ಅಸ್ತಮಾ ಅಲರ್ಜಿಗೆ ಗಿಡಮೂಲಿಕೆ ಔಷಧಿ ವಿತರಣಾ ಶಿಬಿರ

ಕೋಲಾರ ಅಕ್ಟೋಬರ್ 10 : ಅಕ್ಟೋಬರ್ 9ರ ಭಾನುವಾರ ಅಶ್ವೀಜ ಮಾಸ ಪವಿತ್ರ ಶರದ್ ಹುಣ್ಣಿಮೆಯ ದಿನದ ಮಧ್ಯರಾತ್ರಿ ಕಿತ್ತಂಡೂರು ಆನಂದ ಮಾರ್ಗ ಶಾಲೆಯ ಆವಣರದಲ್ಲಿ ಆನಂದ ಮಾರ್ಗ ಪ್ರಚಾರಕ ಸಂಘ ಹಾಗೂ ಆನಂದ ಸುವರ್ಣ ರೂರಲ್ ಡೆವಲಪ್‍ಮೆಂಟ್ ಟ್ರಸ್ಟ್ ಮತ್ತು ಆನಂದ ಮಾರ್ಗ ಶಾಲೆ, ಕಿತ್ತಂಡೂರು, ತೊಟ್ಲಿ ಅಂಚೆ, ಕೋಲಾರ ತಾಲ್ಲೂಕು ಇವರು ಏರ್ಪಡಿಸಿದ್ದ 21ನೇ ಶಿಬಿರ ಯಶಸ್ವಿಯಾಗ ನಡೆಯಿತು.
ಬಾರಿ ಮಳೆಯ ನಡುವೆ ಸಂಜೆಯಿಂದ ರಾತ್ರಿ ಪೂರ್ತಿ ಮಳೆ ಸುರಿದರೂ ಜನರು ಮಳೆಯನ್ನು ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ಬಸ್, ಕಾರು, ಆಟೋ ಕ್ಯಾಬ್‍ಗಳಲ್ಲಿ ಜನ ಜಮಾವಣಿಯಾಗಿ ಸುಮಾರು ಎರಡು ಕಿಲೋಮೀಟರ್ ರಸ್ತೆ ಬ್ಲಾಕ್ ಆಗಿತ್ತು. ಗಿಡ ಮೂಲಿಕಾ ಔಷಧಿಗಳಿಂದ ತಯಾರಾದ ಪಾಯಸದ ಔಷಧಿ ಸಿದ್ಧಪಡಿಸಿ ಮಧ್ಯರಾತ್ರಿ ಆಚಾರ್ಯ ಚಿನ್ಮಯಾನಂದ ಅವದೂತರು, ಆಚಾರ್ಯ ಗುಣೀಂದ್ರರವರು ಮತ್ತು ಆಚಾರ್ಯ ಗಡಿ ಮಯಾನಂದ ಅವದೂತರ ಸಮ್ಮುಖದಲ್ಲಿ ಮಧ್ಯರಾತ್ರಿ ಪ್ರಾರ್ಥನೆಯೊಂದಿಗೆ ವಿತರಣೆ ಮಾಡಿದರು. ಈ ಹಿಂದಿನ ಶಿಬಿರಗಳಲ್ಲಿ ಔಷಧಿ ಪಡೆದು ಗುಣಮುಖರಾದ ಅನೇಕ ಜನರು ಆಚಾರ್ಯರ ಪಾದಗಳಿಗೆ ನಮಸ್ಕರಿಸಿ ಪ್ರಣಾಮಗಳನ್ನು ಅರ್ಪಿಸಿ, ಕೃತಜ್ಞತೆಗಳನ್ನು ತಿಳಿಸಿದರು.


ಅನೇಕ ಜನರನ್ನು ಸ್ವಯಂಪ್ರೇರಿತರಾಗಿ ಶಿಬಿರಕ್ಕೆ ಕರೆ ತಂದು ಮಳೆಯಲ್ಲಿಯೇ ನಿಂತು, ನೆಂದು ಔಷಧಿಯನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ಸೇರಿಸಿದರು. ಅನೇಕ ಜನ ಶಿಬಿರಕ್ಕೆ ಮಳೆಯ ಕಾರಣ ಬರಲು ಆಗದೆ ನಿರಾಸೆಯಾಗಿ ಸ್ವಾಮಿಜಿಗಳಿಗೆ ಕರೆ ಮಾಡಿ ಬೈಕ್‍ನಲ್ಲಿ ಬಸ್‍ನಲ್ಲಿ ಬರುವಂತಹ ಅನೇಕ ಶಿಭಿರಾರ್ಥಿಗಳು ತಮ್ಮ ಅಳಲನ್ನು ಹೇಳಿಕೊಂಡರು ಮತ್ತೊಮ್ಮೆ ನಮಗೆ ಔಷಧಿ ನೀಡಲು ಮತ್ತೊಂದು ನಕ್ಷತ್ರ ಸಮಯ ಕೇಳಿಕೊಂಡರು.
ಸ್ವಾಮೀಜಿಗಳು ಅವರ ಕಷ್ಟಗಳಿಗೆ ಸ್ಪಂದಿಸಿ ಮುಂದಿನ ಕಾರ್ತಿಕ ಹುಣ್ಣಿಮೆರ ಮದ್ಯರಾತ್ರಿ ಇದೇ ರೀತಿ ಗಿಡಮೂಲಿಕಾ ಪಾಯಸ ಔಷಧಿಯನ್ನು ವಿತರಿಸುವ ಶಿಬಿರ ಆಂದ್ರ ಪ್ರದೇಶದಲ್ಲಿನ ಹಿಂದೂಪುರದಲ್ಲಿ ಶ್ರೀ ಸರಸ್ಪತಿ ಶ್ರೀ ಸರಸ್ಪತಿ ವಿದ್ಯಾಮಂದಿರ ನಿಂಕಂಪಲ್ಲಿ ರಸ್ತೆ ಹಿಂದೂಪುರದಲ್ಲಿ ವ್ಯವಸ್ಥೆ ಮಾಡಲಾಗುವುದು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಆಚಾರ್ಯರು ಕೋರಿದರು.
ಈ ರೀತಿ ಅನೇಕ ಜನಪರ ಸೇವಾ ಕಾರ್ಯಗಳಿಂದ ಪ್ರಚಲಿತವಾಗಿ ಆನಂದ ಮಾರ್ಗ ಸಂಸ್ಥೆಯ ಸೇವೆಯನ್ನು ಜನ ಗೌರವಯುತವಾಗಿ ಪ್ರಶಂಸೆ ಮಾಡುತ್ತಿದ್ದಾರೆ ಇದೇ ರೀತಿ ಇನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಯಲಿ ಎಂದು ಆಶಿಸುತ್ತೇವೆ.

