

ಲಾರಿ ಮತ್ತು ದ್ವಿಚಕ್ರ ನಡುವೆ ನಡೆದ ಅಪಘಾತ ಭೀಕರ ಘಟನೆಯಲ್ಲಿ ದ್ವಿಚಕ್ರ ಸವಾರನು ಮ್ರತ ಹೊಂದಿದ್ದು. ಅಪಘಾತದ ತೀವ್ರತೆಗೆ ಬೆಂಕಿ ಎದ್ದು ಎರಡು ವಾಹನಗಳು ವಾಹನಗಳು ಹೊತ್ತಿ ಉರಿದವು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಕೆಲವು ದ್ರಶ್ಯಗಳು ಜನನುಡಿ ಸುದ್ದಿ ಸಂಸ್ಥೆಗೆ ಲಭಿಸಿವೆ.









ಜನವರಿ 11, ಶನಿವಾರ: ಬಾಲ ಯೇಸುವಿನ ನೊವೆನಾದ ಏಳನೇ ದಿನವು ‘ಅವನಲ್ಲಿ ನಂಬಿಕೆ, ನಾಳೆಯ ಭರವಸೆ’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾದ ಚಿಕ್ಕ ಮಕ್ಕಳಿಗೆ ಮೀಸಲಾದ ಅತ್ಯಂತ ಹೃದಯಸ್ಪರ್ಶಿ ಸಂದರ್ಭವಾಗಿತ್ತು. ಈ ಆಚರಣೆಯು ಮಕ್ಕಳ ಪರಿಶುದ್ಧತೆ, ಮುಗ್ಧತೆ ಮತ್ತು ಅಚಲ ನಂಬಿಕೆಯನ್ನು ಒತ್ತಿಹೇಳಿತು, ಇದು ಭಗವಂತನಲ್ಲಿ ನಂಬಿಕೆ ಮತ್ತು ಭರವಸೆಯ ಸದ್ಗುಣಗಳನ್ನು ಪ್ರತಿಬಿಂಬಿಸುತ್ತದೆ. ವೈವಿಧ್ಯಮಯ ಭಕ್ತರ ಸಮುದಾಯವನ್ನು ಸ್ವಾಗತಿಸಲು ಮತ್ತು ಒಗ್ಗೂಡಿಸಲು ಬಹು ಭಾಷೆಗಳಲ್ಲಿ ಒಂಬತ್ತು ಸೇವೆಗಳನ್ನು ನಡೆಸುವುದರೊಂದಿಗೆ ದಿನವು ನೊವೆನಾ ಸಾಮೂಹಿಕ ಪ್ರಾರ್ಥನೆಗಳ ಸರಣಿಯೊಂದಿಗೆ ಪ್ರಾರಂಭವಾಯಿತು. ಪ್ರತಿ ಸಾಮೂಹಿಕ ಪ್ರಾರ್ಥನೆಯು ಶಿಶು ಯೇಸುವಿನ ಮಧ್ಯಸ್ಥಿಕೆಯನ್ನು ಕೋರಿ ಪ್ರಾರ್ಥನೆಯಲ್ಲಿ ಒಟ್ಟಿಗೆ ಸೇರಲು ಅವಕಾಶವನ್ನು ನೀಡಿತು.
ಬೆಳಿಗ್ಗೆ 10.30 ರ ಸಾಮೂಹಿಕ ಪ್ರಾರ್ಥನೆಯ ನಂತರ, ಮಕ್ಕಳ ಯೋಗಕ್ಷೇಮಕ್ಕಾಗಿ ಪ್ರಾರ್ಥನೆಗಳ ಮೇಲೆ ಕೇಂದ್ರೀಕರಿಸುವ ವಿಶೇಷ ಆರಾಧನಾ ಅಧಿವೇಶನವನ್ನು ನಡೆಸಲಾಯಿತು. ಸಹಭಾಗಿತ್ವ ಮತ್ತು ಔದಾರ್ಯದ ಸೂಚಕವಾಗಿ, ಹಾಜರಿದ್ದ ಎಲ್ಲಾ ಭಕ್ತರೊಂದಿಗೆ ಊಟವನ್ನು ಹಂಚಿಕೊಳ್ಳಲಾಯಿತು. ಸಂಜೆ, ಶಿಶು ಯೇಸು ಮತ್ತು ಸೇಂಟ್ ಥೆರೆಸ್ ವೇಷ ಧರಿಸಿದ ಮಕ್ಕಳು ಪ್ರಾರ್ಥನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಂತೆ ತೆರೆದ ಗಾಳಿಯ ಸಾಮೂಹಿಕ ಪ್ರಾರ್ಥನೆಯು ವಿಶಿಷ್ಟ ಮತ್ತು ಸ್ಪೂರ್ತಿದಾಯಕ ದೃಶ್ಯವನ್ನು ಒದಗಿಸಿತು. ಅವರು ಭಕ್ತಿ ಮತ್ತು ಅನುಗ್ರಹದಿಂದ ಪ್ರಾರ್ಥನೆಯನ್ನು ನಡೆಸುವ ಮೂಲಕ ಗಮನಾರ್ಹ ಪಾತ್ರಗಳನ್ನು ವಹಿಸಿಕೊಂಡರು. ಯುವ ಭಾಗವಹಿಸುವವರಿಂದ ಸುಂದರವಾಗಿ ಆಯೋಜಿಸಲ್ಪಟ್ಟ ಮತ್ತು ಪ್ರದರ್ಶಿಸಲ್ಪಟ್ಟ ಮಕ್ಕಳ ಗಾಯಕವೃಂದವು ಆಚರಣೆಯ ಆಧ್ಯಾತ್ಮಿಕ ವಾತಾವರಣಕ್ಕೆ ಮೆರುಗು ನೀಡಿತು.
