HOLY ROSARY CHURCH, KUNDAPUR – 450 th JUBILEE SOUVENIR 2021

Final Transfer and Appointment list of Udupi Diocese (included first transfer list also )

Press Note is released by Fr Roshan D’Souza, Chancellor of Udupi diocese

DIOCESE OF UDUPI

Transfers and Appointments – 2023

Sl. NoNameFromTow.e.f.
 Msgr Baptist MenezesVicar General Retired, Res. Shirva01.04.2023
 Rev.Fr Ferdinand GonsalvesParish Priest,Pangla (Continues till 10.06.2023)Vicar General, Res. Bishop’s House, Udupi01.04.2023 10.06.2023
 Rev. Fr Ashwin Rebello, SJAsst. Priest, Karkal – AtturBack to Province09.04.2023
 Rev. Fr Norbert D’Mello CSCAsst. Priest, Karkal TownBack to Province08.05.2023
 Rev. Fr Nelson Steevan Peris Asst. Priest, ShirvaBack to Mangalore Diocese14. 05.2023
 Rev.Fr Ronson PintoMangalore DioceseAsst. Priest, Shirva     17.05.2023
 Rev. Fr Anand Noronha SDBParish Priest, KelmbetBack to the Province22.05.2023
 Rev. Fr Arvind Severes SDBPanjim Province (SDB)Parish Priest, Kelmbet22.05.2023
 Rev. Fr Ankith D’Souza SACAsst. Priest, BelmanBack to the Province22.05.2023
 Rev. Fr Anil Francis PintoAsst. Priest, PanglaBack to Mangalore Diocese23.05.2023
 Rev. Fr Arnold Mathias SDBPanjim Province (SDB)Asst. Priest, Belman24.05.2023
 Rev. Fr Larry Franklin PintoMangalore DioceseAsst. Priest, Attur-Karkal24.05.2023
 Rev. Fr Peter Fernandes OPAsst. Priest, KolalgiriBack to Province01.06.2023
 Rev. Fr Jithesh Leonard D’Souza SACB.V.M. Province (SAC)Asst. Priest, Karkal Town01.06.2023
 Rev. Fr Cyril Menezes OCDParish Priest, KoteshwarBack to Province01.06.2023
 Rev. Fr Praveen Pinto OCDKarnataka-Goa Province (OCD)Parish Priest, Koteshwar01.06.2023
 Rev. FrAlwyn Sequeira OCDKarnataka-Goa Province (OCD)Editor, Uzvaad Fortnightly02.06.2023
 Rev. Fr Victor Anil CornelioDiocesan Vocation Promoter (continues)Director and Chaplain, Belve03.06.2023
 Rev. Fr Alexander LewisDirector and Chaplain, BelveParish Priest, Mundkur05.06.2023
 Rev. Fr Ronald MirandaParish Priest, MundkurParish Priest, Barkur06.06.2023
 Rev. Fr Philip Neri AranhaParish Priest, BarkurParish Priest, Kemmannu07.06.2023
 Rev. Fr Victor Gerald D’SouzaParish Priest, KemmannuParish Priest, Pethri08.06.2023
 Rev. Fr Joseph MachadoParish Priest, PethriParish Priest, Kolalgiri09.06.2023
 Rev. Fr Prakash Anil  CastelinoParish Priest, KolalgiriParish Priest, Pangla10.06.2023
 Rev. Fr Vincent CrastaSecretary, CESU (Continues)Director, ‘Anugraha’ Pastoral Centre, Santhekatte (additional)12.06.2023
 Rev. Fr Harold PereiraDirector, ‘Anugraha’ Pastoral CentreParochial Administrator, Kanajar13.06.2023
 Rev. Fr Vishal LoboParish Priest, KanajarStudies, Pune15.06.2023
 Rev Fr Oliver Christ Nazareth CSCSouth India Province (CSC)Asst Priest, Santhekatte-Kallianpur16.06.2023
 Rev. Fr Henry D’Souza SFXGoa Province (SFX)Asst. Priest, Pangla20.06.2023
 Rev. Fr Royson Joel FernandesEditor, Uzvaad FortnightlyStudies, Rome28.06.2023
 Rev. Fr Walter D’MelloJudicial Vicar, Bishop’s HouseBack to Mangalore Diocese30.06.2023
 Rev. Fr Roshan D’SouzaChancellor, Bishop’s House (Continues)Judicial Vicar, Bishop’s House (additional)30.06.2023
 Rev.  Fr Steevan FernandesDirector, Youth Commission (Continues)Guardian, Milagres Home, Kallianpur (additional)01.07.2023
 Rev. Fr Reginald PintoGuardian, Milagres Home, KallianpurDirector, Sampada (Continues); Residence: Pastoral Centre01.07.2023
 Rev. Fr Denis Alexander D’Sa                     —————-Diocesan Director – Social Communication Commission01.07.2023
 Mr Edward Larsen D’Souza                     —————-Diocesan Director – Justice and Peace Commission01.07.2023
 Dr Gerald Pinto                   —————-Diocesan Director – Laity Commission15.07.2023

        X Gerald I. Lobo

     Bishop of Udupi

Confirmation ceremony for 64 children at Our Lady of Miracles Church, Mangalore /ಮಂಗಳೂರಿನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ನಲ್ಲಿ 64 ಮಕ್ಕಳಿಗೆ ದೃಢೀಕರಣ ಸಂಸ್ಕಾರ

Mangalore, June 28: Most Rev. Dr Peter Paul Saldanha administered the Sacrament of Confirmation on 64 students at, Our Lady of Miracles Church, Mangalore.