ಲೋಕೋಪಯೋಗಿ ಇಇ ಕಚೇರಿಯಲ್ಲಿ ಗುತ್ತಿಗೆದಾರರ ಸಭೆಯಲ್ಲಿ ಶಾಸಕರ ತಾಕೀತು – ರಸ್ತೆಅಭಿವೃದ್ದಿ ಕಾಮಗಾರಿ ಡಿ.15ರೊಳಗೆ ಮುಗಿಸಿ,ವಿಳಂಬವಾದರೆ ಸಹಿಸಲ್ಲ-ರೂಪಕಲಾ

ಕೋಲಾರ:- ಕೆಜಿಎಫ್ ತಾಲ್ಲೂಕಿನ ರಸ್ತೆ ಅಭಿವೃದ್ದಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಮುಖ್ಯಮಂತ್ರಿಗಳಿಂದ ರಸ್ತೆ ಅಭಿವೃದ್ದಿಗಾಗಿ 15 ಕೋಟಿ ರೂ ವಿಶೇಷ ಅನುದಾನ ತಂದಿದ್ದೇನೆ, ಹಣ ಬಿಡುಗಡೆ ವಿಳಂಬದ ನೆಪವೊಡ್ಡಿ ಕಾಮಗಾರಿ ತಡವಾದರೆ ಸಹಿಸಲು ಸಾಧ್ಯವಿಲ್ಲ ಡಿಸೆಂಬರ್ 15 ರೊಳಗೆ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಶಾಸಕಿ ರೂಪಕಲಾ ತಾಕೀತು ಮಾಡಿದರು.
ನಗರದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಈ ಸಂಬಂಧ 15 ಕೋಟಿರೂಗಳ ರಸ್ತೆ ಅಭಿವೃದ್ದಿ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರ ಸಭೆ ನಡೆಸಿದ ಅವರು, ಹಳೆ ಕಾಮಗಾರಿಯ ಹಣ ಬಂದಿಲ್ಲ ಎಂಬ ಕೆಲವು ಗುತ್ತಿಗೆದಾರರ ಹೇಳಿಕೆಗೆ ಗರಂ ಆಗಿ, ಅಂತಹವರು ಏಕೆ ಈ ಬಾರಿ ಟೆಂಡರ್‍ನಲ್ಲಿ ಭಾಗವಹಿಸಿದಿರಿ ಎಂದು ಪ್ರಶ್ನಿಸಿದರು.
ನಿಮಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಅನುದಾನ ವಿಳಂಬವಾಗಿದ್ದರೆ ತಿಳಿಸಿ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ, ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡರಿಗೆ ಮನವಿ ಮಾಡಿ ಹಣ ಬಿಡುಗಡೆ ಮಾಡಿಸುತ್ತೇನೆ ಆದರೆ ಕಾಮಗಾರಿ ವಿಳಂಬವಾದರೆ ಮಾತ್ರ ಸಹಿಸುವುದಿಲ್ಲ ಎಂದರು.
ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ರಸ್ತೆ ಅಭಿವೃದ್ದಿಗೆ 15 ಕೋಟಿ ರೂ ವಿಶೇಷ ಅನುದಾನ ತಂದಿದ್ದೇನೆ, ಗುತ್ತಿಗೆದಾರರು ಕಾಮಗಾರಿ ಅರ್ಧ ಮುಗಿಸಿ ನಂತರ ಬಿಟ್ಟು ಹೋದರೆ ಜಲ್ಲಿ ಕಲ್ಲು ತುಂಬಿದ ರಸ್ತೆಯಲ್ಲಿ ಓಡಾಡುವ, ಬಿದ್ದು ತೊಂದರೆಗೀಡಾಗುವ ನಾಗರೀಕರಿಗೆ ನಾನು ಏನು ಉತ್ತರ ಹೇಳಬೇಕು ಹೇಳಿ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ರಸ್ತೆ ಕಾಮಗಾರಿಗಳ 1400 ಕೋಟಿ ರೂ ಬಾಕಿ ಹಣದಲ್ಲಿ 88 ಕೋಟಿ ಬಿಡುಗಡೆ ಮಾಡಿದೆ, ನಾವು ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದಾಗ ಇದು ರಾಜ್ಯದ ಸಮಸ್ಯೆ, ಅದನ್ನು ಕೆಜಿಎಫ್ ವಿಷಯದಲ್ಲಿ ತರಬೇಡಿ ಎಂದರು.


