ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಜಿಲ್ಲೆಯ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಜನರ ಸಮಸ್ಯೆ ಆಲಿಸಲು ಖುದ್ದು ಗ್ರಾಮಗಳಿಗೆ ತೆರಳಿ ಜನರ ನಡುವೆ ಬರಿನೆಲದಲ್ಲಿ ಕುಳಿತು ಕುಂದುಕೊರತೆ ಆಲಿಸಿ ಪರಿಹಾರ ಒದಗಿಸುತ್ತಿರುವುದು ಜನರ ಪ್ರಶಂಸೆಗೆ ಪಾತ್ರವಾಯಿತು.ಜನಪ್ರತಿನಿಧಿಗಳು ಎಂದರೆ ಎಸಿ ರೂಮಿನಲ್ಲಿ ಕುಳಿತು ಅಲ್ಲಿಂದಲೇ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುವುದು ಮಾಮೂಲಿ ಆದರೆ ಶಾಸಕರೊಬ್ಬರು ಕ್ಷೇತ್ರದ ಕಟ್ಟಕಡೆಯ ಗ್ರಾಮಕ್ಕೂ ಖುದ್ದು ತೆರಳಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನರ ನಡುವೆ ಕುಳಿತು ಸಮಸ್ಯೆ ಆಲಿಸುವುದು ಶ್ಲಾಘನೀಯ ಎಂದು […]
ವರದಿ: ಸ್ಟ್ಯಾನಿ ಡಿಆಲ್ಮೇಡಾ ಸಾಸ್ತಾನ, ಅಕ್ಟೋಬರ್-2: ಸಾಸ್ತಾನದ ಸೂಲ್ಕುದ್ರುವಿನಲ್ಲಿ ಅಕ್ಟೋಬರ್-2 ಗಾಂಧೀ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನದ “ನಮ್ಮ ಗ್ರಾಮ ಸ್ವಚ್ಛ ಗ್ರಾಮ”ಕಾರ್ಯಕ್ರಮದ ಅಡಿ ಸೂಲ್ಕುದ್ರು ಗ್ರಾಮ ಹಿತರಕ್ಷಣಾ ಸಮಿತಿ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ (ರಿ) ಸಂತ ಅಂತೋನಿ ದೇವಾಲಯ ಸಾಸ್ತಾನ ಘಟಕ ಮತ್ತು ಸ್ವಸಹಾಯ ಸಂಘಗಳು ಸೂಲ್ಕುದ್ರು ಇದರ ವತಿಯಿಂದ ನಡೆಸಲಾಯಿತು.ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಚ್ಛತಾ ಅಭಿಯಾನಕ್ಕೆ ಒಳ್ಳೆ ರೀತಿಯಲ್ಲಿ ಸಹಕರಿಸಿದರು.
JANANUDI.COM NETWORK ಬೆಳ್ಳೆ ಗ್ರಾಮ ಪಂಚಾಯತ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಂತಲಾರೆನ್ಸ್ ಪದವಿಪೂರ್ವ ಕಾಲೇಜು ,ಎಸ್ಎಲ್ಆರ್ ಎಂ ಘಟಕ ಹಾಗೂ ಲಯನ್ಸ್ ಹಾಗೂ ಲಿಯೋ ಕ್ಲಬ್ ಮೂಡುಬೆಳ್ಳೆ ಇವರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮತ್ತು ವಿಶೇಷ ಗ್ರಾಮಸಭೆಯು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಧಾಕರ ಪೂಜಾರಿ ಗ್ರಾಮ ಪಂಚಾಯತ್ ಅಧ್ಯಕ್ಷರು ವಹಿಸಿದ್ದರು .ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರು ,ಸದಸ್ಯರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ, ಎನ್ಎಸ್ಎಸ್ […]
JANANUDI.COM NETWORK ಭಾರತೀಯ ಲೆಕ್ಕಪರಿಶೋಧನಾ ಘಟಕ ಉಡುಪಿ ಮತ್ತು ಲೊರೆನ್ಸಿಯನ್ ಸೆಂಟರ್ ಫಾರ್ ಎಕ್ಸಲೆನ್ಸ್ ಇದರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಸಿಎ ಕೋರ್ಸಿನ ಬಗ್ಗೆ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಸಿಎ ಪ್ರೀತೇಶ್ ಬರ್ಟನ್ ಡೇಸಾ ಆಗಮಿಸಿ “ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಅತಿ ಅಗತ್ಯ .ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಇಂದು ಸಿಎ ಕೋರ್ಸ್ ಮಾಡಿದವರಿಗೆ ಹೇರಳ ಅವಕಾಶಗಳು ಲಭ್ಯವಿದೆ. ಈ ದಿಸೆಯಲ್ಲಿ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಮಟ್ಟದ ತರಬೇತಿ ಕೇಂದ್ರ […]
