ಚಿನ ಕ್ರೈಸ್ತ ಬಾಂಧವರ ಪರವಾಗಿ ಚರ್ಚಿನ ನ ಧರ್ಮಗುರು ವಂ।ವಿನ್ಸೆಂಟ್ ಕುವೆಲ್ಲೊ ಅವರನ್ನು ಸನ್ಮಾಸಿದರು. ವಂ। ಪೃಥ್ವಿ ರೊಡ್ರಿಗಸ್ ರವರು ಮುಂದಿನ ಎಪ್ರಿಲ್ ತಿಂಗಳ ತನಕ ಬೈಂದೂರಿನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಲಿದ್ದಾರೆ.
Catholic Sabha Udupi Pradesh distributes Scholarship for disabled students ಉಡುಪಿ, ಅಕ್ಟೋಬರ್ 22: ದಾನಿಗಳು ನಿರ್ಗತಿಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವಕಾಶವನ್ನು ಒದಗಿಸಿದಾಗ, ನೀವು ಪಾರದರ್ಶಕ, ಪರಿಣಾಮಕಾರಿ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಉನ್ನತ ಅಧ್ಯಯನವನ್ನು ಸ್ಥಾಪಿಸುವ ಮೂಲಕ ಪ್ರತಿಕ್ರಿಯಿಸಬಹುದು. ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶದ ನೇತೃತ್ವದಲ್ಲಿ ಚಿಂತನಶೀಲ ವಿಧಾನ, ವಿದ್ಯಾರ್ಥಿಗಳು ತಮ್ಮ ಬಲವಾದ ವೃತ್ತಿಜೀವನವನ್ನು ನಿರ್ಮಿಸಲು ಬಳಸಿಕೊಳ್ಳಬೇಕು ಎಂದು ಉಡುಪಿ ಡಯಾಸಿಸ್ನ ವಿಕಾರ್ ಜನರಲ್ ಮತ್ತು ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ […]

