ಕುಂದಾಪುರ ; “ಇಂದು ಈ ದೇಶದಲ್ಲಿ ಗಾಂಧಿಯವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಯ ಬದಲಿಗೆ ಸುಳ್ಳು ಮತ್ತು ಹಿಂಸೆಯ ಪ್ರತಿಪಾದನೆ ನಡೆಯುತ್ತಿದೆ. ಅವೈಜ್ಞಾನಿಕ ಜಿಎಸ್ಟಿ ಪರಿಣಾಮವಾಗಿ ಎರಡು ಲಕ್ಷ ಸಣ್ಣ ಮಧ್ಯಮ ಗಾತ್ರದ ಕೈಗಾರಿಕೆಗಳು ಮುಚ್ಚಿವೆ. ದೊಡ್ಡ ಉದ್ಯಮಿಗಳು ಮತ್ತಷ್ಟು ಬೆಳೆದಿದ್ದಾರೆ. ಎಲ್ಲಾ ತಪ್ಪುಗಳನ್ನು ಸರಿ ಎಂದು ಪ್ರತಿಪಾದನೆ ಮಾಡುವ ಚಾಳಿ ಆರಂಭಗೊಂಡಿದೆ. ಗಾಂಧಿ ತಪ್ಪು ಅವರನ್ನು ಕೊಂದವರೆ ಶ್ರೇಷ್ಠ ಎಂಬ ಪ್ರತಿಪಾದನೆ ಆರಂಭಗೊಂಡಿದೆ. ಈ ಕುರಿತು ಚಿಂತನೆ ಅಗತ್ಯ” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯೆ […]
ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕೊಸೆಸಾಂವ್ ಮಾತೆಯ ಚರ್ಚ್ ಘಟಕದ ಆಶ್ರಯದಲ್ಲಿ ಕಥೊಲಿಕ್ ಸ್ತ್ರಿ ಸಂಘಟನೆ, ಗಂಗೊಳ್ಳಿ, ಭಾರತೀಯ ಕಥೊಲಿಕ್ ಯುವ ಸಂಘಟನೆ(ICYM), ಗಂಗೊಳ್ಳಿ ಹಾಗೂ ವೈಸಿಎಸ್(YCS), ಗಂಗೊಳ್ಳಿಯ ಸಹಭಾಗಿತ್ವದಲ್ಲಿ, ಗುಜ್ಜಾಡಿ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ, ಕಳೆದ ಹಲವಾರು ವರ್ಷಗಳಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆಯುವ ಸಾರ್ವಜನಿಕ ಸ್ಥಳದ ಸ್ವಚ್ಚತಾ ಕಾರ್ಯಕ್ರಮವು ಗುಜ್ಜಾಡಿಯಲ್ಲಿ ನಡೆಯಿತು. ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ಮಾರ್ಗದರ್ಶನದೊಂದಿಗೆ, ಕಥೊಲಿಕ್ ಸಭಾ ಉಡುಪಿ ಪ್ರದೇಶ್ […]
ಕಲ್ಯಾಣಪುರ; ಮಿಲಾಗ್ರೆಸ್ ಕಾಲೇಜು ಇತ್ತೀಚೆಗೆ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಸ್ಮರಣಾರ್ಥ “ಗಾಂಧಿ ಶಾಂತಿಯ ಮೂಲಕ ಜಗತ್ತನ್ನು ಮುನ್ನಡೆಸುವುದು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವು ಶಾಂತಿ ಮತ್ತು ಏಕತೆಯನ್ನು ಹರಡಲು ಗಾಂಧೀಜಿ ಜನಪ್ರಿಯಗೊಳಿಸಿದ “ರಘುಪತಿ ರಾಘವ ರಾಜಾ ರಾಮ್” ಎಂಬ ಭಕ್ತಿಗೀತೆಯೊಂದಿಗೆ ಪ್ರಾರಂಭವಾಯಿತು. ರಾಷ್ಟ್ರಪಿತರಾಗಿ ಅವರ ಪರಂಪರೆಯನ್ನು ಗೌರವಿಸುವ ಮೂಲಕ ಗಣ್ಯರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. […]
ಸೋಮವಾರ, 2025, ಸೆಪ್ಟೆಂಬರ್ 29ರಂದು, ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ, ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಎಐಎಂಐಟಿ ಸೆಂಟರ್, ಬೀರಿ, ಮಂಗಳೂರಿನಲ್ಲಿ ಒಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ನಿರ್ದೇಶಕ ಡಾ. (ಫಾ.) ಕಿರಣ್ ಕೋತ್ ಎಸ್.ಜೆ. ಅವರು ಡಾ. (ಫಾ.) ಮನೋಜ್, ಡೀನ್ ಡಾ. ರಜನಿ ಸುರೇಶ್, ವಿಭಾಗಾಧ್ಯಕ್ಷೆ ಡಾ. ಬೀನಾ ಡಯಾಸ್, ಅಧ್ಯಾಪಕ ಸಂಯೋಜಕಿ ಶ್ರೀಮತಿ ಹರಿಣಾಕ್ಷಿ, ವಿದ್ಯಾರ್ಥಿ ಸಂಯೋಜಕ ಶ್ರೀ ಜೋಯಲ್ ಡಿಸೋಜಾ, ಕುಮಾರಿ ದೆಲಿಶಾ ಡಿಸೋಜಾ, ಶಿಕ್ಷಕರು […]
ಕುಂದಾಪುರ; ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಕುಂದಾಪುರ ವತಿಯಿಂದ ಪ್ರಾಥಮಿಕ ಚಿತ್ರಕಲೆಯ ರಚನೆಯಲ್ಲಿ ರೇಖೆ, ಆಕಾರ, ಬಣ್ಣದ ಸಹಯೋಗದಲ್ಲಿ ವ್ಯಕ್ತಪಡಿಸುವ ರಚನಾ ಪರಿ ಮತ್ತು ಕಲಾಮಹತ್ವತೆಯ ಬಗ್ಗೆ ಉಚಿತ ಕಲಾ ತರಬೇತಿಯನ್ನು ಆಯೋಜಿಸಲಾಗಿದೆ. 19 ರಿಂದ 75 ವಯೋಮಿತಿಯ ಕಲಾಸಕ್ತ ಸಾರ್ವಜನಿಕರಿಗೆ ದಿನಾಂಕ 05.10.2025ನೇ ರವಿವಾರ ಬೆಳಿಗ್ಗೆ 10.00ರಿಂದ ಸಂಜೆ 5.30ರ ತನಕ ಹಮ್ಮಿಕೊಳ್ಳಲಾಗಿದ್ದು; ಆಸಕ್ತರು ದಿನಾಂಕ 03.10.25ರ ಒಳಗೆ 9739140607 ವಾಟ್ಸಾಪ್ ಸಂಪರ್ಕದ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿಕೊಳ್ಳುವಂತೆ ಕೋರಲಾಗಿದೆ.
