JANANUDI.COM NETWOR ಮಾಸ್ಕೋ: ಉಕ್ರೇನ್ ಜೊತೆ ಮಾತುಕತೆ ನಡೆಸಲು ಬೆಲಾರಸ್ ನ ರಾಜಧಾನಿ ಮಿನ್ಸ್ಕ್ಗೆ ನಿಯೋಗವನ್ನು ಕಳುಹಿಸಲು ಉಕ್ರೇನ್ ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ತಮ್ಮ ದೇಶ ಹೊಂದಿಲ್ಲ. ಉಕ್ರೇನ್ ಪಡೆಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ನೇರವಾಗಿ ಮಾತುಕತೆ ನಡೆಸಲು ಮಾಸ್ಕೋ ಸಿದ್ದವಾಗಿದೆ ಎ೦ದು ರಷ್ಯಾದ ವಿದೇಶಾ೦ಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದರು.ಅದಕ್ಕೆ ಉತ್ತರವಾಗಿ ಉಕ್ರೇನ್ ನಲ್ಲಿ ಪ್ರಜಾತಂತ್ರವನ್ನು ರಕ್ಷಿಸುವುದು ರಷ್ಯಾ ಆಕ್ರಮಣದ ಉದ್ದೇಶ ಎ೦ದಿರುವ ಪೆಸ್ಕೋವ್, ರಕ್ಷಣಾ ಸಚಿವಾಲಯ, ವಿದೇಶಾ೦ಗ ಸಚಿವಾಲಯ ಮತ್ತು ಸರ್ಕಾರದ ಪ್ರತಿನಿಧಿಗಳು ನಿಯೋಗದಲ್ಲಿ ಇರಲಿದ್ದಾರೆ೦ದು […]
JANANUDI.COM NETWORK ಕೀವ್: ರಷ್ಯಾ ಉಕ್ರೇನ್ ಸೇನಾ ನೆಲೆ ಹಾಗೂ ಪ್ರಮುಖ ನಗರಗಳ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 137 ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ಯುದ್ಧ ತೀವ್ರವಾದ ಹಿನ್ನೆಲೆಯಲ್ಲಿ ತನ್ನ ನಾಗರಿಕರಿಗೆ ತಮ್ಮ ರಕ್ಷಣೇ ಮಾಡಿಕೊಳ್ಳಲು ಶಸ್ತ್ರಾಗಳನ್ನು ಒದಗಿಸಲು ತಯಾರಾಗಿದ್ದಾರೆ. ಅವರು ಯುದ್ಧದ ಬಗ್ಗೆ ಮಾತನಾಡಿರುವ ವಿಡಿಯೋದಲ್ಲಿ, ರಷ್ಯಾವು ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೇ ಜನರ ಮೇಲೂ ದಾಳಿ ಮಾಡುತ್ತಿದೆ. ಪ್ರಮುಖ ನಗರಗಳನ್ನೇ ಗುರಿಯಾಗಿಸಿಕೊಂಡು […]
JANANUDI.COM NETWORK ಮಾಸ್ಕೊ: ಉಕ್ರೇನ್ ವಿರುದ್ದ ಯುದ್ಧ ಘೋಷಿಸಿರುವ ರಷ್ಯಾ, ಇದೀಗ 11 ನಗರಗಳ ಮೇಲೆ ಕ್ಲಿಷಣಿ ದಾಳಿ ನಡೆಸಿದೆ. ಉಕ್ರೇನ್ ವಿಮಾನ ನಿಲ್ದಾಣದ ಮೇಲೆ ಕೂಡ ಕ್ಲಿಷಣಿ ದಾಳಿ ನಡೆಸಲಾಗಿದೆ.ಯುದ್ಧದ ಭೀತಿಯಲ್ಲಿರುವ ಉಕ್ರೇನ್ ದೇಶದಲ್ಲಿ 30 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.ಈ ವಿಷಯದಲ್ಲಿ ಬೇರೆ ಯಾವುದೇ ದೇಶಗಳು ಹಸ್ತಕ್ಷೇಪ ಮಾಡಿದರೆ ಹಿಂದೆಂದೂ ಕಂಡಿರದ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಉಕ್ರೇನ್ ಬೆಂಬಲಕ್ಕೆ […]