ನಾನು ರಸ್ತೆ ಅಭಿವೃದ್ದಿಗಾಗಿ ಮಂಜೂರು ಮಾಡಿಸಿರುವ ಅನುದಾನದಲ್ಲಿ ಹಣ ಬಿಡುಗಡೆ ವಿಳಂಬವಾದರೆ ತಿಳಿಸಿ ನಾನೇ ಖುದ್ದು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ತಕ್ಷಣ ಬಿಡುಗಡೆ ಮಾಡಿಸುವೆ, ಬೇರಾವುದೋ ಕಾಮಗಾರಿಯ ಬಿಲ್ಲು ಆಗುತ್ತಿಲ್ಲ ಎಂದು ಕೆಜಿಎಫ್‍ನಲ್ಲಿ ಕೆಲಸ ನಿಲ್ಲಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇಂತಹ ನೆಪಗಳನ್ನು ಹೇಳದಿರಿ, ಕೆಜಿಎಫ್‍ನಲ್ಲಿ ನೀವು ಪಡೆದಿರುವ ಕಾಮಗಾರಿಯ ಹಣ ಬಿಡುಗಡೆ ತಡವಾದರೆ ತಿಳಿಸಿದರು.
ವಿವಿಧ ಯೋಜನೆಗಳಡಿ ಸುಮಾರು 35 ಕೋಟಿ ರೂ ಮಂಜೂರು ಮಾಡಿಸಿದ್ದು ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 15 ಕೋಟಿ ರೂಗಳ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲು ಸೂಚಿಸಿದ್ದೇನೆ ಎಂದರು.
ಕೆಜಿಎಫ್ ಹೊಸ ತಾಲ್ಲೂಕಾಗಿದ್ದು, ಎಷ್ಟು ಶೀಘ್ರವೋ ಅಷ್ಟು ಬೇಗ ಅಭಿವೃದ್ದಿ ಕಾರ್ಯ ನಡೆಯಬೇಕು ಎಂದ ಅವರು, ಮಾದರಿ ತಾಲ್ಲೂಕಾಗಿಸಲು ತಮ್ಮ ಪ್ರಯತ್ನಕ್ಕೆ ಸ್ಪಂದಿಸಿ ಎಂದು ಕೋರಿದರು.
ತಮ್ಮ ಪ್ರಯತ್ನದ ಫಲವಾಗಿ ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆಗಳ ಅಭಿವೃದ್ದಿಗೆ 15 ಕೋಟಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ 6 ಕೋಟಿ ರೂ, ಮತ್ತು ಎಸ್‍ಹೆಚ್‍ಡಿಪಿ ಯೋಜನೆಯಡಿ ನಗರಭಾಗದ ರಸ್ತೆಗಳ ಅಭಿವೃದ್ದಿಗೆ 10 ಕೋಟಿ ಬಿಡುಗಡೆಯಾಗಿದ್ದು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೆಜಿಎಫ್ ನಗರದ ರಾಬರ್ಟ್‍ಸನ್ ಪೇಟೆಯಿಂದ ರಾಮಕುಪ್ಪಂ ವರೆಗಿನ ರಸ್ತೆ ಅಭಿವೃದ್ದಿಗೆ 4 ಕೋಟಿ ರೂ ಮೀಸಲಿಡಲಾಗಿದೆ, ಬೇತಮಂಗಲ ದಿಂದ ವೆಂಕಟಗಿರಿಕೋಟೆ ರಾಷ್ಟ್ರೀಯ ಹೆದ್ದಾರಿ 95ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 1 ಕೋಟಿ ರೂ ಬಿಡುಗಡೆಯಾಗಿದ್ದು, ಕೆಲಸ ಬೇಗ ಮುಗಿಸಿ ಎಂದರು.
ಇದಲ್ಲದೇ ಕೆಜಿಎಫ್‍ನಲ್ಲಿ ದ್ವಿಪಥ ರಸ್ತೆಗೆ 4 ಕೋಟಿರೂ ಬಿಡುಗಡೆ ಮಾಡಿಸಲಾಗಿದೆ ಎಂದ ಅವರು, ಬೇತಮಂಗಲ-ಕ್ಯಾಸಂಬಳ್ಳಿ ರಸ್ತೆಗೆ 2.30 ಕೋಟಿ ರೂ ಹಾಗೂ ಒಡೆನಿಯಲ್ ರಸ್ತೆ ಸಂಪರ್ಕಕ್ಕೆ 70 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದರು.

ಮಿನಿವಿಧಾನಸೌಧ ಬೇಗ ಹಸ್ತಂತರಿಸಿ


ಈಗಾಗಲೇ ಕೆಜಿಎಫ್ ನಗರದಲ್ಲಿ ಮಿನಿವಿಧಾನಸೌಧ ಕಾಮಗಾರಿ ಮುಗಿದಿದ್ದು, ಕಾಂಪೌಂಡ್ ಹಾಗೂ ಸಿಸಿ ಕ್ಯಾಮರಾ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಕಂದಾಯ ಸಚಿವ ಅಶೋಕ್ ಅವರು, ಉದ್ಘಾಟನೆಗೆ ದಿನಾಂಕ ಕೇಳುತ್ತಿದ್ದಾರೆ, ಬೇಗ ಹಸ್ತಂತರಿಸಲು ಕ್ರಮವಹಿಸಿ, ತಿಂಗಳಾಂತ್ಯಕ್ಕೆ ಉದ್ಘಾಟನೆ ಮುಗಿಸಬೇಕಿದೆ ಎಂದು ಲೋಕೋಪಯೋಗಿ ಇಇ ಅವರಿಗೆ ಶಾಸಕಿ ರೂಪಕಲಾ ಮನವಿ ಮಾಡಿದರು.
10 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ ಮಿನಿ ವಿಧಾನಸೌಧಕ್ಕೆ ಕಾಂಪೌಂಡ್ ಬೇಡವೇ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ಡಿಸಿಗೆ ಪ್ರಸ್ತಾವನೆ ಸಲ್ಲಿಸಿ ನನಗೂ ಒಂದು ಪ್ರತಿ ನೀಡಿ ಮಾತನಾಡುವೆ ಎಂದು ಸಲಹೆ ನೀಡಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ಚಂದ್ರಶೇಖರ್, ಕಾಮಗಾರಿ ಒಂದು ಬಾರಿ ಆರಂಭಿಸಿದರೆ ಮುಗಿಸಿಯೇ ಅಲ್ಲಿಂದ ಹೋಗಬೇಕು ಎಂಬುದು ಶಾಸಕರ ಆಗ್ರಹವಾಗಿದ್ದು, ಅದರಂತೆ ಗುತ್ತಿಗೆದಾರರು ಕ್ರಮವಹಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಇಇ ರಾಜಶೇಖರ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಕೃಷ್ಣಾರೆಡ್ಡಿ, ಗುತ್ತಿಗೆದಾರರಾದ ಯಲವಾರ ಸೊಣ್ಣೇಗೌಡ, ವೆಂಕಟರಾಮೇಗೌಡ, ಕೆ.ಎಂ.ಮುರಳಿ, ವರದಪ್ಪ, ಶಿವಾರೆಡ್ಡಿ, ಮಂಜುನಾಥ್, ಮುನಿರೆಡ್ಡಿ ಮತ್ತಿತರರಿದ್ದರು.

