ಕಲ್ಯಾಣಪುರ, ಫೆಬ್ರವರಿ 2, 2025 ರಂದು, ಸಂತೇಕಟ್ಟೆ-ಕಲ್ಲಿಯನ್ಪುರದ ಮೌಂಟ್ ರೋಸರಿ ಚರ್ಚ್, ಮೂರು ಮಹತ್ವದ ಘಟನೆಗಳನ್ನು ಗುರುತಿಸಲು ಸಮುದಾಯವು ಒಟ್ಟುಗೂಡಿದಾಗ ಆಳವಾದ ಆಚರಣೆಗೆ ಸಾಕ್ಷಿಯಾಯಿತು: ಯೂಕರಿಸ್ಟಿಕ್ ಆಚರಣೆಯು ಬೆಳಿಗ್ಗೆ 8:00 ಗಂಟೆಗೆ ಚರ್ಚ್ ಪ್ರವೇಶದ್ವಾರದಲ್ಲಿ ಗಂಭೀರ ಸಮಾರಂಭದೊಂದಿಗೆ ಪ್ರಾರಂಭವಾಯಿತು, ತಾಯಿ ಮೇರಿ ಮತ್ತು ಸಂತ ಜೋಸೆಫ್ ಶಿಶು ಯೇಸುವನ್ನು ಅವರ ಜನನದ 40 ದಿನಗಳ ನಂತರ ಜೆರುಸಲೆಮ್ನ ದೇವಾಲಯದಲ್ಲಿ ಅರ್ಪಿಸಿದ ಪವಿತ್ರ ಕ್ಷಣವನ್ನು ಸ್ಮರಿಸುತ್ತಾರೆ. ಈ ಸುಂದರ ಸಂಪ್ರದಾಯವನ್ನು ಭಕ್ತಿಯಿಂದ ಪುನರುಚ್ಚರಿಸಲಾಯಿತು, ದೈವಿಕ ಕಾನೂನಿನ ನೆರವೇರಿಕೆ ಮತ್ತು […]
ಕುಂದಾಪುರ, ಫೆ. 3 :- ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರು ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಹಾಗೂ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮೊಗವೀರ ಮಹಾಜನ ಸೇವಾ ಸಂಘ ರಿ ಮುಂಬೈ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾ ಅಧ್ಯಕ್ಷರು ಆಗಿರುವ ಉದಯ್ ಕುಮಾರ್ ಹಟ್ಟಿಯಂಗಡಿ ಇವರನ್ನು ಫೆಬ್ರವರಿ 2 ರಂದು ಮೊಗವೀರ ಯುವ ಸಂಘಟನೆ ರಿ ಉಡುಪಿ ಜಿಲ್ಲೆ ವತಿಯಿಂದ ಗೌರವಿಸಲಾಯಿತು.
ಕುಂದಾಪುರ, ಫೆ.2; ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಭಾರತೀಯ ಕಿಸಾನ್ ಸಂಘದ ಸಹಯೋಗದೊಂದಿಗೆ ‘ಕ್ರಷಿ ವಿಚಾರ ಸಂಕಿರಣ’ ಕುಂದಾಪುರ ರೋಟರಿ ಲಕ್ಷ್ಮೀ ನರಸಿ೦ಹ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಭಾಟಿಸಿದ ಜಿಲ್ಲಾ ಸಾಧಕ ರೈತ ಪ್ರಶಸ್ತಿ ವಿಜೇತರಾದ ರಮೇಶ್ ನಾಯಕ್ ‘ಯಾವುದೇ ಕ್ಷೇತ್ರದಲ್ಲಿ ಸಫಲತೆ ಪಡೆಯ ಬೇಕಾದರೆ, ನಿರಂತರ ಪರಿಶ್ರಮ ಮತ್ತು ಅಧ್ಯಯನ ಮಾಡಬೇಕು. ಕ್ರಷಿಯಲ್ಲಿ ಸೊಲಿಲ್ಲ, ರೈತರು ಕ್ರಷಿ ವಿಧಾನದಲ್ಲಿ ನವೀಕ್ರತಗೊಳ್ಳುತ್ತಲೇ ಇರಬೇಕು, ಯಾವ ಜಾಗದಲ್ಲಿ ಯಾವ ಕ್ರಷಿ, ಯಾವ ವಿಧಾನದೊಂದಿಗೆ ಮಾಡಬೇಕು […]
