

ಶ್ರೀನಿವಾಸಪುರ : ಇಲ್ಲಿ ಅನೇಕ ದಲಿತರು , ಕಡುಬಡ ರೈತರು ಇದ್ದು, ಭೂಮಿ ಸರ್ಕಾರಕ್ಕೆ ನೀಡಿದರೆ ನಿರ್ಗತಿಕರು ಆಗುವುದು ಖಚಿತವಾಗಿದೆ. ಈ ಹಿಂದೆ ನಡೆದ ಸಭೆಯಲ್ಲಿ ರೈತರು ನಾನು ಭೂಮಿಯನ್ನ ಕೊಡುವುದಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಈವತ್ತು ಸಹ ಅಷ್ಟೆ. ನಾವು ಯಾರು ಬ್ರೋಕರ್ಸ್ ಅಲ್ಲ. ಇಲ್ಲಿಗೆ ರಾಜಕಾರಣ ಮಾಡಲು ಬಂದಿಲ್ಲ. ನಾನು ಎರಡು ವರ್ಷ ಮೂರು ತಿಂಗಳಿನಿಂದ ಹೊರ ಬಂದಿಲ್ಲ. ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು .
ತಾಲೂಕಿನ ಯದರೂರು ಗ್ರಾಮದಲ್ಲಿ ಶುಕ್ರವಾರ ಕೈಗಾರಿಕಾ ವಲಯ ಸ್ಥಾಪಿಸಲು ಬಂದಿದ್ದ ಭೂಸ್ವಾದಿನಾ ಅಧಿಕಾರಿಗಳೊಂದಿಗೆ ರೈತರೊಂದಿಗೆ ಸಮಾಲೋಚಿಸಿ ಮಾತನಾಡಿದರು.
ಈ ಗ್ರಾಮದಲ್ಲಿ ಅತಿ ಸಣ್ಣ ರೈತರು ಇದ್ದು, ಸರ್ಕಾರ ಕೈಗಾರಿಕಾ ವಲಯವನ್ನು ಸ್ಥಾಪಿಸಲು ಭೂಮಿಯನ್ನು 1044 ಎಕರೆ ಸರ್ವೇ ಭೂಮಿಯನ್ನು ವಶಕ್ಕೆ ಪಡೆಯಲು ಸರ್ಕಾರ ತೀರ್ಮಾನಿಸಿ, ಪ್ರಕಟನೆ ಹೋರಡಿಸಿ, ಭೂಸ್ವಾದಿನಾ ಮಾಡಿಕೊಳ್ಳಲು ನೋಟಿಸ್ ನೀಡಿದೆ . ನೋಟಿಸ್ ಬಂದಿರುವ ರೈತರನ್ನು ನಾನು ಮಾತನಾಡಿಸಿದೆ . ಭೂಮಿಯನ್ನು ಕೊಡುತ್ತೇವೆ ಎಂದು ಯಾವ ರೈತ ಸ್ಥಳಕ್ಕೆ ಬಂದಿಲ್ಲ. ನನ್ನ ಬಳಿ ಬಂದವರ 79 ರೈತರು ನನಗೆ 3 ಗುಂಟೆ ಇದೆ, 6 ಗಂಟೆ ಮಾತ್ರ ಇದೆ ಎಂದು ಹೇಳಿ ತಮ್ಮ ನೋವನ್ನು ತೋಡಿಕೊಂಡು, ನಾವು ನಮ್ಮ ಭೂಮಿಯನ್ನು ಕೊಡುವುದಿಲ್ಲ ಎಂದಿದ್ದಾರೆ. ಏನೇ ಆಗಲಿ ಇಲ್ಲಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ಹೋಗಿದೆ ಎಂದರು.
ಸ್ವ ಇಚ್ಚೆಯಿಂದ ಯಾವ ರೈತರು ಭೂಮಿಯನ್ನು ಕೊಟ್ಟರೆ ತೊಗೊಳ್ಳಿ . ರೈತರು ಕೊಡುವುದಿಲ್ಲವೆಂದರೆ ಆ ಜಮೀನು ಮಟ್ಟಬಾರದು ಎಂದು ಎಚ್ಚರಿಸಿದರು. ಅವರ ರಕ್ಷಣೆಗೆ ನಾವು ಇದ್ದೇವೆ ಎಂದರು.
