ಕುಂದಾಪುರ, ಆ. 21: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರಿಗೆ ಇಲ್ಲಿನ ಹೋಟೆಲಿನಲ್ಲಿ ಶುಕ್ರವಾರ ಬೆಳಗ್ಗೆ ಏಕಾಏಕಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂದಿಸಿದಂತೆ ಡಾ. ಮಹೇಂದ್ರ ಕುಮಾರ್ ಶೆಟ್ಟಿಯನ್ನು ತಕ್ಷಣದಿಂದ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಹಾಗೂ ಶಿಸ್ತು ಪ್ರಾಧಿಕಾರಿ ಗುರುದತ್ ಹೆಗಡೆ ಆದೇಶಿಸಿದ್ದಾರೆ.ಇವರು ಹಿಂದೆ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾಗಿದ್ದು, ಪ್ರಸ್ತುತ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನ್ಯಪರ ಸೇವೆಯ ಮೇಲೆ […]
ಹರಿಹರದ ಆರೋಗ್ಯ ಮಾತೆಯ ಬೆಸಿಲಿಕಾ ತನ್ನ ವಾರ್ಷಿಕ ಹಬ್ಬವನ್ನು ಬಹಳ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲು ಸಜ್ಜಾಗಿದೆ. ಕರ್ನಾಟಕ, ನೆರೆಯ ರಾಜ್ಯಗಳು ಮತ್ತು ವಿವಿಧ ಭಾಷಾ ಸಮುದಾಯಗಳಿಂದ ಸಾವಿರಾರು ಯಾತ್ರಿಕರು ಭಾಗವಹಿಸುವ ನಿರೀಕ್ಷೆಯಿದೆ. ಧ್ವಜಾರೋಹಣ ಮತ್ತು ನೊವೆನಾ 9 ದಿನಗಳ ನೊವೆನಾವು ಆಗಸ್ಟ್ 30, 2026 ರ ಭಾನುವಾರ ಸಂಜೆ 5:30 ಕ್ಕೆ ಕಾರವಾರದ ಬಿಷಪ್ ಮತ್ತು ಶಿವಮೊಗ್ಗ ಡಯಾಸಿಸ್ನ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಅತಿ ವಂದನೀಯ ಡಾ. ಡುಮಿಂಗ್ ಡಯಾಸ್ ಅವರು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಲಿದೆ. ನೊವೆನಾ ದಿನಗಳು: […]
ದಿನಾಂಕ 13-08-2026 ಗುರುವಾರ ಬೆಳ್ಳಿಗ್ಗೆ 10:30 ಕ್ಕೆ ನಡೆಯಬೇಕಾದ ಗ್ರಾಮಸಭೆಯು 11:15 ಸಮಯವಾದರು ಇಲಾಖಾಧಿಕಾರಿಗಳು ಗ್ರಾಮಸಭೆಗೆ ಬಾರದೆ ಇದ್ದ ಕಾರಣ ಸಭೆಯುಮುಂದೂಡಲಾಗಿತು. ಇಂದಿನ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕೃಷ್ಣ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಮತ್ತು ಪಂಚಾಯತ್ ಆಡಳಿತಾಧಿಕಾರಿ ಶ್ರೀಮತಿ ಎಸ್.ಆರ್. ಗಿರಿಜಮ್ಮ ಹಾಗೂ ಪಿಡಿಒ ನಾಗರಾಜ್ ಎಂ.ಕೆ. ಹಾಜರಿದ್ದುಆರಂಭದಲ್ಲಿ ಪಿಡಿಓ ರವರು ಸ್ವಾಗತಿಸಿದರು. ತದನಂತರ ಗ್ರಾಮಸ್ಥರು ಹಲವು ಅದಿಕಾರಿಗಳು ಗೈರು ಹಾಜರಿಯಲ್ಲಿ ಗ್ರಾಮ ಸಭೆ ಆರಂಭಿಸುವಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ಜವಾಬ್ದಾರಿಯನ್ನು […]
ಕುಂದಾಪುರ ತುಳಸಿ ವಿದ್ಯಾ ಮಂದಿರ ಹಳ್ನಾಡಿನಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅತ್ಯಂತ ಸಂಭ್ರಮವಾಗಿ ಹಾಗೂ ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಇಂಡಿಯನ್ ಸರ್ವಿಸ್ ಅಧಿಕಾರಿ ಶ್ರೀ ಕರುಣಾಕರ ಗಾಣಿಗ ಹಾಗೂ ಶ್ರೀ ಕಾಮರಾಜ ಶೆಟ್ಟಿ ರಾಯಲ್ ವೆಂಟೇಜ್ ಹಲ್ನಾಡು ಇವರು ಉಪಸ್ಥಿತರಿದ್ದರು. ಶ್ರೀ ಕರುಣಾಕರ ಗಾಣಿಗ ಅವರು ದ್ವಜಾರೋಹಣ ನೆರವೇರಿಸಿದರು.ವಿದ್ಯಾರ್ಥಿ ನಾಯಕ ಸಾಕ್ಷರ ಆರ್ ಶೆಟ್ಟಿ ಅವರು ಶ್ರೀ ಕರುಣಾಕರ್ ಗಾಣಿಗ ಅವರನ್ನು ಧ್ವಜಾರೋಹಣ ನೆರವೇರಿಸಿ ಕೊಡುವಂತೆ ಆತ್ಮೀಯವಾಗಿ ಆಹ್ವಾನಿಸಿದರು ಈ […]
