ಬೈಂದೂರು ; ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಉಡುಪಿ ಜಿಲ್ಲಾ ಸಮಿತಿ ಹಾಗೂ ಬೈಂದೂರು ತಾಲೂಕು ಸಮಿತಿ ನೇತೃತ್ವದಲ್ಲಿ ವಿಶ್ವ ಸಂಸ್ಥೆಯ ಕರೆಯ ಮೇರೆಗೆ “ಮಹಿಳೆಯರ ಹಾಗೂ ಮಕ್ಕಳ ಮೇಲಿನ ಹಿಂಸೆ ನಿರ್ಮೂಲನೆಗೆ ಒತ್ತಾಯಿಸಿ” ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ , ಬೈಂದೂರು ಆಡಳಿತ ಸೌಧದ ಉಪ ತಹಶೀಲ್ದಾರ್ ರವರ ಮುಖಾಂತರ ಉಡುಪಿ ಜಿಲ್ಲಾ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಸ್ಥಳೀಯ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಮಹಿಳೆಯರ ಮೇಲಾಗುವ ಹಿಂಸೆಗಳ ನಿರ್ಮೂಲನೆಗೆ ಒತ್ತಾಯಿಸಿ […]
ಶಂಕರನಾರಾಯಣದ ಮದರ್ ತೆರೆಸಾ ಪಿ.ಯು. ಕಾಲೇಜಿನಲ್ಲಿ “ಅಭ್ಯುದಯ – 2025” ವಾರ್ಷಿಕ ಮಹೋತ್ಸವವು ನವೆಂಬರ್ 22, 2025ರಂದು ಸಂತೋಷ ಮತ್ತು ಸಡಗರದಿಂದ ನಡೆಯಿತು. ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು. ಅತಿಥಿಗಳನ್ನು ಚೆಂಡೆಯ ನಾದ ಮತ್ತು ಮಾಲಾರ್ಪಣೆ ಮೂಲಕ ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು. ಸಂಸ್ಥೆಯ ಸಂಸ್ಥಾಪಕರಾದ ಕುಮಾರಿ ಶಮಿತಾ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೈಸನ್ ಲೂಯಿಸ್, […]
ಕೋಲಾರ: ಡಿಸೆಂಬರ್ 6ರ ಶನಿವಾರ ಕುಂದಾಪುರದ ಶೆರೋನ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆ ಕುಂದಾಪುರ ಭಂಡಾರ್ಕಾರ್ ಕಾಲೇಜ್ನ 1984-85ನೇ ಸಾಲಿನ ಬಿ.ಕಾಂ. ಪದವೀಧರ ಸ್ನೇಹಿತರ 40ನೇ ವರ್ಷದ ಸ್ನೇಹ ಮಿಲನದ ಅಂಗವಾಗಿ ಪತ್ರಕರ್ತ-ಲೇಖಕ ವಿಶ್ವ ಕುಂದಾಪುರ ಅವರ ಸಾಹಿತ್ಯ ಕೃಷಿ ಪಕ್ಷಿನೋಟ’ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿಶ್ವ ಅವರ ಪ್ರಕಟಗೊಂಡಿರುವ ಎಲ್ಲ 20 ಸ್ವತಂತ್ರ, ಅನುವಾದ ಮತ್ತು ಸಂಪಾದಿತ ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್ ಕೃತಿಗಳನ್ನು ಪ್ರದರ್ಶಿಸಲಾಯಿತು. ತಮ್ಮ ಕಾಲೇಜ್ನಲ್ಲಿ ಅಧ್ಯಯನ ಮಾಡಿದ್ದ ವಿದ್ಯಾರ್ಥಿ ಇಷ್ಟೊಂದು ಕೃತಿ […]
Bellevision Global, in association with Konkan Dubai, will organize a women’s throwball tournament in Moodubelle. ಪಂದ್ಯಾವಳಿಯಲ್ಲಿ ಭಾಗವಹಿಸಲು ಹಾಗೂ ನಿಯಮಗಳಿಗಾಗಿ ಮೇಲಿನ ಚಿತ್ರವನ್ನು ನೋಡಿ ಮೂಡುಬೆಳ್ಳೆ; ಕೊಂಕಣ ದುಬೈ ಸಹಯೋಗದೊಂದಿಗೆ ಬೆಳ್ಳೆವಿಷನ್ ಗ್ಲೋಬಲ್, ಡಿಸೆಂಬರ್ 14, 2025 ರ ಭಾನುವಾರದಂದು ಮೂಡುಬೆಳ್ಳೆಯಲ್ಲಿ ನಡೆಯಲಿರುವ ಮಹಿಳಾ ಥ್ರೋಬಾಲ್ ಪಂದ್ಯಾವಳಿಯನ್ನು ಘೋಷಿಸಲು ಸಂತೋಷಪಡುತ್ತದೆ. ಈ ವಿಶಿಷ್ಟ ಕ್ರೀಡಾಕೂಟವು ನಮ್ಮ ಬಾಂಧವ್ಯವನ್ನು ಪುನರುಜ್ಜೀವನಗೊಳಿಸುವ, ಆರೋಗ್ಯಕರ ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಮತ್ತು ಮುಖ್ಯವಾಗಿ, ನಮ್ಮ ಪ್ರದೇಶದಾದ್ಯಂತ ಯುವ […]
