ಮಂಗಳೂರು; ಕಂಪ್ಯೂಟರ್ ಕ್ಲಬ್ ಎಂದರೆ ತಂತ್ರಜ್ಞಾನದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಒಂದು ವೇದಿಕೆ. ಇದು ತಂತ್ರಜ್ಞಾನದ ಬಗ್ಗೆ ಕಲಿಯಲು, ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ಸಹಪಾಠಿಗಳೊಂದಿಗೆ ಸಹಕರಿಸಲು ಒಂದು ಅವಕಾಶ. ಕಂಪ್ಯೂಟರ್ ಕ್ಲಬ್ನಲ್ಲಿ, ವಿದ್ಯಾರ್ಥಿಗಳು ಕಂಪ್ಯೂಟರ್ ಪ್ರೋಗ್ರಾಮಿಂಗ್, ಗೇಮ್ ಡೆವಲಪ್ಮೆಂಟ್, ವೆಬ್ ಡಿಸೈನಿಂಗ್ ಮುಂತಾದ ವಿಷಯಗಳ ಬಗ್ಗೆ ಕಲಿಯಬಹುದು. ಅಲ್ಲದೆ, ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ಕ್ಲಬ್ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದಾಗಿ ಶಾಲಾ ಹಿರಿಯ ಶಿಕ್ಷಕಿಯಾದ ಶ್ರೀಮತಿ […]
ಕುಂದಾಪುರ; 27.06.2026 ರಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಸಾಲಿನ ಶಿಕಕ ರಕ್ಷಕ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ವಿದ್ಯಾರ್ಥಿನಿಯರು ಸ್ವಾಗತ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಹೋಲಿ ರೋಜರಿ ಹಾಗೂ ಸಂತಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಸ್ಥಳೀಯ ಹೋಲಿ ರೋಜರಿ ಚರ್ಚಿನ ಪ್ರಧಾನ ಧಮಗುರುಗಳಾದ ಅ। ವಂ। ಪೌಲ್ ರೇಗೋರವರು ಸಭೆಯ ಅಧ್ಯಕತೆಯನ್ನು ವಹಿಸಿ “ಇಂದಿನ ಮಕ್ಕಳು ನಾಳಿನ ಪ್ರಜೆಗಳು, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 25ನೇ ಜೂನ್ 2026 ರಂದು ಕಿಂಡರ್ ಗಾರ್ಡನ್ ವಿಭಾಗದ ಬ್ಯಾಗುರಹಿತ ದಿನವನ್ನು ಆಚರಿಸಲಾಯಿತು. ‘ಕುಟುಂಬದ ನೆನಪುಗಳು ಮತ್ತು ಕ್ಷಣಗಳು’ ಎಂಬ ಶೀರ್ಷಿಕೆಯಡಿ ನಡೆದ ಈ ಕಾರ್ಯಕ್ರಮವು ಪೋಷಕರು ತಮ್ಮ ಮಕ್ಕಳೊಂದಿಗೆ ಸಭಾಂಗಣಕ್ಕೆ ಮೆರವಣಿಗೆಯೊಂದಿಗೆ ಆಗಮಿಸುವ ಮೂಲಕ ಆರಂಭವಾಯಿತು. ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ ಮತ್ತು ಉಪ ಪ್ರಾಂಶುಪಾಲೆ ಶ್ರೀಮತಿ ಅಪರ್ಣಾ ಸುರೇಶ್ ಅವರು ಪ್ರತಿ ಕುಟುಂಬಕ್ಕೂ ವಿಶೇಷ ಉಡುಗೊರೆಯನ್ನು ನೀಡಿ ಸ್ವಾಗತಿಸಿದರು. ಪ್ರಾಂಶುಪಾಲರು, ಉಪ ಪ್ರಾಂಶುಪಾಲೆ, ಪೋಷಕರ […]
