ಶ್ರೀನಿವಾಸಪುರ : ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಾಗು ಇಂದಿನ ಕಾಂಗ್ರೆಸ್ ಸರ್ಕಾರವು ವಿಫಲವಾಗಿವೆ ಎಂದು ಕೆಪಿಆರ್‍ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಆರೋಪಿಸಿದರು .ಪಟ್ಟಣದ ಶಂಕರಮಠದ ಬಳಿಯ ಕೆಪಿಆರ್‍ಎಸ್ ಕಚೇರಿಯಲ್ಲಿ ಶುಕ್ರವಾರ ಕೆಪಿಆರ್‍ಎಸ್ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಯಾವ ರೈತರ ಭೂಮಿಯನ್ನು ಕಿತ್ತುಕೊಂಡಿಲ್ಲ ಎಂದು ಸುಳ್ಳು ವರಧಿಯನ್ನು ನೀಡಿರುವ ಸಚಿವರ ಬಗ್ಗೆ ಅಸಮದಾನವನ್ನು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ಪದೇ ಪದೇ ಯಾವದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಹೇಳುತ್ತಿದ್ದರು , […]

Read More

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 14 ನೇ ವಾರ್ಷಿಕೋತ್ಸವ “ಸೃಷ್ಟಿನೋವಾ – ವಿಜ್ಞಾನ ಮತ್ತು ಪ್ರಕೃತಿಯ ಅನುಬಂಧ “ ಎಂಬ ಸಂದೇಶದೊಂದಿಗೆ 12ನೇ ಡಿಸೆಂಬರ್ 2025 ರಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀ ರಾಜು ಕೆ. ಅಪರ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಅವರು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮಾಡಿದ ಅಸಾಧಾರಣ ಸಾಧನೆಯನ್ನು ಶ್ಲಾಘಿಸಿದರು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸತತ ಶ್ರಮಿಸುತ್ತಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ,  ಮಗುವಿನ ವ್ಯಕ್ತಿತ್ವ […]

Read More

ಶಂಕರನಾರಾಯಣದ ಮದರ್ ತೆರೆಸಾ ಪಿ.ಯು. ಕಾಲೇಜಿನಲ್ಲಿ “ಅಭ್ಯುದಯ – 2025” ವಾರ್ಷಿಕ ಮಹೋತ್ಸವವು ನವೆಂಬರ್ 22, 2025ರಂದು ಸಂತೋಷ ಮತ್ತು ಸಡಗರದಿಂದ ನಡೆಯಿತು. ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು. ಅತಿಥಿಗಳನ್ನು ಚೆಂಡೆಯ ನಾದ ಮತ್ತು ಮಾಲಾರ್ಪಣೆ ಮೂಲಕ ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು. ಸಂಸ್ಥೆಯ ಸಂಸ್ಥಾಪಕರಾದ ಕುಮಾರಿ ಶಮಿತಾ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೈಸನ್ ಲೂಯಿಸ್, […]

Read More

ಶ್ರೀನಿವಾಸಪುರ: ತಾಲ್ಲೂಕಿನ ಪ್ರಮುಖ ಹೆದ್ದಾರಿಗಳಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ಜನರ ಜೀವಕ್ಕೆ ಅಪಾಯ ಉಂಟಾಗುತ್ತಿರುವುದಾಗಿ ಕರ್ನಾಟಕ ಜನಪರ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣಗಳ ಬಗ್ಗೆ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವೇದಿಕೆ ದೂರಿತಾಗಿದೆ. ಇಂದು ಕರ್ತವ್ಯಕ್ಕೆ ತಕ್ಕ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ತಕ್ಷಣ ಸುರುಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗಡುವು ನೀಡಲಾಯಿತು.  ವಿಶೇಷವಾಗಿ, ಕಡಪ ಬೆಂಗಳೂರು ಹೆದ್ದಾರಿ ಅಪಘಾತಗಳ ಹಾಟ್‌ಸ್ಪಾಟ್ ಆಗಿ ಪರಿಣಮಿಸಿದ್ದು, ರಸ್ತೆ ಅಪಾಯ ಸೂಚಕ […]

Read More

ಕೋಲಾರ: ಡಿಸೆಂಬರ್ 6ರ ಶನಿವಾರ ಕುಂದಾಪುರದ ಶೆರೋನ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆ ಕುಂದಾಪುರ ಭಂಡಾರ್ಕಾರ್ ಕಾಲೇಜ್‍ನ 1984-85ನೇ ಸಾಲಿನ ಬಿ.ಕಾಂ. ಪದವೀಧರ ಸ್ನೇಹಿತರ 40ನೇ ವರ್ಷದ ಸ್ನೇಹ ಮಿಲನದ ಅಂಗವಾಗಿ ಪತ್ರಕರ್ತ-ಲೇಖಕ ವಿಶ್ವ ಕುಂದಾಪುರ ಅವರ ಸಾಹಿತ್ಯ ಕೃಷಿ ಪಕ್ಷಿನೋಟ’ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿಶ್ವ ಅವರ ಪ್ರಕಟಗೊಂಡಿರುವ ಎಲ್ಲ 20 ಸ್ವತಂತ್ರ, ಅನುವಾದ ಮತ್ತು ಸಂಪಾದಿತ ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್ ಕೃತಿಗಳನ್ನು ಪ್ರದರ್ಶಿಸಲಾಯಿತು. ತಮ್ಮ ಕಾಲೇಜ್‍ನಲ್ಲಿ ಅಧ್ಯಯನ ಮಾಡಿದ್ದ ವಿದ್ಯಾರ್ಥಿ ಇಷ್ಟೊಂದು ಕೃತಿ […]

