JANANUDI.COM NETWORK ಕುಂದಾಪುರ,ಮೇ.5; ಕುಂದಾಪುರ ಪುರಸಭೆ ವ್ಯಾಪ್ತಿಯ ಚಿಕ್ಕನಸಾಲ್ ಕಾಂಕ್ರಿಂಟ್ ರಸ್ತೆಂiÀ ಬದಿಯಲ್ಲಿ ಜಲಸಿರಿ ಕುಡಿಯುವ ನೀರಿನ ಯೋಜನೆಗಾಗಿ ಸುಮಾರು 12 ಇಂಚು ಗಾತ್ರದ ಕಬ್ಬಿಣದ ಪೈಪುಗಳನ್ನು ಮಣ್ಭಿನ ಅಡಿಯಲ್ಲಿ ಅಳವಡಿಸುವ ಕಾಮಗಾರಿ ಮೇ 4ರಂದು ಆರಂಭಗೊಂಡಿದೆ.ಆದರಿಂದ ಚಿಕ್ಕನಸಾಲು ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂದಿಸಲಾಗಿದೆ. ಜನರು ಬೇರೆ ರಸ್ತೆಗಳಿಂದ ಸಂಚರಿಸಿ ಸಹಕರಿಸಬೇಕೆಂದು ಪುರಸಭೆ ವಿನಂತಿಸಿಕೊಂಡಿದೆ. ಈ ಕಾಮಾಗಾರಿ ಸುಮಾರು ಹತ್ತು ದಿನಗಳ ತನಕ ನಡೆಯಬಹುದೆಂದು ತಿಳಿದು ಬಂದಿದೆ.
JANANUDI.COM NETWORK ಕುಂದಾಪುರ, ಮೇ. 5. ಕೋಟೇಶ್ವರ, ಬ್ರಹ್ಮಾವರ ಮೊದಲಾದ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆಯಿಂದಾಗಿ ಜನರಿಗೆ ತೊಂದರೆ ಆಗಿದೆ. ದಿನ ನಿತ್ಯ ವ್ಯಾಪಾರ, ವಹಿವಾಟು, ಕೂಲಿ ಕೆಲಸ ಮಾಡುವ ಬಡ, ಮಧ್ಯಮ ವರ್ಗದ ಜನರು ತಮ್ಮ ಆದಾಯಕ್ಕೆ ಸಂಚಕಾರ ತಂದುಕೊಂಡು ಆಸ್ಪತ್ರೆಗೆ ಹೋಗುತ್ತಾರೆ. ಆಶಾ ಕಾರ್ಯಕರ್ತೆಯರು ಸಮಯ ನಿಗದಿ ಮಾಡಿ ತಿಳಿಸಿದ್ದರೂ ಆಸ್ಪತ್ರೆಗೆ ಹೋದಾಗ, ‘ನಾಳೆ ಬನ್ನಿ’ ಎಂದು ವಾಪಾಸು ಕಳಿಸಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು […]
JANANUDI.COM NETWORK ಕಾಂಗ್ರೆಸ್ ಪಕ್ಷದ ಕರೆಯಂತೆ, ಉಡುಪಿ ಜಿಲ್ಲಾ ಕೇಂದ್ರವು ಕೊರೋನಾ ಸಂಕಷ್ಟದಿಂದ ಬಳಲುತಿದ್ದ ಸರ್ವರಿಗೆ ಸಹಾಯ ಮಾಡಲು ಸಹಾಯವಾಣಿ ಸಮಿತಿ ರಚನೆ ಮಾಡಿವೆ. ಉಡುಪಿ ಜಿಲ್ಲಾ ಕೇಂದ್ರದ ಸಮಿತಿಯಲ್ಲಿ ಕುಂದಾಪುರದ ವಿಕಾಸ್ ಹೆಗ್ಡೆ, ಆಶಾಕರ್ವಾಲ್ಲೊ, ಕ್ರಷ್ಣ ಪೂಜಾರಿ ಮತ್ತು ರಮೇಶ ಶೆಟ್ಟಿವಕ್ವಾಡಿ ಇವರುಗಳು ಇದ್ದಾರೆ. ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಕೋರೋನಾ ಸಂಕಷ್ಟದಿಂದ ಬಳಲುತಿದ್ದ ಸರ್ವರಿಗೆ ನೇರವಾಗಲು “ಸಹಾಯ ವಾಣಿ” ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ಹಲವು ವಿಭಾಗಳನ್ನು ಮಾಡಲಾಗಿವೆ.ಸರಕಾರಿ ಆಸ್ಪತ್ರೆಯಲ್ಲಿ […]