ಪೋಷಣ್ ಅಭಿಯಾನ-ಮಾತೃವಂದನಾ ಸಮಾರೋಪದಲ್ಲಿ ಸೀಮಂತ
ಅಪೌಷ್ಠಿಕತೆ, ರಕ್ತಹೀನತೆ ಮುಕ್ತ ಭಾರತಕ್ಕೆ ಕೈಜೋಡಿಸಿ-ಮುನಿಸ್ವಾಮಿ

ಕೋಲಾರ:- ಪ್ರಧಾನಿ ನರೇಂದ್ರಮೋದಿಯವರ ಕನಸಿನ ಪೋಷಣ್ ಅಭಿಯಾನ ಯಶಸ್ವಿಗೊಳಿಸುವ ಮೂಲಕ ಅಪೌಷ್ಠಿಕತೆ ಮತ್ತು ರಕ್ತಹೀನತೆ ಮುಕ್ತ ಭಾರತ ನಿರ್ಮಾಣಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಕೈಜೋಡಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಪೋಷಣ್ ಮಾಸಾಚರಣೆಯ ಸಮಾರೋಪ ಮತ್ತು ಪ್ರಧಾನ ಮಂತ್ರಿ ಮಾತೃವಂದನಾ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ನಡೆಸಿ, ಸ್ವತಃ ತಲಾ 2 ಸಾವಿರರೂಗಳೊಂದಿಗೆ ಭಾಗಿನ ನೀಡಿ ಅವರು ಮಾತನಾಡುತ್ತಿದ್ದರು.
ಗರ್ಭಿಣಿಯರು,ಮಕ್ಕಳ ಆರೋಗ್ಯ ರಕ್ಷಣೆ, ಅಪೌಕಷ್ಟಿಕತೆಯಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ಅಂಗ ನವವಾಡಿ ಕಾರ್ಯಕರ್ತೆಯರ ಜವಾಬ್ದಾರಿ ದೊಡ್ಡದಿದ್ದು, ಭವಿಷ್ಯದಲ್ಲಿ ದೇಶಕ್ಕೆ ಆರೋಗ್ಯವಂತ ಮಕ್ಕಳನ್ನು ನೀಡುವ ಹೊಣೆಗಾರಿಕೆ ನಿಮ್ಮದಾಗಿದೆ ಎಂದರು.
ಅಂಗನವಾಡಿಗೆ ಬರುವ ಮಕ್ಕಳನ್ನು ನಿಮ್ಮ ಮಕ್ಕಳೆಂದು ತಿಳಿದು ಪೋಷಿಸಿ ಎಂದು ಕಿವಿಮಾತು ಹೇಳಿದ ಅವರು, ಮಕ್ಕಳು,ಗರ್ಭಿಣಿಯರ ಭವಿಷ್ಯ ಅಡಗಿರುವ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಭ್ರಷ್ಠಾಚಾರಕ್ಕೆ ಅವಕಾಶ ನೀಡಬಾರದು, ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಪೋಷಣ್ ಅಭಿಯಾನ ಹಾಗೂ ಮಾತೃವಂದನಾ ಕಾರ್ಯಕ್ರಮದ ಕುರಿತು ತಾಯಂದಿರಿಗೆ ಅರಿವು ಮೂಡಿಸಿ ಎಂದರು.
ಮಹಾಭಾರತದಲ್ಲಿ ಅಭಿಮನ್ಯು ಸುಭದ್ರೆಯ ಗರ್ಭದಲ್ಲಿದ್ದಾಗ ಶ್ರೀಕೃಷ್ಣ ಚಕ್ರವ್ಯೂಹ ಬೇಧಿಸುವ ಕಥೆಯನ್ನು ಹೇಳಿ ವಾಪಸ್ಸು ಬಾರದ್ದನ್ನು ತಿಳಿಸಲಿಲ್ಲ ಎಂಬ ಮಾತಿದೆ, ಆದ್ದರಿಂದ ಗರ್ಭಿಣಿಯರಿಗೆ ನಮ್ಮ ಸಂಸ್ಕøತಿ,ದೇಶಪ್ರೇಮ,ನಾಡು,ನುಡಿಯ ಧೀಮಂತ ಪುರುಷರ ಕಥೆಗಳನ್ನು ಪೂರ್ಣವಾಗಿ ಹೇಳಿ, ಆರೋಗ್ಯದ ಜತೆಗೆ ದೇಶದ ಘನತೆ ಎತ್ತಿಹಿಡಿಯುವ ಸಂಸ್ಕಾರವಂತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲು ಅಂಗನವಾಡಿ ಕಾರ್ಯಕರ್ತರು ಸಹಕರಿಸಿ ಎಂದು ಕಿವಿಮಾತು ಹೇಳಿದರು.

ಸ್ತ್ರೀಸಂಘಗಳಲ್ಲಿನ ಉತ್ಪನ್ನಕ್ಕೆ ಮಾರುಕಟ್ಟೆ


ಜಿಲ್ಲೆಯಲ್ಲಿ 44948 ಗರ್ಭಿಣಿಯರಿದ್ದಾರೆ, ಅವರೆಲ್ಲರ ಹೆಸರಿನಲ್ಲಿ ತಲಾ ಒಂದೊಂದು ಗಿಡ ನೆಟ್ಟರೂ ಪರಿಸರಕ್ಕೆ ಅಪಾರ ಕೊಡುಗೆ ನೀಡಿದಂತಾಗುತ್ತದೆ, ತಮ್ಮ ಮಗುವಿನಂತೆಯೇ ಆ ಗಿಡವನ್ನು ಕುಟುಂಬ ಪೋಷಿಸಿಕೊಂಡು ಹೋಗಬೇಕೆಂಬ ಅರಿವು ಮೂಡಿಸಿ, ಪ್ಲಾಸ್ಟಿಕ್ ಮುಕ್ತ ಕೋಲಾರ ಮಾಡಿ ಎಂದರು.
ಅಂಗನವಾಡಿಗಳಿಗೆ ಅಗತ್ಯವಾದ ಆಹಾರೋತ್ಪನ್ನಗಳನ್ನು ಜಿಲ್ಲೆಯ ಸ್ತ್ರೀಶಕ್ತಿ ಸಂಘಗಳಿಂದ ಖರೀದಿಸುವ ಮೂಲಕ ಮಹಿಳೆಯರು ತಮ್ಮ ಸ್ವಾವಲಂಬನೆಗಾಗಿ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದಂತಾಗಲಿದ್ದು, ಈ ಕುರಿತು ಸರ್ಕಾರದ ಹಂತದಲ್ಲಿ ಗಮನಹರಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಿದ್ದು, ಸಂಸದ ಮುನಿಸ್ವಾಮಿ ಪ್ರತಿಯೊಬ್ಬರಿಗೂ ತಾಂಬೂಲದಲ್ಲಿ ತಲಾ 2 ಸಾವಿರ ರೂ ನೀಡಿ ಶುಭ ಕೋರಿದರು.
ಪೋಷಣ್ ಅಭಿಯಾನದ ಸಮಾರೋಪದ ಅಂಗವಾಗಿ ನಡೆಸಲಾದ ಪ್ರಬಂಧ ಸ್ವರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ, ವಿಧಾನಪರಿಷತ್ ಸದಸ್ಯ ಇಂಚರಗೋವಿಂದರಾಜು, ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಮುದ್ದಣ್ಣ, ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಜಮೀನುಲ್ಲಾಖಾನ್ ಮತ್ತಿತರರು ಉಪಸ್ಥಿತರಿದ್ದರು.

