ಅನಧಿಕೃತ ವೈದ್ಯಕೀಯ ಕ್ಲಿನಿಕ್‌ಗಳನ್ನು ತಕ್ಷಣ ತೆರವುಗೊಳಿಸಿ – ಜಿಲ್ಲಾಧಿಕಾರಿ ಅಕ್ರಂ ಪಾಷ

ಕೋಲಾರ : ಜಿಲ್ಲೆಯಲ್ಲಿ ಅನಧಿಕೃತವಾಗಿ ಸ್ಥಾಪಿಸಲಾಗಿರುವ ವೈದ್ಯಕೀಯ ಕ್ಲಿನಿಕ್‌ಗಳನ್ನು ಹಾಗೂ ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು .

ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಪಿ.ಎಂ.ಇ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 106 ಅಕ್ರಮ ವೈದ್ಯಕೀಯ ಕ್ಲಿನಿಕ್‌ಗಳನ್ನು ಗುರುತಿಸಲಾಗಿದ್ದು , ಮುಂದಿನ 15 ದಿನಗಳೊಳಗೆ ಅನಧಿಕೃತ ಕ್ಲಿನಿಕ್‌ಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ || ಜಗದೀಶ್ ಅವರಿಗೆ ಆಗ್ರಹಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಅಕ್ರಮ ಕ್ಲಿನಿಕ್‌ಗಳು , ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳ ಬಗ್ಗೆ ವಿವರವಾದ ಮಾಹಿತಿಯನ್ನು ಡಿ.ಹೆಚ್.ಓ ಅವರಿಗೆ ಕಾಲಕಾಲಕ್ಕೆ ನೀಡಬೇಕು.

ಡಿಹೆಚ್‌ಓ ರವರು ವಿಳಂಬ ನೀತಿಯನ್ನು ಅನುಸರಿಸದೇ ಸೀಜರ್‌ಗಳೊಂದಿಗೆ ಕ್ಷಿಪ್ರ ಗತಿಯಲ್ಲಿ ರೈಡ್‌ ನಡೆಸಿ ಅನಧಿಕೃತ ಸಂಸ್ಥೆಯನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಮತ್ತು ಇಂತಹ ಪ್ರಕರಣಗಳಿಗೆ ಪೂರಕ ದಾಖಲೆಗಳ ಸಾಕ್ಷಿಯನ್ನು ಹುಡುಕದೇ ವಿಡಿಯೋ ಚಿತ್ರೀಕರಣದಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪೂರಕ ಸಾಕ್ಷಾಧಾರಗಳನ್ನು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ ಅನಧಿಕೃತ ಸಂಸ್ಥೆಗಳನ್ನು ಮುಚ್ಚುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು . ಯಾವುದೇ ಮುಲಾಜಿಗೆ ಒಳಪಡದೇ ತಮ್ಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಅನಧಿಕೃತ ಕ್ಲಿನಿಕ್‌ಗಳು ಕಂಡು ಬಂದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಮೊದಲು ವೈದ್ಯರ ಹಾಗೂ ವೈದ್ಯಕೀಯ ಸಂಸ್ಥೆಯ ಅಥವಾ ವೈದ್ಯಕೀಯ ಉಪಕರಣಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ನೋಟೀಸ್ ನೀಡತಕ್ಕದ್ದು .

ನಿಗಧಿ ಅವಧಿಯೊಳಗೆ ಪೂರಕ ದಾಖಲೆಗಳನ್ನು ಸಲ್ಲಿಸದಿರುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು . ಈ ಮೂಲಕ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು .

ಕೆ.ಪಿ.ಎಂ.ಇ ಕಾಯ್ದೆಯಡಿ ಜಿಲ್ಲಾ ಸಕ್ಷಮ ಪ್ರಾಧಿಕಾರದ ಎದುರು ಅನಧಿಕೃತ ಸಂಸ್ಥೆಗಳ ಮುಖ್ಯಸ್ಥರು ಹಾಜರಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ತಮ್ಮ ಕ್ಲಿನಿಕ್‌ಗಳನ್ನು ಸಕ್ರಮಗೊಳಿಸಿ ಕೊಳ್ಳಲು ಸರ್ಕಾರವು ಅವಕಾಶ ಕಲ್ಪಿಸಿದ್ದಾಗ್ಯೂ ಹಲವು ಸಂಸ್ಥೆಗಳು ಈವರೆಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ . ನಕಲಿ ಕ್ಲಿನಿಕ್‌ಗಳು ಹಾಗೂ ನಕಲಿ ವೈದ್ಯರ ಹಿಡಿತದಿಂದ ಜಿಲ್ಲೆಯನ್ನು ಆದಷ್ಟು ಬೇಗ ಮುಕ್ತಗೊಳಿಸುವುದು ಹಾಗೂ ಸಾರ್ವಜನಿಕರ ಜೀವಗಳ ಸಂರಕ್ಷಣೆಗಾಗಿ ಜಿಲ್ಲಾಡಳಿತವು ಸದಾ ಬದ್ಧವಾಗಿರುತ್ತದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಐ.ಎಂಎ ಅಧ್ಯಕ್ಷ ಡಾ || ನಾರಾಯಣಸ್ವಾಮಿ , ಡಾ || ವಿಜಯಕುಮಾರ್ , ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ || ನಾರಾಯಣಸ್ವಾಮಿ , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ || ಚಂದನ್ , ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ || ಪ್ರಸನ್ನ ಕುಮಾರ್ , ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

ಕಾಂಗ್ರೆಸ್ ಘಟಕದ ವತಿಯಿಂದ ಮೌನ ಪ್ರತಿಭಟನೆ : ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ

ಬಂಗಾರಪೇಟೆ: ಸನ್ಮಾನ್ಯ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯ ಮೂಲಕ ದೇಶದಾದ್ಯಂತ ಜಾತಿ, ಮತ, ಧರ್ಮ, ಪಂಥದ ಎಲ್ಲೆಯನ್ನು ಮೀರಿ ಜನರ ಭಾವನೆಗಳಿಗೆ ಸ್ಪಂದಿಸಿದ್ದಾರೆ, ಇವರ ವರ್ಚಸ್ಸನ್ನು ಕಂಡ ಬಿಜೆಪಿ “ಮೋದಿಯವರ ವಿರುದ್ಧ ಪ್ರಚೋದನಕಾರಿ ಭಾಷಣ” ಎಂಬ ದೂರನ್ನು ದಾಖಲಿಸಿ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಮೌನ ಪ್ರತಿಭಟನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋಲಾರದಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶದಲ್ಲಿ ಮಾನ್ಯ ರಾಹುಲ್ ಗಾಂಧಿಯವರು “ಮೋದಿ ರವರನ್ನು ಕುರಿತು ಪ್ರಚೋದನಕಾರಿ ಭಾಷಣ ನೀಡಿದ್ದಾರೆ “ಎಂದು ಸುಳ್ಳು ದೂರನ್ನು ದಾಖಲಿಸಿದ್ದಾರೆ, ಆದಕಾರಣ ರಾಹುಲ್ ಗಾಂಧಿಯವರ ಸಂಸತ್ ಸ್ಥಾನ ವಂಚಿತವಾಗಿದೆ, ಇದರ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಮೌನ ಪ್ರತಿಭಟನೆಯನ್ನು ನಡೆಸಲು ಮುಂದಾಗಿದೆ.

ಷಡ್ಯಂತರ ರೂಪಿಸಿದ ಬಿಜೆಪಿ:


