ಅತ್ತೂರು-ಕರ್ಕಳದ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಇಂದು ಭಾತೃತ್ವದ ದಿನವನ್ನು ಭಕ್ತಿಪರ್ಣವಾಗಿಆಚರಿಸಲಾಯಿತು. ಈ ರ್ಷದ ಆಚರಣೆಯ ಕೇಂದ್ರ ವಿಷಯವಾಗಿದ್ದು “ದಿವ್ಯ ಪರಮ ಪ್ರಸಾದದ ಮೂಲಕ ಸಮುದಾಯದ ನಿರ್ಮಾಣ”ಈ ದಿವ್ಯ ಬಲಿಪೂಜೆಯನ್ನು ವಂ.ಸ್ವಾಮಿ. ಜಾನ್ ಬ್ಯಾಪ್ಟಿಸ್ಟ್ ಸಲ್ಪಾನ್ಹಾ, ಮ೦ಗಳೂರು ರ್ಮಪ್ರಾಂತ್ಯದ ಸಾರ್ವಜನಿಕ ಸಂರ್ಕಾಧಿಕಾರಿ ಹಾಗೂ ಬಿಜೈ ಸಂತ ಫೂನ್ಸಿಸ್ ಜೇವಿಯರ್ ದೇವಾಲಯದ ರ್ಮಗುರುಗಳು ಪ್ರಧಾನ ಧರ್ಮಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿದರು. ತಮ್ಮ ಉಪನ್ಯಾಸದಲ್ಲಿ ಅವರು ದಿವ್ಯ ಪರಮ ಪ್ರಸಾದ ಕೈಸ್ತ ಜೀವನದ ಮೂಲ ಮತ್ತು ಶಿಖರವಾಗಿದ್ದು, ಅದರ ಮೂಲಕ ಏಕತೆ, ಸೇವೆ […]
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ ಮೋಸ್ಚೇನಿ ಆರ್ಟ್ ಫೆಸ್ಟ್ 2026ರ ಅಂಗವಾಗಿ ಮಿರಾಡಾ ವಿಭಿನ್ನವಾಗಿ ನೋಡಲು ಕಲಿಕೆ ಎಂಬ ಶೀರ್ಷಿಕೆಯಡಿ ವಿಶೇಷ ಕಲಾ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಯನ್ನು ಸಂತ ಅಲೋಶಿಯಸ್ ಗೊನ್ಜಾಗ ಸಭಾಂಗಣದಲ್ಲಿ ನಡೆಸಲಾಯಿತು ಈ ಕಾರ್ಯಾಗಾರವನ್ನು ಧರ್ಮಗುರು, ಕಲಾಕಾರರು ಹಾಗೂ ಸಮಕಾಲೀನ ಶಿಲ್ಪಿಯೂ ಆಗಿರುವ ವಂ. ಫಾ. ಆರ್. ಎಸ್ ಪ್ರದೀಪ್ ಎಸ್.ಜೆ ಅವರು ನಡೆಸಿಕೊಟ್ಟರು. ಮಕ್ಕಳಲ್ಲಿ ವಿಶಾಲವಾದ ದೃಷ್ಟಿಕೋನ ಬೆಳೆಸಲು ಮತ್ತು ಕಲೆಯನ್ನು ಸಾಂಪ್ರದಾಯಿಕ ಮೇರೆಯನ್ನು ದಾಟಿ ಅರ್ಥೈಸಲು ಸದರಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. […]
Unseen builders of coastal Karnataka ; Lecture by Dr Peter Wilson Prabhakar on the contribution of Basel Mission to Coastal Karnataka ಬಾಸೆಲ್ ಮಿಷನ್ ಇತಿಹಾಸಕಾರ ಮತ್ತು ವಿದ್ವಾಂಸರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಜನವರಿ 20 ರಂದು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ‘ಧರ್ಮ ಮತ್ತು ಸಂಸ್ಕೃತಿ ಕೇಂದ್ರ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ‘ಕರ್ನಾಟಕದಲ್ಲಿ ಬಾಸೆಲ್ ಮಿಷನ್ ಪರಂಪರೆ’ ಎಂಬ ಶೀರ್ಷಿಕೆಯ ಈ ಉಪನ್ಯಾಸವು ಸಾರ್ವಜನಿಕ […]
ಚೈತ್ರಾ, ಪ್ರಾಯ-15 ವರ್ಷ, ತ೦ದೆ ಬಸವರಾಜ, ವಾಸ- ಹೆಸ್ಕತ್ತೂರು ಗ್ರಾಮ, ಕು೦ದಾಪುರತಾಲೂಕು, ಈಕೆ ಹೆಸ್ಕತ್ತೂರು ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸ೦ಗ ಮಾಡಿಕೊ೦ಡಿದ್ದು, ಈ ದಿನ ಮಧ್ಯಾಹ್ನಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಶಾಲೆಗೂ ಹೋಗದೆ, ವಾಪಸು ಮನೆಗೂ ಬಾರದೇಕಾಣೆಯಾಗಿರುವುದಾಗಿದೆ ಈತಳು ಎಲ್ಲಿಯಾದರೂ ಕ೦ಡುಬ೦ದಲ್ಲಿ ಕು೦ದಾಪುರ ಗ್ರಾಮಾ೦ತರ ಠಾಣೆಯ9480805468, 08254237100 ದೂರವಾಣಿ ಸ೦ಖ್ಯೆಗೆ ಮಾಹಿತಿ ನೀಡುವುದು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಕಂಬಳಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಧರ್ಮಸ್ಥಳದಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ವು ಕಂಬಳಕ್ರಾಸ್ ಬಳಿ ಅತಿವೇಗದಲ್ಲಿ ಚಲಿಸಿ, ರಸ್ತೆಯ ಇನ್ನೊಂದು ಬದಿಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.ಡಿಕ್ಕಿಯ ತೀವ್ರತೆಗೆ ತೂಫಾನ್ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಅದರಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ […]