ಸಂಜೆ 6.00 ಗಂಟೆಗೆ ಶಿಶು ಯೇಸುವಿನ ರೋಸರಿ ಪಠಣದೊಂದಿಗೆ ದಿನವು ಮುಕ್ತಾಯಗೊಂಡಿತು. ಈ ಪಾಲಿಸಬೇಕಾದ ಸಂಪ್ರದಾಯವು ಸಮುದಾಯವನ್ನು ಮತ್ತೊಮ್ಮೆ ಶಾಂತಿಯುತ ಚಿಂತನೆ ಮತ್ತು ಭಕ್ತಿಯ ಕ್ಷಣಕ್ಕಾಗಿ ಒಟ್ಟುಗೂಡಿಸಿತು. ರೋಸರಿ ಸೂಕ್ತವಾದ ತೀರ್ಮಾನವಾಗಿ ಕಾರ್ಯನಿರ್ವಹಿಸಿತು, ನಂಬಿಕಸ್ಥರಿಗೆ ಆಧ್ಯಾತ್ಮಿಕ ಏಕತೆ ಮತ್ತು ಭರವಸೆಯ ನವೀಕೃತ ಅರ್ಥವನ್ನು ನೀಡಿತು. ನೊವೆನಾದ ಏಳನೇ ದಿನವು ಮಕ್ಕಳ ಕಣ್ಣುಗಳು ಮತ್ತು ಹೃದಯಗಳ ಮೂಲಕ ನಂಬಿಕೆಯ ಆಶೀರ್ವಾದಗಳು, ಭರವಸೆಯ ಭರವಸೆ ಮತ್ತು ಸಮುದಾಯದ ಸೌಂದರ್ಯವನ್ನು ನಿಜವಾಗಿಯೂ ಆಚರಿಸಿತು.
Altar servers and Children’s Jubilee celebrated at Infant Jesus Shrine

an 11, Saturday: The seventh day of the Infant Jesus Novena was a deeply moving occasion dedicated to little children, cantered on the theme, ‘Faith in Him, Hope for Tomorrow.’ The celebration emphasized the purity, innocence, and unwavering trust of children, reflecting the virtues of faith and hope in the Lord. The day commenced with a series of novena Masses, with nine services conducted in multiple languages to welcome and unite the diverse community of devotees. Each Mass offered an opportunity for worshippers to join together in prayer, seeking the intercession of Infant Jesus.
Following the 10.30 am Mass, a special adoration session was held, focusing on prayers for the well-being of children. As a gesture of fellowship and generosity, a meal was shared with all the devotees who attended. In the evening, an open-air Mass provided a unique and inspiring sight as children, dressed as Infant Jesus and St. Thérèse, participated actively in the liturgy. They took on significant roles, conducting the liturgy with devotion and grace. A children’s choir, beautifully organized and performed by the young participants, added to the spiritual atmosphere of the celebration.
The day concluded with the recitation of the Infant Jesus Rosary at 6.00 pm. This cherished tradition brought the community together once more for a moment of peaceful reflection and devotion. The rosary served as a fitting conclusion, leaving the faithful with a renewed sense of spiritual unity and hope. The seventh day of the novena truly celebrated the blessings of faith, the promise of hope, and the beauty of community, all through the eyes and hearts of children.





























































ಕುಂದಾಪುರ, ಜ.12: 334 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕ ಧರ್ಮಗುರುರುಗಳಾದ ಸಂತ ಜೋಸೆಫ್ ವಾಜರಿಗೆ ಮುಖ್ಯಗುರುಗಳಾಗಿ ಭಡ್ತಿ ನೀಡಿ ಕಳುಹಿಸಿದ್ದು ವಲಯ ಪ್ರಧಾನ ಇಗರ್ಜಿಯಾದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಗೆ. ಅವರ ಜೊತೆಯಲ್ಲಿ ಇನ್ನೂ ಮೂರು ಧರ್ಮಗುರುಗಳು ಬಂದಿದ್ದು, ಅವರ ಸಹಕಾರದೊಂದಿಗೆ, ಪ್ರಧಾನ ಧರ್ಮಗುರುಗಳಾಗಿ ಕೆನರಾದಾಂತ್ಯ ಸುತ್ತುತ್ತಾ ಯೇಸು ಕ್ರಿಸ್ತರ ಬೋಧನೆ ಮಾಡಿದವರು, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿದಂತಹ ಪವಾಡಮಯ ಘಟನೆ ನಡೆದಿದ್ದು, ಇದನ್ನು ಅತಿಥಿ ಧರ್ಮಗುರುಗಳೊಬ್ಬರು ಕಣ್ಣಾರೆ ಕಂಡಿದ್ದರು. ಇದರ ನಂತರ ಅವರು ಶ್ರೀಲಂಕಕ್ಕೆ ತೆರಳಿ ಹಲವು ಅದ್ಬುತಗಳನ್ನು ಮಾಡಿ ಕಥೋಲಿಕರಲ್ಲಿ ಅತ್ಯುನ್ನತ್ತ ಸಂತ ಪದವಿ ಪಡೆದರು. ಅವರ ವಾರ್ಷಿಕ ಹಬ್ಬವು ಜನವರಿ 12 ರಂದು ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಆಚರಿಸಲಾಯಿತು.
ಸಂತ ಜೋಸೆಫ್ ವಾಜರ ವಾರ್ಷಿಕ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿದ ವಲಯ ಪ್ರಧಾನ ಧರ್ಮಗುರು, ಕುಂದಾಪುರ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ “ನಮ್ಮ ಇಗರ್ಜಿಯಲ್ಲಿ ಸೇವೆ ಮಾಡಿದ ಸಂತ ಜೋಸೆಪ್ ವಾಜರು ಯೇಸು ಕ್ರಿಸ್ತರ ಕರೆಯಂತೆ ಯಾಜಕರಾಗಿ ಅವರ ಸಂದೇಶವನ್ನು ನಮ್ಮ ಕೆನರಾದಲ್ಲಿ, ಆಮೇಲೆ ಶ್ರೀಲಂಕಾದಲ್ಲಿ ಶುಭವಾರ್ತೆಯನ್ನು ಹಂಚಿದರು, ಯೇಸು ಕ್ರಿಸ್ತರು ಮೊದಲು ಯಾಜಕರು, ನಂತರ ರಾಜರು, ರಾಜರು ಅಂದರೆ ಜನರ ಸೇವಕರು, ಜನರ ಸೇವೆ ಮಾಡಲೆಂದೇ ಅವರು ಬಂದಿದ್ದು. ಇಂದು ಯೇಸು ಸ್ವಾಮಿ ಪವಿತ್ರ ಸ್ನಾನ ದೀಕ್ಷೆಯನ್ನು ಪಡೆದುಕೊಂಡ ಹಬ್ಬವನ್ನು ಕೂಡ ನಾವು ಆಚರಿಸುತ್ತೇವೆ, ಯಾವಾಗ ನಾವು ಪವಿತ್ರ ಸ್ನಾನವನ್ನು ಸ್ವೀಕರಿಸುತ್ತೇವೊ, ಅವಾಗ ನಮಗೆ ಹೊಸ ಜೀವನ ಸಿಗುತ್ತದೆ. ಪವಿತ್ರ ಸ್ನಾನ ಸಿಕ್ಕಿದ ನಾವು ಕೂಡ ಕ್ರಿಸ್ತರಾಗುತ್ತೇವೆ, ಅಂದರೆ ನಮಗೂ ಸೇವೆ ಮಾಡಲಿಕ್ಕೆ ಇದೆ, ಶುಭವಾರ್ತೆಯನ್ನು ಹಂಚಿಕೊಳ್ಳಬೇಕಿದೆ, ಇದನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಪಾಲಿಸಿದವರು ನಮ್ಮ ಸಂತ ಜೋಸೆಫ್ ವಾಜ್, ನಮಗೆ ಅವರು ಪ್ರೇರಕರು, ಅವರ ಪ್ರೇರಣೆಯಂತೆ ನಾವು ನೆಡೆಯೋಣ” ಎಂದು ಸಂದೇಶ ನೀಡಿಈ ವಾರ್ಷಿಕ ಹಬ್ಬದ ಪ್ರಯುಕ್ತ ಹಬ್ಬದ ಶುಭಾಶಯಗಳನ್ನು ನೀಡಿ, ಧನ್ಯವಾದಗಳನ್ನು ಅರ್ಪಿಸಿದರು. ಈ ವಾರ್ಷಿಕ ಹಬ್ಬದಲ್ಲಿ, ಪಾಲನ ಮಂಡಳಿ ಅಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹಲವಾರು ಧರ್ಮಭಗಿನಿಯರು, ಗುರಿಕಾರರು, ಸಂಘ ಸಂಸ್ಥೆಯವರು, ಹಾಗೂ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.














































































ಮೂಡಲಕಟ್ಟೆಯ ವಿಧ್ಯಾ ಅಕಾಡೆಮಿ ಪ್ರಾಥಮಿಕ ಶಾಲೆ ಪ್ರೀ-ಸ್ಕೂಲ್ ಕ್ಷೇತ್ರದಲ್ಲಿ ನೀಡಿದ ಸಶಕ್ತ ಕೊಡುಗೆಯನ್ನು ಮೆಚ್ಚಿ *ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ*ಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಶಾಲೆಯ ಪ್ರೀ-ಸ್ಕೂಲ್ ಸಂಯೋಜಕಿ ಶ್ರೀಮತಿ ರಷ್ಮಾ ಶೆಟ್ಟಿ ಮತ್ತು ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಪಾವನಾ ಮಹೇಶ್ ಸ್ವೀಕರಿಸಿದರು.
