

ಕೋಟೇಶ್ವರ: ಶಿಕ್ಷಕ ದಿನಾಚರಣೆ ಪ್ರಯುಕ್ತ ಕೋಟೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಸಂಭ್ರಮದಿಂದ ಶಿಕ್ಷಕ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ, ಪತ್ರಕರ್ತ ಚಂದ್ರಶೇಖರ ಬೀಜಾಡಿ ಅವರನ್ನು ಫಲಪುಷ್ಪ, ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಕೋಟೇಶ್ವರ ಲಯನ್ಸ್ ಕ್ಲಬ್ನ ಪ್ರಮುಖ ದಿನಕರ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕೋಟೇಶ್ವರದ ಅಧ್ಯಕ್ಷ ನಿತ್ಯಾನಂದ ಕೋಟೇಶ್ವರ ವಹಿಸಿದ್ದರು. ಕೋಟೇಶ್ವರ ಲಯನ್ಸ್ನ ಪ್ರಮುಖರಾದ ಏಕನಾಥ ಬೋಳಾರ್, ರಾಮಚಂದ್ರ ಆಚಾರ್ಯ, ಭೋಜರಾಜ ಶೆಟ್ಟಿ, ಕೃಷ್ಣಯ್ಯ ಆಚಾರ್ಯ, ರೇಖಾರಾಮಚಂದ್ರ ಆಚಾರ್ಯ,ಪ್ರೇಮಲತಾ ದಿನಕರ ಶೆಟ್ಟಿ, ವಿಶ್ವನಾಥ, ಅಕ್ಷರ, ಕೃಷಿಕಾ, ವೈನವ್, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ, ಬೀಜಾಡಿ ಮಿತ್ರ ಸಂಗಮದ ಗಿರೀಶ್ ಕೆ.ಎಸ್, ಪ್ರತಿಮಾ ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು. ಕೋಟೇಶ್ವರ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಸೌಮ್ಯನಿತ್ಯಾನಂದ ಸ್ವಾಗತಿಸಿದರು. ಖಜಾಂಚಿ ಮಂಜುನಾಥ ಕಾಮತ್ ವಂದಿಸಿದರು.