JANANUDI.COM NETWORK ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಹಾತ್ಮಾ ಗಾಂಧಿಯವರ 153ನೆಯ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ 117ನೆಯ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಹಿರಿಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಖಜಾಂಚಿ ನಾರಾಯಣ ಆಚಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ ಮುಂತಾದವರು ಗಾಂಧಿ ಮತ್ತು ಶಾಸ್ತ್ರೀಯವರ ಚಿಂತನೆಗಳು […]
JANANUDI.COM NETWORK ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಕುಂದಾಪುರ ಘಟಕದಿಂದ ಗಾಂಧಿ ಜಯಂತಿ ಆಚರಣೆಯನ್ನು ಮತ್ತು ‘ನಿರ್ಮಲ ಪರಿಸರ ನಮ್ಮ ಕರ್ತವ್ಯ’ ಇದರ ಧ್ಯೇಯದೊಂದಿಗೆ ಸ್ವಚಚತಾ ಆಭಿಯಾನವನ್ನು ಆಚರಿಸಲಾಯಿತು. ಕುಂದಾಪುರ ಚರ್ಚ್ ಸಭಾ ಭವನದಲ್ಲಿ ನಡೆದ ಗಾಂಧಿ ಜಯಂತಿ ಆಚರಣ ಪ್ರಯುಕ್ತ ಗಾಂಧಿಜಿಗೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಲಾಯಿತು, ಮುಖ್ಯ ಅತಿಥಿಗಳಾದ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ‘ಗಾಂಧಿಜಿ ಒರ್ವ ಮಹಾನ್ ನಾಯಕ, ದೇಶಕ್ಕಾಗಿ ಸರ್ವಸ್ವವನ್ನು ಸಮರ್ಪಿಸಿದವರು, ತ್ಯಾಗಿಗಳು, ಸತ್ಯ, ಅಹಿಂಸಾವದಿಗಳು, ಹಾಗೇ ಲಾಲ್ ಬಾಹುದ್ದರ್ […]
ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ 2021-22ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ಆಯ್ಕೆ ಸಂಚಾಲಕರು-ಅಬ್ಬನಡ್ಕ ಸಂದೀಪ್ ವಿ. ಪೂಜಾರಿಗೌರವಾಧ್ಯಕ್ಷರು-ರಾಜು ಶೆಟ್ಟಿ ಕುಂಟಲಗುಂಡಿಸ್ಥಾಪಕಾಧ್ಯಕ್ಷರು-ವಿಠಲ ಮೂಲ್ಯನಿಕಟ ಪೂರ್ವಾಧ್ಯಕ್ಷರು-ಬೋಳ ಉದಯ ಅಂಚನ್ಉಪಾಧ್ಯಕ್ಷರು-ಸುರೇಶ್ ಅಬ್ಬನಡ್ಕಕಾರ್ಯದರ್ಶಿ-ಸುರೇಶ್ ಕಾಸ್ರಬೈಲುಜೊತೆ ಕಾರ್ಯದರ್ಶಿ-ಪುಷ್ಪ ಕುಲಾಲ್ಕೋಶಾಧಿಕಾರಿ-ವೀಣಾ ಹರೀಶ್ಮಹಿಳಾ ಸಂಘಟನಾ ಕಾರ್ಯದರ್ಶಿ-ಸಂಧ್ಯಾ ಶೆಟ್ಟಿಅಂತರಿಕ ಲೆಕ್ಕಪರಿಶೋಧಕರು-ಹರಿಪ್ರಸಾದ್ ಆಚಾರ್ಯ, ಅಬ್ಬನಡ್ಕಭಜನಾ ಮಂಡಳಿಯ ಆಧ್ಯಕ್ಷರು-ಸುಲೋಚನಾ ಕೋಟ್ಯಾನ್ಭಜನಾ ಮಂಡಳಿಯ ಕಾರ್ಯದರ್ಶಿ-ಹರಿಣಾಕ್ಷಿ ಪೂಜಾರಿಶ್ರೀ ವನದುರ್ಗಾ ಸ್ವಸಹಾಯ ಸಂಘದ ಅಧ್ಯಕ್ಷೆ-ಲಲಿತಾ ಆಚಾರ್ಯಶ್ರೀ ವನದುರ್ಗಾ ಸ್ವಸಹಾಯ ಸಂಘದ ಕಾರ್ಯದರ್ಶಿ-ಸತೀಶ್ ಪೂಜಾರಿ ಅಬ್ಬನಡ್ಕವಿವಿಧ ಸಮಿತಿಯ […]
JANANUDI.COM NETWORK ದಿನಾಂಕ 2-10-2021 ಶನಿವಾರ ಬೆಳಿಗ್ಗೆ 9-30ಕ್ಕೆ ಸರಿಯಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ,ಪದಾಧಿಕಾರಿಗಳು ,ಜನಪ್ರತಿನಿಧಿಗಳು ,ಕಾರ್ಯಕರ್ತರು ಬಾಗವಹಿಸಬೇಕಾಗಿ ವಿನಂತಿಸುತ್ತಾ ಕಾರ್ಯಕ್ರಮ ಕ್ಲಪ್ತ ಸಮಯದಲ್ಲಿ ಜರುಗಲಿದೆ ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಂದಾಪುರ ತಿಳಿಸಿದೆ
ವರದಿ: ವಾಲ್ಟರ್ಮೊಂತೇರೊ, ಬೆಳ್ಮಣ್ಣ ಭಾರತೀಯ ಜೇಸಿಐನ ವಲಯ 15ರ 41 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಜೇಸಿಐ ಬೆಳ್ಮಣ್ಣು ಘಟಕದ ಜೇಸಿ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರಧಾನ, ಪೂರ್ವಾಧ್ಯಕ್ಷರುಗಳ ಸಮ್ಮಿಲನ, ಜೇಸಿ ಕುಟುಂಬೋತ್ಸವವು ಬೆಳ್ಮಣ್ಣು ಪಂಚಾಯತ್ ಸಭಾಂಗಣದಲ್ಲಿ ಘಟಕಾಧ್ಯಕ್ಷ ಕೃಷ್ಣ ಪವಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ಪೂರ್ವವಲಯಾಧ್ಯಕ್ಷ ಹರಿಶ್ಚಂದ್ರ ಅಮೀನ್, ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ವಲಯದ ವ್ಯವಹಾರ ವಿಭಾಗದ ಅಧ್ಯಕ್ಷ ಸಮದ್ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. […]