ಶಾಲೆಯ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುವ ಹೊಸ ಪ್ರಯತ್ನಗಳು ಮತ್ತು ಅವರ ಭವಿಷ್ಯವನ್ನು ರೂಪಿಸಲು ಕೈಗೊಂಡ ಸೃಜನಾತ್ಮಕ ಮಾರ್ಗಗಳು ವಿದ್ಯಾ ಅಕಾಡೆಮಿಯನ್ನು ಈ ಕ್ಷೇತ್ರದಲ್ಲಿ ಮುಂಚೂಣಿಗೊಳಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಪಾವನಾ ಮಹೇಶ್ *”ಈ ಪ್ರಶಸ್ತಿ ನಮ್ಮ ತಂಡದ ಶ್ರಮ, ಮಕ್ಕಳನ್ನು ಪ್ರೀತಿಯಿಂದ ಮತ್ತು ಸಂವೇದನೆಗಳಿಂದ ಬೆಳೆಸುವ ನಮ್ಮ ತಾತ್ಪರ್ಯದ ಪ್ರತಿಫಲ. ಮಕ್ಕಳಿಗೆ ಸನ್ಮಾನ್ಯ, ಸೃಜನಾತ್ಮಕ ಮತ್ತು ಪ್ರೇರಣಾದಾಯಕ ಪರಿಸರ ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ. ಈ ಪ್ರಶಸ್ತಿ ನಮಗೆ ಇನ್ನಷ್ಟು ಪ್ರೇರಣೆಯನ್ನು ನೀಡುತ್ತದೆ.”*ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕನ್ನಡ ಚಲನಚಿತ್ರ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಮತ್ತು ಸಂಗೀತ ನಿರ್ದೇಶಕ ನಾಗೇಂದ್ರಪ್ರಸಾದ್ ಉಪಸ್ಥಿತರಿದ್ದು, ವಿದ್ಯಾ ಅಕಾಡೆಮಿಯ ಶೈಕ್ಷಣಿಕ ಪ್ರಯತ್ನಗಳನ್ನು ಪ್ರಶಂಸಿಸಿದರು.
ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಶಿಕ್ಷಣ ಕ್ಷೇತ್ರದ ಅತ್ಯಂತ ಹೆಮ್ಮೆಯ ಪ್ರಶಸ್ತಿಗಳಲ್ಲೊಂದು, ಸಾಂಪ್ರದಾಯಿಕ ಬೋಧನೆಗಳಾದರಕ್ಕಿಂತ ಹೊರತಾಗಿ ಪರಿಣಾಮಕಾರಿ ಕಲಿಕಾ ಅನುಭವಗಳನ್ನು ರಚಿಸುವಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಿದ್ಯಾ ಅಕಾಡೆಮಿಯ ಸಾಧನೆ ಮೂಡಲಕಟ್ಟೆಗೆ ಹೆಮ್ಮೆಯನ್ನು ತಂದಿದ್ದು, ಇಡೀ ರಾಜ್ಯದ ಪ್ರೀ-ಸ್ಕೂಲ್ಗಳಿಗೆ ಮಾದರಿಯಾಗಿದೆ. ಶಾಲೆಯು ಈ ಪ್ರಶಸ್ತಿಯನ್ನು ಸಮುದಾಯಕ್ಕೆ ಅರ್ಪಿಸಿ, ಭವಿಷ್ಯದ ಯುವ ತಾರೆಗಳನ್ನು ರೂಪಿಸುವ ನಾವೀನ್ಯತೆ ಮತ್ತು ಶ್ರದ್ಧೆಯನ್ನು ಮುಂದುವರಿಸಲು ಬದ್ಧವಾಗಿದೆ.


ಕುಂದಾಪುರ; ದಿನಾಂಕ 10.01.2025 ರಂದು ರಾಷ್ಟ್ರೀಯ ಯುವ ದಿನಾಚರಣೆ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಸ್ಪರ್ಧಾತ್ಮಕ ಜಗತ್ತಿಗೆ ಯುವನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಹಾಗೂ ಯುವ ನಾಯಕತ್ವದ ಮಹತ್ವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಕುಂದಾಪುರದ ಮೂಡ್ಲಕಟ್ಟೆ ಐ ಎಂ ಜೆ ಇನ್ಸ್ಟಿಟ್ಯೂಶನ್ ನಲ್ಲಿ ಐ.ಎಂ.ಜೆ ಯಂಗ್ ಲೀಡರ್ ಅವಾರ್ಡ್ 2025 ಸ್ಪರ್ಧೆಯನ್ನು ಆಯೋಜಿಸಲಾಯಿತು.
ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತರಾದ ಹಾವೇರಿಯ ಶ್ರೀ ರಮಣಗೌಡ ಬಿ ಪಾಟೀಲ್ ಅವರು ಮಾತನಾಡಿ ನಾಯಕತ್ವದ ಬಗ್ಗೆ ವಿವರಿಸುತ್ತ ನಿಜವಾದ ನಾಯಕನಾದವನು ತನ್ನ ಜೊತೆಗಿರುವರನ್ನು ಪ್ರೋತ್ಸಾಹಿಸುವ ಗುಣ ಹೊಂದಿರಬೇಕು. ಒಳ್ಳೆ ವಿದ್ಯಾಭ್ಯಾಸ ಪಡೆದು ತಂದೆ ತಾಯಿ ಗುರುಗಳಿಗೆ ಕೀರ್ತಿ ತಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಾಗೂ ಗೌರವ ಅತಿಥಿಗಳಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ, ಕುಂದಾಪುರ ಇದರ ಮುಖ್ಯೋಪಾಧ್ಯಾಯರಾದ ಶ್ರೀ ವಿಘ್ನೇಶ್ವರ ಭಟ್ ಅವರು ಆಗಮಿಸಿದ್ದು ಒಳ್ಳೆ ನಾಯಕನಾಗಬೇಕಿದ್ದರೆ ಮುಂದೆ ಗುರಿ ಇರಬೇಕು ಹಿಂದೆ ಒಬ್ಬ ಗುರು ಇರಬೇಕು, ಹಾಗೆ ಅದಕ್ಕೆ ಪೂರಕವಾಗಿ ಸಾಧಿಸುವ ಛಲ ಹಾಗೂ ಪ್ರಯತ್ನ ಇರಬೇಕು, ಈ ನಿಟ್ಟಿನಲ್ಲಿ ತಾವೆಲ್ಲರೂ ಉತ್ತಮ ನಾಯಕರಾಗುವಲ್ಲಿ ಪ್ರಯತ್ನಿಸಿ ಎಂದು ವಿಧ್ಯಾರ್ಥಿಗಳಿಗೆ ಹುರಿದುಂಬಿಸಿದರು. ಐ ಎಂ ಜೆ ಇನ್ಸ್ಟಿಟ್ಯೂಷನ್ ಇದರ ಬ್ರಾಂಡ್ ಬಿಲ್ಡಿಂಗಿನ ನಿರ್ದೇಶಕರಾಗಿರುವ ಡಾ.ರಾಮಕೃಷ್ಣ ಹೆಗ್ಡೆ ಅವರು ಕಾರ್ಯಕ್ರಮದ ಮುಖ್ಯ ಉದ್ದೇಶದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫ಼ೆಸರ್ ಕಾರ್ತಿಕೇಯನ್ ಅವರು ಐಎಮ್ ಜೆ ಕಾಲೇಜಿನ ರೂಪುರೇಷೆಗಳ ಬಗ್ಗೆ ತಿಳಿಸಿದರು. ವಿವಿಧ ಕಾಲೇಜಿನ ಸ್ಪರ್ದಾಳುಗಳು, ಸಿಬ್ಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದರು.
ಎಮ್ ಬಿ ಎ ವಿಧ್ಯಾರ್ಥಿನಿ ಸಹರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೆಹ್ವಿಶ್ ಖಾನ ಸ್ವಾಗತಿಸಿ,ಎಮ್ ಬಿ ಎ ವಿಧ್ಯಾರ್ಥಿನಿ ಪ್ರತೀಕ ಶೆಟ್ಟಿ ವಂದಿಸಿದರು.


ಶ್ರೀನಿವಾಸಪುರ : ರಾಜ್ಯದಿಂದ ಆಂದ್ರ ಪ್ರದೇಶದ ಬಿ.ಕೊತ್ತಕೋಟ, ಮದನಪಲ್ಲಿಗೆ ಹೋಗುವ ರಸ್ತೆಯು ಆಂದ್ರದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಲಿದ್ದು ಮದನಪಲ್ಲಿ ಶಾಸಕರು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಲಿಂಕ್ ರಸ್ತೆಗೆ ವ್ಯವಸ್ಥೆ ಮಾಡುತ್ತಿದ್ದು ಮದನಪಲ್ಲಿ ಶಾಸಕರಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕೃತಜ್ಞತೆ ಸಲ್ಲಿಸಿದರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಮುದಿಮಡುಗು ಸಮೀಪದ ಆಂದ್ರದ ಮೊರಂಕಿಂದಪಲ್ಲಿ ಗ್ರಾಮದಲ್ಲಿ ಶನಿವಾರ ರಾಜ್ಯ , ಆಂದ್ರ ರಸ್ತೆಗೆ ಕಾಮಗಾರಿಗೆ ಜಂಟಿಯಾಗಿ ಚಾಲನೆ ನೀಡಿ ಮಾತನಾಡಿದರು.