“Sauharda Tenehabba” (Harmony Festival) organized by Catholic Sabha Mangalore Pradesh® at Nejiguri ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮುಂದಾಳುತ್ವದಲ್ಲಿ, ನೇಜಿಗುರಿ ಗುಂಪು, ಕರಾವಳಿ ಮಾಣಿಕ್ಯ ಸೆವಾ ಸಂಸ್ಥೆ(ರಿ), ಪೃಥ್ವಿ ಸೇವಾ, ಕಥೊಲಿಕ್ ಸಭಾ ಸಿಟಿ ವಾರಾಡೊ ಮತ್ತು ಕಥೊಲಿಕ್ ಸಭಾ ಶಕ್ತಿನಗರ ಘಟಕ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 28 ರಂದು ಶಕ್ತಿನಗರದ ನೇಜಿಗುರಿ ಸುಜಿ ಅಣ್ಣ ತಾರಕ್ಕ ಇವರ ಮನೆಯ ಅಂಗಳದಲ್ಲಿ ಸೌಹಾರ್ದಯುತವಾಗಿ ನಡೆಯಿತು. ಪ್ರಾರ್ಥನೆಯೊಂದಿಗೆ, ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ […]
ಬೆಂಗಳೂರು, ಸೆಪ್ಟೆಂಬರ್ 27: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ದ್ವಿತೀಯ ಪದವಿ ಪ್ರದಾನ ಸಮಾರಂಭ ಶನಿವಾರ ದಂದು ನಡೆಯಿತು. ಮೊದಲಿಗೆ ರ್ಯಾಂಕ್ ಹೋಲ್ಡರ್ಸ್ ಮತ್ತು ವಿಶೇಷ ಪ್ರಶಸ್ತಿ ವಿಜೇತರ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ|ಎಂ.ಸಿ. ಸುಧಾಕರ್, ಹಾಗೂ ಮುಖ್ಯ ಅತಿಥಿ ಡಾ. ಜೆ.ಎನ್ .ಮೂರ್ತಿ ,ನಿರ್ದೇಶಕರು, ಐಐಎಸ್ಇಆರ್ , ತಿರುವನಂತಪುರಂ. ಚಾನ್ಸಲರ್ ವಂದನೀಯ ಡೈನೋಸಿಯಸ್ ವಾಸ್, ಉಪಕುಲಪತಿ ವಂದನೀಯ ವಿಕ್ಟರ್ ಲೋಬೋ ಉಪಸ್ಥಿತರಿದ್ದರುಒಟ್ಟು 2,747 ವಿದ್ಯಾರ್ಥಿಗಳು ಪದವಿ ಪಡೆದಿದ್ದು, […]
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ರೋಹನ್ ಕಾರ್ಪೊರೇಶನ್ ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಳಜಿ ವಹಿಸುವ ಉದ್ದೇಶದಿಂದ, ಸೆಪ್ಟೆಂಬರ್ 29 ರಂದು ಮಂಗಳೂರು ಮಹಾನಗರ ಪಾಲಿಕೆಗೆ 100 ಜೋಡಿ ಸುರಕ್ಷತಾ ಪಾದರಕ್ಷೆಗಳನ್ನು ವಿತರಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಂಡಿತು.ಈ ಕಾರ್ಯಕ್ರಮವು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀರವಿಚಂದ್ರ ನಾಯಕ್ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಕಾರ್ಮಿಕರಿಗೆ ಪಾದರಕ್ಷೆಗಳನ್ನು […]
ಕೊಂಕಣಿ ಲೇಖಕರ ಸಂಘ, ಕರ್ನಾಟಕದ ವಾರ್ಷಿಕ ಸಭೆ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಿತು. ಸಂಘದ ಸಂಚಾಲಕರಾದ ಶ್ರೀ ರಿಚ್ಚಾರ್ಡ್ ಮೊರಸ್ ಖರ್ಚು–ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದ್ದು, ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮುಖ್ಯ ಆಕರ್ಷಣೆಯಾಗಿ ನಿವೃತ್ತ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ IPS ಅವರೊಂದಿಗೆ ಖ್ಯಾತ ಕವಿ–ಲೇಖಕ ಶ್ರೀ ಅ್ಯಂಡ್ರು ಎಲ್. ಡಿಕುನ್ಹಾ ಮುಕ್ತ ಸಂವಾದ ನಡೆಸಿದರು. ಡಾ. ಲೋಬೊ ಅವರ ವೃತ್ತಿ ಜೀವನ, ಆಡಳಿತ ಸಾಧನೆಗಳು ಹಾಗೂ ಕೊಂಕಣಿ ಭಾಷೆ–ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಈ ಸಂದರ್ಭದಲ್ಲಿ ವಿವರಿಸಲಾಯಿತು. […]

