ಶ್ರೀನಿವಾಸಪುರ : ದೇಶಾದ್ಯಂತ 23 ವರ್ಷಗಳ ಬಳಿಕ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಈಗ ಮೂರನೇ ಹಂತದ ಕಾರ್ಯ ನಡೆಯುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರೋಣುರು ಆರ್.ಎನ್.ಚಂದ್ರಶೇಖರ್ ತಿಳಿಸಿದರುಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು. ಶ್ರೀನಿವಾಸಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹೊರ ಪ್ರದೇಶದ ಮತದಾರರ ಹೆಸರುಗಳಿರುವ ಬಗ್ಗೆ ಮಾಹಿತಿ ದೊರೆತಿದ್ದು, ಎಲ್ಲಾ ಬೂತ್‌ಗಳಲ್ಲಿ ನೇಮಕಗೊಂಡಿರುವ ಬಿಎಲ್‌ಎ ಹಾಗು ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು. […]

Read More

ಶ್ರೀನಿವಾಸಪುರ : ಸರ್ಕಾರವು ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನು ಅಕ್ಷರಸ್ಥನ್ನಾಗಿಸುವ ಉದ್ದೇಶದಿಂದ ಹೆಚ್ಚು ಹೆಚ್ಚು ಉಪಯುಕ್ತ ಯೋಜನೆಗಳ ಮೂಲಕ ಅನುದಾನಗಳನ್ನು ಬಿಡುಗಡೆ ಮಾಡುತ್ತಿದ್ದು , ಅವುಗಳನ್ನು ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಉಪಯೋಗಿಸುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.ಪಟ್ಟಣದ ಪ್ರಥಮಧರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜು ವಾರ್ಷಿಕೋತ್ಸವವನ್ನು ಉದ್ಗಾಟಿಸಿ ಮಾತನಾಡಿದರು. ಈಗಾಗಲೇ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ. ಅದರಂತೆ ಪ್ರತಿವರ್ಷದಂತೆ ಈ ಬಾರಿಯೂ ಸಹ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ತಾಲೂಕು ಜಿಲ್ಲೆಗೆ ಪ್ರಥಮ […]

Read More

ಕೋಲಾರ : ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರಂತರ ಸುಧಾರಣಾ ಕ್ರಮಗಳು ಮತ್ತು ಆಧುನಿಕ ಶಿಕ್ಷಣ ನೀತಿಗಳ ಅನುಷ್ಠಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಪರಿವರ್ತನೆ ಕಂಡುಬರುತ್ತಿದೆ. ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ಅವರ ನೇತೃತ್ವದಲ್ಲಿ, ಶಿಕ್ಷಕರು, ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ಜಿಲ್ಲೆಯ ಸರ್ಕಾರಿ ಶಾಲೆಗಳು ಹೊಸ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ. 2026–27ನೇ ಶೈಕ್ಷಣಿಕ ವರ್ಷವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಾದ್ಯಂತ ಹಲವು ಮಹತ್ವಾಕಾಂಕ್ಷಿ ಯೋಜನೆಗಳು ಜಾರಿಗೊಂಡಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ, ಆಧುನಿಕ ಹಾಗೂ […]

Read More

ಶ್ರೀನಿವಾಸಪುರ : ಮಾವಿನನಾಡು ಎಂದೇ ಪ್ರಸಿದ್ಧಿಯಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈ ಬಾರಿ ಇಸ್ರೇಲ್‌ ಮೂಲದ ಅಪರೂಪದ ‘ಮಾಯ’ ತಳಿಯ ಮಾವಿನ ಹಣ್ಣು ವಿಶೇಷ ಗಮನ ಸೆಳೆಯುತ್ತಿದೆ. ತಾಲ್ಲೂಕಿನ ಹೊಗಲಗೆರೆ ಗ್ರಾಮದಲ್ಲಿ ಬೆಳೆಯಲಾಗುತ್ತಿರುವ ಈ ಮಾವು ತನ್ನ ವಿಶಿಷ್ಟ ಸಿಹಿತನ, ಸುವಾಸನೆ ಮತ್ತು ರುಚಿಯಿಂದ ರೈತರು ಹಾಗೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀನಿವಾಸಪುರ ಮಾವು ಉತ್ಕೃಷ್ಟ ಕೇಂದ್ರದ ವತಿಯಿಂದ 2016ರಲ್ಲಿ ವಿವಿಧ ವಿದೇಶಿ ತಳಿಗಳ ಮಾವಿನ ಸಸಿಗಳನ್ನು ಪರೀಕ್ಷಾರ್ಥವಾಗಿ ನೆಡಲಾಗಿತ್ತು. ಅವುಗಳಲ್ಲಿ ‘ಮಾಯ’ ತಳಿ ಸ್ಥಳೀಯ […]

Read More

ಶ್ರೀನಿವಾಸಪುರ : ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆ ಹಾಗೂ ಹೊಸ ಟೌನ್‌ಶಿಪ್‌ಗಳ ಹೆಸರಿನಲ್ಲಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸಿದೆ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಎಂದರು.ಪಟ್ಟಣದ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ​ರಾಮನಗರ ಜಿಲ್ಲೆಯ ಬಿಡದಿ ಹೋಬಳಿಗೆ ಒಳಪಡುವ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂಬತ್ತು ಕಂದಾಯ ಗ್ರಾಮಗಳ ಸುಮಾರು […]