ತಲ್ಲೂರಿನ ಇಗರ್ಜಿ ಸಭಾಂಗಣದಲ್ಲಿ ಉಚಿತ ನೇತ್ರ ಹಾಗೂ ಚರ್ಮರೋಗ ತಪಾಸಣಾ ಶಿಬಿರ

ಉಚಿತ ನೇತ್ರ ಹಾಗೂ ಚರ್ಮರೋಗ ತಪಾಸಣಾ ಶಿಬಿರವು ತಲ್ಲೂರಿನ ಇಗರ್ಜಿ ಸಭಾಂಗಣದಲ್ಲಿ ರೋಟರಿ ಕುಂದಾಪುರ ದಕ್ಷಿಣ, ರೋಟರಿ ಸಮುದಾಯ ದಳ ತಲ್ಲೂರು, ಕ್ರೈಸ್ತ ಸ್ತ್ರೀ ಸಂಘ ತಲ್ಲೂರು, ಗ್ರಾಮ ಪಂಚಾಯಿತಿ ತಲ್ಲೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗ್ಗೊಳ್ಳಿ ಇವರ ಸಹಭಾಗಿತ್ವದಲ್ಲಿ ಜರುಗಿತು. ರೋಟರಿ ವಲಯ ಒಂದರ ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್ ಶಿಬಿರವನ್ನು ಉದ್ಘಾಟಿಸಿದರು.ಕೆ ಎಮ್ ಸಿ ಮಣಿಪಾಲದ ವೈದ್ಯರು ಆಗಮಿಸಿ 350ಕ್ಕೂ ಅಧಿಕ ನಾಗರಿಕರನ್ನು ತಪಾಸಣೆ ಮಾಡಿ ಚಿಕಿತ್ಸೆ ಹಾಗೂ ಸಲಹೆ ನೀಡಿದರು.

SIX JESUIT DEACONS ORDAINED PRIESTS AT DIVINE MERCY CHURCH, MANGALURU

Photos : Sambram digital Studio JANANUDI NEWS NETWORK

Six Jesuit deacons were ordained priests by Rt. Rev. Dr Peter Paul Saldanha, Bishop of Mangaluru diocese at Divine Mercy Church, Fatima Retreat House, Jeppu here on Saturday, October 08. The ordained deacons were, Ashwin Cordeiro,Son of Paul Cordeiro and AnithaCordeiro from St Victor’s Church, Nellikar. AshwinRebello, Son of Peter Rebello and Judith Rebello from Immaculate Conception Church, Gangolli. George Pinto, son of late Denis Pinto and Stella Pinto, from Our lady of Perpetual Succour Church, Gantalkatte, JaisonPais, Son of Joseph Pais and Benedicta from Our Lady of Dolours Church, Vittal, Rayan Pereira, Son of Stany Pereira and Benedicta Pereira, From St Anne Church, Kelarai. Royal Saldanha, Son of late Cyprian Saldanha and Alice Saldanha, from St Joseph the Worker Church, Neermarga.

They were ordained during the Eucharistic celebration in which the Bishop was the main celebrant along with Provincial of Karnataka Province, Fr Dionysius Vaz, Fr Anil D’Mello, the Superior of Fatima Retreat House, Fr Melwin Pinto, the Rector of St Aloysius Institutions and other priests.

Bishop began his homily said that a Priest is a symbol of God’s presence and his Compassion on this earth. He highlighted the true role of Priesthood in the Church, after the example of Jesus the High Priest. He called the deacons to be to rooted and grounded to Jesus, the Church and the faithful. He invited them to a life of prayer and holiness.

Later, a short Felicitation programme was held in the Basement of the Divine Mercy church where the parents and relatives of all the newly ordained priests were felicitated. Fr AnushD’Cunha was the coordinator of the liturgy, Fr Alwyn D’Souza did the Master of the Ceremony for ordination, Fr Jason Martis compared the felicitation programme and the new priest Fr JaisonPais  proposed the vote of thanks.

ಶತಮಾನೋತ್ತರ ದಶಮಾನೋತ್ಸವ ಪ್ರಯುಕ್ತ
ಎಮ್.ಸಿ.ಸಿ.ಬ್ಯಾಂಕ್ ಲಿ. ನವರ ಕುಂದಾಪುರ ಶಾಖೆಯ ಗ್ರಾಹಕರ ಸಮಾವೇಶ