In his homily Bishop highlighted the importance of the Sacrament and the holy oils. He also mentioned about courage that is received through this Sacrament.

Along with the Bishop, the Parish priest and the other priests of the parish concelebrated the Holy Eucharist. After the mass children were presented with the Holy Bible each to create taste and love for Word of God.

The children were congratulated on the occasion. A good number of parishioners were present on the occasion.

ಮಂಗಳೂರಿನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ನಲ್ಲಿ 64 ಮಕ್ಕಳಿಗೆ ದೃಢೀಕರಣ ಸಂಸ್ಕಾರ

ಮಂಗಳೂರು, ಜೂ.28: ಮಂಗಳೂರಿನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್‌ನಲ್ಲಿ ಅತೀ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಅವರು 64 ವಿದ್ಯಾರ್ಥಿಗಳಿಗೆ ದೃಢೀಕರಣದ ಸಂಸ್ಕಾರವನ್ನು ನೆರವೇರಿಸಿದರು.
ಬಿಷಪ್ ಅವರ ಧರ್ಮೋಪದೇಶದಲ್ಲಿ ಸಂಸ್ಕಾರ ಮತ್ತು ಪವಿತ್ರ ತೈಲಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಈ ಸಂಸ್ಕಾರದ ಮೂಲಕ ಸಿಗುವ ಧೈರ್ಯದ ಬಗ್ಗೆಯೂ ಪ್ರಸ್ತಾಪಿಸಿದರು.
ಬಿಷಪ್ ಅವರೊಂದಿಗೆ, ಧರ್ಮಕೇಂದ್ರದ ಪ್ರಧಾನ ಧರ್ಮಗುರು ಮತ್ತು ಧರ್ಮಕೇಂದ್ರದ ಇತರ ಧರ್ಮಗುರುಗಳು ಪವಿತ್ರ ಪ್ರಸಾದದ ಆರಾದನೆಯನ್ನು ನೇರವ್ರಿಸಿದರು. ಸಾಮೂಹಿಕ ಮಕ್ಕಳಿಗೆ ಪವಿತ್ರ ಬೈಬಲ್ನೊಂದಿಗೆ ದೇವರ ವಾಕ್ಯದ ರುಚಿ ಮತ್ತು ಪ್ರೀತಿಯನ್ನು ಸೃಷ್ಟಿಸಲು ಬೈಬಲ್ ಗಳ ಪ್ರತಿಯೊಂದನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಧರ್ಮಗುರುಳು ಉಪಸ್ಥಿತರಿದ್ದರು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆ: ಶಾಲಾ ಸಂಸತ್ತು ಉದ್ಘಾಟನೆ

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಜೂ, 28ರಂದು ನೆರವೇರಿತು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಲಾ ಸಂಸತ್ತನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ‘ಒಗ್ಗಟ್ಟಿನಲ್ಲಿ ಬಲವಿದೆ’ ಮಂತ್ರಿಮಂಡಲದ ಚುನಾಯಿತ ವಿದ್ಯಾರ್ಥಿಗಳು ಒಮ್ಮನಸ್ಸಿನಿಂದ ಒಂದುಗೂಡಿ ಕೆಲಸ ಮಾಡಿದರೆ ಶೈಕ್ಷಣಿಕ ಕಾರ್ಯಗಳು ಚೆನ್ನಾಗಿ ನಡೆಯುತ್ತವೆ ಎಂದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಇವರು ಶಾಲಾ ಸಂಸತ್ತಿನ ನಾಯಕ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಶಾಲಾ ನಾಯಕಿ ಸ್ಪಂದನ ಇವರು ಕಾರ್ಯಕ್ರಮ ನಿರೂಪಿಸಿದರು. ರಂಜಿತಾ ಸ್ವಾಗತಿಸಿದರು. ಸಾತ್ವಿಕ್ ಧನ್ಯವಾದ ಸಮರ್ಪಿಸಿದರು ದೈಹಿಕ ಶಿಕ್ಷಕರಾದ ಮೈಕಲ್ ಪುಟಾರ್ಡೊ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಸುಸ್ಥಿರ ಹಿಪ್ಪುನೇರಳೆ ಸೊಪ್ಪು ಮತ್ತು ಗುಣಮಟ್ಟದ ರೇಷ್ಮೆಗೂಡಿನ ಇಳುವರಿಗೆ ಸಾವಯವ ಪದ್ಧತಿ ನಿರ್ವಹಣೆ ಅತಿ ಮುಖ್ಯ


