ಬೈಂದೂರು: ವಿದ್ಯುತ್ ಪರಿವರ್ತಕಗಳ 780-0602 & ೦008000708 764 ಹಾಗೂ ತ್ರೈ ಮಾಸಿಕ ನಿರ್ವಹಣಾ ಹಮ್ಮಿಕೊಂಡಿರುವುದರಿಂದ ಸದರಿ ದಿನದಂದು 110/1 ಕೆ.ವಿ ನಾವುಂದ ವಿದ್ಯುತ್ ಉಪಕೇಂದ್ರ ಹಾಗೂ 33/11 ಕೆ.ವಿ ಬೈಂದೂರು ಮತ್ತು ಕೊಲ್ಲೂರು ಉಪಕೇಂದ್ರದಿಂದ ಹೊರಡುವ ಎಲ್ಲಾ ೫. ಕೆ.ವಿ ಫೀಡರುಗಳಾದ ಹೇರೂರು, ಮರವಂತೆ, ಕಂಬದಕೋಣೆ, ಕಿರಿಮಂಜೇಶ್ವರ, ಆಲೂರು, ಬಡಾಕೆರೆ. ಶಿರೂರು, ಉಪ್ಪುಂದ, ಗಂಗನಾಡು, ಬೈಂದೂರು, ತೂದಳ್ಳಿ, ತಗ್ಗರ್ಸೆ, ಯಳಜಿತ್, ಮುದೂರು ಹಾಗೂ ಕೊಲ್ಲೂರು ಫೀಡರುಗಳಲ್ಲಿ ಹೇರಂಜಾಲು, ಕಂಬದಕೋಣೆ. ಹೇರೂರು, ಕಾಲ್ದೋಡು, ಉಳ್ಳೂರು-11, ಆಲೂರು, ಹಕ್ಲಾಡಿ, […]
ಗಂಗೊಳ್ಳಿ: ಪೊಲೀಸ್ ಅಧೀಕ್ಷಕರು ಉಡುಪಿ. ಜಿಲ್ಲೆ ಇವರು ನೀಡಿರುವ ವರದಿಯಂತೆ. ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದ ಖಾರ್ವಿಕೇರಿಯ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದ ಮಾರಿ ಜಾತ್ರೆ ಸಮಯದಲ್ಲಿ ಮದ್ಯಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಮಾಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉಡುಪಿ ಜಿಲ್ಲ್ಲಾಧಿಕಾರಿ ಕೂರ್ಮಾ ರಾವ್.ಎಂ. ಭಾ.ಆ.ಸೇ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಲ್ಲಾ ರೀತಿಯ ನಿಯಮಗಳು 1968 ರ ನಿಯಮ 3 ರಡಿ ಮದ್ಯ ಮಾರಾಟವನ್ನು […]
ಮಂಗಳೂರು: ಮಂಗಳೂರಿನ ಮಿಲಾಗ್ರಿಸ್ ಚರ್ಚ್ನ ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬಕ್ಕೆ ವಂದನೀಯ ಫಾದರ್ ಒನಿಲ್ ಡಿ’ಸೋಜ ರವರು ಸಂತ ಆಂತೋನಿಯವರ ದ್ವಜಾರೋಹಣ ಮಾಡುವ ಮುಕಾಂತರ ಚಾಲನೆ ನೀಡಿದರು. ಮಂಗಳೂರಿನ ಮಿಲಾಗ್ರಿಸ್ ಚರ್ಚ್ನ ಸಂತ ಆಂತೋನಿಯವರ ಪುಣ್ಯಕ್ಷೇತ್ರದ ಹಬ್ಬವು ಫೆಬ್ರವರಿ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಇದರ ತಯಾರಿಯಾಗಿ 9 ದಿವಸಗಳ ನೊವೆನಾ ಪ್ರಾರ್ಥನೆಯನ್ನು ಇಂದು ಆರಂಬಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಗುರುಗಳು ಪ್ರಾರ್ಥನ ವಿಧಿಯನ್ನು ನೆರೆವೆರಿಸಲಿದ್ದಾರೆ. ಹಬ್ಬದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾದ್ಯಕ್ಷರು ಅತಿ […]