ಕುಂದಾಪುರ, ಆಗಸ್ಟ್ ೧೫: ಭಾರತದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ಕುಂದಾಪುರದ ಬೆಂಗಳೂರು ಮೋಟರ್ಸ್ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ೮.೩೦ಕ್ಕೆ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸದಸ್ಯರು, ಬೆಂಗಳೂರು ಮೋಟರ್ಸ್ ಸಿಬ್ಬಂದಿ ಹಾಗೂ ಹಿತೈಷಿಗಳು ಭಾಗವಹಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ ಸಂಸ್ಥೆಯ ಪ್ರಾಂತ್ಯ ೧, ವಲಯ ೨ರ ವಲಯಾಧ್ಯಕ್ಷ ಲಯನ್ ಮೊಹಮ್ಮದ್ ಆಶ್ರಫ್ ಅವರು ಉಪಸ್ಥಿತರಿದ್ದರು. ಅಧ್ಯಕ್ಷ ಲಯನ್ ಸುದರ್ಶನ ಶೆಟ್ಟಿ ಮಾತನಾಡಿ, […]
SJU students get hands-on exposure to building AI agents for enterprise workflows ಬೆಂಗಳೂರು, ಆ.15: ಉದ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಉದ್ದೇಶದಿಂದ ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ಸ್ಕೂಲ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ (SoIT) ವತಿಯಿಂದ ‘Automated Workflows for Enterprise AI’ ಎಂಬ ವಿಷಯದ ಕುರಿತು ಎರಡು ಗಂಟೆಗಳ ಪ್ರಾಯೋಗಿಕ ಕಾರ್ಯಾಗಾರ ನಡೆಯಿತು. ಬಾಷ್ ಗ್ಲೋಬಲ್ ಸಾಫ್ಟ್ವೇರ್ ಟೆಕ್ನಾಲಜೀಸ್ […]
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮೆಟಾಡೋರ್ ಚಾಲಕರ ಸಂಘ (ರಿ.)–INTUC ವತಿಯಿಂದ ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಾತ್ರ ಮತ್ತು ಸಂವಿಧಾನದ ಮೂಲಕ ಶೋಷಿತರಿಗೆ ನೀಡಿದ ಸ್ವಾತಂತ್ರ್ಯ ದ ಕುರಿತು ಮಾತನಾಡಿದರು. ಸಭೆಯಲ್ಲಿ INTUC ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೆಸ್ […]
ಉಡುಪಿ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಪ್ರತಿಮೆಯ ಮೆರವಣಿಗೆಯು ಗುರುವಾರ ಆದಿಉಡುಪಿಯಿಂದ ಕಲ್ಮಾಡಿ ಚರ್ಚಿನವರೆಗೆ ಅದ್ದೂರಿಯಿಂದ ನಡೆಯಿತು. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರುಗಳಾದ ವಂ|ಫ್ರಾಂಕ್ಲಿನ್ ಡಿಸೋಜಾ ವೆಲಂಕಣಿ ಮಾತೆಯ ಮೂರ್ತಿಯನ್ನು ಆಶೀರ್ವದಿಸಿ ಮೆರವಣಿಗೆಗೆ ಚಾಲನೆ ನೀಡಿದರು. ವಾರ್ಷಿಕ ಹಬ್ಬಗಳ ಸಂದರ್ಭದಲ್ಲಿ ಚರ್ಚುಗಳ ಪಾಲಕರ ಮಂಜೂಶಾ (ಮೂರ್ತಿ)ಗಳನ್ನು ಸಾರ್ವಜನಿಕವಾಗಿ ಮೆರವಣಿಗೆಯಲ್ಲಿ ಕೊಂಡೊಯ್ದು ಗೌರವ ಸೂಚಿಸುವುದು ಕ್ರೈಸ್ತ ಸಂಪ್ರದಾಯದ ಒಂದು ಭಾಗವಾಗಿದೆ. ವೆಲಂಕಣಿ ಮಾತೆ ಪವಾಡದ ಮಾತೆ […]
ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಬೆಂಗಳೂರು ಮಾಹಿತಿ ತಂತ್ರಜ್ಞಾನ ಶಾಲೆಯ ವಿದ್ಯಾರ್ಥಿ ಸಂಘಗಳಾದ ಟೆಕ್ನೋಫೈಟ್ ಮತ್ತು ಸೈಬರ್ನೆಟಿಕ್ಸ್ನ ಪದಗ್ರಹಣ ಸಮಾರಂಭ ಮಾಹಿತಿ ತಂತ್ರಜ್ಞಾನ ಶಾಲೆ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಬೆಂಗಳೂರಿನ ಟೆಕ್ನೋಫೈಟ್ ಮತ್ತು ಸೈಬರ್ನೆಟಿಕ್ಸ್ ವಿದ್ಯಾರ್ಥಿ ಸಂಘಗಳ ಪದಗ್ರಹಣ ಸಮಾರಂಭವು ನಿರೂಪಕರಾದ ಕು. ಮುಸ್ಕಾನ್ ಮತ್ತು ಕು. ಸಮಂತಾ ಅವರು ಗಣ್ಯರು, ಬೋಧಕ ವರ್ಗ, ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಆರಂಭವಾಯಿತು. ಕಾರ್ಯಕ್ರಮವು ಕು. ಡೆಲಿಶಾ, ಕು. ಕ್ರಿಸ್ಟೋಬೆಲ್ ಹಾಗೂ ಶ್ರೀ ಹ್ಯಾರಿಸನ್ ಅವರ […]