JANANUDI.COM NETWORK ಧರ್ಮಸ್ಥಳ, ಮೇ. 3; ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ನಿರ್ವಹಣ ಅಧಿಕಾರಿ ರವೀಂದ್ರನ್ ಡಿ (57) ಇವರು ಮೇ 3 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಇಂದು ಸೋಮವಾರ ಬೆಳಿಗ್ಗೆ 7.30 ಕ್ಕೆ ಕಚೇರಿಗೆ ಬಂದು ತಮ್ಮ ಹಾಜರಿಯನ್ನು ನಮೂದಿಸಿ, ಆದರೆ ಇಂದು ಮದ್ಯಾನ್ಹ ಸಂಘದ ಅಟಲ್ ಜಿ ಸಭಾಭವನದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮ್ರತ ಶರೀರ ಪತ್ತೆಯಾಗಿದೆ. ಮ್ರತರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. […]
JANANUDI.COM NETWORK ಕೊರೊನಾ ವೈರಸ್ 2ನೇ ಅಲೆ ರಾಜ್ಯಾದ್ಯಂತ ಉಲ್ಬಣ ಗೊಳ್ಳುತ್ತಿದ್ದು, ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಲಾಕ್ಡೌನ್ ಮಾದರಿಯ ಕಪ್ರ್ಯೂ ವಿಧಿಸಿದು, ಸಂಘದ ಸದಸ್ಯ ಗ್ರಾಹಕರ ಆರ್ಥಿಕ ವ್ಯವಹಾರಕ್ಕೆ ಅನುಕೂಲವಾಗುವಂತೆ ಸರ್ಕಾರದ ಆದೇಶದ ವರೆಗೆ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಗಳ ವ್ಯವಹಾರದ ಸಮಯವನ್ನು ಇವತ್ತಿನಿಂದ (ಮೇ 3) ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೀಮಿತ ಗೊಳಿಸಲಾಗಿದೆ. ಸದಸ್ಯರು ಮತ್ತು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಸಂಘದ ಅಧ್ಯಕ್ಷರು […]
JANANUDI.COM NETWORK ಕುಂದಾಪುರ, ಮೇ,1; ಕುಂದಾಪುರ ಸರಕಾರಿ ಆಸ್ಪತ್ರೆಯ ವತಿಯಿಂದ ಕಲಾಮಂದಿರದಲ್ಲಿ ನೀಡುವ ಕೋವಿಡ್ ಲಸಿಕೆಯಲ್ಲಿ ಕೊರತೆ ಇದೆ, ಅದಾಗ್ಯೂ ಲಸಿಕೆ ಎಷ್ಟು ಲಭ್ಯ ಇರುತ್ತೊ ಅಷ್ಟೊಂದು 45 ವರ್ಷ ದಾಟಿದ ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ಆಸ್ಪತ್ರೆಯ ಹತ್ತಿರ ಇರುವ ಸರಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಉಚಿತವಾಗಿ ನೀಡಲಾಗುತ್ತದೆ.ದಿನವಾರು ಕಲಾಮಂದಿರದಲ್ಲಿ 200, 300, ಲಸಿಕೆ ನೀಡುತಿದ್ದರು, ಈಗ ಲಸಿಕೆಗಳ ಕೊರತೆಯಿಂದ ಲಭ್ಯ ಇದ್ದಷ್ಟು ಲಸಿಕೆಗಳನ್ನು ನೀಡಲಾಗುತ್ತದೆ, ಇಂದು ಮೇ ಒಂದರಂದು ಲಭ್ಯವಿದ್ದ […]