ಜನ ಸಾಮಾನ್ಯರು ತಾಲೂಕು ಕಛೇರಿಯಲ್ಲಿ ನೀಡುವ ಅರ್ಜಿಗಳನ್ನು ಕರ್ನಾಟಕ-1 ಎನ್ನುವ ಸರಕಾರದ ನಾಗರಿಕ ಸೇವಾ ಕೇಂದ್ರದಲ್ಲಿ ಅನುಕೂಲ ಪಡೆಯುವಂತಹ ಯೋಜನೆಯನ್ನು ಕುಂದಾಪುರದ ಮುಖ್ಯ ರಸ್ತೆಯಲ್ಲಿ ಕಛೇರಿ ಉದ್ಘಾಟಿಸುವ ಮೂಲಕ ಆರಂಭಿಸಲಾಗಿದೆ.ಕುಂದಾಪುರದ ಯೂನಿಯನ್ ಬ್ಯಾಂಕ್ ಬಳಿ, ಪೀಟರ್ ಇಂಗ್ಲೆಂಡ್ ಶೋರೂಮ್ ಎದುರು ಇರುವ ಕಟ್ಟಡದಲ್ಲಿ ಪುರಸಭಾ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ದೇವಕಿ ಸಣ್ಣಯ್ಯ ಕರ್ನಾಟಕ 1 ಕೇಂದ್ರ ಉದ್ಘಾಟಿಸಿದರು.ಪುರಸಭಾ ಅಧಿಕಾರಿ ಅಂಜಲಿ, ಗ್ರಾಮ ಆಡಳಿತ ಅಧಿಕಾರಿ ಆನಂದ ಡಿ. ಎಂ., ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ […]
ತಾಲೂಕು ಸಾಹಿತ್ಯ ಪರಿಷತ್ತು ವತಿಯಿಂದ ಫೆ.19ರಂದು ಗಂಗೊಳ್ಳಿ ಸರಸ್ವತಿ ಪ.ಪೂ.ಕಾಲೇಜುವಠಾರದಲ್ಲಿ ನಡೆಯುವ ಗಂಗಾವಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷ ಕೋ.ಶಿವಾನಂದ ಕಾರಂತರನ್ನು ಅವರ ಗುಜ್ಜಾಡಿ ನಿವಾಸ ಶಿವಲಾಲಿತ್ಯಕ್ಕೆ ತೆರಳಿ ಅಧಿಕ್ರೃತವಾಗಿ ಸ್ವಾಗತಿಸಲಾಯಿತು.ಕುಂದಾಪುರ ತಾಲೂಕು ಕ.ಸಾ.ಪ.ಅಧ್ಯಕ್ಷ ಡಾ.ಉಮೇಶ್ ಪುತ್ರನ್, ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ, ಕೋಶಾಧಿಕಾರಿ ಕೆ.ಎಸ್.ಮಂಜುನಾಥ, ಜಿಲ್ಲಾ ಕ.ಸಾ.ಪ.ಕೋಶಾಧ್ಯಕ್ಷ ಮನೋಹರ್ ಅಧಿಕ್ರೃತ ಪತ್ರ ನೀಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್. ಗಣೇಶ್ ಕಾಮತ್, ಕಾರ್ಯದರ್ಶಿ ಯು.ಎಸ್ .ಶೆಣೈ, ಕ.ಸಾಪ.ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಅವರು ಸಮ್ಮೇಳನದ ವಿವರ […]
ಮಂಗಳೂರು: 15 ನೇ ಸ್ಟ್ಯಾನಿ ನೈಟ್ ಕುಲಶೇಖರ್ನಲ್ಲಿರುವ ಚರ್ಚ್ ಮೈದಾನದಲ್ಲಿ, ಫೆಬ್ರುವರಿ 5,2023 ರಂದು ಕೆಲರಾಯ್, ನೀರುಮಾರ್ಗದ ಸೇಂಟ್ ಆನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಕ್ಕೆ ಸಹಯಾರ್ಥ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. ಸ್ಟ್ಯಾನಿ ಮೆಂಡೋನ್ಜಾ, ಜೋಸೆಫ್ ಮಥಿಯಾಸ್, ಎಲ್ಟನ್ ಪಿಂಟೋ, ಅಡ್ಲಿನ್ ಪಿಂಟೋ, ವರ್ಣ ಡಿಸೋಜಾ, ಬಿಂದು ಕುಟಿನ್ಹಾ, ಸಾಶಾ ಡಿಸೋಜಾ, ಜೋಸ್ವಿನ್ ಗಾಯಕರ ಜೊತೆ ಪಾಪನ್ ಕ್ಯಾಲಿಕಟ್ ಅವರು ತಮ್ಮ ಮೋಡಿಮಾಡುವ ಸಂಗೀತ […]
ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಸವಿತಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರಕ್ಕೆ ಒಂದು ದಿನದ ಮಧ್ಯಾಹ್ನದ ಊಟದ ಬಾಬ್ತು ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ರೋ. ಸಚಿನ್ ನಕ್ಕತ್ತಾಯ, ಮಾಜಿ ಅಧ್ಯಕ್ಷ ರೋ. ಕೆ.ಪಿ. ಭಟ್, ರೋ. ಶೋಭಾ ಭಟ್, ರೋ. ಮನೋಹರ ಪಿ, ರೋ ಸುರೇಖ ಪುರಾಣಿಕ ಹಾಗೂ ಸೇವಾ ಸಂಗಮದ ಮುಖ್ಯೋಪಾಧ್ಯಾಯರು ವಿಷ್ಣುಮೂರ್ತಿ ಭಟ್ ಮತ್ತು ಸಂಚಾಲಕ ಶ್ರೀ. ಚಂದ್ರಶೇಖರ ಪಡಿಯಾರ ಉಪಸ್ಥಿತರಿದ್ದರು.