ಸ್ವತಂತ್ರ ಪೂರ್ವದಲ್ಲಿ ಮಹಾತ್ಮ ಗಾಂಧೀಜಿರವರು ದೇಶದ ಜನರನ್ನು ಒಗ್ಗೂಡಿಸಲು ಬೃಹತ್ ಪಾದಯಾತ್ರೆಯನ್ನು ಮಾಡಿದ್ದರು, ತದನಂತರ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶದಲ್ಲಿ ಕೋಮುವಾದ, ಜಾತಿವಾದ, ಎಂಬ ದ್ವೇಷವನ್ನು ಉಂಟು ಮಾಡಿ ಸಾಮರಸ್ಯ ಕದಡಿ ದೇಶವನ್ನು ವಿಭಜಿಸಲು ಯತ್ನಿಸಿತು, ಇದನ್ನು ದೂರ ಮಾಡಬೇಕು ರಾಷ್ಟ್ರವನ್ನು ಭ್ರಾತೃತ್ವ, ಸಹಬಾಳ್ವೆಯ ಆಧಾರದ ಮೇಲೆ ಒಟ್ಟುಗೂಡಿಸಿ ಏಕತೆಯನ್ನು ಉಂಟು ಮಾಡಬೇಕು ಎಂಬ ಉದ್ದೇಶದಿಂದ ಸನ್ಮಾನ್ಯ ರಾಹುಲ್ ಗಾಂಧೀಜಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ 4000 ಕಿಲೋಮೀಟರ್ ಭಾರತ್ ಜೋಡು ಪಾದಯಾತ್ರೆಯ ಮೂಲಕ ರಾಷ್ಟ್ರವನ್ನು ಸಂಘಟಿಸಿದ್ದರು.
ಈ ಸಂದರ್ಭದಲ್ಲಿ ಜಾತಿ ಮಾತ ಧರ್ಮ ಪಂಥ ಎಲ್ಲೆಯನ್ನು ಮೀರಿ ಅದ್ಭುತ ಪೂರ್ವ ಜನಬೆಂಬಲ ದೊರೆಯಿತು, ಇವರ ಯಶಸ್ಸು ಮತ್ತು ವರ್ಚಸ್ಸನ್ನು ಸಹಿತದ ಬಿಜೆಪಿ ಅನಗತ್ಯವಾಗಿ ತನ್ನದೇ ಆಡಳಿತ ಇರುವಂತಹ ಗುಜರಾತ್ ನ್ಯಾಯಾಲಯದಲ್ಲಿ “ಪ್ರಚೋದನಕಾರಿ ಭಾಷಣ” ಎಂದು ಸುಳ್ಳು ದಾವೆ ದಾಖಲು ಮಾಡಿ ಕುತಂತ್ರ ರಾಜಕಾರಣ ನಡೆಸುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು ಲಕ್ಷಾಂತರ ಕಾರ್ಯಕರ್ತರು ರಾಹುಲ್ ಗಾಂಧಿಯವರ ಬೆನ್ನಿಗೆ ನಿಂತಿದ್ದಾರೆ. ಇಂತಹ ಯಾವುದೇ ಗೊಡ್ಡು ಬೆದರಿಕೆಗಳಿಗೆ ಬೆದರುವುದಿಲ್ಲ.

ನ್ಯಾಯಾಲಯದ ದುರುಪಯೋಗ:


ಕೋಲಾರದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ತನ್ನದೇ ಆಡಳಿತ ಇರುವಂತಹ ಗುಜರಾತಿನ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡು ದೂರು ದಾಖಲಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನ ಕೊರತೆ:
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದರೂ ಸಹ ಇಂದಿಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ, ಕೇಂದ್ರ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 610 ಭರವಸೆಗಳನ್ನು ನೀಡಿತ್ತು ಆದರೆ ಅವುಗಳಲ್ಲಿ 10% ಇಡೇರಿಸಲು ಸಾಧ್ಯವಾಗದೆ ಸಂಪೂರ್ಣವಾಗಿ ವಿಫಲವಾಗಿದೆ.

ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ:


ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಇಡೇರಿಸುತ್ತಿದೆ, ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಬೇಕಾದ ಬಿಜೆಪಿ ವಿನಾಕಾರಣ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪ್ರತಿಭಟನೆ ಮಾಡುವುದರ ಮೂಲಕ ಸದನಕ್ಕೆ ಗೌರವ ತೋರುತ್ತಿದ್ದಾರೆ, ಮತ್ತು ಕಾಲಹರಣ ಮಾಡಲು ಮುಂದಾಗಿದೆ, ಇದು ಅವರಿಗೆ ಸಾರ್ವಜನಿಕರ ಬಗ್ಗೆ ಇರುವಂತಹ ನಿರುತ್ಸಾಹ ಧೋರಣೆಯ ಪ್ರತಿಬಿಂಬವಾಗಿದೆ. ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರ್ಥಸಾರಥಿ, ಕೆ.ವಿ.ನಾಗರಾಜು, ಗೋಪಾಲಗೌಡ, ನಗರ ಘಟಕದ ಅಧ್ಯಕ್ಷ ಚಂದು, ಪುರಸಭಾ ಸದಸ್ಯರಾದ ಶಶಿ, ಶಂಸುದ್ದೀನ್ ಬಾಬು, ಸುಹೇಲ್, ಮಹದೇವ್, ಮಂಜು, ಅಣ್ಣ ದೊರೆ, ಹಾ.ನಾ.ಹರೀಶ್, ರಫೀಕ್, ಮುದಾಸಿರ್, ನವೀನಗೌಡ, ಪ್ರಶಾಂತ್, ಎಚ್.ಕೆ.ನಾರಾಯಣಸ್ವಾಮಿ, ಅಜಾಂಪಾಷ, ಆರೋಗ್ಯ ರಾಜನ್, ಜಗನ್, ಬಾಬು ಇತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ವರ್ಗಾವಣೆ ; ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ


ಉಡುಪಿ, ಜು.13: ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದೀಗ ನೂತನ ಜಿಲ್ಲಾಧಿಕಾರಿಯಾಗಿ ಡಾ|ವಿದ್ಯಾಕುಮಾರಿ ಕೆ. ಅವರನ್ನು ನಿಯೋಜಿಸಿ. ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿದ್ದಾರೆ..
ಮೂಲತಹ ಡಾ| ವಿದ್ಯಾಕುಮಾರಿ ಕೆ. ಯವರು ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿರುವ ಅವರು 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಹುದ್ದೆಯ ನಿರೀಕ್ಷೆಯಲ್ಲಿದ್ದ ಅವರನ್ನ ತಕ್ಷಣದಿಂದ ಜಾರಿಯ ಉಡುಪಿ  ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಕೆಎಎಸ್ ನಿಂದ ಐಎಎಸ್ ಗೆ 5 ವರ್ಷಗಳ ಹಿಂದೆ ಭಡ್ತಿ ಪಡೆದಿದ್ದ ವಿದ್ಯಾಕುಮಾರಿಯವರು ಉಡುಪಿಯಲ್ಲಿ ಈ ಹಿಂದೆ ಎರಡು ವರ್ಷಗ ಕಾಲ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.


ಸಮಾಜದ ಋಣ ತೀರಿಸಲು ಶ್ರೀಮಂತರಾಗಿ ಇರಬೇಕಾಗಿಲ್ಲ, ಪರೋಪಕಾರ ಮಾಡುವ ದೃಢ ಮನಸ್ಸಿದ್ದರೆ ಸಾಕು-ಅಭಿನಂದನ್ ಶೆಟ್ಟಿ

ಸಮಾಜದ ಋಣ ತೀರಿಸಲು ಶ್ರೀಮಂತರಾಗಿ ಇರಬೇಕಾಗಿಲ್ಲ, ಪರೋಪಕಾರ ಮಾಡುವ ದೃಢ ಮನಸ್ಸಿದ್ದರೆ ಸಾಕು ಎಂದು ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ರೋಟರಿ ಕುಂದಾಪುರ ದಕ್ಷಿಣದ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ತಮ್ಮ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಸಾಲು ಮರದ ತಿಮ್ಮಕ್ಕ, ಕಿತ್ತಳೆ ಹಣ್ಣು ಮಾರುವ ಹರೇಕಳ ಹಾಜಬ್ಬರ ಉದಾಹರಣೆಯನ್ನು ತಿಳಿಸುತ್ತಾ, ಅಶಕ್ತರ ಪಾಲಿಗೆ ರೋಟರಿಯಂತಹ ಸಂಸ್ಥೆಗಳು ಆಶಾಕಿರಣವಾಗಬೇಕು, ಶ್ರೀಮಂತ ಮತ್ತು ಬಡವರ ಮಧ್ಯದ ಕೊಂಡಿಯಾಗಬೇಕು ಎಂದು ಕರೆ ನೀಡಿದರು. ರೋಟರಿಯನ್ ಸುರೇಶ ಮಲ್ಯ ನೂತನ ಅಧ್ಯಕ್ಷರಾಗಿ . ನೂತನ ಕಾರ್ಯದರ್ಶಿಯಾಗಿ ರಮಾನಂದ ಕಾರಂತ ಅಧಿಕಾರ ಸ್ವೀಕರಿಸಿದರು. ವಲಯ ಒಂದರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ, ವಲಯ ಸೇನಾನಿ ಡಾ. ಉತ್ತಮ ಕುಮಾರ ಶೆಟ್ಟಿ, ಕಳೆದ ಸಾಲಿನ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