ಅಲ್ಲದೆ ರಾಜ್ಯ ನೆರ ಹೊರೆಯ ಗ್ರಾಮಗಳಲ್ಲಿ ಬಾಂದವ್ಯ, ಬಾವ ಬೆಸೆಗೆ ಸಂಬಂದವಿದೆ ರಾಜ್ಯದ ೨-೫೦ ಕಿಲೋಮೀಟರ್ ರಸ್ತೆ ಕಾಮಗಾರಿ ಮಾಡಬೇಕಾಗಿದ್ದು ರಾಜ್ಯ ಮತ್ತು ಆಂದ್ರ ಪ್ರದೇಶದಕ್ಕೆ ಲಿಂಕ್ ರಸ್ತೆಯನ್ನು ವ್ಯವಸ್ಥೆ ಮಾಡುವ ಉದ್ದೇಶವನ್ನು ಹೊಂದಿದ್ದೇನೆ ಎಂದರು.
ಮದನಪಲ್ಲಿ ಶಾಸಕ ಷಹಜಾನಪಾಷ ಮಾತನಾಡಿ ರಸ್ತೆ ಇತರೆ ಮೂಲ ಭೂತ ಸೌಲಭ್ಯಗಳ ಕೊರತೆಯಿಂದ ನಾಗರೀಕರು ಬೇಸರಿಸುತ್ತಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವಿಬ್ಬರೂ ಸೇರಿ ಸರಿಪಡಿಸುವ ನಿಟ್ಟಿನಲ್ಲಿ ಕೈಜೋಡಿಸುತ್ತಿದ್ದೇವೆ ಎಂದರು.
ಗ್ರಾಮೀಣ ಭಾಗದ ಬಡಜನರಿಗೆ ತರಕಾರಿ ಹಣ್ಣು ಹಂಪರು ಸರಬರಾಜು ಮಾಡಲು ಮತ್ತು ರೈತರಿಗೆ ಅನುಕೂಲವಾಗುವಂತೆ ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾ.ಪಂ ಮಾಜಿ ಸದಸ್ಯರಾದ ಮಂಜುನಾಥರೆಡ್ಡಿ, ರಾಜಶೇಖರರೆಡ್ಡಿ,ಮುದಿಮಡುಗು ಗ್ರಾಮ ಪಂಚಾಯತಿ ಸದಸ್ಯ ಎಲ್.ರಾಜೇಶ್, ಆರ್.ಐ. ಶಂಕರರೆಡ್ಡಿ, ಜಿಲ್ಲಾ ಪಂಚಾಯತ್ ಇಂಜಿನಿಯರ್, ಕೃಷ್ಣಪ್ಪ,ವಾಟರ್ ಬೋರ್ಡ್ ಇಂಜಿನಿಯರ್ ಸಂತೋಷ್, ಸರ್ಪಂಚ್ ಆನಂದರೆಡ್ಡಿ, ಮಂಡಲ್ ಅಧ್ಯಕ್ಷ ಈಶ್ವರ್, ಮುಖಂಡ ವೇಣು, ಜಯಣ್ಣ, ನಾಗೇಶ್ ,ರಾಜ್ಯ ಆಂದ್ರದ ಪಂಚಾಯಿತ್ ರಾಜ್, ಕಂದಾಯ ಅಧಿಕಾರಿಗಳು ಇದ್ದರು


ಶ್ರೀನಿವಾಸಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ, ಸಾಹಿತಿ ಎನ್.ಶಂಕರೇಗೌಡ ಅವರ ಭಾವ ಬೆಸುಗೆ ಪುಸ್ತಕವನ್ನು ಪರಿಸರ ಮತ್ತು ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್ ಬಿಡುಗಡೆ ಮಾಡಿದರು.
ಪುಸ್ತಕ ನಿಜವಾದ ಜೀವನ ಸಂಗಾತಿ : ಎಚ್.ಎ.ಪುರಷೋತ್ತಮರಾವ್
ಶ್ರೀನಿವಾಸಪುರ: ವಿದ್ಯಾರ್ಥಿಗಳು ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಾಸಕ್ಕಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವ್ಯಕ್ತಿ ಗೌರವ ಪಡೆದುಕೊಳ್ಳಲು ಪುಸ್ತಕ ಓದುವ ಸಂಸ್ಕøತಿಗೆ ಮರಳಬೇಕು ಎಂದು ಪರಿಸರ ಹಾಗೂ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್ ಹೇಳಿದರು.
ಪಟ್ಟಣದ ಬಾಲಕಿಯರ ಪದರಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಉಪನ್ಯಾಸಕ ಹಾಗೂ ಸಾಹಿತಿ ಎನ್.ಶಂಕರೇಗೌಡ ಅವರ ಭಾವ ಬೆಸುಗೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪುಸ್ತಕ ನಿಜವಾದ ಸಂಗಾತಿ. ಜೀವನ ಸ್ಫೂರ್ತಿಯ ಸಂಕೇತ. ಪುಸ್ತಕ ಭಂಡಾರ ಒಂದು ಪುಟ್ಟ ವಿಶ್ವ ವಿದ್ಯಾಲಯ ಇದ್ದಂತೆ ಎಂದು ಅಭಿಪ್ರಾಯಪಟ್ಟರು.
