ಉಡುಪಿ: ಕಲ್ಲ್ಯಾಣ್ಪುರ ಮಿಲಾಗ್ರಿಸ್ ಕಾಥೆಡ್ರಲ್ನಲ್ಲಿ ಸಕಲ ಸಂತರ ಮಹೋತ್ಸವದ ಅಂಗವಾಗಿ ಮಕ್ಕಳು ಹಾಗೂ ಯುವಜನರಿಗಾಗಿ ಸಂತರ ಅಲಂಕಾರ ಉಡುಗೆ ಸ್ಪರ್ಧೆ ಅತ್ಯಂತ ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ಧಾರ್ಮಿಕ ಭಾವನೆ ಮತ್ತು ಸಾಂಸ್ಕೃತಿಕ ಪ್ರತಿಭೆ ಒಂದೇ ವೇದಿಕೆಯಲ್ಲಿ ಬೆರೆತ ಈ ಕಾರ್ಯಕ್ರಮವು ಚರ್ಚ್ನಲ್ಲಿ ಭಕ್ತಿಭಾವದ ವಾತಾವರಣವನ್ನು ನಿರ್ಮಿಸಿತು. ಸಕಲ ಸಂತರ ಹಬ್ಬದ ಪ್ರಯುಕ್ತ ಚರ್ಚ್ನ 28 ಮಕ್ಕಳು ಹಾಗೂ ಯುವಜನರು ಭಾಗವಹಿಸಿ ತಾವು ಆಯ್ದ ಸಂತರ ಜೀವನದ ಪ್ರೇರಣಾದಾಯಕ ಘಟನೆಗಳು ಮತ್ತು ಧಾರ್ಮಿಕ ಸಂದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವಿಭಿನ್ನ ಸಂತರ […]
ತಲ್ಲೂರು: ಹಾಡುಹಗಲೇ ನಿನ್ನೆ ಸಂಜೆ 4.30- 5 ಗಂಟೆಯ ನಡುವೆ ಜನನಿಬಿಡ ತಲ್ಲೂರು ಜಂಕ್ಷನ್ ನ M.D.ರೆಸಿಡೆನ್ಸಿ ಎದುರು ಕಾರಿನ ಗಾಜು ಒಡೆದು 2 ಲಕ್ಷ ನಗದು ಎಗರಿಸಿದ ಖದೀಮರು..!!ಕಾರುಗಳಲ್ಲಿ ನಗದು ಇರಿಸುವ, ಸಾಗಿಸುವವರು ಎಚ್ಚರ..!!! ನಿನ್ನೆ ಮಂಗಳವಾರ ೪ ರಂದು ತಲ್ಲೂರು ಗ್ರಾಮದ ಗುಂಡು ಶೆಟ್ಟಿ ಎನ್ನುವರು ಬ್ಯಾಂಕ್ ಆಫ್ ಬರೋಡದಿಂದ ಎರಡು ಲಕ್ಷ ರೂಪಾಯಿ ಕ್ಯಾಶ್ ಮಾಡಿಕೊಂಡು ಹೋಂಡಾ ka 20 mf 4939 ಕ್ರೇಟಾ ಕಾರಿನ ಡ್ಯಾಶ್ ಬೋರ್ಡಲ್ಲಿಟ್ಟಿದ್ದು ನಂತರ ಕಾರಿನ ಡೋರ್ […]
21st Kalakar Puraskar Presentation – Konkani community has played an important role in the development of Mangalore – MLA Vedavyas Kamath ನವೆಂಬರ್ 2 ರಂದು ನಡೆದ ದ್ವಿ ಆಚರಣೆಗೆ ಕಲಂಗಣ್ಣ ಸಾಕ್ಷಿಯಾದರು – 21ನೇ ಕಲಾಕರ್ ಪುರಸ್ಕಾರ ಮತ್ತು 287ನೇ ಮಾಸಿಕ ರಂಗಭೂಮಿ. ಕೊಂಕಣಿ ರಂಗಭೂಮಿಗೆ ಪ್ರತಿಷ್ಠೆ ತಂದುಕೊಟ್ಟ ಮತ್ತು ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿನ ತಮ್ಮ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ಗೆದ್ದ ಕಾಸರಗೋಡು ಚಿನ್ನಾ ಎಂದೇ ಪ್ರಸಿದ್ಧರಾದ ಶ್ರೀನಿವಾಸ […]
ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ ಪಟೇಲ್ ಅವರಿಗೆ ಪ್ಲಸ್ ನೈನ್ ಒನ್ ಮೀಡಿಯಾ ಬೆಂಗಳೂರು ಇವರು ನವೆಂಬರ್ ಒಂದರಂದು ಆಯೋಜಿಸಿದ್ದ ಒಂಬತ್ತನೇ ಉನ್ನತ ಶಿಕ್ಷಣ ನಾವೀನ್ಯತೆ ಮತ್ತು ತಂತ್ರಜ್ಞಾನ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಸ್ಥಿಕ ಶ್ರೇಷ್ಠತೆಗಾಗಿ ವರ್ಷದ ಪ್ರಾಂಶುಪಾಲರು ಎಂದು ಗುರುತಿಸಲ್ಪಟ್ಟು ಗೌರವಿಸಲ್ಪಟ್ಟಿದ್ದಾರೆ.