JANANUDI.COM NETWORK ಕುಂದಾಪುರ,ಎ.27: ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಈ ಸಂಸ್ಥೆಗೆ 8 ಶಾಖೆಗಳಿದ್ದು, ಬಸ್ರೂರಿನಲ್ಲಿ ಈ ಮೊದಲೇ ಶಾಖೆ ಇದ್ದು ಬೇರೆಡೆಯಿಂದ ವ್ಯಹರಿಸುತಿತ್ತು, ಈಗ ಈ ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣಗೊಂಡು ಇಲ್ಲಿ ವ್ಯವಹರಿಸಲಿಕ್ಕಾಗಿ ಸುಸಜ್ಜಿತವಾದ ರೋಜರಿ ಕ್ರೌನ್ ಕಡ್ಡಡವನ್ನು ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ ಇವರು ಮಂಗಳವಾರದಂದು ಉದ್ಘಾಟಿಸಿದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಫಾ|ಸ್ಟ್ಯಾನಿ ತಾವ್ರೊ ‘ದೇವರು ಎಲ್ಲರಿಗೂ ತನ್ನದೇ ಆದ ಪ್ರತಿಭೆಯನ್ನು ಕೊಟ್ಟಿದ್ದಾನೆ, ಅದನ್ನು […]
JANANUDI.COM NETWORK ಕುಂದಾಪುರ, ಎ.26; ಇದು ವರೆಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡ ಲಕ್ಶ್ಮೀ ಸೋಮ ಬಂಗೇರ ಹೆಣ್ಮಕ್ಕಳ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗುತಿತ್ತು. ಆದರೆ ಈಗ ಹೊಸ ಕಟ್ಟಡ ಸಹಿತ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಬದಲಾಯಿಸಿದ್ದರಿಂದ ಇವತ್ತಿನಿಂದ (ಎ.26) ಕೋವಿಡ್ ಲಸಿಕೆಯನ್ನು ಆಸ್ಪತ್ರೆಯ ಹತ್ತಿರ ಇರುವ ಸರಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನೀಡಲಾಗುತ್ತದೆ. ಪ್ರತಿ ದಿನ ಸುಮಾರು 180 ಮಂದಿಗೆ ಲಸಿಕೆಯನ್ನು ಹಾಕಿ ಕೊಳ್ಳುತಿದ್ದು, ಕಲಾಮಂದಿರದಲ್ಲಿ ಶಾಂತ […]
JANANUDI.COM NETWORK ಕುಂದಾಪುರ, ಕುಂದಾಪುರ ವಾರಾದ್ಯಂತ ಲಾಕ್ ಡೌನ್ ನಂತರದ ಸೋಮವಾರದಂದು ಕುಂದಾಪುರ ನಗರ ತುಂಬ ಜನದಟ್ಟಣೆ ಇದ್ದಿತ್ತು.ಸಾಮಾನ್ಯವಾಗಿ ಎಲ್ಲಾ ಅಂಗಡಿ ಮುಟ್ಟುಗಳು ತೆರೆದಿದ್ದು, ವ್ಯಾಪರ ವಹಿವಾಟು ಜೋರಾಗಿನಡೆಯಿತು. ಕೆಲವು ಅಂಗಡಿಗಳು ಮಾತ್ರ ಮುಚ್ಚಿದ್ದು, ರಸ್ತೆಗಳಲ್ಲಿ ಜನ ಸಂಚಾರ ದಟ್ಟಣೆಯಿಂದ ಕೂಡಿತ್ತು. ವಾಹನಗಳ ಸಂಚಾರವೂ ದಟ್ಟಣೆಯಲ್ಲಿ ಕೂಡಿದ್ದು, ಜನ ಅಗತ್ಯ ಖರೀಧಿಗಳನ್ನು ಮಾಡುತಿದ್ದರು.ಮೀನು ಪೇಟೆ ಪೇಟೆ, ಮತ್ತಿತರ ಅಗತ್ಯ ಅಂಗಡಿಗಳು ತೆರಿದಿದ್ದು, ಅಲ್ಲಿ ಜೋರಾಗಿ ವ್ಯಾಪರನಡೆಯುತಿತ್ತು. ಮಧ್ಯಾನದ ನಂತರ ವ್ಯಾಪರಿಗಳು ತಮ್ಮ ಅಂಗಡಿಮುಟ್ಟುಗಳು ಬಂದ್ ಮಾಡತೊಡಗಿದ್ದಾರೆ.