JANANUDI.COM NETWORK ಮುಂಬರುವ ಮಾರ್ಚ್ ತಿಂಗಳ 2 ರಿಂದ ಸೌದಿ ಅರೇಬಿಯಾದ ಜೆದ್ದಾದಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಜೆದ್ದಾಕ್ಕೆ ನೇರ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಕಟಣೆ ತಿಳಿಸಿದೆ.ಅದರಂತೆ ಮಾರ್ಚ್ 2, 9, 16 ಮತ್ತು 23 ದಿನಾಂಕಗಳಲ್ಲಿ ಜಿದ್ದಾದಿಂದ ಮಂಗಳೂರಿಗೂ, ಅದೇ ದಿನ ಮಂಗಳೂರಿನಿಂದ ಜೆದ್ದಾಕ್ಕೂ ನೇರ ವಿಮಾನ ಲಭ್ಯವಿದೆ.ಮಂಗಳೂರಿನಿಂದ ಬೆಳಿಗ್ಗೆ 08-55 ಕ್ಕೆ ಹೊರಟು ಸೌದಿ ಸಮಯ ಮಧ್ಯಾಹ್ನ 12-45 ಕ್ಕೆ ಜಿದ್ದಾ ತಲುಪಲಿದೆ. ಜಿದ್ದಾದಿಂದ ಮಧ್ಯಾಹ್ನ 1-45 […]
JANANUDI.COM NETWORK ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಶಮನಗೊಳಿಸಲು ಪ್ರಧಾನಿ ಜಸ್ಟಿನ್ ಟ್ರುಡೊ ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಕೆನಡಾದಲ್ಲಿ ತುರ್ತು ಪರಿಸ್ಥಿತಿ ಜಾರಿ ಗೊಳಿಸಿದೆ.ತುರ್ತು ಪರಿಸ್ಥಿತಿ ಜಾರಿಯಿಂದಾಗಿ ಸರ್ಕಾರಕ್ಕೆ ಅಲ್ಪಾಧಿಯಲ್ಲಿ ಹೆಚ್ಚಿನ ಅಧಿಕಾರ ದೊರೆಯಲಿದೆ. ಸಾರ್ವಜನಿಕ ಸಭೆಯನ್ನು ನಿಷೇಧಿಸುವ, ನಿರ್ದಿಷ್ಟ ಪ್ರದೇಶಗಳಿಗೆ ಪ್ರಯಾಣ ಮಾಡುವುದನ್ನು ನಿರ್ಬಂಧಿಸುವ, ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಆಯ್ಕೆಗಳು ಸರ್ಕಾರಕ್ಕೆ ಇರಲಿದೆ.ಆದರೆ, ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು […]
JANANUDI.COM NETWORK ನವದಹೆಲಿ, ಫೆ. 15: ಉಕ್ರೇನ್ – ರಷ್ಯಾ ರಾಷ್ಟ್ರಗಳ ನಡುವಿನ ತೀವ್ರಗೊಂಡಿದ್ದು, ಉಕ್ರೇನ್ ದೇಶವನ್ನು ತೊರೆಯುವಂತೆ ಜಗತ್ತಿನ ಹಲವು ರಾಷ್ಟ್ರ ಗಳು ತಮ್ಮ ಪ್ರಜೆಗಳಿಗೆ ಸೂಚಿಸಿದೆ. ಈಗ ಭಾರತ ಕೂಡ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.ಭಾರತ ಉಕ್ರೇನ್ನಲ್ಲಿರುವ ತನ್ನ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಉಕ್ರೇನ್ ನಲ್ಲಿನ ಭಾರತದ ರಾಯಭಾರಿ ಕಚೇರಿ ಇಂದು ಸಲಹೆ ನೀಡಿದೆ.ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣದಿಂದಾಗಿ ಉದ್ವಿಗ್ನತೆ ಹೆಚ್ಚುತಿದ್ದುದುದು ಇದಕ್ಕೆ ಕಾರಣವಾಗಿದೆ. ರಷ್ಯಾವು ತನ್ನ ಗಡಿಯಲ್ಲಿ […]