ಕುಂದಾಪುರ; ಜನವರಿ 26ರಂದು ನಡೆದ ಚುನಾವಣೆಯಲ್ಲಿ ಲೋಹಿತಾಶ್ವ ಆರ್,ಕುಂದರ್ ಬಾಳಿಕೆರೆ ಕೆಲವು ಸಾಧಿಸಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆಯುವ ನಾಯಕ ಕಾರ್ಯಕರ್ತರಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಇವರು ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದಲ್ಲಿ ಎರಡು ಅವಧಿಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದಾರೆ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಘಟಕದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದು ಮೊಗವೀರ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಇದರ ಸದಸ್ಯರಾಗಿ ಸೇವೆ […]
ಕುಂದಾಪುರ : ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರವು ಕಮಲಶಿಲೆಯ ಮಾನಂಜೆಯ ಆಜ್ರಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ಫೆಬ್ರವರಿಯಿಂದ 9ಫೆಬ್ರವರಿ 2025ರವರೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.“ಯುದ್ದ ಫಾರ್ ಮೈ ಭಾರತ್ – ಯುಥ್ ಫಾರ್ ಡಿಜಿಟಲ್ ಲಿಟರಸಿ” ಎಂಬ ಶೀರ್ಷಿಕೆಯ ನೆಲೆಯಲ್ಲಿ ನಡೆಯಲಿರುವ ಈ ವಾರ್ಷಿಕ ಶಿಬಿರದಲ್ಲಿ ಶೈಕ್ಷಣಿಕ, ಆರೋಗ್ಯ, ಪರಿಸರ ಸಾಂಸ್ಕೃತಿಕ ಮತ್ತು ಮಾಹಿತಿಪೂರ್ಣ ಕಾರ್ಯಕ್ರಮಗಳು ನಡೆಯಲಿವೆ.ದಿನಾಂಕ 3ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಉದ್ಘಾಟಕರಾಗಿ ಬ್ರಾಹ್ಮೀ […]
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ : ಇಲ್ಲಿನ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಭೇತಿಯನ್ನು ದಿನಾಂಕ 29/1/2025 ರಂದು ಆಯೋಜಿಸಲಾಗಿತ್ತು , ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ನಿಧೀಶ್ ರಾವ್ ಪ್ರೊಫೆಸರ್ ನಿಟ್ಟೆ ಇವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು ,ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ ಇ ಒ ತಂತ್ರಗಳು,ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್,ಪೇ ಪರ್ ಕ್ಲಿಕ್ ಜಾಹೀರಾತುಗಳು ಕಂಟೆಂಟ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ […]