ಕುಂದಾಪುರ, ಅ.9: ಬಹಳ ಹಳೆಯ ಬ್ಯಾಂಕ್ ಆದ ಎಮ್.ಸಿ.ಸಿ.ಬ್ಯಾಂಕ್ ಲಿ. ತನ್ನ ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಕುಂದಾಪುರ ಶಾಖೆಯ ಗ್ರಾಹಕರ ಸಮಾವೇಶವನ್ನು ಅ.9 ರಂದು ಸೈಮನ್ ಕಂಫರ್ಟ್ ಸಭಾಂಗಣದಲ್ಲಿ ಎರ್ಪಡಿಸಿತ್ತು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅ|ವಂ|ಸ್ಟ್ಯಾನಿ ತಾವ್ರೊ ದೀಪ ಬೆಳಗಿಸಿ ಉದ್ಘಾಟಿಸಿ “ಎಮ್.ಸಿ.ಸಿ.ಬ್ಯಾಂಕ್ ಲಿ.ಗೆ ಬಹಳ ದೊಡ್ಡ ಚರಿತ್ರೆ ಇದೆ. ಇದರ ಸೇವೆ ತುಂಬ ಅಮೋಘವಾದುದು, ಬೇರೆ ಬ್ಯಾಂಕುಗಳಲ್ಲಿ ಕೌಂಟರ್ಗಳು ಇರುತ್ತವೆ, ಉದ್ಯೋಗಿಗಳು ಇರುತ್ತಾರೆ, ಆದರೆ ಅಲ್ಲಿ ಯಾವ ಸೇವೆ ಎಲ್ಲಿ ಸಿಗುತ್ತದೆ ಎಂದು ಗ್ರಾಹಕರಿಗೆ ತಿಳಿಯುವುದಿಲ್ಲ, ಗ್ರಾಹಕರು ಅಸಹಾಯಕರಾಗುತ್ತಾರೆ, ಉದ್ಯೋಗಿಗಳು ಗ್ರಾಹಕರ ಕಡೆ ಹೆಚ್ಚು ಗಮನ ಕೊಡುವುದಿಲ್ಲ, ಆದರೆ ಎಮ್.ಸಿ.ಸಿ.ಬ್ಯಾಂಕ್ ಲಿ. ನಗುಮುಖದಿಂದ ಸೇವೆಗೆ ಮುಂದಾಗುತ್ತಾರೆ, ಅನೇಕ ಸಂದರ್ಭಗಳಲ್ಲಿ ಮನೆ ಬಾಗಿಲಿಗೆ ಬಂದು ಸೇವೆ ನೀಡುವುದು ಈ ಬ್ಯಾಂಕಿನ ವಿಶೇಷೆತೆಯಾಗಿದೆ” ಎಂದು ಪ್ರಂಶಸಿದರು.
ಮುಖ್ಯ ಅಥಿತಿ ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷರಾದ ವಿಜಯ್ ಎಸ್. ಪೂಜಾರಿ ಎಮ್.ಸಿ.ಸಿ.ಬ್ಯಾಂಕ್ ಲಿಮಿಟೆಡಿನ ಸೇವೆಯ ಬಗ್ಗೆ ಶ್ಲಾಘಿಸಿದರು. ಅತಿಥಿಗಳಾದ ವಿಲ್ಫ್ರೆಡ್ ಡಿಸೋಜಾ, ಹುಸೈನ್ ಹೈಕಾಡಿ, ಪ್ರಭು ಕೆನಡಿ ಕುಂದಾಪುರ ಪುರಸಭೆ ಸದಸ್ಯೆ ರೋಹಿಣಿ ಉದಯಕುಮಾರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಎಮ್.ಸಿ.ಸಿ.ಬ್ಯಾಂಕ್ ಲಿ.ನ ಅಧ್ಯಕ್ಷರಾದ ಅನಿಲ್ ಲೋಬೊ ‘ನಮಗೆ ಗ್ರಾಹಕರೆ ದೇವರು, ನೀವು ಸಕಾಲಕ್ಕೆ ಸಾಲದ ಮರುಪಾವತಿಯನ್ನು ಮಾಡಿದ್ದರಿಂದ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿ ಲಾಭ ಗಳಿಸಿದೆ, ರಾಶ್ಠ್ರೀಕರಣಗಳ ಬ್ಯಾಂಕುಗಳಂತೆ ಎಲ್ಲಾ ಸೇವೆಗಳು ನಮ್ಮ ಬ್ಯಾಂಕಿನಲ್ಲಿ ಲಭ್ಯವಿದೆ, ಕಾಲ ಕಾಲಕ್ಕೆ ಗ್ರಾಹಕರ ಸೇವೆಗಾಗಿ ನಮ್ಮ ಉದ್ಯೋಗಿಗಳನ್ನು ತರಬೇತಿ ನೀಡುತಿದ್ದೇವೆ, ನಮ್ಮ ಉದ್ಯೋಗಿಗಳು ನಗುಮುಖದ ಜೊತೆ ಉತ್ತಮ ಸೇವೆ ನೀಡುತ್ತಾರೆಂದು ಗ್ರಾಹಕರ ಅನುಭವವೇ ಹೇಳುತ್ತದೆ, ಕುಂದಾಪುರ ಶಾಖೆಯ ವ್ಯವಸ್ಥಾಪಕರು ಸೇವೆಗಾಗಿ ಹೆಸರು ಗಳಿಸಿದ್ದಾರೆ ಎಂದು ಗ್ರಾಹಕರ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ಕಾರ್ಯಕ್ರಮದಲ್ಲಿ ಈ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿದವರಿಗೆ, ಹಿರಿಯ ಗ್ರಾಹಕರಿಗೆ ಹಾಗೂ ಉತ್ತಮ ಶಿಕ್ಷಣ ಪಡೆದ ಗ್ರಾಹಕರ ಮಕ್ಕಳನ್ನು ಗೌರವಿಸಲಾಯಿತು.
ಬ್ಯಾಂಕ್ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ, ಪ್ರಧಾನ ವ್ಯವಸ್ಥಾಪಕ ಸುನೀಲ್ ಐವನ್ ಮಿನೇಜೆಸ್, ನಿರ್ದೇಶಕರಾದ ಡಾ|ಜೆರಾಲ್ಡ್ ಪಿಂಟೊ, ಸುಶಾಂತ್ ಸಲ್ದಾನ್ಹಾ, ಫೆಲಿಕ್ಸ್ ಡಿಕ್ರೂಜ್, ಉಪ ವ್ಯವಸ್ಥಾಪಕರದಾದ ರಾಜ್ ಎಫ್. ಮಿನೇಜೆಸ್ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ಶಾಖಾ ನಿರ್ದೇಶಕರಾದ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಮಾಲಿನಿ ಕೆ., ಜ್ಯೋತಿ ಬರೆಟ್ಟೊ ಮತ್ತು ಜೋನಿಟಾ ರೆಬೆಲ್ಲೊ ನಿರೂಪಿಸಿದರು. ಕುಂದಾಪುರ ಶಾಖಾ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್ ವಂದಿಸಿದರು.