ಶಂಕರೇಗೌಡರ ಭಾವ ಬೆಸುಗೆ ಹೆಸರಿನ ಲಲಿತ ಪ್ರಬಂಧಗಳ ಸಂಕಲದಲ್ಲಿ ಭಾವ ಸ್ಪರ್ಶಿಸುವ, ನವಿರಾದ ಹಾಸ್ಯ ಹಾಗೂ ಜೀವನಾದರ್ಶ ಒಳಗೊಂಡ ಲೇಖನಗಳಿವೆ. ಪುಸ್ತಕ ಓದುಗರ ಓದುವ ಆಸಕ್ತಿಯನ್ನು ಕೆರಳಿಸುತ್ತದೆ. ಸಾಹಿತ್ಯಾಸಕ್ತರು ಪುಸ್ತಕವನ್ನು ಓದುವುದರ ಮೂಲಕ ಭಾವ ಸ್ಪರ್ಶ ಪಡೆಯಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಂಕರೇಗೌಡ ಅವರ ಸಾಹಿತ್ಯ ಸಮಾಜ ಮುಖಿಯಾಗಿದ್ದು, ಬೋಧಪ್ರದವಾಗಿದೆ. ಸಮಾಜ ಸುಧಾರಣೆಗೆ ಪೂರಕವಾದ ಹಲವು ಅಂಶಗಳು ಪುಸ್ತಕದಲ್ಲಿವೆ. ಪ್ರತಿ ಲೇಖನವೂ ಮನೋಲ್ಲಾಸದ ಜತೆಗೆ, ಚಿಂತನೆಗೆ ಹಚ್ಚುತ್ತದೆ ಎಂದು ಹೇಳಿದರು.
ಸಾಹಿತಿ ಆರ್.ಚೌಡರೆಡ್ಡಿ ಮಾತನಾಡಿ, ಭಾವ ಬೆಸುಗೆ, ಮಾಹಿತಿ ಕಣಜವಾಗಿದೆ. ಲೇಖಕರು ಬೇರೆ ಬೇರೆ ಮೂಲಗಳಿಂದ ಹೆಕ್ಕಿ ತೆಗೆದ ಪೂರಕ ವಿಷಯಗಳನ್ನು ಪ್ರಬಂಧಗಳಲ್ಲಿ ಅಳವಡಿಸಿದ್ದಾರೆ. ಪುಸ್ತಕದ ಓದಿನಿಂದ ಓದುಗರ ಜ್ಞಾನ ವೃದ್ಧಿಯಾಗುತ್ತದೆ. ಮನಸ್ಸಿಗೆ ಹಿತಾನುಭವವಾಗುತ್ತದೆ ಎಂದು ಹೇಳಿದರು.
ಪುಸ್ತಕದ ಲೇಖಕ ಎನ್.ಶಂಕರೇಗೌಡ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಪುಸ್ತಕವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು. ಓದುಗರು ಅದರ ಪ್ರಯೋಜನ ಪಡೆದುಕೊಳ್ಳಬೇಕು. ಇನ್ನಷ್ಟು ಕೃತಿಗಳನ್ನು ಪ್ರಕಟಿಸಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್, ಉಪನ್ಯಾಸಕರಾದ ಗೋಪಿ, ವಾಸು ಪುಸ್ತಕ ಕುರಿತು ಮಾತನಾಡಿದರು. ಗಾಯಕಿ ನವ್ಯಶ್ರೀ ಅವರಿಂದ ಭಾವ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಯಾ ಬಾಲಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಪಿ.ಎಸ್.ಮಂಜುಳ, ಗೌರವಾಧ್ಯಕ್ಷ ಶ್ರೀರಾಮೇಗೌಡ, ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಕೆ.ನಾರಾಯಣಸ್ವಾಮಿ, ಸಿಆರ್ಪಿ ಜಿ.ವಿ.ಚಂದ್ರಪ್ಪ ಇದ್ದರು.


ಕುಂದಾಪುರ(ಜ.11): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬೈಂದೂರಿನಲ್ಲಿ ಜರುಗಿದ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್-2025 ರಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುತ್ತಾರೆ.
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಆರ್ಯನ್ ಕೆ.ಪೂಜಾರಿ ಮತ್ತು ಅಥರ್ವ ಖಾರ್ವಿ ಕಟಾ ಮತ್ತು ಕುಮಿಟೆಯಲ್ಲಿ ಚಿನ್ನದ ಪದಕವನ್ನು, ದಕ್ಷ ಆರ್ ಖಾರ್ವಿ ಕಟಾ-ಪ್ರಥಮ, ಕುಮಿಟೆ-ದ್ವಿತೀಯ, ಅರ್ನೋನ್ ಡಿ.ಅಲ್ಮೆಡಾ ಕಟಾ-ದ್ವಿತೀಯ ಕುಮಿಟೆ-ಪ್ರಥಮ, ಪ್ರತೀಕ್ ಕಟಾ- ದ್ವಿತೀಯ ಕುಮಿಟೆ-ಪ್ರಥಮ, ಅಕ್ಷ ಎಸ್. ಶೇಟ್ ಕಟಾ-ದ್ವಿತೀಯ, ಕುಮಿಟೆ-ತ್ತತೀಯ, ರಿಮಿತಾ ಆರ್ ಕಟಾ- ಮತ್ತು ಕುಮಿಟೆಯಲ್ಲಿ ತ್ರತೀಯ, ವಿಶ್ರುತ್.ವಿ.ಕುಮಾರ್ ಕುಮಿಟೆ ದ್ವಿತೀಯ, ಕಟಾ-ದ್ವಿತೀಯ ಮತ್ತು ಭುವನ್.ಎಸ್.ಪೂಜಾರಿ ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು, ಅನೇಕ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿರುತ್ತಾರೆ.