PTA Meeting at Rosa Mystica PU College Kinnikambala.

The PTA annual general meeting of Rosa Mystica PU College kinnikambala was held on 11th July 2023 at college auditorium at 2.15pm.

The Meeting began with invoking God’s blessings to through a prayer song there after students performed a rhythmic welcome which gave a energetic Start to the day.

Sr. Sadhana B.S the principal of Rosa Mystica PU College welcomed the gathering and she briefed the parents about the rules and regulations of the institution and gave a call for positive involvement in their child’s upbringing.

Sr. Leera Maria B S , Local Manager along with all other guests on the dais inaugurated the meeting by lighting the Lamp.

Ms. Shilpa Rai and Ms. Sujatha Sanilpresented the detailed and informative annual report of 2022-2023. PTA Vice president of 2022-23 Mr.Vinayak Karanth handed over the Books of accounts to the newly elected PTA Vice President Mr. Mohammed Hassan. Mr. Hassan officially took the charge of leading as vice president for academic year 2023-24. The newly appointed PTA executive committee for the academic year 2023-2024 were falicitated for their initiative and presented flower as a token of respect and gratitude.

SrLeera Maria, Local Manager addressed the gathering. She in her speech emphasized that students must learn to build patience in life and she also said Meditation and prayers will help the students to develop their personality.

Mr. Viran Veiges who is currently serving as lecturer at Alvas college Moodbidre was a resource person for the Meeting. Mr. Viran briefed the key aspects on using technology. He also highlighted that parents must be strict towards the behaviour of their Child. Parents should be time constraints. He also said in his speech that time table for each activity will help the students to reduce the stressful life.

Mr. Vinayak Karanth, Ex PTA Vice President expressed his gratitude for the opportunity received to be a part of institutional activities.

Sr Grace Monica, Correspondent of our institution in her presidential speech highlighted the moral values which are to be followed by the students and she appreciated the parents for their large number in gathering.

Vote of thanks was proposed by Ms. Bharati B S. Program was compered by Ms.DeepaAnchan by singing National anthem meeting winded up.