ಕುಂದಾಪುರ:ಸೆಕ್ಯುಲರ್ ಸಂತ ಫ್ರಾನ್ಸಿಸ್ಕನ್ ಸಭಾದಿಂದ ಸಂತ ಫ್ರಾನ್ಸಿಸ್ ಆಸೀಸಿಯವರ ಹಬ್ಬದ ಆಚರಣೆ


ಕುಂದಾಪುರ, ಅ.9: ಕುಂದಾಪುರ ರೋಜರಿ ಚರ್ಚಿನ ಸಂತ ಫ್ರಾನ್ಸಿಕನ್ ಸಭಾದಿಂದ ಸಂತ ಫ್ರಾನ್ಸಿಸ್ ಆಸೀಸಿಯವರ ಹಬ್ಬದ ಆಚರಣೆಯನ್ನು ಮಾಡಿತು.ಮೊದಲಿಗೆ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ “ಸಂತ ಫ್ರಾನ್ಸಿಸ್ ಆಸೀಸಿ ಶ್ರೀಮಂತರಾದರೂ, ಬಹಳ ಬಡತನವನ್ನು ಆರಿಸಿ ಜೀವಿಸಿದರು. ತನ್ನದೆಲ್ಲವನ್ನು ಬಡವರಿಗೆ ಹಂಚಿದ ಸರಳ ಜೀವಿ, ವಿನಯತೆಯಿಂದ ಅವರು ಜೀವಿಸಿದವರು, ಅದರಂತೆ ಸೆಕ್ಯುಲರ್ ಸಂತ ಫ್ರಾನ್ಸಿಕನ್ ಸಭಾದವರು ಜೀವಿಸಬೇಕು’ ಎಂದು ಸಂದೇಶ ನೀಡಿದರು. ಫಾ|ಸ್ಟ್ಯಾನಿ ತಾವ್ರೊ “ಸಂತ ಫ್ರಾನ್ಸಿಸ್ ಆಸೀಸಿ ಒರ್ವ ಪ್ರಕ್ರತಿ ಪ್ರೇಮಿ, ಅವರು ಮರ ಗೀಡ ಕಾಡುಗಳನ್ನು ಪ್ರೀತಿಸಿದರು, ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿ ಪಕ್ಷಿಗಳನ್ನು ಅವರು ಪ್ರೀತಿಸಿದರು, ಅವರು ಶ್ರೀಮಂತ ಕುಟುಂಬದವರು, ಆದರೂ ಅವರು ಬಡವರನ್ನು ಪ್ರೀತಿಸಿದರು, ಆಗಿನ ಕಾಲದಲ್ಲಿ ಬಹಳ ಅಪಾಯಕಾರಿಯಾದ ಕುಷ್ಟ ರೋಗಿಗಳನ್ನು ಅವರು ಆರೈಕೆ ಮಾಡಿದ ಸಂತರವರು” ಎಂದು ತಿಳಿಸಿದರು.ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್ ಶುಭ ಕೋರಿದರು. ಒಳಾಂಗಿಣ ಆಟಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.
ಅಧ್ಯಕ್ಷೆ ಡಾ|ಸೋನಿ ಡಿಕೋಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ ಮರಿಯಾ ಬರೆಟ್ಟೊ ವರದಿ ವಾಚಿಸಿದರು. ಉಪಾಧ್ಯೆಕ್ಷೆ ಆಲಿಸ್ ಬಾಂಜ್ ವಂದಿಸಿದರು. ಡಾಯಾನಾ ಡಿಆಲ್ಮೇಡಾ ವಂದಿಸಿದರು
.