ಕೋಲಾರ: “ಮಣ್ಣಿನ ಆರೋಗ್ಯ ಹಾಗೂ ಸುಸ್ಥಿರ ಹಿಪ್ಪುನೇರಳೆ ಸೊಪ್ಪು ಮತ್ತು ರೇಷ್ಮೆಗೂಡಿನ ಇಳುವರಿಗೆ ಸಾವಯವ ಆಧಾರಿತ ಬೇಸಾಯ ಕ್ರಮಗಳು ” ಸಾಮಥ್ರ್ಯ ವೃದ್ಧಿ ತರಬೇತಿ ಕಾರ್ಯಕ್ರಮ ವನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ ರೇಷ್ಮೆ ಇಲಾಖೆ, ಜಿ.ಪಂ., ಕೋಲಾರ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಡಿವಾಳ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 28.06.2023 ರಂದು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ಆಯೋಜಿಸಲಾಗಿತ್ತು.
ಕೋಲಾರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕರಾದ ಶ್ರೀ. ಮಂಜುನಾಥ್, ಎಂ. ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಇತ್ತೀಚಿಗೆ ಕೀಟನಾಶಕಗಳು, ಕಳೆನಾಶಕಗಳು ಮತ್ತು ಎಲೆ ಸಿಂಪರಕಗಳ ವಿವೇಚನಾರಹಿತ ಬಳಕೆಯಿಂದ, ಹಿಪ್ಪುನೇರಳೆ ತೋಟದ ಮಣ್ಣು ಅಥವಾ ಸೊಪ್ಪು ಕಲುಷಿತಗೊಳ್ಳುತ್ತಿದ್ದು, ಕೀಟದ ಜಾತಿಗೆ ಸೇರಿದ ಸೂಕ್ಷ್ಮ ಪ್ರಾಣಿಯಾದ ರೇಷ್ಮೆಹುಳು ಈ ರೀತಿಯ ಮಲಿನ ವಸ್ತುಗಳಿಂದಾಗಿ ವಿವಿಧ ವಿಚಿತ್ರ ಲಕ್ಷಣಗಳನ್ನು ತೋರ್ಪಡಿಸುತ್ತಾ ಸಾವನ್ನಪ್ಪುತ್ತಿದ್ದು ರೇಷ್ಮೆ ಬೆಳೆಗಾರರು ಹುಳುಗಳ ರೋಗಕ್ಕಿಂತಲೂ ಈ ತರಹದ ಸಮಸ್ಯೆಯಿಂದ ಹೆಚ್ಚಾಗಿ ಬೆಳೆ ಕಳೆದುಕೊಳ್ಳುತ್ತಿದ್ದಾರೆ, ಈ ನೀಟ್ಟಿನಲ್ಲಿ ರೇಷ್ಮೆ ಬೆಳೆಗಾರರು ಹಿಪ್ಪುನೇರಳೆಗೆ ಸಾವಯವ ಪದ್ಧತಿಯಲ್ಲಿ ತೋಟ ನಿರ್ವಹಣೆ ಹಾಗೂ ವೈಜ್ಞಾನಿಕವಾಗಿ ಶಿಪಾರಸು ಮಾಡಿರುವ ಸುರಕ್ಷೀತ ಕೀಟನಾಶಕಗಳನ್ನು ಮಾತ್ರ ಹಿಪ್ಪುನೇರಳೆ ತೋಟಗಳಿಗೆ ಆದ್ಯತೆ ಮೆರೆಗೆ ಬಳಸಬೇಕೆಂದು ತಿಳಿಸಿದರು.
ರೇಷ್ಮೆ ಉಪನಿರ್ದೇಶಕರಾದ ಶ್ರೀ. ಟಿ. ಎಂ. ಕಾಳಪ್ಪರವರು ಉದ್ಘಾಟನೆಯನ್ನು ನೆರವೇರಿಸಿ ಕೋಲಾರ ಜಿಲ್ಲೆ ಮಾತ್ರವಲ್ಲದೆ ರೇಷ್ಮೆ ಬೆಳೆಯುವ ಇತರ ಜಿಲ್ಲೆಗಳಲ್ಲೂ ಸಹ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆಗಾರರು ರೇಷ್ಮೆಹುಳು ಗೂಡು ಕಟ್ಟದೆ ಬೆಳೆ ನಷ್ಟವನ್ನು ಅನುಭವಿಸುತ್ತಿರುವುದು ವರದಿಯಾಗುತ್ತಿದ್ದು ಇದಕ್ಕೆ ಮುಖ್ಯಕಾರಣ ಅರಿವಿಲ್ಲದೆ ಇತರ ಬೆಳೆಗಳಿಗೆ ಕೀಟನಾಶಕಗಳು ಬಳಸಿದಾಗ ಕೀಟನಾಶಕದ ವಿಷಕಾರಿ ಅಂಶದ ಪ್ರಬಾವವು ಗಾಳಿ ಹಾಗೂ ಮಣ್ಣಿನ ಮುಖಾಂತರ ಸೊಪ್ಪಿಗೆ ಸೇರುವುದರಿಂದ ರೇಷ್ಮೆಹುಳುಗಳು ತಿಂದಾಗ ಸರಿಯಾಗಿ ಗೂಡು ಕಟ್ಟದೆ ಇರುವುದು ಕಂಡುಬಂದಿದೆ ಹಾಗೆಯೇ ಖಾಸಗಿ ಕಂಪನಿಗಳಿಂದ ತಯಾರಾಗುವ ಜೈವಿಕ ಕೀಟನಾಶಕಗಳು ಹಿಪ್ಪುನೇರಳೆಗೆ ಬಳಸಿದಾಗ 2 ರಿಂದ 3 ಬೆಳೆಗಳ ನಂತರ ನಿಧನವಾಗಿ ಅವುಗಳ ಪರಿಣಾಮ ಕಂಡುಬಂದಿರುವುದಾಗಿ ವಿಜ್ಞಾನಿಗಳು ತಿಳಿಸುತ್ತಿದ್ದು ರೇಷ್ಮೆಬೆಳೆಗಾರರು ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಪೀಡೆನಿರ್ವಹಣೆ ಕೈಗೊಳ್ಳಬೇಕೆಂದು ಬಳಸಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀ. ಎಸ್. ಎನ್. ಶ್ರೀನಿವಾಸ್, ರೇಷ್ಮೆ ಉಪನಿರ್ದೇಶಕರು, ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ಕೋಲಾರರವರು ಮಾತನಾಡಿ, ಹಿಪ್ಪುನೇರಳೆ ತೋಟದ ಪಕ್ಕದ ಬೆಳೆಗಳಿಗೆ ಬೂಮರ್ / ಪ್ರೆಷರ್ ಪಂಪ್‍ಗಳಿಂದ ಸಿಂಪಡಿಸಿದ ಕೀಟನಾಶಕ / ಕಳೆನಾಶಕದ ತುಂತುರು ಕಣಗಳು ಗಾಳಿಯ ಮೂಲಕ ಪಸರಿಸಿ, ಸೊಪ್ಪಿನ ಮೇಲೆ ನೆಲೆ ನಿಂತಾಗ ಅಂತಹ ಸೊಪ್ಪನ್ನು ತಿಂದ ಹುಳುಗಳು 5ನೇ ಹಂತದವರೆಗೂ ಆರೋಗ್ಯವಾಗಿದ್ದು, ಹಣ್ಣಾದ ಹುಳುಗಳು ಹಸಿರು ಬಣ್ಣದ ರಸವನ್ನು ವಾಂತಿ ಮಾಡಿಕೊಂಡು ಮೋಟಾಗಿ ನಂತರ ಸಾವನ್ನಪ್ಪುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ರೇಷ್ಮೆಬೆಳೆಗಾರರು ಹಿಪ್ಪುನೇರಳೆ ತೋಟಗಳಿಗೆ ಸಾವಯವ ಪದ್ದತಿಯ ಮೂಲಕ ಮಳೆಗಾಲದಲ್ಲಿ ಹಸಿರೆಲೆ ಗೊಬ್ಬರಗಳನ್ನು ಬೆಳೆದು ಮಣ್ಣಿಗೆ ಸೇರಿಸುವುದು ಹಾಗೂ ಶಿಫಾರಿತ ಕೊಟ್ಟಿಗೆ ಗೊಬ್ಬರವನ್ನು ಮುಂಗಾರು ಹಾಗೂ ಹಿಂಗಾರಿನಲ್ಲಿ ಎರಡು ಸಮ ಕಂತುಗಳಲ್ಲಿ ನೀಡುವುದು, ಟ್ರೇಂಚಿಂಗ್ ಮತ್ತು ಮಲ್ಚಿಂಗ್ ತಾಂತ್ರಿಕತೆ ಅಳವಡಿಸುವ ಮೂಲಕ ಸಾವಯವ ಅಂಶವನ್ನು ವೃದ್ಧಿಗೊಳಿಸಿ ಮಣ್ಣಿನ ಪಲವತ್ತತೆಯನ್ನು ಕಾಪಾಡಬೇಕೆಂದು ಹಾಗೂ ಕಡ್ಡಾಯವಾಗಿ 7 ದಿನಗಳ ನಂತರ ಚಂದ್ರಿಕೆಯಿಂದ ಗೂಡು ಬಿಡಿಸಿ ಕಳಪೆ ಗೂಡುಗಳನ್ನು ವಿಂಗಡಿಸಿ ಉತ್ತಮ ಗೂಡುಗಳನ್ನು ಮಾತ್ರ ಮಾರುಕಟ್ಟೆಗೆ ತರುವುದರಿಂದ ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಪಡೆಯಬಹುದೆಂದು ತಿಳಿಸಿದರು.
ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ಡಾ. ಜೆ.ಬಿ. ನರೇಂದ್ರಕುಮಾರ್ ರವರು ಪ್ರಸ್ತುತ ಮುಂಗಾರು ಮಳೆ ನೀರಿಕ್ಷಿತ ಮಟ್ಟದಲ್ಲಿ ಬಿಳದೆ, ಒಣಹವೆ ಮುಂದುವರೆದಿದ್ದು ಹಾಗೂ ಆಸಾಢ ಮಾಸದ ಗಾಳಿಯಿಂದಾಗಿ ಹಿಪ್ಪುನೇರಳೆಯಲ್ಲಿ ಮೈಟ್ಸ್ ನುಸಿಯ ಹಾವಳಿ ಅಧಿಕವಾಗಿದ್ದು ರೇಷ್ಮೆ ಬೆಳೆಗಾರರು ಕಡ್ಡಾಯವಾಗಿ ತೋಟ ಕಟವಾದ 15 ದಿನಗಳಲ್ಲಿ ನುಶಿನಾಶಕವಾದ ಪೆನಜಾಕ್ವೀನ್ 30% ಇ.ಸಿ. 1.50 ಎಂ.ಎಲ್ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸುವುದು ಇದಾದ 10 ದಿನಗಳ ನಂತರ ವೆಟ್ಟಬಲ್ ಸಲ್ಪರ್ 3 ಗ್ರಾಂನಂತೆ ಕಾಂಡದ ಮತ್ತು ಎಲೆಯ ಮೇಲೆ ಸಿಂಪಡಿಸುವುದರಿಂದ ಪೀಡೆನಿರ್ವಹಣೆ ಮಾಡಬಹುದೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಸ್ಯರೋಗಶಾಸ್ತ್ರದ ವಿಜ್ಞಾನಿಯಾದ ಡಾ. ಸದಾನಂದ ಮುಶ್ರೀಪ್ ಹಾಗೂ ಡಾ. ಶಶಿಧರ್ ಕೆ.ಆರ್‍ರವರು ಮರಳು ಮಿಶ್ರಿತ ಮಣ್ಣು, ನೀರಾವರಿ ಸೌಲಭ್ಯವಿರುವ ಹಾಗು ಸಾವಯವ ಅಂಶ ಕಡಿಮೆ ಇರುವ ನೆಲದಲ್ಲಿ ಜಂತುಹುಳುವಿನ ಬಾದೆ ಅತೀ ಹೆಚ್ಚಾಗಿ ಕಂಡುಬರುತ್ತಿದ್ದು ಹಿಪ್ಪುನೇರಳೆ ಸಸ್ಯದ ಬೇರಿಗೆ ಹಾನಿಯನ್ನುಂಟು ಮಾಡಿ ಮಣ್ಣಿನ ಮುಖಾಂತರ ಹರಡುವ ಬೇರಿನ ಕಪ್ಪುಕೊಳೆ ಹಾಗು ಕಾಂಡದ ಕ್ಯಾಂಕರ್‍ನಂತಹ ರೋಗಗÀಳಿಗೆ ತುತ್ತಾಗುವಂತೆ ಮಾಡುತ್ತದೆ. ಇದರ ನಿರ್ವಹಣೆಗೆ ಜಂತುನಾಶಕ ಶಿಲೀಂದ್ರ, ವರ್ಟಿಸಿಲಿಯಮ್ ಕ್ಲಮೈಡೋಸ್ಪೋರಿಯಂ (1 ಕೆ.ಜಿ. + 200 ಕೆ.ಜಿ. ಕೊಟ್ಟಿಗೆ ಗೊಬ್ಬರ + 24 ಕೆ.ಜಿ. ಬೇವಿನ ಹಿಂಡಿ, ಒಂದು ವಾರದ ನಂತರ ಗಿಡವೊಂದಕ್ಕೆ 200 ಗ್ರಾಂ. ಮಿಶ್ರಣ ಪ್ರತಿ 4 ತಿಂಗಳಿಗೊಮ್ಮೆ 2 ವರ್ಷಗಳವರೆಗೆ) ಬಳಕೆ ಮಾಡುವುದು ಹಾಗೂ ಪ್ಯಾಸಿಲೋಮೈಸಿಸ್ ಲಿಲಾನಸ್ 5 ಕೆ.ಜಿ.ಯನ್ನು 200 ಕೆ.ಜಿ. ಬೇವಿನ ಹಿಂಡಿಯೊಂದಿಗೆ 15 ದಿನಗಳವರೆಗೆ ಪುಷ್ಠಿಕರಿಸಿ ಗಿಡದ ಬೇರಿನ ಸುತ್ತ 250ಗ್ರಾಂ ನಂತೆ ನೀಡುವುದರಿಂದ ಜೈವಿಕ ಪದ್ಧತಿಯಲ್ಲಿ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಮಣ್ಣು ವಿಜ್ಞಾನಿಯಾದ ಡಾ. ಎಸ್. ಅನಿಲ್ ಕುಮಾರ್ ಹಾಗೂ ಸಾವಯವ ರೇಷ್ಮೆಕೃಷಿಕರಾದ ಸಿ.ಎಲ್.ನಾಗರಾಜು ಚಿಟÀ್ನಹಳ್ಳಿರವರು ಸಾವಯವ ಪದ್ದತಿಯಲ್ಲಿ ಹಿಪ್ಪುನೇರಳೆ ಬೇಸಾಯ ಕ್ರಮಗಳ ಬಗ್ಗೆ ತಿಳಿಸುತ್ತ ಪ್ರತಿಯೊಬ್ಬ ರೇಷ್ಮೆ ಬೆಳೆಗಾರರು ಮನೆಯಲ್ಲಿ ನಾಟಿಹಸು ಸಾಕಾಣಿಕೆ ಮಾಡುವುದರಿಂದ ಹಸುವಿನ ಗಂಜಲ, ಸಗಣಿಯನ್ನು ಬಳಕೆ ಮಾಡಿಕೊಂಡು ಜೀವಾಮೃತ ತಯಾರಿಸಿ ಬಳಸುವುದು, ದ್ರವರೂಪದ ನೀಮಾಸ್ತ್ರ ಹಾಗೂ ಧಶಪರ್ಣಿ ತಯಾರಿಸಿ ಹಿಪ್ಪುನೇರಳೆಗೆ ಬರುವ ರಸಹೀರುವ ಕೀಟಗಳು, ಕುಡಿತಿನ್ನುವ ಕೀಟ ಹಾಗೂ ಶೀಲೀಂದ್ರ ರೋಗಗಳನ್ನು ನಿಯಂತ್ರಿಸುವುದರ ಜೋತೆಗೆ ಮಣ್ಣಿನ ಪಲವತ್ತತೆ ಕಾಪಾಡಬಹುದು ಎಂದು ತಿಳಿಸಿದರು.
ಕೊನೆಯಲ್ಲಿ ಕೋಲಾರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕರಾದ ಶ್ರೀ. ಮಂಜುನಾಥ್, ಎಂ. ರವರು ಜೂನ್ 30 ರಂದು ವಯೋನಿವೃತ್ತಿ ಹೊಂದುತ್ತಿದ್ದು ಸದರಿಯವರು ರೇಷ್ಮೆಕೃಷಿ ವಿಸ್ತರಣೆಗೆ ಮತ್ತು ಅಬಿವೃದ್ಧಿಗೆ ಸಲ್ಲಿಸಿರುವ ಕಾರ್ಯಗಳನ್ನು ಸ್ಮರಿಸುತ್ತ ಕೃಷಿ ವಿಜ್ಞಾನ ಕೇಂದ್ರದಿಂದ ಗೌರವಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಕೋಲಾರ ತಾಲ್ಲೂಕಿನ ಸುಮಾರು 75 ರೇಷ್ಮೆ ಬೆಳೆಗಾರರು ಹಾಗೂ ಕೋಲಾರ ವಿಭಾಗದ ರೇಷ್ಮೆ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 2023-24ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ

