

ಶ್ರೀನಿವಾಸಪುರ : ಸರ್ಕಾರಿ ಶಾಲೆಗಳಲ್ಲಿ ಉತ್ತಮವಾಗಿ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಜವಾಬ್ದಾರಿ ಹಾಗು ಶಿಕ್ಷಕರ ಜವಾಬ್ದಾರಿ ಇದೆ, ಇದರೊಂದಿಗೆ ಮಕ್ಕಳು ಹಾಗು ಪೋಷಕರು ಸಹಕರಿಸಬೇಕು . ಮಕ್ಕಳ ಚಟುವಟಿಕೆಗಳ ಬಗ್ಗೆ ಶಿಕ್ಷಕರು ನಿಗ ವಹಸಿಬೇಕಾಗಿದೆ. ಶಾಲೆಗೆ ಏನು ಅಗತ್ಯವಾಗಿ ಬೇಕಾಗಿರುವುದರ , ಬಗ್ಗೆ ಚರ್ಚೆ ಮಾಡಿ, ಯಾರಾದರೂ ದಾನಿಗಳು, ಹಳೇ ವಿದ್ಯಾರ್ಥಿಗಳ ಸಂಘ ಇದ್ದರೆ, ಅವರ ಸಹಾಯವನ್ನು ಪಡೆಯವಂತೆ ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಉನ್ನತೀಕರಣ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೋಷಕರಿಗೆ ಒಂದು ಅರ್ಜಿ ನೀಡಲಾಗುವುದು, ಅದರಲ್ಲಿ ಶಾಲೆಗೆ ಸಂಬಂದಿಸಿದಂತೆ ಕುಂದುಕೊರತೆಗಳ ಹಾಗು ಶೈಕ್ಷಣಿಕ ವಿಚಾರವಾಗಿ ಬರೆದು ಕೊಡಬೇಕು ಎಂದರು. ಇದರಿಂದ ಇಲಾಖೆಯಿಂದ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು ಭರವಸೆ ನೀಡಿದರು. ನಮ್ಮ ಶಾಲೆ, ನಮ್ಮ ಜವಾಬ್ದಾರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮವು ಕಾರ್ಯಗತವಾಗಬೇಕಾದರೆ ಪೋಷಕರ , ದಾನಿಗಳ ಸಹಕಾರ ಅಗತ್ಯ ಎಂದರು.
ಈ ಶಾಲೆಯು ಒಳ್ಳೇಯ ಶೈಕ್ಷಣಿಕ ವಾತವರಣವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ನಾನು, ಬಿಇಒ ರವರು ಈ ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು. ಪೋಷಕರು ಶಾಲೆಯ ಬಗ್ಗೆ ಸಮಸ್ಯೆ ಇದ್ದರೆ ತಿಳಿದಾಗ , ನಾವು ಸಹಕರಿಸುತ್ತೇವೆ ಎಂದರು. ಸರ್ಕಾರದಿಂದ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ, ಮಕ್ಕಳ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗು ಮಧ್ಯಾಹ್ನದ ಬಿಸಿಯೂಟ, ಶಿಕ್ಷಕರು ಮಾಡುವಂತಹ ಪಾಠಪ್ರವಚನಗಳ ಬಗ್ಗೆ ಪರಿಶೀಲಿಸಬೇಕು . ಎಲ್ಲರೂ ಸೇರಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಮಕ್ಕಳ ಶೈಕ್ಷಣಿಕ ಪ್ರಗತಿ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ ಎಂದರು.
ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಮಾತನಾಡಿ ಅಕ್ಷರದಾಸೋಹಕ್ಕೆ ಸಂಬಂದಿಸಿದಂತೆ 35 ಶೈಕ್ಷಣಿಕ ಜಿಲ್ಲೆಗಳು ಇದ್ದು, ಅದರಲ್ಲಿ 204 ವಲಯ, 408 ಕಾರ್ಯಕ್ರಮಗಳಲ್ಲಿ ತಾಲೂಕಿಗೆ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ಇದೇ ತಿಂಗಳ 16 ನೇ ತಾರೀಖು ಲಕ್ಷ್ಮೀಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗುವುದು.
ಇಂದು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಂತ ಹೆಚ್ಚಿನ ರೀತಿಯಲ್ಲಿ ಶೈಕ್ಷಣಿಕ ಪ್ರಗತಿ ಕಾಣುತ್ತಿದೆ. ಅಲ್ಲದೆ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅನೇಕ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿರಂತರ ಕಲಿಕೆಗೆ ಆಧಾರ ಬನ್ನಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ, ಕಲಿಕೆಯನ್ನು ಪೋಷಿಸುವಂತೆ ಮನವಿ ಮಾಡಿದರು.
ವಿಷಯ ಪರಿವೀಕ್ಷಕ ಕೆ.ವಿ.ಶಂಕರಪ್ಪ, ಬಿರ್ಸಿ ಕೆ.ಸಿ.ವಸಂತ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ಪುರಸಭಾ ಮುಖ್ಯಾಧಿಕಾರಿ ವಿ.ನಾಗರಾಜ್, ಎಸ್ಡಿಎಂಸಿ ಅಧ್ಯಕ್ಷ ಆನಂದ್, ಸದಸ್ಯ ನರಸಿಂಹಮೂರ್ತಿ, ಸಿಆರ್ಪಿಗಳಾದ ರಾಧಕೃಷ್ಣ, ಚೆನ್ನಪ್ಪ, ಮಂಜುನಾಥರೆಡ್ಡಿ, ಬಿಆರ್ಪಿಗಳಾದ ನಾಗೇಂದ್ರ ಪ್ರಸಾದ್, ವೆಂಕಟಾಚಲಪತಿ, ಉರ್ದುಭಾಷೆಯ ಸಿಆರ್ಪಿಗಳಾದ ಆರೀಫ್ಪಾಷ, ನಾಜೀಮಾಬೇಗಂ, ಇಸಿಒ ಸುಬ್ರಮಣಿ ಹಾಗು ಪೋಷಕರು ಹಾಜರಿದ್ದರು.