ಕಲ್ಯಾಣಪುರ ಮೌಂಟ್ ರೋಜರಿಯಲ್ಲಿ ವನಮಹೋತ್ಸವ

ಕಥೊಲಿಕ್ ಸಭಾ ಮೌಂಟ್ ರೋಜರಿ ಘಟಕವು ಜುಲಾಯ್ 9 ತಾರೀಕು ಬೆಳಿಗ್ಗೆ 9.30ಗೆ ಪರಿಸರ, ಸಾಮಜಿಕ ಅಭಿವ್ರದ್ದಿ ಮತ್ತು ಯುವ  ಆಯೋಗಗಳನ್ನು ಒಗ್ಗೂಡಿಸಿ ದೇವಾಲಯ ವಠಾರದಲ್ಲಿ ಫಲ ಕೊಡುವ ಮತ್ತು ಪುಷ್ಪಗಳ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಸಂಭ್ರಮಿಸಿತು. ಚರ್ಚಿನ ಧರ್ಮಗುರುಗಳು ಫಾ| ಡೊ| ರೊಕ್ ಡಿಸೋಜ, ಪಾಲನಾ ಮಂಡಳಿಯ ಉಪಾಧ್ಯಕ್ಷ ಲೂಕ್ ಡಿಸೋಜ, ರೋಜಿ ಕ್ವಾಡ್ರಸ್ ಕ. ಸಭಾ ಘಟಕ ಅಧ್ಯಕ್ಷರು, ಕಾರ್ಯದರ್ಶಿ ಜೋರ್ಜ್ ಡಿಸೋಜ ,ಕ. ಸಭಾ ಕೇಂದ್ರ ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ವಲಯ ಮಾಜಿ ಅಧ್ಯಕ್ಷ, ಕಾರ್ಯದರ್ಶಿ,  ಹಾಗೂ ಕ. ಸಭಾ ಹುದ್ದೆದಾರರು, ಆಯೋಗ ಸಂಚಾಲಕರು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.  ಹತ್ತಿರದ ಗೊರೆಟ್ಟಿ ಧರ್ಮಭಗಿನಿಯರ ಕೊನ್ವೆಂಟ್ ಪರಿಸರದಲ್ಲಿ ಸಿಸ್ಟರ್ ಸುಪೀರಿಯರ್ ಮತ್ತು ಧರ್ಮಭಗಿನಿಯರು ಮತ್ತು ನೊವಿಶಿಯೇಟ್ ಅವರೊಡಗೂಡಿ 10 ಫಲ ಪುಷ್ಪಗಳ ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಮುಂದಿನ ದಿನಗಳಲ್ಲಿ 50 ಸಸಿಗಳನ್ನು ಹಂಚುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ರೈತರ ಅಲೆದಾಟಕ್ಕೆ ಬ್ರೇಕ್-ಪಹಣಿ ತಿದ್ದುಪಡಿ, ಬಾಕಿ ಪ್ರಕರಣ ವಿಲೇವಾರಿಗೆ ಜಿಲ್ಲಾಧಿಕಾರಿಗಳ ಕಟ್ಟಪ್ಪಣೆ-ಎಡಿಸಿ,ಸರ್ವೇ ಉಪನಿರ್ದೇಶಕರು,ಎಸಿಗೆ ಉಸ್ತುವಾರಿ