Read More

St Aloysius Gonzaga School Felicitates Yuvaraj D. Kunder for Outstanding National-Level Achievements ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 9 ಡಿಸೆಂಬರ್ 2025 ರಂದು SGFI ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿನ ಅದ್ಭುತ ಸಾಧನೆಗಾಗಿ 8ನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರನ್ನು ಸನ್ಮಾನಿಸಲಾಯಿತು.ಯುವರಾಜ್ ಅವರನ್ನು ದೈಹಿಕ ಶಿಕ್ಷಕರ ಜೊತೆಗೂಡಿ ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ’ ಅಲ್ಲ್ಮೇಡ ಅವರು […]

Read More

ಬೆಂಗಳೂರು; ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯವು ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ (CRC)ವನ್ನು ಉದ್ಘಾಟಿಸಿದೆ. ಕ್ರಿಶ್ಚಿಯನ್ ಮಿಷನರಿಗಳು, ಪಂಡಿತರು ಮತ್ತು ಸಂಸ್ಥೆಗಳು ಕರ್ನಾಟಕ ಮತ್ತು ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಬೌದ್ಧಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ವಿಮರ್ಶಾತ್ಮಕವಾಗಿ ಅಧ್ಯಯನಿಸುವುದು ಈ ಕೇಂದ್ರದ ಮುಖ್ಯ ಉದ್ದೇಶ. ಇಂದಿನ ಕಾಲದಲ್ಲಿ ಇತಿಹಾಸದ ದಾಖಲೆಗಳು ಅಳಿವಿನ ಅಂಚಿನಲ್ಲಿರುವ ಸಂದರ್ಭದಲ್ಲಿ, ಈ ಕೇಂದ್ರದ ಪ್ರಾರಂಭವು ಮಹತ್ವದ ಹೆಜ್ಜೆಯಾಗಿ ಕಂಡುಬಂದಿದೆ. ಉದ್ಘಾಟನಾ ಸಮಾರಂಭದಲ್ಲಿ ಅರ್ಚ್‌ಬಿಷಪ್ ಪೀಟರ್ ಮಚಾದೊ, ಪ್ರೊ. ಎಸ್. […]

Read More

ಬೆಂಗಳೂರು ; ಬಾತ್ ರೂಮ್‌ನಲ್ಲಿ ಗೀಸರ್ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥಗೊಂಡಿದ್ದ ತಾಯಿ ಮತ್ತು ಮಗು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೋವಿಂದರಾಜ ನಗರ ವ್ಯಾಪ್ತಿಯ ಪಂಚಶೀಲ ನಗರದಲ್ಲಿ ಸೋಮವಾರ ಈ ಘಟನೆ ನಡೆದಿದೆ. ತಾಯಿ ಚಾಂದಿನಿ (26) ಹಾಗೂ ಮಗು ಯುವಿ (4) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ‌ ಮೃತಪಟ್ಟಿದ್ದಾರೆ. ತಾಯಿ ಮತ್ತು ಮಗು ನಿನ್ನೆ ಮಧ್ಯಾಹ್ನ ಸ್ನಾನಕ್ಕೆಂದು ಹೋದಾಗ ಗೀಸರ್‌ನಿಂದ ಸೋರಿಕೆಯಾಗಿದ್ದ ಗ್ಯಾಸ್ ಸೇವಿಸಿ ಅಸ್ವಸ್ಥಗೊಂಡಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ತಾಯಿ ಮಗುವನ್ನು ಅಕ್ಕಪಕ್ಕದ ಮನೆಯವರು ವಿಕ್ಟೋರಿಯಾ ಆಸ್ಪತ್ರೆಗೆ […]

Read More

ಪಡುಕೋಣೆ; ದಿನಾಂಕ 7.12.2025 ರಂದು ಸಂತ ಅಂತೋನಿ ಚರ್ಚಿನಲ್ಲಿ ಸಮುದಾಯ ದಿನಾಚರಣೆ ಹಾಗೂ ಅಮಲೋದ್ಭವಿ ಮಾತೆಯ ಹಬ್ಬದ ದಿನ ವನ್ನು ತುಂಬಾ ಆಚರಿಸಲಾಯಿತು. ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊರವರು ಹಾಗೂ ಅತಿಥಿಗಳಾಗಿ ಆಗಮಿಸಿದ ಬೈಂದೂರು ಚರ್ಚಿನ ಸಹಾಯಕ ಗುರುಗಳಾದ ಜೆಜ್ವಿತ್ ವಂದನೀಯ ಫಾ! ಪ್ರಥ್ವಿ ಮತ್ತು ಸ್ಥಳೀಯ ಕ್ರೈಸ್ತ ಭಕ್ತರ ಜೊತೆಗೂಡಿ ಅಮಲೋದ್ಭವಿ ಮಾತೆಯ ಪಲ್ಲಕ್ಕಿಯಲ್ಲಿದ್ದ ವಿಗ್ರಹದ ಮೆರವಣಿಗೆಯ ಮೂಲಕ ಚರ್ಚಿನ ಒಳಗಡೆ ಪ್ರವೇಶಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಬಲಿಪೂಜೆಯ ಕೊನೆಯ ಹಂತದಲ್ಲಿ ಭಕ್ತಾಧಿಗಳ ವಾಹನಗಳನ್ನು ಗುರುಗಳ್ಳಿಬ್ಬರು ಆಶೀರ್ವಾದಿಸಿದರು.ಅಂದು […]

Read More
1 44 45 46 47 48 293