ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ಬಳಿಕ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ತಜ್ಞ ವೈದ್ಯರ ಹಾಗೂ ದಾದಿಯರ ಕೊರತೆ ಇದೆ. ಕೆಲವು ವೈದ್ಯಕೀಯ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಶ್ರೀನಿವಾಸಪುರ: ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಈ ವಿಷಯವಾಗಿ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಹಬ್ಬಗಳು ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಹೇಳಿದರು. […]
JANANUDI NETWORK ಕೊಂಕಣ್ ಕರಾವಳೆಂತ್ ಕೊಂಕ್ಣಿ ಸಿನೆಮಾಚಿ ಪಯ್ಲಿ ಸ್ತ್ರೀ ನಿರ್ಮಾಪಕಿ ಜಾನೆಟ್ ನೊರೊನ್ಹಾ ಥಾವ್ನ್ ದುಸ್ರೆಂ ಪಿಂತುರ್ ಕಂತಾರ್ ಆಗೋಸ್ತ್ 9 ತಾರಿಕೆರ್ ಪ್ರದರ್ಶನ್ ಆರಂಭ್ ಕೊಂಕಣ್ ಕರಾವಳೆಂತ್ ಕೊಂಕ್ಣಿ ಸಿನೆಮಾಚಿ ಪಯ್ಲಿ ಸ್ತ್ರೀ ನಿರ್ಮಾಪಕಿ ಮ್ಹಳ್ಳಿ ಕೀರ್ತ್ ಆಪ್ಣಾಯಿಲ್ಲ್ಯಾ ಜಾನೆಟ್ ನೊರೊನ್ಹಾನ್, ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ಬ್ಯಾನರಾಖಾಲ್, ಪಯ್ಲೆಂ ಕೊಂಕ್ಣಿ ಪಿಂತುರ್ ಸೊಫಿಯಾ ಉಪ್ರಾಂತ್ ಕಂತಾರ್ ಮ್ಹಳ್ಳೆಂ ದುಸ್ರೆಂ ಸಿನೆಮಾ ನಿರ್ಮಾಣ್ ಕೆಲಾಂ ಆಸುನ್, ಹೆಂ ಸಿನೆಮಾ ಕರಾವಳ್ ಕರ್ನಾಟಕಾಂತ್ ಆಗೋಸ್ತ್ 9 ತಾರಿಕೆರ್ ಪ್ರದರ್ಶನಾಕ್ ಆಯ್ತೆಂ ಜಾಲಾಂ. ಮಂಗ್ಳುರಾಂತ್ ಭಾರತ್ ಮೊಲಾಚ್ಯಾ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭವನ್ನು ಗಿಡಕ್ಕೆ ೆ ನೀರು ಹಾಕುವುದರ ಮೂಲಕ ಗಣ್ಯರು ಉದ್ಘಾಟಿಸಿದರು. ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಮಳೆ ನೀರು ಕೊಯಿಲು ಹಾಗೂ ಪುಷ್ಕರಣಿಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು ಎಂದು ಸೆಂಟ್ರಲ್ನ ನೂತನ ಅಧ್ಯಕ್ಷ ಆರ್.ವಿ.ಕುಲಕರ್ಣಿ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಆಧ್ಯಕ್ಷರಾಗಿ ಅಧಿಕಾರ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ: ದೇಶದ ಪ್ರತಿ ಪ್ರಜೆಯೂ ಹೆಮ್ಮೆ ಪಡುವ ಕಾರ್ಗಿಲ್ ವಿಜಯ ದಿನ – ರೈತ ಸಂಘ ಕೋಲಾರ: ದೇಶದ ಪ್ರತಿ ಪ್ರಜೆಯೂ ಹೆಮ್ಮೆ ಪಡುವ ಕಾರ್ಗಿಲ್ ವಿಜಯ ದಿನವನ್ನು ರೈತ ಸಂಘದಿಂದ ದೇಶಕ್ಕೆ ಅನ್ನ ಹಾಕುವ ರೈತರ ತೋಟದಲ್ಲಿ ಗಿಡ ನೆಡುವ ಮುಖಾಂತರ ಆಚರಣೆ ಮಾಡಿ ವೀರ ಯೋದರನ್ನು ಸ್ಮರಣಿಸುತ್ತಾ ಸೈನಿಕ ಮತ್ತು ರೈತರನ್ನು ಒಂದೇ ದೇಹದ ಎರಡು ಕಣ್ಣುಗಳಂತೆ ರಕ್ಷಣೆ ಮಾಡಬೇಕೆಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಸರ್ಕಾರಗಳಿಗೆ ಕಿವಿ ಮಾತು […]
