ಉದ್ಯಾವರ; ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇವರ ನೇತೃತ್ವದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಇಂದು ಗಾಂಧಿ ಜಯಂತಿ ಆಚರಣೆ ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ನಡೆಸಲಾಯಿತು. ಈ ಪ್ರಯುಕ್ತ ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಮತ್ತು ವ್ಯಾಪ್ತಿಯ ಸ್ವಚ್ಛತೆಯ ಸಿಬ್ಬಂದಿಗಳಾದ ಅನಸೂಯ, ನಯಾಜ್, ಜನಾರ್ಧನ್ ಅವರ ಸೇವೆಯನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸಂದೀಪ್, ಗ್ರಾಮ ಪಂಚಾಯತ್ ಸದಸ್ಯರಾದ ರಿಯಾಜ್ ಪಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ […]
ಶಿರೂರು : ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿಯವರ 156 ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 121 ನೇ ಜನ್ಮದಿನಾಚರಣೆ ಆಚರಿಸಲಾಯಿತು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಮಹಾನ್ ನಾಯಕರಉದಾತ್ತ ವಿಚಾರದಾರೆಗಳನ್ನು ತಿಳಿಸಿ ಎಲ್ಲರಿಗೂ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜನ್ಮದಿನದ ಶುಭಾಶಯ ತಿಳಿಸಿದರು.
✍️ಈಶ್ವರ್ ಸಿ ನಾವುಂದ, 9833259692 ಒಬ್ಬ ವ್ಯಕ್ತಿಯ ನಡೆತೆ,ಕೌಶಲ್ಯ, ಭವಿಷ್ಯವನ್ನು. ರೂಪಿಸುವ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು ಎಂದು ಎಪಿಜೆ ಅಬ್ದುಲ್ ಕಲಾಂ ಹೇಳಿರುವ ಮಾತು ಅಕ್ಷರಶ ಸತ್ಯ ಯಾವೊಬ್ಬ ಮಗನು ಜನ್ಮ ಕೊಟ್ಟ ತಾಯಿಯನ್ನು ಮರೆಯುವುದಿಲ್ಲ.ಬಾಳು ಕೊಟ್ಟ ತಂದೆಯನ್ನು ಮರೆಯುವುದಿಲ್ಲ. ಮಾತು ಕಲಿಸಿದ ಕನ್ನಡ ತಾಯಿಯನ್ನು ಮರೆಯುವುದಿಲ್ಲ. ಕನ್ನಡ ಅಕ್ಷರ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ. ಗುರುಗಳು ನಮ್ಮ ಬದುಕಿನಲ್ಲಿ ಜೀವನ ದಾರಿಗೆ ಅರ್ಥ ಕಲ್ಪಿಸಿ ಸ್ವತಂತ್ರವಾಗಿ ಸ್ವಯಂ ತೀರ್ಮಾನ ಕೈಗೊಳ್ಳಲು ನಮ್ಮನ್ನು ವಿದ್ಯಾವಂತರಾಗಿಸಿದ ಗುರುಗಳು […]
INDIAN CATHOLIC YOUTH MOVEMENT, UDUPI DIOCESE, HOSTS SUCCESSFUL ‘YUVA DABAZO 2.0’ DIOCESAN YOUTH CONVENTION ಉಡುಪಿ; ಭಾರತೀಯ ಕ್ಯಾಥೋಲಿಕ್ ಯುವ ಸಂಘಟನೆ (ICYM), ಉಡುಪಿ ಡಯಾಸಿಸ್, ಸೆಪ್ಟೆಂಬರ್ 28, 2025 ರಂದು ಕಲ್ಯಾಣಪುರದ ಮಿಲಾಗ್ರೆಸ್ ಟ್ರೈ-ಸೆಂಟೆನರಿ ಹಾಲ್ನಲ್ಲಿ ತನ್ನ ವಾರ್ಷಿಕ ಡಯೋಸಿಸನ್ ಯುವ ಸಮಾವೇಶ ‘ಯುವ ಡಬಾಜೊ 2.0’ ಅನ್ನು ಯಶಸ್ವಿಯಾಗಿ ನಡೆಸಿತು. ಈ ಮಹತ್ವದ ಕಾರ್ಯಕ್ರಮವು ಡಯಾಸಿಸ್ನಾದ್ಯಂತದ ಘಟಕಗಳಿಂದ ಕ್ಯಾಥೋಲಿಕ್ ಯುವಕರನ್ನು ಆಧ್ಯಾತ್ಮಿಕ ರಚನೆ, ಫೆಲೋಶಿಪ್ ಮತ್ತು ಆರೋಗ್ಯಕರ ಸ್ಪರ್ಧೆಯ ದಿನಕ್ಕಾಗಿ […]
Mount Rosary Catholic Shabha Unit – Awareness about cleanliness through Shramadaan on the occasion of Gandhi Jayanti ಕಲ್ಯಾಣಪುರ, ಅಕ್ಟೋಬರ್ 2, 2025 ; ಕಲ್ಯಾಣಪುರದ ಮೌಂಟ್ ರೋಸರಿ ಚರ್ಚ್ಕಥೋಲಿಕ್ ಸಭಾ ಘಟಕ, ಚರ್ಚಿನ ಪರಿಸರ ಆಯೋಗ ಸಹಯೋಗದೊಂದಿಗೆ, ಅಕ್ಟೋಬರ್ 2, 2025 ರಂದು ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿತು. ಕಥೋಲಿಕ್ ಸಭಾದ ಅಧ್ಯಕ್ಷರಾದ ಶ್ರೀ ಆರ್ಚಿಬಾಲ್ಡ್ ಫರ್ಟಾಡೊ ಸ್ವಾಗತಿಸಿದರು. ಕಲ್ಯಾಣಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ. ಡಾ. ರೋಕ್ ಡಿಸೋಜಾ, […]