ಇತ್ತೀಚಿಗೆ ಮುಖ್ಯಮಂತ್ರಿಗಳು ದೇವನಹಳ್ಳಿಯ ಭೂ ಸ್ವಾದೀನದ ಬಗ್ಗೆ ನಾವು ಇಷ್ಟವಿಲ್ಲದೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ಭೂಸ್ವಾಧೀನವನ್ನು ಡ್ರಾಪ್ ಮಾಡಿದ್ದೇವೆ ಎಂದಿದ್ದಾರೆ. ಸ್ವ ಇಚ್ಚೆಯಿಂದ ಕೊಡುವವರು ಕೊಡಲಿ, ಯಾವುದೇ ಕಾರಣಕ್ಕೂ ಬಲವಂತವಾಗಿ ಭೂಮಿಯನ್ನು ವಶಕ್ಕೆ ಪಡೆಯಬಾರದು ಅಧಿಕಾರಿಗಳಿಗೆ ತಿಳಿಸಿದರು. ಸರ್ಕಾರ ಭೂಮಿ ಇದ್ದರೆ ಸಾವಕಾಶವಾಗಿ ಕೈಗಾರಿಕಾ ವಲಯವನ್ನು ಸ್ಥಾಪಿಸಿ ನಮ್ಮ ಅಭ್ಯಂತರವಿಲ್ಲ. ಬಲವಂತವಾಗಿ ಭೂಮಿಯನ್ನು ಪಡೆದರೆ ದೇವಹಳ್ಳಿ ರೀತಿ ಮತ್ತೊಂದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಭೂಮಿ ಉಳಿಸಲು ಹೋರಾಟ ಹಮ್ಮಿಕೊಳ್ಳಲಾಗುವುದು.
ವಿಶೇಷ ಭೂ ಸ್ವಾದೀನ ಅಧಿಕಾರಿ ವೆಂಕಟಲಕ್ಷ್ಮಿ ಮಾತನಾಡಿ ಈ ಹಿಂದೆ ಗೈರುಹಾಜರಾದವರಿಗೆ ಇಂದು (ಶುಕ್ರವಾರ)ಅವಕಾಶ ನೀಡಿದ್ದೇವೆ . 1273 ಎಕರೆ 24 ಗುಂಟೆ ಗೆ ಪ್ರಾಥಮಿಕ ಅದಿಸೂಚನೆ ಮಾಡಲಾಗಿದೆ. ಈ ಗಾಗಲೇ ಶೇ.70 ರಷ್ಟು ವಿಚಾರಣೆ ಮುಗಿದೆ. 372 ಖಾತೆ ನಂಬರ್ಸ್ ಇದ್ದು, . 150 ಸರ್ವೇ ನಂಬರ್ ಉಳಿದಿದೆ. ಕೆಲ ರೈತರು ಭೂಮಿಯನ್ನು ಕೊಡಲು ಒಪ್ಪಿರುವುದಿಲ್ಲ ಎಂಬ ಪ್ರಶ್ನೆಗೆ ನಾನು ರೈತರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.
ಕೊಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್, ಮುಖಂಡರಾದ ಬ್ಯಾಟಪ್ಪ, ಯಲ್ದೂರು ಗೌರಮ್ಮ, ಸುಧಾಕರ್, ಪಾತಕೋಟೆ ನವೀನ್ಕುಮಾರ್, ಸುರೇಶ್ಗೌಡ, ಕೊಳತೂರು ಶ್ರೀನಿವಾಸ್, ಕೋಡಿಪಲ್ಲಿ ವಿಶ್ವ, ಅಡಿಚಂಬಕೂರು ಗೋಪಾಲ್, ಯದರೂರು ಕೃಷ್ಣಪ್ಪ, ಲಕ್ಷ್ಮೀಸಾಗರ ವಿನೋಧ್ ಇದ್ದರು.

