ಕುಂದಾಪುರ : ಸೋಮವಾರ, 26.01.2026 : ಕುಂದಾಪುರದ ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿ.ಎಸ್.ಐ. ಕೃಪಾ ವಿದ್ಯಾಲಯವು 77 ನೇ ‘ಗಣರಾಜ್ಯೋತ್ಸವ’ವನ್ನು ಸೋಮವಾರ, 26.01.2026 ರಂದು ಶಾಲಾ ಮೈದಾನದಲ್ಲಿ ಆಚರಿಸಿತು. ಮುಖ್ಯ ಅತಿಥಿ, ಬೆಟರ್ಮೆಂಟ್ ಸಮಿತಿ ಸದಸ್ಯರಾದ ಜೀವನ್ ಸಾಲಿನ್ಸ್ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದರು. ತಮ್ಮ ಭಾಷಣದಲ್ಲಿ, ಅವರು ದಿನದ ಮಹತ್ವ ಮತ್ತು ವಿಶ್ವದ ಅತ್ಯಂತ ಸೂಕ್ಷ್ಮ ಮತ್ತು ಉದ್ದಮವಾದ ಸಂವಿಧಾನವೆಂದು ಪರಿಗಣಿಸಲಾದ ಭಾರತೀಯ ಸಂವಿಧಾನವನ್ನು ರಚಿಸಲು ಎಷ್ಟು ದಂತಕಥೆಗಳು ಒಟ್ಟಾಗಿ ಸೇರಿಕೊಂಡವು ಎಂಬುದರ […]
ಕಾರ್ಕಳ; ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಇಂದು, ಸಹಸ್ರಾರು ಭಕ್ತಾದಿಗಳ ಭಕ್ತಿಭಾವದ ನಡುವೆ ಭವ್ಯವಾಗಿ ನೆರವೇರಿತು. ದಿನವಿಡೀ ಸುಮಾರು ಹತ್ತು ದಿವ್ಯ ಬಲಿಪೂಜೆಗಳು ನೆರವೇರಿದ್ದು, ಪುಣ್ಯಕ್ಷೇತ್ರದಲ್ಲಿ ಭಕ್ತಿಯ ವಾತಾವರಣ ತುಂಬಿ ತುಳುಕಿತು.ಈ ವರ್ಷದ ಮಹೋತ್ಸವದ ಮುಖ್ಯ ಸಂದೇಶವಾಗಿರುವ “ನಾನು ನಿನ್ನನ್ನು ಪ್ರೀತಿಸಿದ್ದೇನೆ” ಎಂಬ ಧ್ಯೇಯ ವಾಕ್ಯದ ಆಧಾರದ ಮೇಲೆ, ಬಡವರ ಬಗೆಗಿನ ಕಾಳಜಿ, ಮಾನವೀಯ ಸೇವೆ ಮತ್ತು ಸಮಾಜದತ್ತ ನಮ್ಮ ಜವಾಬ್ದಾರಿ ಕುರಿತು ಆಳವಾದ ಬೋಧನೆ ನೀಡಲಾಯಿತು. ಪ್ರೀತಿಯ ಸಾಕ್ಷಿಯಾಗಿ ಬಡವರೊಂದಿಗೆ […]
ಬಸ್ರೂರು; ಸೈಂಟ್ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ ಬಸ್ರೂರು ವತಿಯಿಂದ ಗಣರಾಜ್ಯೋತ್ಸವ ದಿನದಂದು ಆರೋಗ್ಯಕ್ಕಾಗಿ ಓಟ ಸ್ವಾತಂತ್ರ್ಯ ಕ್ಕಾಗಿ ಓಟ ಎಂಬ ಧ್ಯೇಯ ದೊಂದಿಗೆ ಮ್ಯಾರಥಾನ್ ಓಟಕ್ಕೆ ಶಾಲಾ ಜಂಟಿ ಕಾರ್ಯದರ್ಶಿ ಹಾಗೂ ಸೆಂಟ್ ಫಿಲಿಪ್ ನೇರಿ ಚರ್ಚ್ ಧರ್ಮಗುರುಫಾದರ್ ರೋಯ್ ಲೋಬೊ ಚಾಲನೆ ನೀಡಿದರು ಶಾಲಾ ಪ್ರಾಂಶುಪಾಲ ಫಾದರ್ ಡ್ಯಾನ್ಸಿ ಸುನಿಲ್ ಮಾರ್ಟಿಸ್ ಸ್ವಾಗತಿಸಿದರು ಸಹಾಯಕ ಧರ್ಮಗುರುಗಳಾದ ಫಾದರ್ ಶರೂನ್ ಡಿಸೋಜ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು,ಶಾಲಾ ದೈಹಿಕ ಶಿಕ್ಷಣ […]