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಇತ್ತೀಚೆಗೆ ಐಎಂಜೆ ಸಂಸ್ಥೆಗಳಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಸಿಬ್ಬಂದಿಗಳಲ್ಲಿ ಆರೋಗ್ಯ ಜಾಗೃತಿ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ಐಎಂಜೆ ಸಂಸ್ಥೆಗಳ ಆರೋಗ್ಯ ವಿಜ್ಞಾನ ಬ್ಲಾಕ್ನಲ್ಲಿ ನಡೆಸಲಾಯಿತು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದ್ರೋಗಶಾಸ್ತ್ರದಲ್ಲಿ ಜೂನಿಯರ್ ರೆಸಿಡೆಂಟ್ ಡಾ. ಸಮೃದ್ಧ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ಹೃದಯ ಆರೋಗ್ಯದ […]
ಕುಂದಾಪುರ; ರಸ್ತೆ ಸುರಕ್ಷಾ ನಿಯಮನ್ನು ಪಾಲಿಸುವುದರಿಂದ ಸಾರ್ವಜನಿಕರು ಧೈರ್ಯದಿಂದ ಓಡಾಡಬಹುದು, ಅಪಘಾತ ಮುಕ್ತ ಸಮಾಜ ನಿರ್ಮಿಸಬಹುದು ಹಾಗೂ ಅಮಾಯಕರ ಸಾವು ನೋವುಗಳನ್ನು ತಡೆಗಟ್ಟಲು ಸಾಧ್ಯ. ಈ ನೆಲೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ರಸ್ತೆ ಸುರಕ್ಷತೆಗೆ ಸಂಬAಧಿಸಿದ ನಿಯಮಗಳನ್ನು ಅಳವಡಿಸಿಕೊಂಡು ದೈನಂದಿನ ಚಟುವಟಿಕೆಯಲ್ಲಿ ಈ ನಿಯಮಗಳನ್ನು ಪಾಲಿಸಬೇಕು ಎಂದು ಕುಂದಾಪುರ ಸರ್ಕಲ್ ಇನ್ಸಪೆಕ್ಟರ್ ಜಯರಾಮ ಗೌಡರವರು ಹೇಳಿದರು. ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವುದು ಸರಿಯಾದ ದಾಖಲೆಗಳಿಲ್ಲದೆ ವಾಹನ ಚಲಾಯಿಸುವುದು, ಅತಿವೇಗವಾಗಿ ಚಲಾಯಿಸುವುದು, ಮಾದಕ ದ್ರವ್ಯಸೇವಿಸಿ ವಾಹನ ಚಲಾಯಿಸುವುದು ಕಾನೂನು […]
ಕೋಟ ಸಂತ ಜೋಸೆಫರ ಇಗರ್ಜಿಯ ವಾರ್ಶಿಕ ತೆರಾಲಿ ಹಬ್ಬ ಬಹು ಸಡಗರದಿಂದ ಜನವರಿ ೨೧ ರಂದು ಆಚರಿಸಲಾಯಿತು. ಉಡುಪಿ ಧರ್ಮ ಪ್ರಾಂತ್ಯದ ಕುಲಪತಿಗಳಾದ ವಂದನೀಯ ಸ್ಟೀಫನ್ ಡಿಸೋಜಾರವರು ಪ್ರಧಾನ ಯಾಜಕರಾಗಿ ಸಂಭ್ರಮದ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ವಿವಿಧ ಇಗರ್ಜಿಗಳ ಧರ್ಮಗುರುಗಳು ಬಲಿಪೂಜೆಯಲ್ಲಿ ಸಹಭಾಗಿಯಾದರು. ಭಕ್ತಾದಿಗಳು ಬಹುಸಂಖ್ಯೆಯಲ್ಲಿ ಹಾಜರಿದ್ದು ಸಂಭ್ರಮೊಲ್ಲಾಸದಿಂದ ಹಬ್ಬವನ್ನು ಆಚರಿಸಿದರು. ಚರ್ಚಿನ ಧರ್ಮಗುರುಗಳಾದ ವಂ। ಸ್ಟ್ಯಾನಿ ತಾವ್ರೊ ಅವರು ಹಬ್ಬಕ್ಕೆ ಆಗಮಿಸಿದ ಧರ್ಮಗುರುಗಳಿಗೆ, ಭಕ್ತಾದಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಇದೇ ಸಂದರ್ಭದಲ್ಲಿ ಶ್ರೀಯುತ […]
MANAGLORE CENTENARY VALEDICTORY CEREMONY OF ST VINCENT DE PAUL SOCIETY ಮಂಗಳೂರು;ಎಸ್.ಎಸ್.ವಿ.ಪಿ. ಎಂದು ಜನಪ್ರಿಯವಾಗಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ, ಮಂಗಳೂರು ಕ್ಯಾಥೊಲಿಕ್ ಧರ್ಮಸಭೆಯಲ್ಲಿ ತನ್ನ ಅಸ್ತಿತ್ವದ ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ಇದೇ 2026ರ ಜನವರಿ 25ರ ಭಾನುವಾರದಂದು ಫಾದರ್ ಮುಲ್ಲರ್ ಕನ್ವೆಂಷನ್ ಸೆಂಟರ್ ಸಭಾಂಗಣದಲ್ಲಿ ಶತಮಾನೋತ್ಸವ ಸಮಾರೋಪ ಸಮಾರಂಭ ನೆರವೇರಲಿದೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಕಾರ್ಯಕ್ರಮದ […]

