ಜೆಸಿಐ ಕುಂದಾಪುರ ಸಿಟಿ ಯಾ ವತಿಯಿಂದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಯಾ ಕಾನ್ಸ್ಟೆಬಲ್ ರೂಪಶ್ರೀ ಯವರಿಗೆ ತೆರೆ ಮರೆಯಾ ಸಾದಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಮುಖ್ಯ ಅತಿಥಿ ಯಾಗಿ ಆಗಮಿಸಿದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಧಾ ಪ್ರಭು ಮಾತನಾಡಿ ಸಾಮಾನ್ಯವಾಗಿ ಶ್ರೀಮಂತರು ಅಥವಾ ಉಳ್ಳವರು ಏನಾದ್ರು ಸಾಧನೆ ಮಾಡಿದರೆ ಅದು ಕೂಡಲೇ ಪ್ರಚಾರ ಕ್ಕೆ ಬರುತ್ತದೆವಿಶೇಷ ವಾಗಿ ಗ್ರಾಮೀಣ ಭಾಗದಲ್ಲಿ ಸಾಧನೆ ಮಾಡಿದ ವರಿಗಿಂತ ನಗರ ಪ್ರದೇಶದಲ್ಲಿ ಸಾಧನೆ […]
“ವೃತ್ತಿಪರ ಸೇವೆಯ ಮಾಸ”ದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣವು ಹೈನುಗಾರಿಕೆಯಲ್ಲಿ ಜೀವನ ಸಾಗಿಸುತ್ತಿರುವ ಶ್ರಮ ಜೀವಿಗಳಾದ ಹಂಗಳೂರಿನ ರಾಮಕೃಷ್ಣ ಕೊಠಾರಿ ಹಾಗೂ ಮುಕಾಂಬು ಕೊಠಾರಿ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ರೊ. ಸುರೇಖ ಪುರಾಣಿಕ, ಮಾಜಿ ಅಧ್ಯಕ್ಷರುಗಳಾದ ರೊ.ಯು. ಎಸ್. ಶೆಣೈ , ರೊ. ಪಾಂಡುರಂಗ ಭಟ್, ತಲ್ಲೂರು ಸಮುದಾಯ ದಳದ ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಸದಾನಂದ ಆಚಾರ್ಯ ಹಾಗೂ ರೋಟರಿ ಮತ್ತು ಸಮುದಾಯ ದಳದ […]
ನೀರುಮಾರ್ಗ ಕೆಲರಾಯ್ ಸಂತ ಅನ್ನ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಆಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಪ್ರಸ್ತುತಪಡಿಸುವ 15ನೇ ಸ್ಟ್ಯಾನ್ ನೈಟ್ ಕಾರ್ಯಕ್ರಮವನ್ನು ಫೆಬ್ರವರಿ 5ರಂದು ಆದಿತ್ಯವಾರ ಕುಲಶೇಖರ ಚರ್ಚ್ ಸಭಾಭವನದಲ್ಲಿ ಆಯೋಜಿಸಲಾಗಿದೆ.ಸಂಜೆ ಗಂಟೆ. 6.೦೦ರಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮಂಗಳೂರಿನ ಹೆಸರಾಂತ ಗಾಯಕ-ಗಾಯಕಿರಿಂದ ಸಂಗೀತ ರಸಮಂಜರಿ, ಜೊಪ್ಪಿನ್ ಪಪ್ವಾನರಿಂದ ಸಂಗೀತ , ಮೆಮರಿ ಮಂಗಳೂರು ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ದೀಪಕ್ ಬೆಂದೂರ್ವೆಲ್ ಅವರಿಂದ ನೃತ್ಯ . ಒಂದೇ ವೇದಿಕೆಯಲ್ಲಿ ಪ್ರೇಕ್ಷಕರಿಗೆ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು […]