ಬೈಂದೂರು: ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 77 ನೇ ಗಣರಾಜ್ಯೋತ್ಸವವನ್ನು ಅತ್ಯಂತ ವೈಭವ ಹಾಗೂ ದೇಶಭಕ್ತಿಯೊಂದಿಗೆ ಆಚರಿಸಲಾಯಿತು ಜ್ಞಾನದಾ ಶಿಕ್ಷಣ ಟ್ರಸ್ಟ್ (ರಿ) ಶಿರೂರು ಇದರ ಕಾರ್ಯದರ್ಶಿ ಧೀರಜ್ ಆರ್ ಶಿರೂರ್ಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು ನಂತರ ಮಾತನಾಡಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬಿಂಬಿಸುವಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಪೂರಕವಾಗಿದೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹಲವು ಸಂಸ್ಕೃತಿಗಳ ತವರು ಭಾರತ ಸಂವಿಧಾನವೇ ಭಾರತಕ್ಕೆ ಆಧಾರ ನಮ್ಮ ನಮ್ಮ ಪ್ರತಿಜ್ಞೆಯನ್ನ ಮರೆಯಬಾರದು ಧರ್ಮ,ಮತ, ಜಾತಿ,ಭಾಷೆಗಳ ಅಂತರ ಅಳಿದು ಸಾಮಾಜಿಕ […]
ಬಾರ್ಕೂರು; ನೇಶನಲ್ ಕ್ಯಾಂಪಸ್ನಲ್ಲಿ ವರ್ಣರಂಜಿತ ಗಣರಾಜ್ಯೋತ್ಸವ ಆಚರಣೆ;ಹನೇಹಳ್ಳಿ ಪ್ರಾಥಮಿಕ ಶಾಲೆ, ರಾಷ್ಟ್ರೀಯ ಪ್ರೌಢಶಾಲೆ ಮತ್ತು ರಾಷ್ಟ್ರೀಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಣರಾಜ್ಯೋತ್ಸವವನ್ನು ಆಚರಿಸಲು ಒಟ್ಟಾಗಿ ಬಂದಿದ್ದರಿಂದ ಬಾರ್ಕೂರಿನ ರಾಷ್ಟ್ರೀಯ ಕ್ಯಾಂಪಸ್ ದೇಶಭಕ್ತಿಯ ಉತ್ಸಾಹದಿಂದ ಪ್ರತಿಧ್ವನಿಸಿತು. ವರ್ಣರಂಜಿತ ಮತ್ತು ಶಿಸ್ತಿನ ಮೆರವಣಿಗೆಯ ಮೂಲಕ ಆಚರಣೆಗಳು ಗುರುತಿಸಲ್ಪಟ್ಟವು, ಅಲ್ಲಿ ವಿದ್ಯಾರ್ಥಿಗಳು ಏಕತೆ, ದೇಶಭಕ್ತಿ ಮತ್ತು ರಾಷ್ಟ್ರದ ಮೇಲಿನ ಗೌರವವನ್ನು ಚಾಣಾಕ್ಷತನದಿಂದ ಪ್ರದರ್ಶಿಸಿದರು. ಅವರ ಆತ್ಮವಿಶ್ವಾಸದ ಮೆರವಣಿಗೆ, ದೇಶಭಕ್ತಿಯ ಘೋಷಣೆಗಳು ಮತ್ತು ಸಿಂಕ್ರೊನೈಸ್ಡ್ ಚಳುವಳಿಗಳು ಮಾತೃಭೂಮಿಯ ಮೇಲಿನ ಆಳವಾದ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ […]
ಮಂಗಳೂರು; ನಮ್ಮ ಸ್ಥಾಪಕರಾದ ಫ್ರೆಡರಿಕ್ ಒಝನಾಮ್ ಅವರು – ದಾನ ಧರ್ಮ ಮಾಡುವುದೆಂದರೆ ಸಂಕಷ್ಟದಲ್ಲಿರುವವರನ್ನು ನಮ್ಮ ಸಮಾನರಂತೆ ಕಾಣುವುದು, ಇದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ- ಎಂದು ಹೇಳಿದ್ದರು. ಅವರ ಆಶಯದಂತೆ ಕಳೆದ ಒಂದು ಶತಮಾನದಿಂದ ಮಂಗಳೂರು ಧರ್ಮಪ್ರಾಂತ್ಯದ ಎಸ್ಎಸ್ವಿಪಿ ಸದಸ್ಯರು ನಿಸ್ವಾರ್ಥತೆಯಿಂದ ಪರರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ ಎಂದು ಸಂತ ವಿನ್ಸೆಂಟ್ ದೆ ಪೌಲ್ ಸೊಸಾಯ್ಟಿಯ ಅಂತರಾಷ್ಟ್ರೀಯ ಅಧ್ಯಕ್ಷರಾದ ಜುವಾನ್ ಮ್ಯಾನುಯೆಲ್ ಬಿ. ಗೊಮೆಜ್ ಅಭಿಪ್ರಾಯಪಟ್ಟರು. ಅವರು ಜನವರಿ 25 ರಂದು ಮಂಗಳೂರು […]
