ಕೋಲಾರ,ಜೂ.3: ಟೊಮೇಟೊ, ಮಾವು ಬೆಳೆಗಾರರ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸುವ ಜೊತೆಗೆ ಪಿ.ನಂಬರ್ ದುರಸ್ಥಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಬೇಕೆಂದು ರೈತಸಂಘದಿಂದ ಉಪವಿಭಾಗಾಧಿಕಾರಿಗಳಾದ ಡಾ.ಮೈತ್ರಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಜಿಲ್ಲೆಯ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಕೋಮಾ ಸ್ಥಿತಿಯಲ್ಲಿರುವ ರೋಗಿಯಂತೆ ಕೋವಿದ್ 19 ರೋಗಾಣುವಿನ ಭಯಕ್ಕೆ ನಾಪತ್ತೆಯಾಗಿದ್ದಾರೆಂದು ರೈತಸಂಘದ […]
ಬೆಂಗಳೂರು, ಜೂನ್ 03: ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕ್ಷಮೆ ಕೇಳುವುದಿಲ್ಲವೆಂದ ಉದ್ದಟತನ ಮೆರೆದಿದ್ದ ನಟ ಕಮಲ್ ಹಸನ್ಗೆ ಹೈಕೋರ್ಟ್ ಭಾರೀ ಚಾಟಿ ಬೀಸಿದೆ.ಮೊದಲು ಕನ್ನಡಿಗರ ಕ್ಷಮೆ ಕೇಳಿ. ಆಮೇಲೆ ಅರ್ಜಿ ವಿಚಾರಣೆ ಮಾಡುವುದಾಗಿ ಕರ್ನಾಟಕ ಹೈಕೋರ್ಟ್ ಇಂದು ಸ್ಪಷ್ಟಪಡಿಸಿದೆ.ಥಗ್ ಲೈಫ್ ಸಿನಿಮಾ ಬಿಡುಗಡೆ ನಿರ್ಬಂಧವನ್ನು ತೆರವು ಮಾಡುವಂತೆ ಕಮಲ್ ಹಾಸನ್ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮೊದಲು ಕನ್ನಡಿಗರ ಕ್ಷಮ ಕೇಳಿ, ನಂತರವೇ ಅರ್ಜಿವಿಚಾರಣೆ ನಡೆಸುತ್ತೇವೆ ಎಂದು ಹೈಕೋರ್ಟ್ […]
ಕೋಟ ಜೂ. 2, : ಕೋಟ ಸಂತ ಜೋಸೆಫ್ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 1 ರಂದು ನೆಡೆಯಿತು. ಚರ್ಚಿನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಶಿಕ್ಷಕರು, ಮಕ್ಕಳು ಹೂ ಗೀಡಗಳಿಗೆ ನೀರು ಎರೆಯುವ ಮೂಲಕ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು, ಪವಿತ್ರ ಬಲಿದಾನದ ಪ್ರಾರ್ಥನ ವಿಧಿಗಳನ್ನು ಮಕ್ಕಳು ನೆಡೆಸಿಕೊಟ್ಟರು.