ಉಡುಪಿ: ಕರಾವಳಿಯ ಯುವಜನರು ಹೆಚ್ಚು ಹೆಚ್ಚು ನಾಗರಿಕ ಸೇವೆಗಳಿಗೆ ಸೇರುವುದರಿಂದ ಸಮಾಜದ ಸಬಲೀಕರಣ ಸಾಧ್ಯವಿದೆ ಎಂದು ಕನ್ನಡ ಲೇಖಕ, ಚಿಂತಕ, ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯ ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನಾಗರಿಕ ಸೇವೆಗಳ ಕುರಿತಾದ ತರಬೇತಿ ಕಾರ್ಯಾಗಾರದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.ಕರಾವಳಿಗರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅಭಿರುಚಿಯನ್ನು ಕಡಿಮೆ ಹೊಂದಿದ್ದು ಉತ್ತರ ಭಾರತದವರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ನಾಗರಿಕ ಸೇವೆಗೆ ಪ್ರಯತ್ನಿಸುವ ಬಯಕೆ ಯಾವುದೇ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಜಿಲ್ಲೆಯ ಪ್ರಸಿದ್ಧ ಕಲೆಯಾದ ಹುಲಿ ವೇಷ ನೃತ್ಯ ಪ್ರದರ್ಶನದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು . ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾಯ್ಜಿವರ್ಲ್ಡ್ ಚಾನಲ್ನ ನಿರ್ಮಾಣ ನಿರ್ದೇಶಕರಾದ ಶ್ರೀ. ಸ್ಟ್ಯಾನಿ ಬೆಲಾರವರು ವಿದ್ಯಾರ್ಥಿಗಳಿಗೆ,ಈ ಭೂಮಿಯಲ್ಲಿ ಹುಟ್ಟಿದ ನಾವು ಭಾಗ್ಯವಂತರು.ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗಿದೆ, ಆ ಬದಲಾವಣೆ ಧನಾತ್ಮಕವಾಗಿರಬೇಕೆಂಬ ಹಿತವಚನದೊಂದಿಗೆ,ಶಾಲೆಯು ವಿದ್ಯಾರ್ಥಿಗಳಿಗೆ ವೈಯಕ್ತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ನೀಡಿದೆ. ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅವರು […]
ಬಾರಕೂರು ; ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಲೆಯ ಕನ್ನಡ ಸಂಘ ಮತ್ತು ಇಂಟರಾಕ್ಟ್ ಕ್ಲಬ್ ನ ಸಂಯೋಜನೆ ಯಲ್ಲಿ ಕಾರ್ಯಕ್ರಮ ನೆರವೇರಿತು. ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ್ ಶೆಟ್ಟಿರವರು ಅಧ್ಯಕ್ಷತೆ ವಹಿಸಿದ್ದರು.ಆರೋಹಣ ಸಂಗೀತ ತರಭೇತಿ ಸಂಸ್ಥೆ ಬಾರಕೂರು ಇದರ ಮುಖ್ಯಸ್ಥ ರಾದ ಶ್ರೀ ರಾಜೇಶ ಶ್ಯಾನುಭಾಗ, ಶಾಲಾ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ, ಪ್ರೌಢ ಶಾಲಾ ಮೇಲ್ವಿಚಾರಕರಾದ ಶ್ರೀಮತಿ ಬ್ರಿಜಿತ್ ಗೊನ್ಸಾಲ್ವಿಸ್, ವಿದ್ಯಾರ್ಥಿ […]
ಬಾರ್ಕೂರಿನ ನ್ಯಾಷನಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಗುರುವಾರ, ಅಕ್ಟೋಬರ್ 30, 2025 ರಂದು ಕಾಲೇಜು ಸಭಾಂಗಣದಲ್ಲಿ ಒಂದು ಪ್ರಬುದ್ಧ ಜಾಗೃತಿ ಅಧಿವೇಶನ ನಡೆಯಿತು. ಹದಿಹರೆಯದ ವಿವಿಧ ಸವಾಲುಗಳು ಮತ್ತು ಆಧುನಿಕ ಕಾಲದ ಗೊಂದಲಗಳ ಮೂಲಕ ಯುವ ಮನಸ್ಸುಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಈ ಅಧಿವೇಶನ ಹೊಂದಿತ್ತು. ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನ ಮಾಜಿ ಪ್ರಾಧ್ಯಾಪಕ ಮತ್ತು ಎಂಎಸ್ಡಬ್ಲ್ಯೂ ವಿಭಾಗದ ಮುಖ್ಯಸ್ಥ, ಪ್ರಸಿದ್ಧ ಸಲಹೆಗಾರ ಮತ್ತು ಪ್ರೇರಕ ಭಾಷಣಕಾರ ಪ್ರೊ. ಅನಿಲ್ ದಾಂತಿ ಈ ದಿನದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮೂರು […]
ಕುಂದಾಪುರ : ಕನ್ನಡಾಭಿಮಾನಿ ಡಾ. ಸಂಘಟನೆಯ ಆಶ್ರಯದಲ್ಲಿ ಹೊಸ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಶಿರಿಯಾರ ಮುದ್ದಣ್ಣ ಅವರು ಸಮಾಜ ಮುಖಿಯಾಗಿ ಗುರ್ತಿಸಿ ಕೊಂಡಿರುವ ಸಂಘದ ಆಶ್ರಯದಲ್ಲಿ ಸತತವಾಗಿ ಆಚರಿಸುತ್ತಿರುವ ರಾಜ್ಯೋತ್ಸವ ಸಮಾರಂಭಕ್ಕೆ ಶುಭ ಹಾರೈಸಿ ಕನ್ನಡಿಗರೆಲ್ಲರಿಗೂ ಇದು ಪ್ರೇರಣೆಯಾಗಲಿ ಎಂದರು ಕುಂದಾಪುರ ಪೊಲೀಸ್ ಠಾಣೆಯ ಎಎಸೈ ಮೋಹನ್ ಪಿ. ಅವರು ಕನ್ನಡ ಧ್ವಜಾರೋಹಣಗೈದು ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಸೇವಾದಳದ ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಆರಂಭ […]