ವಿಜೇತ ಬಾಲ ಕರಾಟೆ ಪಟುಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.

ಕುಂದಾಪುರ (ಜ.6): ಶ್ರೀ ಬಿ.ಎಂ.ಸುಕುಮಾರ್ ಶೆಟ್ಟಿಯವರ ನೇತ್ರತ್ವದ ಕುಂದಾಪುರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿ.ಕೆ.ಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆಗಳಲ್ಲಿ ಜ:03 ಶುಕ್ರವಾರದಂದು ಶಾಲೆಯ 49ನೇ ವಾರ್ಷಿಕೋತ್ಸವ “ ರುಗ್ಮಯಾನ 2025 “ ಸುವರ್ಣ ರಥದತ್ತ ಸಂಭ್ರಮದ ಪಥ ವೇದಿಕೆಯಲ್ಲಿ 2ನೇ ದಿನದ ಮಧ್ಯಾಹ್ನದ ಅವಧಿಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೋಟೆಶ್ವರದ ಕ್ಲೀರಿಟಿ ಐ ಕ್ಲಿನಿಕ್ನ ಪ್ರಸಿಧ್ದ ನೇತ್ರ ಶಸ್ತ್ರ ಚಿಕಿತ್ಸಕಿ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿನಿಯಾಗಿರುವ ಡಾ. ಶುಭಾ ಬಿ ರವರು ಹೀಗೆಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಶುಭಾ- ಅಂದು ನಾನು ವಿ.ಕೆ.ಆರ್ ಶಾಲೆಯಲ್ಲಿ ಓದುವಾಗ ಅಲ್ಲಿ ಕಲಿತ, ಶಿಸ್ತು, ಡ್ರಾಯಿಂಗ್ ಕೌಶಲ್ಯ, ಮತ್ತು ಗೈಡ್ಸ್ ತರಬೇತಿಗಳು ನನ್ನ ಮುಂದಿನ ಬದುಕಿನ ತಯಾರಿಗೆ ನಾಂದಿಯಾದವು ಎಂದರು. ಹಾಗೂ ವಿದ್ಯಾರ್ಥಿಗಳಿಗೆ ಕಣ್ಣಿನ ಆರೋಗ್ಯದ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ಬಿ.ಎಂ ಸುಕುಮಾರ್ ಶೆಟ್ಟಿಯವರು ಮಾತನಾಡಿ, ನನ್ನ ಮೊದಲ ಆದ್ಯತೆ ದೇವಾಲಯವಾದರೆ, ಎರಡನೇ ಆದ್ಯತೆ ಶಾಲೆಯಾಗಿದೆ. ಸಮಾಜದ ಪ್ರತಿಯೊಂದು ಬಡ ಕುಟುಂಬದ ಮಗು ವಿದ್ಯಾವಂತನಾದರೆ ಮಾತ್ರ ಉತ್ಕ್ರಷ್ಟ ಸಮಾಜ ನಿರ್ಮಾಣ ಸಾಧ್ಯ. ಇಂದಿನ ಮಕ್ಕಳಿಗೆ ದೊರೆಯಬೇಕಾದ ಎಲ್ಲಾ ರೀತಿಯ ಒಳ್ಳೆಯ ಶಿಕ್ಷಣ ಕೊಡುವಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಸುವರ್ಣ ಸಂಭ್ರಮಾಚರಣೆ ಆಗುತ್ತಿರುವ ಕುಂದಾಪುರ ವಲಯದ ಏಕೈಕ ಆಂಗ್ಲ ಮಾಧ್ಯಮ ಶಾಲೆ ಆಗಿರುವುದು ಸಂಸ್ಥೆಗೆ ಸಲ್ಲುವ ಗೆಲುವಿನ ಮುಕುಟ ಎಂದರು. ಸ್ಟೇಟ್ ಲೆವೆಲ್ ಹಾರ್ಡ್ ಬಾಲ್ ಕ್ರಿಕೆಟ್ ವಿನ್ನರ್ ಆಗಿರುವ ಹತ್ತನೇ ತರಗತಿಯ ವಿದ್ಯಾರ್ಥಿ ಆದಿತ್ಯ ಅಜಯ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಕೆ ಸೀತಾರಾಮ ನಕ್ಕತ್ತಾಯ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಮತ್ತು ಪ್ರಾಥಮಿಕ ವಿಭಾಗದ ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿಗಳಾದ ಭಕ್ತಿ ಮತ್ತು ಸನ್ವಿತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾಕಾರ್ಯಕ್ರಮದ ನಂತರ ವಿ.ಕೆ.ಆರ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆದವು. ತದನಂತರ ನಡೆದ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ರುಗ್ಮಯಾನ ಸಂಪನ್ನಗೊಂಡಿತು.