JANANUDI NETWORK ಕುಂದಾಪುರ: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಇಂಟರ್ಯಾಕ್ಟ್ ಪದಪ್ರದಾನ ಸಮಾರಂಭ ಕುಂದಾಪುರ, ಜು.27: ಸ್ಥಳಿಯ ಸಂತ ಜೋಸೆಫ್ ಪ್ರೌಢ ಶಾಲೆಯಯ ಸಭಾಂಗಣದಲ್ಲಿ ಜುಲಾಯ್ 27 ರಂದು ಇಂಟರ್ಯಾಕ್ಟ್ ಕ್ಲನ್ ಪದಗ್ರಹಣ ಸಮಾರಂಭ ಕಾರ್ಯಕ್ರಮ ನೇರವೆರಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ವಾಯ್ಲೆಟ್ ತಾವ್ರೊ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಕ್ಲಬ್ ರಿವರ್ ಸೈಡ್ ಕುಂದಾಪುರ ಇದರ ಅಧ್ಯಕ್ಷ ರಾಜು ಪೂಜಾರಿ ಮೂಡ್ಲಕಟ್ಟೆ ಇವರು ಪದಪ್ರದಾನವನ್ನು ನೆರವೇರಿಸಿ ‘ಮಕ್ಕಳು ವಿದ್ಯಾರ್ಥಿಗಳ ಹಂತದಲ್ಲಿಯೆ ಸೇವಾ […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :ವೇಸ್ಟ್ ಪ್ಲಾಸ್ಟಿಕ್ ಬಟಾಲಿನಿಂದ ಪರಿಸರ ಜಾಗೃತಿ ಅರಿವು ಇದು ಪ್ಲಾಸ್ಟಿಕ್ ಯುಗವೆಂದರೂ ತಪ್ಪಿಲ್ಲ. ಪ್ಲಾಸ್ಟಿಕ್ ಇಲ್ಲದೆ ಜೀವನವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಗೆ ಹೋದರೂ ಬೇಕು. ಅಡುಗೆ ಮನೆಯಲ್ಲೂ ಅದರದೇ ಪಾರುಪತ್ಯ. ಊಟದ ಬಟ್ಟಲಿನಿಂದ ಹಿಡಿದು ನೀರು ಕುಡಿಯುವ ಲೋಟಗಳವರೆಗೂ ಪ್ಲಾಸ್ಟಿಕ್ ತನ್ನ ಕಬಂಧಬಾಹುವನ್ನು ಚಾಚಿದೆ. ನಮ್ಮಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಇನ್ನು ಹೆಚ್ಚಿನ ಜಾಗೃತಿ ಅರಿವು ಮೂಡಬೇಕಿದೆ. ಈ ನಿಟ್ಟಿನಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಸದಸ್ಯರೆಲ್ಲರೂ ಸೇರಿ […]
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ: ಶಾಲಾ ಹಂತದಲ್ಲಿ ಮಕ್ಕಳಿಗೆ ದೇಶ ಭಕ್ತಿ ಮತ್ತು ಶಿಸ್ತು ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ದೊಡ್ಡದು – ಮದರ್ ಥೆರೆಸಾ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ ಕೋಲಾರ: ಶಾಲಾ ಹಂತದಲ್ಲಿ ಮಕ್ಕಳಿಗೆ ದೇಶ ಭಕ್ತಿ ಮತ್ತು ಶಿಸ್ತು ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ದೊಡ್ಡದು ಎಂದು ಮದರ್ ಥೆರೆಸಾ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ ಹೇಳಿದರು. ನಗರದ ಮದರ್ ಥೆರೆಸಾ ಶಾಲೆಯಲ್ಲಿ ಭಾರತ ಸೇವಾದಳವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರ ಧ್ವಜ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ: ಉಚಿತ ಕಾನೂನು ನೆರವಿಗಾಗಿ ಕಕ್ಷಿದಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ `ಪ್ರೆಂಟ್ ಆಫೀಸ್’ ಆರಂಭ ಕೋಲಾರ: ಉಚಿತ ಕಾನೂನು ನೆರವು ಬಯಸಿ ಬರುವ ಕಕ್ಷಿದಾರರಿಗೆ ನೆರವಾಗಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ `ಪ್ರೆಂಟ್ ಆಫೀಸ್’ ವಿಭಾಗವನ್ನು ಆರಂಭಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ಕರೆ ನೀಡಿದರು. ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿ […]

