

ಕುಂದಾಪುರ ; ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕದಿಂದ ಕುಂದಾಪುರದ ಸುತ್ತ ಮುತ್ತ ಇರುವ ಕುಂದಾಪುರ, ಹಂಗಳೂರು, ಅಮಾಸೆಬೈಲು, ಶಂಕರನಾರಾಯಣ, ಕೇದುರು, ಬೈಂದೂರು ಆರು ಹಿಂದುಳಿದ ವರ್ಗದ ಹುಡುಗಿಯರ ವಸತಿ ಗೃಹದ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆ, ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು. ಸಭಾಪತಿ ಎಸ್ ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಆಡಳಿತ ಮಂಡಳಿಯ ಸೀತಾರಾಮ ಶೆಟ್ಟಿ , ತಾಲೂಕು ಆರೋಗ್ಯಾಧಿಕಾರಿ ಪ್ರೇಮಾನಂದ ಕೆ ಹಾಗೂ ವಸತಿ ಗೃಹದ ಮೇಲ್ವಿಚಾರಕಿ ಆಶಾದೇವಿ ಉಪಸ್ಥಿತರಿದ್ದರು.