ಜುಲೈ 1 ರಂದು ನಗರದ ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮತ್ತು ವಿ.ಮುನಿರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಅವರನ್ನೊಳಗೊಂಡ ಸಮಿತಿಯು ಜಿಲ್ಲೆಯ 9 ಮಂದಿ ಪತ್ರಕರ್ತರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿತು.

ಪ್ರಶಸ್ತಿ ವಿಜೇತರ ವಿವರ:
ಕೆ.ಆರ್.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ: ಕೋಲಾರದ ವಿಜಯವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಎಂ.ನಾರಾಯಣಸ್ವಾಮಿ, ಜಿ.ನಾರಾಯಣಸ್ವಾಮಿ ಅವರ ನೆನಪಿನಲ್ಲಿ: ಕೋಲಾರದ ಪ್ರಜಾವಾಣಿ ದಿನಪತ್ರಿಕೆಯ ಛಾಯಾಗ್ರಾಹಕ ಎ.ಸರ್ವಜ್ಞಮೂರ್ತಿ, ಬಿ.ವಿ.ನರಸಿಂಹಮೂರ್ತಿ ಅವರ ನೆನಪಿನಲ್ಲಿ: ಉದಯವಾಣಿ ದಿನಪತ್ರಿಕೆಯ ಮಾಸ್ತಿ ಹೋಬಳಿ ವರದಿಗಾರ ಎಂ.ಮೂರ್ತಿ, ಎಂ.ಮಲ್ಲೇಶ್ ನೆನಪಿನಲ್ಲಿ: ಕೋಲಾರದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸಮೀರ್ ಅಹಮದ್ ಎನ್.ಎಂ, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ: ಮುಳಬಾಗಿಲಿನ ಉದಯಕಾಲ ದಿನಪತ್ರಿಕೆಯ ತಾಲೂಕು ವರದಿಗಾರ ವಿ.ಸುಕುಮಾರ್, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ: ಬಂಗಾರಪೇಟೆಯ ವಾಸ್ತವ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಹೆಚ್.ಎಲ್.ಸುರೇಶ್, ಬಿ.ಆರ್ಮುಗಂ ನೆನಪಿನಲ್ಲಿ: ಕೆ.ಜಿ.ಎಫ್‍ನ ಸಾಕ್ಷಿ ದಿನಪತ್ರಿಕೆಯ ತಾಲೂಕು ವರದಿಗಾರ ಜೆ.ಸತ್ಯನಾರಾಯಣ, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ: ಶ್ರೀನಿವಾಸಪುರದ ಚುಂಬಕವಾಣಿ ದಿನಪತ್ರಿಕೆಯ ತಾಲೂಕು ವರದಿಗಾರ ಬಿ.ಕೆ.ಉಪೇಂದ್ರ, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ: ಕೋಲಾರದ ಕೋಲಾರ ನ್ಯೂಸ್ ಸಂಪಾದಕ ಕೆ.ಎನ್.ಚಂದ್ರಶೇಖರ್ ಅವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಕೋಲಾರ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹಿಸಿ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ

ಕೋಲಾರ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹಿಸಿ ಕೋಲಾರ ರೈತಸಂಘದ ಮುಖಂಡರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾವಚಿತ್ರಕ್ಕೆ ಹಾಲು, ಮೊಸರಿನಿಂದ ಅರ್ಚನೆ ಮಾಡಿದ ಮುಖಂಡರು, ಚುನಾವಣೆಗೆ ಮೊದಲು ಘೋಷಿಸಿರುವಂತೆಯೇ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳು ಬಂದು ನಮ್ಮ ಮನವಿಯನ್ನು ಸ್ವೀಕರಿಸಿ ಭರವಸೆ ನೀಡುವವರೆಗೂ ಜಾಗ ಬಿಟ್ಟು ಹೋಗುವುದಿಲ್ಲವೆಂದು ಪಟ್ಟುಹಿಡಿದರು. ಈ ವೇಳೆ ಪೊಲೀಸರು ಹಾಗೂ ಸಂಘಟನೆಯ ಮುಖಂಡರೊಂದಿಗೆ ಮಾತಿನ ಚಕಮಕಿಗಳಾದವು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತಸಂಘದ ಕೋಲಾರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, 5 ಗ್ಯಾರೆಂಟಿಗಳನ್ನು ಘೋಷಿಸಿರುವ ರಾಜ್ಯ ಸರಕಾರಕ್ಕೆ 6ನೇ ಗ್ಯಾರೆಂಟಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಯೋಜನೆಯು ನುಂಗಲಾರದ ತುತ್ತಾಗಿದೆ. ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ವಿಚಾವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಸಾಕಷ್ಟು ಹಳ್ಳಿಗಳಲ್ಲಿ ಸಾಲ ಮರುಪಾವತಿ ಮಾಡದೇ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಚುನಾವಣೆಗೆ ಮೊದಲು ಜಿಲ್ಲೆಯ ವೇಮಗಲ್‍ನಲ್ಲಿ ನಡೆದಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿಯೂ ಭರವಸೆ ನೀಡಿದ್ದರು. ಅವರು ಹೇಳಿದ ಮಾತನ್ನು ಕೇಳಿ ಇಂದು ಮತ ನೀಡಿ ಮಹಿಳೆಯರು ತಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ. ಅದೇ ರೀತಿ ನಮಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸಿ ಅವರ ಮಾತನ್ನು ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.
ಮಹಿಳಾ ಸಂಘಗಳ ಪದಾಧಿಕಾರಿಗಳಾದ ಚೌಡಮ್ಮ, ಶೈಲಜಾ ಮಾತನಾಡಿ, ಮಾತನಾಡಿ ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಹಾಲು ಮೊಸರು ಅರ್ಚನೆ ಮಾಡಿ ಸ್ತ್ರೀಶಕ್ತಿ ಸಾಲಮನ್ನಾ ಮಾಡುವಂತೆ ಆಗ್ರಹಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಅಂದು ಕೊಟ್ಟ ಮಾತಿನಂತೆಯೇ ನಡೆದುಕೊಂಡು ಇಂದು ಸಾಲಮನ್ನಾ ಮಾಡಲೇ ಬೇಕೆಂದು ಆಗ್ರಹ ಮಾಡಿದರು.
ನಾವು ಯಾವುದೇ ಕಾರಣಕ್ಕೂ ಸಾಲವನ್ನು ಮರುಪಾವತಿ ಮಾಡುವುದಿಲ್ಲ. ಈ ಬಗ್ಗೆ ಜಿಲ್ಲೆಯಾದ್ಯಂತ ಮಹಿಳೆಯರು ಆಕ್ರೋಶಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ, ಸರಕಾರದ ಮುಂದಿನ ಆದೇಶದವರೆಗೂ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ತೆರಳದಂತೆ ಸೂಚಿಸಿದ್ದಾರೆ.
ಸದ್ಯ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದ್ದು, ಸಾಲ ಮನ್ನಾ ಮಾಡದೆ ಹೀಗೆಯೇ ನಿರ್ಲಕ್ಷಿಸಿಕೊಂಡು ಹೋಗಿದ್ದೇ ಆದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ಅನಾಹುತಗಳಿಗೆ ಮುಖ್ಯಮಂತ್ರಿಗಳೇ ನೇರ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿ, ಕೂಡಲೇ ಸಾಲಮನ್ನಾ ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನರಸಿಂಹಯ್ಯ, ಯಾರಂಘಟ್ಟ ಗಿರೀಶ್, ನಾರಾಯಣಗೌಡ, ವೆಂಕಟಮ್ಮ, ರಾಧಮ್ಮ, ಶೋಭ, ಸುಗುಣ, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.