ಮಂಗಳೂರು: ವಿದ್ಯಾರ್ಥಿ ಪರಿಷತ್ತಿನ ಮಾಜಿ ಮತ್ತು ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ಶ್ರೇಯಾ ಮತ್ತು ತಂಡದ ನೇತೃತ್ವದಲ್ಲಿ ಮಧುರ ಗೀತೆ ಮತ್ತು ಅರ್ಥಪೂರ್ಣ ಪ್ರಾರ್ಥನಾ ಗೀತೆಯ ಮೂಲಕ ಸರ್ವಶಕ್ತನ ಆಶೀರ್ವಾದವನ್ನು ಕೋರಲಾಯಿತು. ವಿದ್ಯಾರ್ಥಿ ಪರಿಷತ್ತಿನ ಸಿಬ್ಬಂದಿ ಸಲಹೆಗಾರ್ತಿ ಡಾ. ದೀಪಾ ಪೈಸ್ ಸ್ವಾಗತಿಸಿದರು ಮತ್ತು ಮುಖ್ಯ ಅತಿಥಿ ಶ್ರೀ ವಾಲ್ಟರ್ ನಂದಳಿಕೆ, ಡೈಜಿವರ್ಲ್ಡ್.ಕಾಮ್ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರು ಪರಿಚಯಿಸಿದರು. ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್ ಹೊಸ […]
Reported by Maria Wilma Rego Photographs arranged by Praveen Cutinho ಕಲ್ಯಾಣಪುರ; ಮೌಂಟ್ ರೋಸರಿ ಚರ್ಚ್ ಕ್ಯಾಥೋಲಿಕ್ ಸಭಾ ಜೂನ್ 21, 2026 ರಂದು ಅಪ್ಪಂದಿರ ದಿನಾಚರಣೆಯನ್ನು ಆಯೋಜಿಸಿದಾಗ ಐತಿಹಾಸಿಕ ಮತ್ತು ಹೃದಯಸ್ಪರ್ಶಿ ಸಂದರ್ಭಕ್ಕೆ ಸಾಕ್ಷಿಯಾಯಿತು, ಎಲ್ಲಾ ವಯಸ್ಸಿನ ಅಪ್ಪಂದಿರನ್ನು ಅರ್ಥಪೂರ್ಣ ಮತ್ತು ಸಂತೋಷದಾಯಕ ಸಭೆಗಾಗಿ ಒಟ್ಟುಗೂಡಿಸಿತು. ಧರ್ಮಕೇಂದ್ರದ ಧರ್ಮಗುರು ವಂ।ಡಾ. ರೋಕ್ ಡಿಸೋಜಾ ಅವರು ಆಚರಿಸಿದ ಕೃತಜ್ಞತಾ ಬಲಿದಾನದೊಂದಿಗೆ ದಿನವು ಆಧ್ಯಾತ್ಮಿಕ ಟಿಪ್ಪಣಿಯೊಂದಿಗೆ ಪ್ರಾರಂಭವಾಯಿತು. ಅವರ ಹೃದಯಸ್ಪರ್ಶಿ ಧರ್ಮೋಪದೇಶವು ವಯಸ್ಸಿನ ಹೊರತಾಗಿಯೂ ಪ್ಯಾರಿಷ್ನಲ್ಲಿರುವ […]
ಕುಂದಾಪುರ ;ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 23 ಜೂನ್ 2026ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಎಸ್ ಬಿಜೂರು ಇವರು ಆಗಮಿಸಿ ಯೋಗದಿಂದಾಗುವ ಉಪಯೋಗಗಳ ಬಗ್ಗೆ ಹಾಗೂ ಯೋಗವು ಮನುಷ್ಯನ ಆಂತರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಇದೆಷ್ಟು ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದರ ಜೊತೆಗೆ ಯೋಗಾಭ್ಯಾಸವನ್ನು ಮಾಡುವಾಗ ಪಾಲಿಸಬೇಕಾದ ಕ್ರಮಗಳ ಕುರಿತು ತಿಳಿಸಿದರು. ಈ ಕಾರ್ಯಕ್ರಮದಲ್ಲಿ […]