ದಿನಾಂಕ 02..02.2023ರಂದು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನಕಾಲೇಜಿನಲ್ಲಿಆರ್ಎನ್ ಶೆಟ್ಟಿ ಸಭಾಂಗಣದಲ್ಲಿ ಸೃಷ್ಠಿ ಇನ್ಫೋಟೆಕ್ಕುಂದಾಪುರ ಹಾಗೂ ಭಂಡಾರ್ಕಾರ್ಸ್ಕಾಲೇಜುಕುಂದಾಪುರಇದರ ಸಂಯುಕ್ತಆಶ್ರಯದಲ್ಲಿಒಂದು ದಿನದತರಬೇತಿ ವಿವರಗಳ ಕಾರ್ಯಾಗಾರ ಹಾಗೂ ಉನ್ನತ ಮಟ್ಟಿದತರಬೇತಿ ಪ್ರಮಾಣ ಪತ್ರ ವಿತರಣೆಕಾರ್ಯಕ್ರಮಜರುಗಿತು.ಸಭಾಧ್ಯಕ್ಷರಾಗಿಕಾಲೇಜಿನ ಹಿರಿಯ ವಿಶ್ವಸ್ಥರಾದ ಶ್ರೀ ಕೆ ಶಾಂತಾರಾಮ ಪ್ರಭು ಉಪಸ್ಥಿತರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಉದ್ಘಾಟಕರಾಗಿಕಿಯೋನಿಕ್ಸ್ಚೇರ್ಮೆನ್ರಾದ ಶ್ರೀ ಹರಿಕೃಷ್ಣ ಬಂಟ್ವಾಳ್ ಉದ್ಘಾಟಕ ನುಡಿಗಳನ್ನಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿರುವ ದಕ್ಷ ಪೋಲೀಸ್ಅಧಿಕಾರಿಯಾಗಿರುವ ಶ್ರೀ ರವಿ ಡಿ ಚೆನ್ನಣ್ಣನವರ್ ಸಮಾರಂಭವನ್ನುದ್ದೇಶಿಸಿ ಮಾತನ್ನಾಡುತ್ತಾ“ಮಾನವಜನ್ಮ ಸಾರ್ಥಕ ಗೊಳಿಸಬೇಕಾದರೆ ಸಾಧನೆಯ ಬದುಕಿನೆಡೆಗೆ ನಿಮ್ಮ ಪ್ರಯಾಣ ಸಾಗಲಿ […]
ಭಾರತದ ಖ್ಯಾತ ಬಾನ್ಸುರಿ ವಾದನ ಕಲಾವಿದ ಪರಿಷತ್ ರಾಜೇಂದ್ರ ಪ್ರಸನ್ನ ನವದೆಹಲಿಯವರ “ವೇಣುನಾದ ಲಹರಿ” ಕುಂದಾಪುರದಲ್ಲಿ ಜ. 5 ರಂದು ರವಿವಾರ ನಡೆಯಲಿದೆ.ಸಂಗೀತ ಭಾರತಿ ಟ್ರಸ್ಟ್ (ರಿ.) ಆಶ್ರಯದಲ್ಲಿ ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.ತಬಲಾವಾದಕರಾಗಿ ಖ್ಯಾತ ಕಲಾವಿದ ಪಂಡಿತ್ ರವೀಂದ್ರ ಯಾವಗಲ್, ಬೆಂಗಳೂರು ಭಾಗವಹಿಸಲಿದ್ದಾರೆ.ಸಂಗೀತಾಸಕ್ತರು ಈ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಗೀತ ಭಾರತಿ ಟ್ರಸ್ಟ್ ಆಹ್ವಾನಿಸಿದೆ.