ಮಂಗಳೂರು ; ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯಲ್ಲಿ ಜನವರಿ 26ರಂದು ರಾಷ್ಟದ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿ ರಾಷ್ಟ್ರಧ್ವಜವನ್ನು ಅರಳಿಸಿ ಮಾತನಾಡಿದ ದಕ್ಷಿಣ ಕನ್ನಡ ಎನ್.ಸಿ.ಸಿ ಮಂಗಳೂರು 18ನೇ ರ್ನಾಟಕ ಬೆಟಾಲಿಯನ್ ಇದರ ಸುಬೇದಾರ್ ಮೇಜರ್ ಯಮ್ ಬಹದ್ದೂರ್ ರಾಣ ಮಾತನಾಡಿ ಎಲ್ಲ ನಾಗರಿಕರು ಒಗ್ಗಟ್ಟಿನಿಂದ ಜೊತೆಯಾಗಿ ನಡೆಯಬೇಕು. ನಮ್ಮ ಒಗ್ಗಟ್ಟು ಮತ್ತು ಶಿಸ್ತಿನಿಂದ ಇಡೀ ಜಗತ್ತಿಗೆ ನಮ್ಮ ದೇಶದ ಬಲವನ್ನು ತೋರಿಸಬೇಕು ಎಂದು ಹೇಳಿದರು. ಎಲ್ಲ ಎನ್.ಸಿ.ಸಿ ಕ್ಯಾಡೆಟ್ ಗಳು ನಮ್ಮ […]
ಕುಂದಾಪ್ರ ; ಭಾಷೆ ನಾಶ ಆದ್ರೆ ಸಂಸ್ಕೃತಿ ಸತ್ತಂತೆ. ಕುಂದಾಪ್ರ ಕನ್ನಡ ಭಾಷೆ ಉಳಿದಿದೆ, ರಂಗಾಗಿದೆ. ಕಳೆಗಟ್ಟಿದೆ. ಕುಂದಗನ್ನಡದಲ್ಲಿರುವ ಅಮೂಲ್ಯ ದಾಖಲೆಗಳನ್ನು ಕಾಪಾಡುವುದು ಅಗತ್ಯವಾಗಿದೆ. ಇದನ್ನು ಚಂದವಾಗಿ ಮುಂದಿನ ಪೀಳಿಗೆಗೆ ರವಾನಿಸಬೇಕು. ಅದಕ್ಕಾಗಿ ಪದಗಳ, ಸಾಹಿತ್ಯದ ದಾಖಲೀಕರಣವಾಗಬೇಕು. ಕುಂದ ಕನ್ನಡ ಉಳಿಸಲು ಸಾಕಷ್ಟು ಕಾರ್ಯಕ್ರಮ ನಾವು ಮಾಡಿದ್ದೇವೆ. ಆದರೆ ಬರೇ ಗೌಜಿಯಿಂದ ಕುಂದಾಪ್ರ ಕನ್ನಡ ಬೆಳೆಯದು, ಇದಕ್ಕಾಗಿ ಹಿಂದೆ ಶ್ರಮಿಸಿದ ಹಿರಿಯರ ಸಂಗ್ರಹವನ್ನು ಉಳಿಸಿಕೊಳ್ಳಬೇಕು. ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಉತ್ತಮ ಹೆಜ್ಜೆ ಇಟ್ಟಿದೆ” ಎಂದು ಕ.ಸಾ.ಪ. […]
ಮಂಗಳೂರು: ಜನರ ಬಳಿಗೆ ಹೋಗಿ ಅವರ ಅಗತ್ಯಕ್ಕೆ ಬೇಕಾದ ಉಳಿತಾಯ ಮಾಡಲು ಹೇಳುವ ಪ್ರತಿಯೊಬ್ಬರು ತಮ್ಮ ಒಳಗೆ ಸ್ಫಂಧನೆಯ ತುಡಿತ ಮತ್ತು ಒಳ್ಳೆಯ ಅಭಿರುಚಿಯ ನಡತೆಯನ್ನು ಹೊಂದಿರಬೇಕು ಎಂದು ಹಿರಿಯ ಪತ್ರಕರ್ತ, ಜೇಸಿಯ ಹಿರಿಯ ತರಬೇತುದಾರ ರೇಮಂಡ್ ಡಿಕೂನಾ ತಾಕೊಡೆ ನುಡಿದರು. ಅವರು ಮಂಗಳೂರು ಪದ್ವಾ ಕಾಲೇಜಿನಲ್ಲಿ ಡಾ ಮರಿಯಾ ಪ್ರಮೀಳಾ ಅವರ ಫೈನಾನ್ಸಿಯಲ್ ಅವೇರ್ನೆಸ್ ತರಭೇತಿಯನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ನಮ್ಮ ಉಡುಗೆ ತೊಡುಗೆ, ಮಾತುಗಳ ನಯ ಜನರ ಮೇಲೆ ಪ್ರಭಾವ ಬೀರುತ್ತವೆ. […]