ಮಂಗಳೂರು: ಕರ್ನಾಟಕ-ಗೋವಾ ಪ್ರಾಂತ್ಯದ ಮುವರು ದೀಯೊಕೊನರಿಗೆ ಫಾ. ಮೆಲ್ವಿನ್ ಲಸ್ರಾದೊ (ನಿರ್ಕಾಣ್ ಧರ್ಮಕೇಂದ್ರ) ಫಾ. ನಿಕೇಶ್ ಡಿ’ಸೋಜಾ (ಪಾಣಿರ್ ಧರ್ಮಕೇಂದ್ರ) ಮತ್ತು ಫಾ.ಕಿರಣ್ ಲೋಬೊ (ಬೆಳ್ತಂಗಡಿ ಧರ್ಮಕೇಂದ್ರ) ಇವರನ್ನು ಡಾ. ಪೀಟರ್ ಪಾವ್ಲ್ ಸಲ್ದಾನಾ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದಲ್ಲಿ ಫೆಬ್ರವರಿ ಒಂದರಂದು ಯಾಜಕಿ ದೀಕ್ಷಾ ಸಂಸ್ಕಾರವನ್ನು ನೀಡಿದರು 13 ವರ್ಷಗಳ ವರೆಗೆ ದೇವ ಶಾಸ್ತ್ರದಲ್ಲಿ ಶಿಕ್ಷಣ ಪಡೆದು ಯಾಜಕಿ ದೀಕ್ಷೆ ಪಡೆಯಲು ಯೋಗ್ಯರಾದ ಹಿನ್ನೆಲೆಯಲ್ಲಿ ಧರ್ಮಗುರುಗಳಾಗಲು ಯೋಗ್ಯರೆಂದು ಇವರನ್ನು […]
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ತೆರಾಲಿ ಹಬ್ಬವು ಫೆಬ್ರವರಿ 14ನೇ ಮಂಗಳವಾರ ಬೆಳಿಗ್ಗೆ 10.15ಕ್ಕೆ ಚರ್ಚಿನ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ಜರುಗಲಿರುವುದು ಇದಕ್ಕೆ ಪೂರ್ವಭಾವಿಯಾಗಿ ಫೆಬ್ರವರಿ 12 ಭಾನುವಾರ ಸಂಜೆ 4ಕ್ಕೆ ಕೋಂಪ್ರಿ ಫೆಸ್ತ್ ಅಂಗವಾಗಿ ಇರ್ಗಜಿ ವಠಾರದಿಂದ ಯಡ್ತರೆ ತನಕ ಪುರಮೆರವಣಿಗೆ,13ರಂದು ಸಂಜೆ 7ಕ್ಕೆ ಹಬ್ಬದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಜರುಗಲಿರುವುದು. ಫೆಬ್ರವರಿ 19ರಂದು ಸಂಜೆ4.45ಕ್ಕೆ ಇತಿಹಾಸ ಪ್ರಸಿದ್ಧ ಇಗರ್ಜಿಗುಡ್ಡದ ಮೇಲೆ ನೂತನವಾಗಿ ನಿರ್ಮಿಸಿದ ಕಲ್ವಾರಿ ಬೆಟ್ಟದ ಪ್ರತಿರೂಪದ ಯೋಜನೆಯ ಉದ್ಘಾಟನೆ […]
ಕುಂದಾಪುರ, ಫೆ.1: ಕುಂದಾಪುರ ರೋಜರಿ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಹೇರಿಕುದ್ರು ಸೇತುವೆ ಹತ್ತಿರದಲ್ಲಿ ಒಂದು ಬಡ ಕ್ರೈಸ್ತ ಕುಟುಂಬ ಹರಕಲು ಮುರುಕಲು ಮನೆಯಲ್ಲಿ ವಾಸಿಸುತಿತ್ತು. ಮನೆಯ ಅರ್ಧ ಗೋಡೆಗಳ, ಛಾವಣಿ ಇಲ್ಲದೆ ಪ್ಲಾಸ್ಟಿಕ್ ಹೊದಿಕೆ ಮಾತ್ರ ಇದ್ದು, ಮಣ್ಣಿನ ಜಗುಲಿಯಿದ್ದು, ಮಳೆ ಬಿಸಿಲಿನಲ್ಲಿ ಮನೆಯವರು ವಾಸಿಸುತಿದ್ದರು. ಇದು ರೋಜರಿ ಚರ್ಚಿನ ಆಡಳಿತ ಮಂಡಳಿಯ ಗಮನಕ್ಕೆ ಬಂದ ಮೇಲೆ ಇವರ ಮನೆಗೆ ಹೊಸ ರೂಪ ಕೊಡಲು ಶ್ರಮಿಸತೊಡಗಿತು. ಮೊದಲು ರೋಜರಿ ಚರ್ಚಿನ ಐ.ಸಿ.ವೈ.ಎಮ್ (ಯುವ ಸಂಘಟನೆ) ಶ್ರಮದಾನದ ಮೂಲಕ […]