JANANUDI.COM NETWORK ಢಾಕಾ, ಜ .19: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಖ್ಯಾತ ನಟಿ ರೈಮಾ ಇಸ್ಲಾಂ ಇವಳ ಶವವು ಢಾಕಾದ ಹೊರವಲಯದ ಕೆರಣಿಗಂಜ್ನ ಹಜರತ್ಪುರ ಸೇತುವೆಯ ಬಳಿ ಒಂದು ಗೋಣಿಚೀಲದಲ್ಲಿ ಪತ್ತೆಯಾಗಿದೆ. ರೈಮಾ ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಮಾ ಶಿಮು 25 ಕ್ಕೂ ಅಧಿಕ ವಿವಿಧ ಚಲನ […]
JANANUDI.COM NETWORK ವಿಶ್ವಸಂಸ್ಥೆ: “ಲಿಬಿಯಾದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅಲ್ಲಿನ 27 ಜೈಲುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಂಧಿತರನ್ನು ಕೂಡಿಡಲಾಗಿದೆ. ಸಾವಿರಾರು ಮಂದಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ” ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಾಹಿತಿ ತಿಳಿಸಿದ್ದಾರೆ ಎಂದು ಮಾದ್ಯಮದಲ್ಲಿ ಪ್ರಕಟವಾಗಿದೆ.ಲಿಬಿಯಾ ದೇಶದ ಸಶಸ್ತ್ರ ಪಡೆಗಳು ನಿರಾಶ್ರಿತರು, ವಲಸಿಗರ ಮೇಲೆ ಸಾಕಷ್ಟು ನಿಬರ್ಂಧಗಳನ್ನು ವಿಧಿಸಿವೆ. ದೌರ್ಜನ್ಯ, ಚಿತ್ರಹಿಂಸೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತಿದ್ದು, ಈ ಕುರಿತಂತೆ ಯು.ಎನ್.ಎಸ್.ಎಂ.ಐ,ಎಲ್. ಎಂದು ಕರೆಯಲ್ಪಡುವ ಯು ಎನ್ ಮಿಷನ್ […]
JANANUDI.COM NETWORK ಮಂಗಳೂರು ಮೂಲದ ಯು.ಎ,ಇ. ಯ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿಗೆ ಬಾಕ್ರ್ಲೇಸ್ ಕಂಪನಿ ಹಾಕಿದ ಕೇಸ್ ನಲ್ಲಿ ಲಂಡನ್ ಕೋರ್ಟ್ 131 ದಶಲಕ್ಷ ಡಾಲರ್ ಕಟ್ಟುವಂತೆ ಆದೇಶಿಸಿದೆ. ಮೊದಲೇ ದಿವಾಳಿಯೆದ್ದಿರುವ ಬಿ ಆರ್ ಶೆಟ್ಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇದಕ್ಕೂ ಮುನ್ನ ದುಬೈ ಕೋರ್ಟ್ ಸಹ ಬಾಕ್ರ್ಲೇಸ್ ಕಂಪನಿ ಪರ ಆದೇಶ ನೀಡಿತ್ತು.ಮಂಗಳೂರಿನ ಬಿ ಆರ್ ಶೆಟ್ಟಿ, ಯು.ಎ,ಇ. ಯಲ್ಲಿ ಖ್ಯಾತ ಉದ್ಯಮಿಯಾಗಿ ಬೆಳೆದಿದ್ದು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಆದರೆ […]