ಮಂಗಳೂರು: ಜೂನ್ 25 ರಂದು, ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರ ಸಂಘವು (MCHMPA) 25-06-2026 ರಂದು ಲೇಡಿಹಿಲ್ ಉರ್ವಾ ಚರ್ಚ್ ಸಭಾಭವನದಲ್ಲಿ ಶೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಿತ್ತು. ಮುಖ್ಯಅತಿಥಿಗಳಾಗಿ ಶ್ರೀ ಭೋಜೇಗೌಡ ಎಸ್ .ಎಲ್ ಶಾಸಕರು ವಿಧಾನ ಪರಿಷತ್ತು ಕರ್ನಾಟಕ ಸರಕಾರ, ಉದ್ಘಾಟಕರಾಗಿ ವಂ. ಫಾ. ಡಾ. ಲಿಯೋ ಪ್ರವೀಣ್ ಲಸ್ರಾದೊ ಕಾರ್ಯದರ್ಶಿಗಳು ಕಥೋಲಿಕ ಶಿಕ್ಷಣ ಮಂಡಳಿ, ಮಂಗಳೂರು,ಅತಿಥಿಗಳಾಗಿ ಮಿಲಾಗ್ರಿಸ್ ಶಾಲೆಯ ನಿವೃತ್ತ ಉಪ ಪ್ರಾಂಶುಪಾಲರಾದ ಶ್ರೀ ಸ್ಟ್ಯಾನಿ ಬಾರೆಟ್ಟೊ, ಸಂಘದ ಗೌರವಾಧ್ಯಕ್ಷರಾದ ಶ್ರೀ ಅಲೋಶಿಯಸ್ ಡಿಸೋಜ,ಅಧ್ಯಕ್ಷೆ ಶ್ರೀಮತಿ ಜಯವಂತಿ […]
ಕುಂದಾಪುರ; “ಮುಗ್ಧತೆಯಿಂದ ಪ್ರೌಢತೆಯತ್ತ ಸಾಗುವ ಸ್ಥಿತ್ಯಂತರದ ಅವಧಿಯಲ್ಲಿರುವ ವಿದ್ಯಾರ್ಥಿಗಳು ಸರಿ-ತಪ್ಪುಗಳ ಬಗ್ಗೆ ನಿಖರವಾದ ತಿಳುವಳಿಕೆಯನ್ನು ಪಡೆಯುತ್ತಿರಬೇಕು. ಅಲ್ಲದಿದ್ದರೆ, ಒಂದು ಕೆಟ್ಟ ಸಹವಾಸ, ಒಂದು ತಪ್ಪು ನಡವಳಿಕೆ, ಒಂದು ವ್ಯಸನ ಬದುಕಿಗೇ ಅಪಾಯಕಾರಿಯಾಗಬಹುದು. ಆದ್ದರಿಂದ ಪ್ರತಿಯೊಬ್ಬರಲ್ಲಿ ವಿದ್ಯೆಯ ಜೊತೆಗೆ ವಿವೇಕವೂ ಇರಬೇಕು” ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ- ಸ್ವಸಹಾಯ ಸಂಘ ಗಳ ಆಶ್ರಯದಲ್ಲಿ ಆಯೋಜಿಸಲಾದ ‘ ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ […]
ಕುಂದಾಪುರ: ಜು.25; ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೌದಿ ಅರೇಬಿಯಾದ ರಿಯಾದ್ ಅಲ್ಲಿನ ಗುಡ್ನೇಸ್ ಸಂಘಟನೇಯಿಂದ ೮ ನೇ ತರಗತಿಯ ಎಲ್ಲಾ ಮಕ್ಕಳ ವರ್ಷದ ಶಾಲಾ ಶುಲ್ಕವಾಗಿ 35 ಸಾವಿರ ರೂಪಾಯಿಗಳನ್ನು ನೀಡಿದ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಶೀದಿ ಮತ್ತು ಶಾಲಾ ಕಲಿಕಾ ವಸ್ತುಗಳು ಬ್ಯಾಗ್, ಕ್ಯಾಲೆಕ್ಲುಲೇಟರ್ ಇನ್ನಿತರ ವಸ್ತುಗಳನ್ನು ಜು.24 ರಂದು ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಕೊಡಮಾಡಿದ ಸಮವಸ್ತ್ರಗಳನ್ನು ವಿತರಣೆ […]