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆಯು 2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದು, ಆ ಮೂಲಕ 3970 ಕಿಲೋಮೀಟರ್ಗಳಷ್ಟು ದೂರವನ್ನು ಕ್ರಮಿಸಿ ಇಂದು ಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪಗೊಳ್ಳುವ ಅಂಗವಾಗಿ ಇಂದು ದೇಶದಾದ್ಯಂತ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ರಾಷ್ಟ್ರಧ್ವಜ ಆರೋಹಣ ಕಾರ್ಯಕ್ರಮ ಆಯೋಜಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕರೆನೀಡಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 10ಗಂಟೆಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ […]
ಕುಂದಾಪುರ,ಜ.30: ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ.ಕಾಲೇಜು ವಠಾರದಲ್ಲಿ ಫೆ.19ರಂದು ನಡೆಯುವ ಕುಂದಾಪುರ ತಾಲೂಕು ಹದಿನೆಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಖ್ಯಾತ ಸಾಹಿತಿ,ಅಂಕಣಗಾರ,ರಂಗ ನಿರ್ದೇಶಕ,ನಿವ್ರೃತ್ತ ಪ್ರಾಧ್ಯಾಪಕ ಕೋ.ಶಿವಾನಂದ ಕಾರಂತರು ಆಯ್ಕೆಯಾಗಿದ್ದಾರೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಉಮೇಶ ಪುತ್ರನ್ ತಿಳಿಸಿದ್ದಾರೆ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಗೌರವ ಕಾರ್ಯದರ್ಶಿ ಗಳಾದ ಸುಬ್ರಹ್ಮಣ್ಯ ಶೆಟ್ಟಿ,ನರೇಂದ್ರ ಕುಮಾರ್ ಕೋಟ,ಕೋಶಾಧ್ಯಕ್ಷ ಮನೋಹರ ಪಿ.,ತಾಲೂಕು ಪದಾಧಿಕಾರಿಗಳಾದ ದಿನಕರ ಶೆಟ್ಟಿ, ಅಕ್ಷತಾ ಗಿರೀಶ್ಐತಾಳ,ಕೆ.ಎಸ್.ಮಂಜುನಾಥ […]
ಮಂಗಳೂರು, ಜ 30: ಮಂಗಳೂರಿನ ಜೆಪ್ಪುವಿನ ಸಂತಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನ ಶನಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಗುರುವಂದನೀಯ ಮ್ಯಾಕ್ಸಿಮ್ಎಲ್. ನೊರೊನ್ಹಾ ಮಾತನಾಡಿ, “ಬೈಬಲ್ ಎಂದಿಗೂ ಅಕ್ಷಯ ಪಾತ್ರೆಯಂತೆ ಖಾಲಿಯಾಗದ ಸಂಪತ್ತು. ಇದು ಹೊಸತನ ಮತ್ತು ಜೀವ ನೀಡುವ ಪುಸ್ತಕವಾಗಿದೆ ಮತ್ತು ಯಾವುದೇ ಸಂದರ್ಭಕ್ಕೂ, ಕಾಲಕ್ಕೂ ಸಕಾಲವಾದುದು. ಬೈಬಲ್ ಅನೇಕರಿಗೆ ಸ್ಫೂರ್ತಿ ನೀಡಿದೆ, ಅನೇಕರ ಜೀವನವನ್ನು ಪರಿವರ್ತಿಸಿದೆ, ನಾಸ್ತಿಕರು ಆಸ್ತಿಕರಾಗಿದ್ದಾರೆ, ಏಕೆಂದರೆ ಇದು ದೇವರ […]