Read More

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲೂಕು ಘಟಕದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಶನಿವಾರ ಪಟ್ಟಣದಲ್ಲಿ ಆತ್ಮೀಯವಾಗಿ ನಡೆಯಿತು. ಚುನಾವಣಾಧಿಕಾರಿ ಗೋಪಿನಾಥ್ ಜೆ. ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಪದಗ್ರಹಣ ನೆರವೇರಿಸಿದರು. ಬಳಿಕ ಮಾತನಾಡಿದ ಪದಾಧಿಕಾರಿಗಳು, ಶಿಕ್ಷಕರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದಿಸೆಯಲ್ಲಿ ಸಮರ್ಪಿತವಾಗಿ ಕಾರ್ಯನಿರ್ವಹಿಸುವುದಾಗಿ ಸಂಕಲ್ಪ ವ್ಯಕ್ತಪಡಿಸಿದರು. ತಾಲೂಕು ಘಟಕದ ಅಧ್ಯಕ್ಷರಾಗಿ ಸಿ.ವಿ. ಶಿವಣ್ಣ, ಪ್ರಧಾನ […]

Read More

ಶ್ರೀನಿವಾಸಪುರ : ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ತಂತಿ ಬೇಲಿ ನಿರ್ಮಾಣಕ್ಕೆ ಸಾಮಾನ್ಯ ರೈತರಿಗೆ ಶೇ.40 ಮತ್ತು ಪ.ಜಾತಿ, ಪ.ಪಂಗಡ ರೈತರಿಗೆ ಶೇ.50 ರಷ್ಟು ಸಹಾಯಧನ ಸರ್ಕಾರದಿಂದ ನೀಡುತ್ತಿದ್ದು, 2023-24 ರಿಂದ 2025-26 ರವರೆಗೆ ಕೃಷಿ ಇಲಾಖೆಯ ಸಹಾಯಧನದಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳಿಗೆ ಕೆಲವು ರೈತರು ತಂತಿ ಬೇಲಿ ನಿರ್ಮಿಸಿಕೊಂಡಿರುವುದಿಲ್ಲ ಮತ್ತು ಕೃಷಿ ಹೊಂಡದ ಬಳಿ ಅಪಾಯದ ಸೂಚನಾ ಫಲಕವನ್ನು ಹಾಕಿರುವುದಿಲ್ಲ. ಕೂಡಲೇ ರೈತರು ತಂತಿಬೇಲಿಯೊಂದಿಗೆ ಅಪಾಯದ ಸೂಚನಾ ಫಲಕವನ್ನು ಕೃಷಿ ಹೊಂಡಗಳಿಗೆ ಅಳವಡಿಸಬೇಕು ಎಂದು […]

Read More

ಕೋಲಾರ: ಉಡುಪಿ ಜಿಲ್ಲೆ ಕುಂದಾಪುರದಜನಪ್ರತಿನಿಧಿ’ ವಾರಪತ್ರಿಕೆಯ ಬೆಳ್ಳಿ ಹಬ್ಬದ ಪ್ರಯುಕ್ತ ಕುಂದಾಪುರದಲ್ಲಿ ಮೇ 17ರ ಭಾನುವಾರ ನಡೆದ ಅಕ್ಷರ 2026′ ರಜತ ಸವಿ ನೆನಪು ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಲೇಖಕ ವಿಶ್ವ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ವಿಶ್ವರಿಗೆ ಗೌರವ ಸಮರ್ಪಿಸಿದರು. ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ ಅವರು, ತಿಂಗಳಿಗೊಂದರಂತೆ ಆರು ತಿಂಗಳ ಕಾಲ ವೈವಿಧ್ಯಮಯವಾಗಿ ನಡೆಯಲಿರುವ ಅಕ್ಷರ 2026ಕ್ಕೆ ಚಾಲನೆ ನೀಡಿದರು. 25 […]

Read More

ಕೋಲಾರ:- ಕೋಲಾರ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿದ್ದೋದ್ಧೇಶ ಸಹಕಾರ ಸಂಘದ ನಿಯಮಿತದ ಶೇರು ಸಂಗ್ರಹಣಾ ಅಭಿಯಾನಕ್ಕೆ ಮಾಲೂರು ನಗರದಿಂದ ಬುಧವಾರ ಚಾಲನೆ ನೀಡಿ, ಯಶಸ್ವಿನಿ ಆರೋಗ್ಯ ವಿಮಾ ಸೌಲಭ್ಯ ಹಾಗೂ ಸಾಲ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸೂಚಿಸಲಾಯಿತು.ಮಾಲೂರು ನಗರದ ಕೃಷಿಕ ಸಮಾಜ ಸಂಘದ ಸಭಾಂಗಣದಲ್ಲಿ ಬುಧವಾರ ಜರುಗಿದ ಅಭಿಯಾನದ ಪ್ರಥಮ ಸಭೆಯಲ್ಲಿ ಹಿರಿಯ ಪತ್ರಕರ್ತ ರಾಜ್‍ಗೋಪಾಲ್ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಉಪಾಧ್ಯಕ್ಷ ಅಬ್ಬಣಿ ಶಂಕರ್ ಇತರೇ ನಿರ್ದೇಶಕರಿಗೆ ತಮ್ಮ ಸದಸ್ಯತ್ವ ಅರ್ಜಿಯನ್ನು ನೀಡುವ ಮೂಲಕ ಚಾಲನೆ […]

Read More
1 2 3 384