ಕುಂದಾಪುರ, ಜೂ.1; ಮೂಲತಹ ಕುಂದಾಪುರ ಬಸ್ರೂರಿನವರಾದ ಬಿಶಪ್ ಅ।ವಂ|ಡಾ|ಜೋನ್ ಕರ್ವಾಲ್ಲೊ ಇವರು ರಾಜಸ್ಥಾನದ ಆಜ್ಮೀರ್ ಧರ್ಮಪ್ರಾಂತ್ಯದಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಅಯ್ಕೆಯಾದ ಇವರು, ಜೂ.1 ರಂದು ಕೆನರಾದಲ್ಲೆ ಅತೀ ಪ್ರಾಚೀನ ಎರಡನೇ ಇಗರ್ಜಿಯಾದ ರೋಜರಿ ಮಾತಾ ಇಗರ್ಜಿಗೆ ಭೇಟಿ ಕೊಟ್ಟು ಪವಿತ್ರ ಬಲಿದಾನವನ್ನು ಅರ್ಪಿಸಿದರು. ಬಲಿದಾನ ಅರ್ಪಿಸಿ ಅವರು ‘ನಾವು ಮಾನವ ರಚಿಸಿದ ಕಂಪ್ಯೂಟರ್, ಮೊಬಾಯ್ಲ್ ಬಳಸುತ್ತೆವೆ, ಅದು ನಾವು ಆಜ್ಞೆ ಕೊಟ್ಟಂತೆ ಕಾರ್ಯ ನಿರ್ವಹಿಸುತ್ತವೆ, ಅವಗಳು ನಶ್ವರವಾದುವು, ಅದು ಕೆಡುತ್ತವೆ, ನಾಶವಾಗುತ್ತೇವೆ, ಆದರೆ ನಮಗೆ ಜನ್ಮ […]
ದೋರ್ನಹಳ್ಳಿ, ಮೈಸೂರು: ದೋರ್ನಹಳ್ಳಿಯಲ್ಲಿರುವ ಜಾಗತಿಕವಾಗಿ ಪ್ರಸಿದ್ಧವಾದ ಸಂತ ಅಂತೋನಿಯ ಬೆಸಿಲಿಕಾ ಜೂನ್ 13, 2025 ರ ಶುಕ್ರವಾರದಂದು ಅದ್ಭುತ ಪವಾಡ ಪುರುಷ ಸಂತ ಅಂತೋನಿಯ ವಾರ್ಷಿಕ ಹಬ್ಬವನ್ನು ಅಪಾರ ಭಕ್ತಿ ಮತ್ತು ಆಧ್ಯಾತ್ಮಿಕ ವೈಭವದಿಂದ ಆಚರಿಸಲು ಸಿದ್ಧತೆ ನಡೆಸುತ್ತಿದೆ. ಜೂನ್ 4, 2025 ರ ಬುಧವಾರ ಸಂಜೆ 5:30 ಕ್ಕೆ ಧ್ವಜಾರೋಹಣ ಸಮಾರಂಭದೊಂದಿಗೆ ಆಚರಣೆಗಳು ಪ್ರಾರಂಭವಾಗಲಿದ್ದು, ಮೈಸೂರು ಡಯಾಸಿಸ್ನ ಆರ್ಚ್ಬಿಷಪ್ ಎಮೆರಿಟಸ್ ಮತ್ತು ಅಪೋಸ್ಟೋಲಿಕ್ ಆಡಳಿತಾಧಿಕಾರಿ ಅತಿ ವಂದನೀಯ ಡಾ. ಬರ್ನಾರ್ಡ್ ಮೊರಾಸ್ ನೇತೃತ್ವದಲ್ಲಿ ನಡೆಯಲಿದೆ. ನೊವೆನಾ […]
ಹುಬ್ಬಳ್ಳಿ (ಅಣ್ಣಿಗೇರಿ) ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ್ ಮಾರ್ಗ ಮಧ್ಯ ಬರುವ ಭದ್ರಾಪುರ ಬಸ್ ನಿಲ್ದಾಣದ ಮುಂಭಾಗ ಗದಗ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಕ್ವಾಲಿಸ್ ವಾಹನ ನಿಂತಿದ್ದ ಲಾರಿಯ ಹಿಂಬದಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮೂರು ಜನರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಇಂದು ಬೆಳ್ಳಂ ಬೆಳಗ್ಗೆ ನಡೆದಿದೆ. ಮೃತರ ಸಂಪೂರ್ಣ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.ಘಟನೆ ಕುರಿತು ಅಣ್ಣಿಗೇರಿ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