St Agnes PU College – Talk on ‘Cyber Crime and Security’ 

Mangalore : ‘Abhaya’ – The Women’s Forum of St Agnes PU College organised a talk on ‘Cyber Crime and Security’ in the college Auditorium. Mr Abdul Rameez, an expert in cyber security was the resource person and was accompanied by Mr Abhishek, Mr Hussain. Mr Mohan and Mr Pavan.

Mr Abdul said that computers and smartphones play a dominant role in today’s world. We should be careful while using it as it has both advantages and disadvantages. He dwelt upon some of the major cyber-attacks, how cyber security works and cyber security awareness. He also informed students about the various types of cyber-crime, forms of cyber-crimes and highlighted the need to be alert and vigilant. He also demonstrated how some of these crimes are committed and explained how fraudsters usually operate. 

The students enjoyed the session and became aware of the pitfalls associated with the cyber world and its vulnerability. “Being forewarned is being forearmed”. This was especially true in this context as students learnt about safe browsing.

The program was co-ordinated by Convenor of Abhaya, Dr Tressie and the team Mr Mathew & Mrs Anitha along with student representatives Ms Lita, Ms Sanathani, Ms Amekha and Ms Yashasvi.

Sr. NorineDSouza, The Principal, Sr Janet Sequeira, Vice Principal and staff witnessed the programme.

ಕಲ್ಯಾಣಪುರ ಮೌಂಟ್ ರೋಜರಿ ಕಥೊಲಿಕ್ ಸಭಾದಿಂದ ಶ್ರೀಸಾಮಾನ್ಯರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ

ಜೂನ್ 25 ಆದಿತ್ಯವಾರವನ್ನು ಶ್ರೀಸಾಮಾನ್ಯರ ದಿನವನ್ನಾಗಿ ಆಚರಿಸಬೇಕೆಂದು ಉಡುಪಿ ಧರ್ಮಪ್ರಾಂತ್ಯ ಘೊಶಿಸಲಾಗಿ, ಮೌಂಟ್ ರೋಜರಿ ದೇವಾಲಯಕ್ಕೆ ಅಧೀನಪಟ್ಟ ಕಥೊಲಿಕ್ ಸಭಾ ಸಂಘಟನೆಯು ಶ್ರೀಸಾಮಾನ್ಯರ ಆಯೋಗದೊಡಗೂಡಿ ಈ ದಿನವನ್ನು ಅರ್ಥವತ್ತಾಗಿ ಆಚರಿಸಿತು. ಆಚರಣೆಯ ಸಭಾಧ್ಯಕ್ಷತೆಯನ್ನು ಕ,ಸಭೆಯ ಅಧ್ಯಕ್ಷರು ಹಾಗೂ ಶ್ರೀಸಾಮಾನ್ಯರ ಆಯೋಗದ ಸಂಚಾಲಕರೂ ಆಗಿರುವ ರೋಜಿ ಕ್ವಾಡ್ರಸ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೂಕ್ ಡಿಸೋಜ, ಕಾರ್ಯದರ್ಶಿ ಪ್ರಿಯಾ ಫುರ್ಟಾಡೊ, ಕ.ಸಭಾ ಉಡುಪಿ ಪ್ರದೇಶ್ ಕೇಂದ್ರಾಧ್ಯಕ್ಷರಾದ ಸಂತೋಷ್ ಕರ್ನೇಲಿಯೊ, ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಎಲ್ ರೊಯ್ ಕಿರಣ್ ಕ್ರಾಸ್ತೊ, ಕಾನ್ವೆಂಟಿನ ಭಗಿನಿ ಜೇನ್, ಕ. ಸಭಾ ಕಾರ್ಯದರ್ಶಿ ಜೋರ್ಜ್ ಡಿಸೋಜ ಹಾಜರಿದ್ದರು.