Souharda Christmas Utsav – 2025 – A Grand Celebration of Peace, Harmony & Festive Joy in Mangalore ಮಂಗಳೂರು, ಡಿಸೆಂಬರ್ 2025: ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಮಂಗಳೂರು ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಯುಕ್ತ ಆಶ್ರಯದಲ್ಲಿ, ಅತ್ಯಂತ ನಿರೀಕ್ಷಿತ “ಸೌಹಾರ್ದ ಕ್ರಿಸ್ಮಸ್ ಉತ್ಸವ 2025” ವನ್ನು ಘೋಷಿಸಲು ಸಂತೋಷಪಡುತ್ತೇವೆ. ಕ್ರಿಸ್ಮಸ್ ಹಬ್ಬದ ನಿಜವಾದ ಸಂದೇಶವಾದ ಶಾಂತಿ, ಸೌಹಾರ್ದ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುವ ಈ ಸಂಭ್ರಮಭರಿತ ಉತ್ಸವ […]
ಕುಂದಾಪುರ; ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ದಿನಾಂಕ 5 ಡಿಸೆಂಬರ್ 2025 ರಂದು ‘ಅವೇಕೆನ್ ದಿ ಸೂಪರ್ ಹೀರೋ ಇನ್ ಯು ‘ ಎಂಬ ವಿಷಯದ ಬಗ್ಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರಮಣಿ ವೆಂಕಟ್, ಸೇಲ್ಸ್ ಸ್ಟ್ರೈಟೆಜಿಕ್ ಕನ್ಸಲ್ಟೆಂಟ್ ಅಂಡ್ ಮೆಂಟರ್ ಟು ಸ್ಟಾರ್ಟ್ ಅಪ್ ಆಗಮಿಸಿ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಒಬ್ಬೊಬ್ಬ ಸೂಪರ್ ಹೀರೋ ಇರುತ್ತಾನೆ. ಆದರೆ ಅದು ವಿದ್ಯಾರ್ಥಿಗಳಿಗೆ ತಿಳಿಯದೆ ನಾವು ಯಾರಿಗೂ ಸಮರಲ್ಲ […]
ಪಡುಕೋಣೆ; ದಿನಾಂಕ 7.12.2025 ರಂದು ಸಂತ ಅಂತೋನಿ ಚರ್ಚಿನಲ್ಲಿ ಸಮುದಾಯ ದಿನಾಚರಣೆ ಹಾಗೂ ಅಮಲೋದ್ಭವಿ ಮಾತೆಯ ಹಬ್ಬದ ದಿನ ವನ್ನು ತುಂಬಾ ಆಚರಿಸಲಾಯಿತು. ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊರವರು ಹಾಗೂ ಅತಿಥಿಗಳಾಗಿ ಆಗಮಿಸಿದ ಬೈಂದೂರು ಚರ್ಚಿನ ಸಹಾಯಕ ಗುರುಗಳಾದ ಜೆಜ್ವಿತ್ ವಂದನೀಯ ಫಾ! ಪ್ರಥ್ವಿ ಮತ್ತು ಸ್ಥಳೀಯ ಕ್ರೈಸ್ತ ಭಕ್ತರ ಜೊತೆಗೂಡಿ ಅಮಲೋದ್ಭವಿ ಮಾತೆಯ ಪಲ್ಲಕ್ಕಿಯಲ್ಲಿದ್ದ ವಿಗ್ರಹದ ಮೆರವಣಿಗೆಯ ಮೂಲಕ ಚರ್ಚಿನ ಒಳಗಡೆ ಪ್ರವೇಶಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಬಲಿಪೂಜೆಯ ಕೊನೆಯ ಹಂತದಲ್ಲಿ ಭಕ್ತಾಧಿಗಳ ವಾಹನಗಳನ್ನು ಗುರುಗಳ್ಳಿಬ್ಬರು ಆಶೀರ್ವಾದಿಸಿದರು.ಅಂದು […]
ಕುಂದಾಪುರ; ಸೋಲು ಗೆಲುವು ಶಾಶ್ವತವಲ್ಲ , ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದರೆ , ಮುಂದಿನ ಚುನಾವಣೆಯಲ್ಲಿ ಜಯ ನಿಶ್ಚಿತ. ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಉಡುಪಿ ಜಿಲ್ಲೆಯ ಉಸ್ತುವಾರಿ ಐವನ್ ಡಿಸೋಜ ಹೇಳಿದರು. ನಿನ್ನೆ , ತೆಕ್ಕಟ್ಟೆಯ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಧಾರವಾಗಿದೆ .ಇದನ್ನು ಮನೆ ಮನೆಗೆ ತಿಳಿಸುವ […]
Sixteen Apostolic Carmel Sisters Embrace the Sacred Covenant of Final Profession ಆಪೊಸ್ತಲಿಕ್ ಕಾರ್ಮೆಲ್ ಸಭೆಯ ಹದಿನಾರು ಕನ್ಯಾ ಸ್ತ್ರೀಯರ ಶಾಶ್ವತ ಪ್ರತಿಜ್ನೆಯ ಧಾರ್ಮಿಕ ವಿಧಿಯು ಡಿಸೆಂಬರ್ 6 ರಂದು ಮಂಗಳೂರಿನ ಮೇರಿಹಿಲ್ಲ್ ಕಾನ್ವೆಂಟ್ ನಲ್ಲಿ ನೆರವೇರಿತು. ಮಂಗಳೂರಿನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇತರ ಹಲವಾರು ಧರ್ಮ ಗುರುಗಳ ಜೊತೆಗೂಡಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಹದಿನಾರು ಯುವ ಕನ್ಯಾ ಸ್ತ್ರೀಯರು ಆಪೊಸ್ತಲಿಕ್ ಕಾರ್ಮೆಲ್ ನ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ […]

