

ಕುಂದಾಪುರ; ಭಾದ್ರಪದ ಶುಕ್ಲದ ಚೌತಿಯ ಸಡಗರಲ್ಲಿ ಪೂಜಿಸುವ ಉದ್ಭವ ಗಣಪತಿಯು ಮೂಷಿಕದೊಂದಿಗೆ, ಶಿವಲಿಂಗಕ್ಕೆ ಪುಷ್ಪಾರ್ಚಣೆಯ ದೃಶ್ಯವನ್ನು ಸಮಸ್ತ ನಾಡಿನ ಜನತೆಗೆ ಶುಭಾಷಯ ಸಾರುವ ಮರಳು ಶಿಲ್ಪಾಕೃತಿನ್ನು ಗಣೇಶ ಚತುರ್ಥಿಯ ಅಂಗವಾಗಿ ಕುಂದಾಪುರದ ಹಳೆಅಳಿವೆ ಕಡಲ ತೀರ ಕೋಟೇಶ್ವರ, ಕುಂದಾಪುರದಲ್ಲಿ ‘ಸ್ಯಾಂಡ್ ಥೀಂ’ ಉಡುಪಿ ತಂಡದಿಂದ ರಚಿತವಾಗಿದೆ.
‘ಜೈ ಗಣೇಶ’ ಎಂಬ ಶೀರ್ಷಿಕೆಯೊಂದಿಗೆ 4 ಅಡಿ ಮತ್ತು 6 ಅಡಿ ಎತ್ತರ ಅಗಲಗಳುಳ್ಳ ಈ ಕಲಾಕೃತಿಯು ಆಕರ್ಷಕವಾಗಿ ಮೂಡಿಬಂದಿದೆ. ಇದನ್ನು ಸ್ಯಾಂಡ್ ಥೀಂ’ ಉಡುಪಿ ತಂಡದ ಸದಸ್ಯರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಇವರಿಂದ ರಚಿತವಾಗಿದೆ.