     ಲೂಕ್ ಡಿಸೋಜರು ವೇದಿಕೆಯ ಮುಂದಿರಿಸಿದ್ದ ಹೂ ಕುಂಡಲದ ಸಸಿಗೆ ನೀರೊಯ್ಯುವ ಸಾಂಕೇತಿಕ ನಡೆ ಮತ್ತು ವೇದಿಕೆಯಲ್ಲಿದ್ದವರೆಲ್ಲರು ಅವರ ಜೊತೆ ಕೂಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಐಸಿವೈಎಮ್ ಯುವಸಂಘಟನ ಸದಸ್ಯರು ಪ್ರಾರ್ಥನೆ ಗೀತೆ ಹಾಡಿದರು.

     ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವ್ರತ್ತ ಪ್ರೊಫೆಸರ್, ಅವಿಭಜಿತ ಮಂಗಳೂರು ಧರ್ಮ ಪ್ರಾಂತ್ಯದ ಕ. ಸಭಾ ಮಾಜಿ ಅಧ್ಯಕ್ಷರು ಹಾಗೂ ಕ್ರಶಿಕ ರಚನಾ ಪ್ರಶಸ್ತಿ ವಿಜೇತರೂ ಆಗಿರುವ ರಿಚರ್ಡ್ ರೆಬೆಲ್ಲೊರವರನ್ನು ಈ ಸಂದರ್ಭದಲ್ಲಿ ಅವರ ಸಾಮಾಜಿಕ ಕಳಕಳಿಯ ಸೇವೆಯನ್ನು ಶ್ಲಾಗಿಸಿ ಸನ್ಮಾನಿಸಲಾಯಿತು. ತದನಂತರ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ 18 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಧನದೊಂದಿಗೆ ಪುರಸ್ಕರಿಸಲಾಯಿತು.

     ಎಲ್ ರೊಯ್ ಕಿರಣ್ ಕ್ರಾಸ್ತೊ ಅವರು, ಜನ್ಮದುದ್ದಕ್ಕೂ ಸಮಾಜದಿಂದ ಪಡೆಯುವುದಷ್ಟೇ ಅಲ್ಲ, ಸ್ವಲ್ಪ ಮಟ್ಟಿಗಾದರೂ ನಮ್ಮಿಂದಾದಷ್ಟು ಶ್ರೀಸಾಮಾನ್ಯರ ಸೇವೆಯ ಮೂಲಕ ಮರಳಿ  ಅರ್ಪಿಸಬೇಕೆಂಬ ಸಂದೇಶವನ್ನು ಕೊಟ್ಟರು.    

     ಮೊದಲಿಗೆ ರೋಜಿ ಕ್ವಾಡ್ರಸ್ ಅವರು ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿದರು ಸಭಾಂತ್ಯದಲ್ಲಿ ಜೊರ್ಜ್ ಡಿಸೋಜರು ಧನ್ಯವಾದ ಅರ್ಪಣೆಗೈದರು. ಕಾರ್ಯಕ್ರಮವನ್ನು ಪ್ರಮೀಳಾ ಡಿಸೋಜರು ನಡೆಸಿ ಕೊಟ್ಟರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ; ‘ರಾಷ್ಟ್ರೀಯ ಭೂ-ಯುವಸೇನಾ ‘ಎನ್.ಸಿ.ಸಿಯ ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧೀ ದಿನಾಚರಣೆ


ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಅಂತಾರಾಷ್ಟ್ರೀಯ ಮಾದಕ ವ್ಯಸನ- ಅಕ್ರಮ ಸಾಗಾಟ ವಿರೋಧಿ ದಿನಾಚರಣೆಯನ್ನು ಏರ್ಪಡಿಸಲಾಯಿತು ಇಂದಿನ ಜಗತ್ತಿನಲ್ಲಿ ಯುವಕರು ಅಪಾಯಕಾರಿ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ ಮತ್ತು ಇದು ಜೀವಮಾನದ ಶಿಕ್ಷೆಗೆ ಕಾರಣವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಿದ ಅವರು, ಸಮಾಜದಲ್ಲಿ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯುವಕರು ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿದರು ಮತ್ತು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ಅನುಪ್ ನಾಯಕ ಹಾಗೂ ವಿಶಾಲ್ ಟೆರೆನ್ಸ್ ವಾಜ್ ಸಹಕರಿಸಿದರು. ಕೆಡೆಟ್ ಆದಿತ್ಯ ಶೆಟ್ಟಿಗಾರ್ ಸ್ವಾಗತಿಸಿ , ಕೆಡೆಟ್ ಗೌತಮಿ ಕರ್ಕೇರ ವಂದಿಸಿದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ ಕಾರ್ಯಕ್ರಮವನ್ನು ನಿರೂಪಿಸಿದರು.