ಬೆಂಗಳೂರು : ಹಿರಿಯ ಐಎಎಸ್ ಅಧಿಕಾರಿ ಹಾಗೂ 1996ರ ಬ್ಯಾಚಿನ ಕೆ.ಎನ್. ಕಾಡರ್ನ ಶ್ರೀ ಮೋಹಮ್ಮದ್ ಮೊಹ್ಸಿನ್ ಅವರಿಗೆ ಸಹಕಾರ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಅವರು ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ವೈದ್ಯಕೀಯ ಶಿಕ್ಷಣ) ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ, ಅವರು ಸಹಕಾರ ಇಲಾಖೆಯ ಮುಖ್ಯ ಕಾರ್ಯದರ್ಶಿಯ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಕೂಡಾ ತಕ್ಷಣದಿಂದಲೇ ಹಸ್ತಗತಪಡಿಸಿಕೊಳ್ಳಲಿದ್ದಾರೆ. ಈ ಕ್ರಮದಿಂದ, ಈವರೆಗೆ ಈ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತಿದ್ದ ಮೇಜರ್ ಮಣಿವಣ್ಣನ್ […]
ಮೈಸೂರು; ಪದುವಾದ ಸಂತ ಅಂತೋನಿಯ ವಾರ್ಷಿಕ ಹಬ್ಬಕ್ಕೆ ಕಾರಣವಾಗುವ ನೊವೆನಾ ಭಕ್ತಿಯ ಎರಡನೇ ದಿನವನ್ನು ಜೂನ್ 5, 2023 ರಂದು ಮೈಸೂರಿನ ದೋರ್ನಹಳ್ಳಿಯಲ್ಲಿ ಸಂತ ಅಂತೋನಿಯ ಬೆಸಿಲಿಕಾದಲ್ಲಿ ಬಹಳ ನಂಬಿಕೆ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಮೈಸೂರು ಡಯಾಸಿಸ್ನ ಬಿಷಪ್ ಎಮೆರಿಟಸ್ ಅತಿ ವಂದನೀಯ ಡಾ. ಥಾಮಸ್ ಎ. ವಾಜಪಿಲ್ಲಿ ಅವರು ಗಂಭೀರವಾದ ಯೂಕರಿಸ್ಟಿಕ್ ಆಚರಣೆಯ ಅಧ್ಯಕ್ಷತೆ ವಹಿಸಿದ್ದರು. ಅವರೊಂದಿಗೆ ಸಂತ ಅಂತೋನಿಯ ಬೆಸಿಲಿಕಾದ ರೆಕ್ಟರ್ ರೆವರೆಂಡ್ ಫಾದರ್ ಡೇವಿಡ್ ಸಗಯರಾಜ್ ಮತ್ತು ಬೆಸಿಲಿಕಾದ ಆಡಳಿತಾಧಿಕಾರಿ ರೆವರೆಂಡ್ ಫಾದರ್ […]
ಬೆಂಗಳೂರು, ಜೂನ್ ೫: ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ (ಕೆಎನ್: 1994) ಅವರನ್ನು ಸರ್ಕಾರ ಇಂದು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.ಇದುವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪರ್ವೇಜ್ ಅವರನ್ನು ತಕ್ಷಣದಿಂದಲೇ ಈ ಹೊಸ ಜವಾಬ್ದಾರಿಗೆ ನೇಮಿಸಲಾಗಿದ್ದು, ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲೇ ಮುಂದುವರಿಸಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಅವರಿಗೆ ಇದೀಗ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜೊತೆಗೆ […]
ಸಂತ ಅಂತೋನಿಯ ವಾರ್ಷಿಕ ಹಬ್ಬ ಸಮೀಪಿಸುತ್ತಿದ್ದಂತೆ, ಸಂತನಿಗೆ ಒಂಬತ್ತು ದಿನಗಳ ನೊವೆನಾ ಮೇ 4, 2025 ರಂದು ಮೈಸೂರಿನ ದೋರ್ನಹಳ್ಳಿಯ ಸಂತ ಅಂತೋನಿ ಬೆಸಿಲಿಕಾದಲ್ಲಿ ಪ್ರಾರಂಭವಾಯಿತು. ಉದ್ಘಾಟನಾ ಸಮಾರಂಭವನ್ನು ವಿಶ್ರಾಂತ ಬಿಶಪ್ ಅತಿ ವಂ. ಡಾ. ಬರ್ನಾರ್ಡ್ ಮೊರಾಸ್ (ಅಪೋಸ್ಟೋಲಿಕ್ ಆಡಳಿತಾಧಿಕಾರಿ, ಮೈಸೂರು ಡಯಾಸಿಸ್) ಧ್ವಜಾರೋಹಣ ಮಾಡುವ ಮೂಲಕ ಗುರುತಿಸಲಾಯಿತು, ರೆವರೆಂಡ್ ಫಾದರ್ ಡೇವಿಡ್ ಸಗಯರಾಜ್ (ರೆಕ್ಟರ್, ಸೇಂಟ್ ಅಂತೋನಿ ಬೆಸಿಲಿಕಾ), ರೆವರೆಂಡ್ ಫಾದರ್ ಪ್ರವೀಣ್ ಪೆದ್ರು (ಆಡಳಿತಾಧಿಕಾರಿ), ಫಾದರ್ ಜೋಸೆಫ್ ಪಕೀರಾಜ್ (ಕುಲಪತಿ) ಮತ್ತು ಫಾದರ್ […]
ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆದ್ದು ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬೆಂಗಳೂರಿಗೆ ಆಗಮಿಸಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ಸಜ್ಜಾಗಿದೆ. ಈ ಮಧ್ಯೆ ಕ್ರೀಡಾಂಗಣದ ಬಳಿ ಸಾವಿರಾರು ಮಂದಿ ಅಭಿಮಾನಿಗಳು ನೆರೆದಿದ್ದು ಭೀಕರ ಕಾಲ್ತುಳಿತ ಉಂಟಾಗಿ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆರ್ ಸಿಬಿ ಸಂಭ್ರಮಾಚರಣೆಯನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಸೇರಿ 10 ಮಂದಿ […]
ಕೋಲಾರ,ಜೂ.3: ಟೊಮೇಟೊ, ಮಾವು ಬೆಳೆಗಾರರ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸುವ ಜೊತೆಗೆ ಪಿ.ನಂಬರ್ ದುರಸ್ಥಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಬೇಕೆಂದು ರೈತಸಂಘದಿಂದ ಉಪವಿಭಾಗಾಧಿಕಾರಿಗಳಾದ ಡಾ.ಮೈತ್ರಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಜಿಲ್ಲೆಯ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಕೋಮಾ ಸ್ಥಿತಿಯಲ್ಲಿರುವ ರೋಗಿಯಂತೆ ಕೋವಿದ್ 19 ರೋಗಾಣುವಿನ ಭಯಕ್ಕೆ ನಾಪತ್ತೆಯಾಗಿದ್ದಾರೆಂದು ರೈತಸಂಘದ […]
ಬೆಂಗಳೂರು, ಜೂನ್ 03: ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕ್ಷಮೆ ಕೇಳುವುದಿಲ್ಲವೆಂದ ಉದ್ದಟತನ ಮೆರೆದಿದ್ದ ನಟ ಕಮಲ್ ಹಸನ್ಗೆ ಹೈಕೋರ್ಟ್ ಭಾರೀ ಚಾಟಿ ಬೀಸಿದೆ.ಮೊದಲು ಕನ್ನಡಿಗರ ಕ್ಷಮೆ ಕೇಳಿ. ಆಮೇಲೆ ಅರ್ಜಿ ವಿಚಾರಣೆ ಮಾಡುವುದಾಗಿ ಕರ್ನಾಟಕ ಹೈಕೋರ್ಟ್ ಇಂದು ಸ್ಪಷ್ಟಪಡಿಸಿದೆ.ಥಗ್ ಲೈಫ್ ಸಿನಿಮಾ ಬಿಡುಗಡೆ ನಿರ್ಬಂಧವನ್ನು ತೆರವು ಮಾಡುವಂತೆ ಕಮಲ್ ಹಾಸನ್ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮೊದಲು ಕನ್ನಡಿಗರ ಕ್ಷಮ ಕೇಳಿ, ನಂತರವೇ ಅರ್ಜಿವಿಚಾರಣೆ ನಡೆಸುತ್ತೇವೆ ಎಂದು ಹೈಕೋರ್ಟ್ […]
ಕೋಟ ಜೂ. 2, : ಕೋಟ ಸಂತ ಜೋಸೆಫ್ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 1 ರಂದು ನೆಡೆಯಿತು. ಚರ್ಚಿನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಶಿಕ್ಷಕರು, ಮಕ್ಕಳು ಹೂ ಗೀಡಗಳಿಗೆ ನೀರು ಎರೆಯುವ ಮೂಲಕ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು, ಪವಿತ್ರ ಬಲಿದಾನದ ಪ್ರಾರ್ಥನ ವಿಧಿಗಳನ್ನು ಮಕ್ಕಳು ನೆಡೆಸಿಕೊಟ್ಟರು.
ಕುಂದಾಪುರ, ಜೂ.1; ಮೂಲತಹ ಕುಂದಾಪುರ ಬಸ್ರೂರಿನವರಾದ ಬಿಶಪ್ ಅ।ವಂ|ಡಾ|ಜೋನ್ ಕರ್ವಾಲ್ಲೊ ಇವರು ರಾಜಸ್ಥಾನದ ಆಜ್ಮೀರ್ ಧರ್ಮಪ್ರಾಂತ್ಯದಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಅಯ್ಕೆಯಾದ ಇವರು, ಜೂ.1 ರಂದು ಕೆನರಾದಲ್ಲೆ ಅತೀ ಪ್ರಾಚೀನ ಎರಡನೇ ಇಗರ್ಜಿಯಾದ ರೋಜರಿ ಮಾತಾ ಇಗರ್ಜಿಗೆ ಭೇಟಿ ಕೊಟ್ಟು ಪವಿತ್ರ ಬಲಿದಾನವನ್ನು ಅರ್ಪಿಸಿದರು. ಬಲಿದಾನ ಅರ್ಪಿಸಿ ಅವರು ‘ನಾವು ಮಾನವ ರಚಿಸಿದ ಕಂಪ್ಯೂಟರ್, ಮೊಬಾಯ್ಲ್ ಬಳಸುತ್ತೆವೆ, ಅದು ನಾವು ಆಜ್ಞೆ ಕೊಟ್ಟಂತೆ ಕಾರ್ಯ ನಿರ್ವಹಿಸುತ್ತವೆ, ಅವಗಳು ನಶ್ವರವಾದುವು, ಅದು ಕೆಡುತ್ತವೆ, ನಾಶವಾಗುತ್ತೇವೆ, ಆದರೆ ನಮಗೆ ಜನ್ಮ […]