ಬೆಂಗಳೂರಿನ ‘ಮಯೂರ ಗ್ರೂಪ್’ನ ಸಿ. ಎಂ. ಡಿ., ಚೇಯರ್ಮೆನ್, ಬೇಕರಿ, ಹೋಟೆಲ್ ಉದ್ಯಮ ಹಾಗೂ ಗುಣಮಟ್ಟದ ಆಹಾರ ಉತ್ಪನ್ನದಲ್ಲಿ ಹೆಸರುವಾಸಿಯಾಗಿರುವ ಗೋಪಾಡಿ ಶ್ರೀನಿವಾಸ ರಾವ್ ಅವರಿಗೆ ಕರ್ನಾಟಕ ಹೋಟೆಲ್ ಅಸೋಸಿಯೇಶನ್ (ರಿ.) ವತಿಯಿಂದ ‘ಆತಿಥ್ಯ ರತ್ನ’ ಪ್ರಶಸ್ತಿ ಘೋಷಿಸಲಾಗಿದೆ. ಮೇ 29 ರಂದು ಬೆಂಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.ಗೋಪಾಡಿ ಶ್ರೀನಿವಾಸ ರಾವ್ ಅವರು ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನೀಡಿದ ಸೇವೆಯನ್ನು ಗುರುತಿಸಲಾಗಿದ್ದು, ಈ ಅನಘ್ಯ ಕಾಣಿಕೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಗೋಪಾಡಿ ಶ್ರೀನಿವಾಸ ರಾವ್ […]
ಬೆಂಗಳೂರು, ಮೇ 25: ಕಾರ್ಮೆಲೈಟ್ ಎನ್ಜಿಒ, ಧ್ಯಾನ ಜ್ಯೋತಿ ಟ್ರಸ್ಟ್, ಮೂವತ್ತು ದೃಷ್ಟಿಹೀನ ಪೋಷಕರ ಮಕ್ಕಳ ಜೀವನದಲ್ಲಿ ಸಣ್ಣ ಆದರೆ ಪರಿಗಣನಾಶೀಲ ಪರಿಣಾಮ ಬೀರಲು ಮುಂದಾಯಿತು, ಇದು ಪ್ರೀತಿ ಮತ್ತು ದಾನದ ಉದಾತ್ತ ಉದ್ದೇಶವನ್ನು ಚಿತ್ರಿಸುತ್ತದೆ. ‘ಕಾರ್ಮೆಲ್ ವಿಷನ್ ಫಾರ್ ದಿ ಫ್ಯೂಚರ್’ ಬ್ಯಾನರ್ ಅಡಿಯಲ್ಲಿ, ಮೇ 25, 2025 ರಂದು ಬೆಂಗಳೂರಿನ ಮಾರಿಯಾ ನಿಕೇತನ್ ಹೈಸ್ಕೂಲ್ ಸಭಾಂಗಣದಲ್ಲಿ 30 ಮಕ್ಕಳಿಗೆ ಸುಮಾರು 6 ಲಕ್ಷ ರೂ.ಗಳ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಕಾರ್ಯಕ್ರಮವು ಪ್ರಾರ್ಥನೆ ಸೇವೆಯೊಂದಿಗೆ ಪ್ರಾರಂಭವಾಯಿತು. ಸಂಯೋಜಕರಾದ […]
ಬೆಂಗಳೂರು, ಮೇ.27; ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ದಾಖಲೆಯ ಮಳೆಯಾಗಿದೆ. ನೂರು ವರ್ಷದಲ್ಲೇ ಬೆಂಗಳೂರಲ್ಲಿ ಈ ಬಾರಿ ಬಿದ್ದು,ಮಳೆ ದಾಖಲೆ ಸೃಷ್ಟಿಸಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮೇ ತಿಂಗಳಲ್ಲೇ 307.9 ಮಿಮೀ ಮಳೆ ದಾಖಲೆಯಾಗಿದೆ. 2023 ಮೇ ತಿಂಗಳಲ್ಲಿ 305.4 ಮಿಮೀ ಮಳೆ ದಾಖಲಾಗಿತ್ತು. ಇದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಈ ಬಾರಿಯ ಮಳೆ ಮುರಿದಿದೆ ಎಂದು ಅವರು ಹೇಳಿದ್ದಾರೆ. ವಾಡಿಕೆಯಂತೆ ಜೂನ್ 5ಕ್ಕೆ ಮುಂಗಾರು […]

