

ಶ್ರೀನಿವಾಸಪುರ : ಪ್ಲಾಸ್ಟಿಕ್ ತೆಗೆಯರಿ, ಪರಿಸರ ಉಳಿಸಿ ಎಂಬ ಘೋಷಣೆ ಮೂಲಕ ನಾಗರೀಕರಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಅರಿವು ಮೂಡಿಸಿದರು
ಪಟ್ಟಣ ಪುರಸಭೆ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗು ಸ್ವಚ್ಚತೆ ಜಾಗೃತಿ ಮೂಡಿಸುವ ಸಲುವಾಗಿ ಹೋಟಲ್, ಬೇಕರಿ, ಹಣ್ಣು ತರಕಾರಿ ಹಾಗು ವಾಣಿಜ್ಯ ಅಂಗಡಿಗಳಿಗೆ ದಿಡೀರ್ ಬೇಟಿ ನೀಡಿ ಮಾತನಾಡಿದರು.
ಎಂಜಿ ರಸ್ತೆಯಲ್ಲಿನ ಪುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸಿದರು. ಮುಳಬಾಗಿಲು ವೃತ್ತದಲ್ಲಿ ಕಸ ಹಾಕುವ ಸ್ಥಳದಲ್ಲಿ ರಂಗೋಲಿ ಬಿಡಿಸಿ, ಈ ಸ್ಥಳದಲ್ಲಿ ಗಲೀಜು ಹಾಕದಂತೆ ಅರಿವು ಮೂಡಿಸಿದರು. ಸ್ವಚ್ಚತೆ ಮತ್ತು ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ಅರಿವು ಮೂಡಿಸಿದರು. ಪಟ್ಟಣದ ನಾಗರೀಕರು ಪಟ್ಟಣವನ್ನ ಪ್ಲಾಸ್ಟಿಕ್ ಮುಕ್ತವಾಗಿಸಲು ಪುರಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭ 25 ಕೆಜಿ ಪ್ಲಾಸ್ಟಿಕ್ ಹಾಗು 3 ಸಾವಿರ ದಂಡ ವಿಧಿಸಲಾಯಿತು. ಪುರಸಭೆ ಪರಿಸರ ಅಬಯಂತರ ಲಕ್ಷ್ಮೀಶ, ಆರೋಗ್ಯ ನಿರೀಕ್ಷಕ ಟಿ.ವಿ.ಸುರೇಶ್, ಸಿಬ್ಬಂದಿಗಳಾದ ಸಂತೋಷ, ನಾಗೇಶ್, ಬಾಲಕೃಷ್ಣ ಇದ್ದರು.