ಕುಂದಾಪುರ ; “ಇಂದು ಈ ದೇಶದಲ್ಲಿ ಗಾಂಧಿಯವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಯ ಬದಲಿಗೆ ಸುಳ್ಳು ಮತ್ತು ಹಿಂಸೆಯ ಪ್ರತಿಪಾದನೆ ನಡೆಯುತ್ತಿದೆ. ಅವೈಜ್ಞಾನಿಕ ಜಿಎಸ್ಟಿ ಪರಿಣಾಮವಾಗಿ ಎರಡು ಲಕ್ಷ ಸಣ್ಣ ಮಧ್ಯಮ ಗಾತ್ರದ ಕೈಗಾರಿಕೆಗಳು ಮುಚ್ಚಿವೆ. ದೊಡ್ಡ ಉದ್ಯಮಿಗಳು ಮತ್ತಷ್ಟು ಬೆಳೆದಿದ್ದಾರೆ. ಎಲ್ಲಾ ತಪ್ಪುಗಳನ್ನು ಸರಿ ಎಂದು ಪ್ರತಿಪಾದನೆ ಮಾಡುವ ಚಾಳಿ ಆರಂಭಗೊಂಡಿದೆ. ಗಾಂಧಿ ತಪ್ಪು ಅವರನ್ನು ಕೊಂದವರೆ ಶ್ರೇಷ್ಠ ಎಂಬ ಪ್ರತಿಪಾದನೆ ಆರಂಭಗೊಂಡಿದೆ. ಈ ಕುರಿತು ಚಿಂತನೆ ಅಗತ್ಯ” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯೆ […]
ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕೊಸೆಸಾಂವ್ ಮಾತೆಯ ಚರ್ಚ್ ಘಟಕದ ಆಶ್ರಯದಲ್ಲಿ ಕಥೊಲಿಕ್ ಸ್ತ್ರಿ ಸಂಘಟನೆ, ಗಂಗೊಳ್ಳಿ, ಭಾರತೀಯ ಕಥೊಲಿಕ್ ಯುವ ಸಂಘಟನೆ(ICYM), ಗಂಗೊಳ್ಳಿ ಹಾಗೂ ವೈಸಿಎಸ್(YCS), ಗಂಗೊಳ್ಳಿಯ ಸಹಭಾಗಿತ್ವದಲ್ಲಿ, ಗುಜ್ಜಾಡಿ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ, ಕಳೆದ ಹಲವಾರು ವರ್ಷಗಳಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆಯುವ ಸಾರ್ವಜನಿಕ ಸ್ಥಳದ ಸ್ವಚ್ಚತಾ ಕಾರ್ಯಕ್ರಮವು ಗುಜ್ಜಾಡಿಯಲ್ಲಿ ನಡೆಯಿತು. ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ಮಾರ್ಗದರ್ಶನದೊಂದಿಗೆ, ಕಥೊಲಿಕ್ ಸಭಾ ಉಡುಪಿ ಪ್ರದೇಶ್ […]
ಕಲ್ಯಾಣಪುರ; ಮಿಲಾಗ್ರೆಸ್ ಕಾಲೇಜು ಇತ್ತೀಚೆಗೆ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಸ್ಮರಣಾರ್ಥ “ಗಾಂಧಿ ಶಾಂತಿಯ ಮೂಲಕ ಜಗತ್ತನ್ನು ಮುನ್ನಡೆಸುವುದು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವು ಶಾಂತಿ ಮತ್ತು ಏಕತೆಯನ್ನು ಹರಡಲು ಗಾಂಧೀಜಿ ಜನಪ್ರಿಯಗೊಳಿಸಿದ “ರಘುಪತಿ ರಾಘವ ರಾಜಾ ರಾಮ್” ಎಂಬ ಭಕ್ತಿಗೀತೆಯೊಂದಿಗೆ ಪ್ರಾರಂಭವಾಯಿತು. ರಾಷ್ಟ್ರಪಿತರಾಗಿ ಅವರ ಪರಂಪರೆಯನ್ನು ಗೌರವಿಸುವ ಮೂಲಕ ಗಣ್ಯರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. […]
ಸೋಮವಾರ, 2025, ಸೆಪ್ಟೆಂಬರ್ 29ರಂದು, ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ, ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಎಐಎಂಐಟಿ ಸೆಂಟರ್, ಬೀರಿ, ಮಂಗಳೂರಿನಲ್ಲಿ ಒಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ನಿರ್ದೇಶಕ ಡಾ. (ಫಾ.) ಕಿರಣ್ ಕೋತ್ ಎಸ್.ಜೆ. ಅವರು ಡಾ. (ಫಾ.) ಮನೋಜ್, ಡೀನ್ ಡಾ. ರಜನಿ ಸುರೇಶ್, ವಿಭಾಗಾಧ್ಯಕ್ಷೆ ಡಾ. ಬೀನಾ ಡಯಾಸ್, ಅಧ್ಯಾಪಕ ಸಂಯೋಜಕಿ ಶ್ರೀಮತಿ ಹರಿಣಾಕ್ಷಿ, ವಿದ್ಯಾರ್ಥಿ ಸಂಯೋಜಕ ಶ್ರೀ ಜೋಯಲ್ ಡಿಸೋಜಾ, ಕುಮಾರಿ ದೆಲಿಶಾ ಡಿಸೋಜಾ, ಶಿಕ್ಷಕರು […]