ಕುಂದಾಪುರ, ಜ.31 :ರಾಜಕೀಯ ರಹಿತವಾಗಿ, ಎಲ್ಲರನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ, ಒಂದೇ ಮಾರ್ಗದಲ್ಲಿ ಮುನ್ನೆಡೆಸುವುದೇ ಗಾಂಧಿಮಾರ್ಗ. ವೈವಿಧ್ಯತೆಯಲ್ಲಿ ಗೆಲ್ಲುವುದು ಸುಲಭ, ವೈರುದ್ಯತೆಗಳ ನಡುವೆ ಗೆಲ್ಲುವುದು ಮುಖ್ಯ. ಗಾಂಧಿ ವೈರುದ್ಯತೆಗಳ ನಡುವೆ ಜೋಡಿಸುವ ಕೆಲಸ ಮಾಡಿ ಗೆದ್ದವರು. ಸತತ ಸಂವಾದಗಳ ಮೂಲಕ ಮನಸುಗಳನ್ನು ಜೋಡಿಸಿದರು. ಅಂತಹ ಮುಕ್ತ ಸಂವಾದಗಳು ಚಿಂತನೆಗಳನ್ನು ಚುರುಕುಗೊಳಿಸುವ ಕೆಲಸವಾಯಿತು. ಇವತ್ತಿನ ವಾದ – ಸಂವಾದಗಳು ವ್ಯತಿರಿಕ್ತವಾಗಿದ್ದು ಮಾತು ಗೆಲ್ಲಬಾರದು, ಮನಸು ಗೆಲ್ಲುವುದು ಮುಖ್ಯವಾಗಬೇಕು. ಎಲ್ಲರನ್ನು ರಾಜಕೀಯೇತರವಾಗಿ ಒಟ್ಟುಗೂಡಿಸುವ ವ್ಯಕ್ತಿ ಬೇಕು. ಇದು ಬಹುತ್ವದ ಭಾರತ […]
ಕಾರ್ಕಳ, ಜನವರಿ 30, 2025 — ಅತ್ತೂರಿನ ಸಂತ ಲಾರೆನ್ಸ್ ಬೆಸಿಲಿಕಾ ಅವರ ವಾರ್ಷಿಕ ಹಬ್ಬವು ಅಪಾರ ಭಕ್ತಿ ಮತ್ತು ಭವ್ಯತೆಯಿಂದ ಮುಕ್ತಾಯಗೊಂಡಿತು, ಲಕ್ಷಾಂತರ ನಿಷ್ಠಾವಂತರು ಪವಾಡದ ಸಂತನ ಆಶೀರ್ವಾದವನ್ನು ಪಡೆಯಲು ಒಟ್ಟುಗೂಡಿದರು. ಐದು ದಿನಗಳ ಆಧ್ಯಾತ್ಮಿಕ ಆಚರಣೆಯು ಗಮನಾರ್ಹ ಜನಸಮೂಹಕ್ಕೆ ಸಾಕ್ಷಿಯಾಯಿತು, ಪ್ರದೇಶದಾದ್ಯಂತದ ಭಕ್ತರು ಗಂಭೀರವಾದ ಪ್ರಾರ್ಥನಾ ಸೇವೆಗಳಲ್ಲಿ ಭಾಗವಹಿಸಿದರು. ಬೆಳಿಗ್ಗೆ 10:00 ಗಂಟೆಗೆ ನಡೆದ ಹಬ್ಬದ ಬಲಿದಾನವನ್ನು ಬರೈಪುರ ಡಯಾಸಿಸ್ನ ಬಿಷಪ್ ಎಮೆರಿಟಸ್ನ ಅತಿ ದೊಡ್ಡ ರೆವರೆಂಡ್ ಡಾ. ಸಾಲ್ವಡೋರ್ ಲೋಬೊ ಅಧ್ಯಕ್ಷತೆ ವಹಿಸಿದ್ದರು […]
ಕುಂದಾಪುರ ; ಮಹಾತ್ಮಾ ಗಾಂಧಿ ಎಂದೊಡನೆ ಮೊದಲಿಗೆ ನೆನಪಾಗುವುದು ಅವರು ತನ್ನ ಜೀವನದಲ್ಲಿ ಪಾಲಿಸಿದ “ಸರಳತೆ, ಸತ್ಯ, ನ್ಯಾಯ, ನೀತಿ ಹಾಗೂ ಅಹಿಂಸೆಯ ಹೋರಾಟ” ಗಳಾದರೂ ಸ್ವಾತಂತ್ರ್ಯ ನಂತರದಲ್ಲಿ ಅಸಮಾನತೆಯನ್ನು ಪ್ರತಿಪಾದಿಸುವ ಒಂದು ವರ್ಗದ ಪ್ರಬಲ ವಿರೋಧದ ನಡುವೆಯೂ ಅವರು “ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು” ಸಿದ್ದಾಂತದ ಸಂವಿಧಾನವನ್ನು ರಚಿಸಲು ಮೊದಲ ಪ್ರಾಶಸ್ತ್ಯವನ್ನು ನೀಡುತ್ತಾರೆ. ಅವರು ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮತ್ತು ದೇಶದ ಪ್ರಥಮ ಕಾನೂನು ಸಚಿವರನ್ನಾಗಿಯೂ ನೇಮಿಸಲು ಬೆಂಬಲಿಸುತ್ತಾರೆ. ಗಾಂಧಿ ಚಿಂತನೆಯ […]