“ಬಾಲವನದ ಜಾದೂಗಾರ” ಎಲ್ಲಾ ವಿದ್ಯಾರ್ಥಿಗಳು ನೋಡಬೇಕು -ಸಚಿವ ಕೋಟ ಶ್ರೀನಿವಾಸ ಪೂಜಾರಿ


“ವಸಂತ ಪ್ರೊಡಕ್ಷನ್ ಹೌಸ್ ಕುಂದಾಪುರದ ಕೆ. ಪಿ. ಶ್ರೀಶನ್ ನಿರ್ಮಾಣದ ಹೊಣೆ ಹೊತ್ತು ಖ್ಯಾತ ನಿರ್ದೇಶಕ ಇ. ಎಂ. ಅಶ್ರಫ್ ನಿರ್ದೇಶಿಸಿದ “ಬಾಲವನದ ಜಾದೂಗಾರ” ಒಂದು ಅತ್ಯುತ್ತಮ ಶೈಕ್ಷಣಿಕ ಕಿರು ಚಿತ್ರವಾಗಿದ್ದು ಎಲ್ಲ ಮಕ್ಕಳೂ ಹೆತ್ತವರೂ ಇದನ್ನು ನೋಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಚಿತ್ರ ನೋಡಲು ಅನುಕೂಲವಾಗುವಂತೆ ವ್ಯವಸ್ಥೆ ಆಗಬೇಕು. ನಾವೆಲ್ಲ ಅಭಿಮಾನದಿಂದ, ಹೆಮ್ಮೆಯಿಂದ ಕಾಣುವ ಕೋಟ ಶಿವರಾಮ ಕಾರಂತರ ಬದುಕು, ಸಾಹಿತ್ಯ, ಮಕ್ಕಳ ಮನೋವಿಕಾಸಕ್ಕಾಗಿ ಅವರು ಮಾಡಿದ ಕಾರ್ಯ ಸಾಧನೆಗಳ ಹಿನ್ನಲೆಯಲ್ಲಿ ಈ ಚಿತ್ರ ನಿರ್ಮಾಣಗೊಂಡಿರುವುದರಿಂದ ಇದು ಇತರ ಎಲ್ಲ ಭಾಷೆಗಳಲ್ಲೂ ಪ್ರದರ್ಶನವಾಗುವಂತಾಗಬೇಕು” ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ “ಬಾಲವನದ ಜಾದೂಗಾರ” ಕಿರು ಚಿತ್ರದ ತಂಡವನ್ನು ಗೌರವಿಸುತ್ತಾ ನುಡಿದರು.
ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ “ಬಾಲವನದ ಜಾದೂಗಾರ” ಚಿತ್ರ ಅ. 8 ರಂದು ಬಿಡುಗಡೆಗೊಂಡಿತ್ತು.
“ಕೋಟದ ಕಾರಂತ ಥೀಂ ಪಾರ್ಕ್‍ನಲ್ಲಿ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದಾಗ ಇಷ್ಟು ಉತ್ತಮ ಚಿತ್ರವಾಗಿ ಬಿಡುಗಡೆಯಾಗುವ ಬಗ್ಗೆ ಕಲ್ಪನೆ ಇರಲಿಲ್ಲ. ಆದರೆ ಚಿತ್ರ ನೋಡಿದಾಗ ಅದ್ಬುತ ಅನಿಸಿತು. ಕಾರಂತರ ಬಹುತೇಕ ಚಿಂತನೆಯ ಹಿನ್ನಲೆಯಲ್ಲಿ ಪರಿಣಾಮಕಾರಿಯಾಗಿ 35 ನಿಮಿಷಗಳೊಳಗೆ ಕಥೆ ನಿರೂಪಿಸಿರುವುದು ಅಭಿನಂದನೀಯ” ಎಂದು ಅವರು ಹೇಳಿದರು.
ಚಿತ್ರದ ನಿರ್ದೇಶಕ ಇ. ಎಂ. ಅಶ್ರಫ್ ಹಾಗೂ ನಿರ್ಮಾಪಕ ಕೆ. ಪಿ. ಶ್ರೀಶನ್ ಅವರನ್ನು ಸಚಿವರು ಗೌರವಿಸಿದರು.
ಚಿತ್ರದ ಕಲಾವಿದರು, ತಂತ್ರಜ್ಞರನ್ನು ಅವರು ಅಭಿನಂದಿಸಿ ಗೌರವಿಸಿದರು. ಬಾಲ ನಟ ಆರೊನ್ ಪಾಯಸ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕೋಟ ಡಾ. ಕಾರಂತ ಪ್ರತಿಷ್ಠಾನ ಅಧ್ಯಕ್ಷ ಆನಂದ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕಮಾರ್, ಶ್ರೀ ವೆಂಕಟರಮಣ ಶೈಕ್ಷಣಿಕ ಸಂಸ್ಥೆಯ ಸಂಚಾಲಕರಾದ ಕೆ. ರಾಧಾಕೃಷ್ಣ ಶೆಣೈ ಅಭಿನಂದನೆ ಸಲ್ಲಿಸಿದರು. ಕೇರಳ ಸಮಾಜ ಉಡುಪಿ ಅಧ್ಯಕ್ಷ, ಸುಗುಣ ಕುಮಾರ್, ಕಾರ್ಯದರ್ಶಿ ಬಿನೀಶ್ ಉಪಸ್ಥಿತರಿದ್ದರು.
ನಿರ್ಮಾಪಕ ಕೆ. ಪಿ. ಶ್ರೀಶನ್ ಸ್ವಾಗತಿಸಿದರು. ನಿರ್ದೇಶಕ ಇ. ಎಂ. ಅಶ್ರಫ್ ಚಿತ್ರೀಕರಣ ಯಶಸ್ವಿಯಾಗಿ ನಡೆಯಲು ಸಹಕರಿಸಿದರಿಗೆ ಕೃತಜ್ಞತೆ ಸಲ್ಲಿಸಿದರು.
ಚಿತ್ರಕಥೆ ಬರೆದ ಪಾರ್ವತಿ ಜಿ. ಐತಾಳ ಚಿತ್ರದ ಕಲಾವಿದರಾದ ಎ. ಎಸ್. ಎನ್. ಹೆಬ್ಬಾರ್, ಡಾ. ಕೆ. ಎಸ್. ಕಾರಂತ್, ಸಮಾಜದ ಗಣ್ಯರಾದ ಪ್ರಶಾಂತ್ ತೋಳಾರ್, ಮನೋಜ್ ನಾಯರ್, ಮುತ್ತಯ್ಯ ಶೆಟ್ಟಿ, ಪ್ಲೆಸೆಂಟ್ ಇಬ್ರಾಹಿಂ ಸಾಹೇಬ್, ವಿಠಲ ಕಾಮತ್ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಚಿತ್ರದಲ್ಲಿ ನಟಿಸಿದ ಸಿ. ಪ್ರದೀಪ್, ಶ್ರೀಮತಿ ನಾಗರತ್ನ, ಸಂದೇಶ್ ಶೆಟ್ಟಿ, ಸಂಕಲನ ಮಾಡಿದ ಹರಿ ಜಿ. ನಾಯರ್, ಸಹ ನಿರ್ದೇಶಕ ಶೈಜು ದೇವದಾಸ್, ಸಹಾಯಕ ನಿರ್ದೇಶಕಿ ಜೆಸ್ಸಿ ಎಲಿಜಬೆತ್ ಜೋಸೆಫ್ ಹಾಗೂ ಬಾಲ ಕಲಾವಿದರಾದ ನೀತು, ಪ್ರಾರ್ಥನಾ ಮುಂತಾದವರು ಉಪಸ್ಥಿತರಿದ್ದರು.
“ಕುಂದಪ್ರಭ” ಸಂಪಾದಕ ಯು. ಎಸ್. ಶೆಣೈ ನಿರೂಪಿಸಿದರು. ಪ್ರೊಡಕ್ಷನ್ ಕಂಟ್ರೋಲರ್ ಜೊಯ್ ಜಿ. ಕಾರ್ವೆಲ್ಲೊ, ಭುಜಂಗ ವಂದಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿ ಸರ್ಕಾರ ಸಾಮಾಜಿಕ ನ್ಯಾಯ ಎತ್ತಿಹಿಡಿದಿದೆ: ಡಾ. ಕೆ.ಎನ್.ವೇಣುಗೋಪಾಲ್

ಶ್ರೀನಿವಾಸಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯ ಎತ್ತಿಹಿಡಿದಿದೆ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ, ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದಕ್ಕಾಗಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಎರಡೂ ಸಮುದಾಯಗಳ ಬಹುದಿನಗಳ ಬೇಡಿಕೆಯಾಗಿತ್ತು. ಅದನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂ ಸದಸ್ಯರು ಈಡೇರಿಸಿದ್ದಾರೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಿಂದ ಶೇ.17ಕ್ಕೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಪಂಗಡದ ಮೀಸಲಾತಿ ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ. ಇದಕ್ಕೆ ಕಾರಣರಾದ ಮುಖ್ಯ ಮಂತ್ರಿ, ಸಚಿವ ಸಂಪುಟದ ಸದಸ್ಯರು ಹಾಗೂ ಬೆಂಬಲಿಸಿದ ಲೋಕಸಭಾ ಸದಸ್ಯರು ಅಭಿನಂದನಾರ್ಹರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆ ಮಾಡಿದರು. ಬಸ್ ನಿಲ್ದಾಣ ವೃತ್ತದಿಂದ ಅಂಬೇಡ್ಕರ್ ಉದ್ಯಾನಕ್ಕೆ ಮೆರವಣಿಗೆ ಹೊರಟ ಮುಖಂಡರು ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಮುಖಂಡರಾದ ರೋಣೂರು ಚಂದ್ರಶೇಖರ್, ಕೊಟ್ರಗುಳಿ ನಾರಾಯಣಸ್ವಮಿ, ಶಫಿವುಲ್ಲಾ, ಜೆಸಿಬಿ ಅಶೋಕರೆಡ್ಡಿ, ವಿ.ನಿಶಾಂತ್ ಕುಮಾರ್, ಜಯಣ್ಣ, ಹೊದಲಿ ನಾರಾಯಣಸ್ವಾಮಿ, ರಾಜು, ಶ್ರೀನಾಥಬಾಬು, ಆಂಜಿನಪ್ಪ ಇದ್ದರು.