ಕೋಲಾರ:- ಸರ್ಕಾರಿ ಕಚೇರಿಗಳಿಗೆ ರೈತರು ಅಲೆಯುವುದನ್ನು ತಪ್ಪಿಸಲು ಸಂಕಲ್ಪ ತೊಟ್ಟಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಇದೀಗ ಪಹಣಿ ತಿದ್ದುಪಡಿ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಕೆಲಸಗಳ ಶೀಘ್ರ ವಿಲೇವಾರಿಗೆ ಅಪರ ಡಿಸಿ,ಸರ್ವೇ ಇಲಾಖೆ ಉಪನಿರ್ದೇಶಕರು, ವಿಭಾಗಾಧಿಕಾರಿಗಳಿಗೆ ಉಸ್ತುವಾರಿ ವಹಿಸಿ ಕಡತ ವಿಲೇವಾರಿಯನ್ನು ಅಭಿಯಾನದ ರೀತಿ ನಡೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಂದಾಯ, ಸರ್ವೇ ಇಲಾಖೆಯಲ್ಲಿ ಪಹಣಿ ತಿದ್ದುಪಡಿ, ಪೈಕಿ ಆರ್‍ಟಿಸಿ ತಿದ್ದುಪಡಿಗಳಿಗಾಗಿ ರೈತರು ಅಲೆಯುವಂತಾಗಿದ್ದು, ಇದನ್ನು ಮನಗಂಡಿರುವ ಜಿಲ್ಲಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸಿ, ಬಾಕಿ ಕಡತಗಳ ವಿಲೇವಾರಿಗೆ ಕಟ್ಟಪ್ಪಣೆ ಮಾಡಿದ್ದಾರೆ ಮತ್ತು ಆಯಾ ದಿನ ವಿಲೇವಾರಿಯಾದ ಪ್ರಕರಣಗಳ ಕುರಿತು ಅದೇ ದಿನ ಪ್ರಗತಿಪರಿಶೀಲನೆ ನಡೆಸುತ್ತಿದ್ದಾರೆ.
ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಾಕಿ ಕಡತಗಳ ವಿಲೇವಾರಿಗೆ ಡಿಸಿಯವರು ಕೈಹಾಕಿರುವುದರಿಂದ ಎಲ್ಲಾ ಅಧಿಕಾರಿಗಳು,ನೌಕರರು ಖುಷಿಯಿಂದಲೇ ಡಿಸಿಯವರಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.
ಅಮೃತ ಸರೋವರ ಯೋಜನೆಯಡಿ ಕೆರೆಗಳ ಅಳತೆ, ಗಡಿ ಗುರುತಿಸುವಿಕೆ, ಮುಜರಾಯಿ ದೇವಾಲಯಗಳ ಜಾಗ,ಆಸ್ತಿಯ ಅಳತೆಗೆ ಕ್ರಮವಹಿಸುವ ಮೂಲಕ ಸರ್ಕಾರಿ ಆಸ್ತಿಗಳನ್ನು ಉಳಿಸುವ ಕಾರ್ಯಕ್ಕೂ ಕೈಹಾಕಿದ್ದು, ಯಾವುದೇ ಪ್ರಚಾರದ ಅಬ್ಬರವಿಲ್ಲದೇ ಈ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.
ಕಂದಾಯ,ಸರ್ವೇ ಇಲಾಖೆಗಳಿಗೆ ಸಂಬಂಧಿಸಿದಂತೆ ಸೂಚಿಸಿರುವ ಬಾಕಿ ಕಡತಗಳ ವಿಲೇವಾರಿ ಗಮನಿಸಲು ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಾಳ್, ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಸರ್ವೇ ಇಲಾಖೆ ಉಪನಿರ್ದೇಶಕಿ ಭಾಗ್ಯಮ್ಮ ಅವರಿಗೆ ಉಸ್ತುವಾರಿ ವಹಿಸಿದ್ದು, ಪ್ರತಿದಿನದ ಕಡತಗಳ ವಿಲೇವಾರಿ ಮಾಹಿತಿ ಪಡೆಯುವ ಮೂಲಕ ಆಡಳಿತದಲ್ಲಿ ಸಂಚಲನ ಮೂಡಿಸಿದ್ದಾರೆ.
ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಹೋಬಳಿಗಳ ಸಿಬ್ಬಂದಿಯನ್ನು ಕರೆಸಿಕೊಂಡು ಪಹಣಿ ತಿದ್ದುಪಡಿ ಸೇರಿದಂತೆ ಬಾಕಿ ಕಡತಗಳ ವಿಲೇವಾರಿಗೆ ತುರ್ತು ಕ್ರಮವಹಿಸಲು ಸೂಚಿಸಿದ್ದು,ಈ ಹಿಂದೆ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದಲ್ಲಿ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿಗೂ ಕ್ರಮವಹಿಸಿದ್ದಾರೆ.
ಭೂಮಿ ವಿಭಾಗದಲ್ಲಿ ಬಾಕಿ ಪ್ರಕರಣಗಳೂ, 53,57ರ ಅರ್ಜಿ ವಿಲೇವಾರಿ, ಸಕಾಲ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳು, ಎಸಿ ಹಾಗೂ ತಾಹಸೀಲ್ದಾರ್ ಕೋರ್ಟ್‍ಗಳ ಪ್ರಕರಣಗಳು, ರಾಷ್ಟ್ರೀಯ ಹೆದ್ದಾರಿಯ ಪೋಡಿ ಪ್ರಕರಣಗಳ ಪ್ರಗತಿ ಪರಿಶೀಲಿಸಿರುವ ಡಿಸಿಯವರು ಕಡತಗಳ ತ್ವರಿತ ವಿಲೇವಾರಿಗೆ ಕ್ರಮವಹಿಸಿದ್ದು, ಈ ಸಂಬಂಧ ಕಂದಾಯ ಇಲಾಖೆ ಆಡಳಿತಕ್ಕೆ ಚುರುಕು ನೀಡಿದ್ದಾರೆ.
ಸ್ಮಶಾನ ಭೂಮಿ ಮಂಜೂರಾತಿ, ಸರ್ಕಾರಿ ಜಾಗದ ಕರೆ,ಗೋಮಾಳ,ಸ್ಮಶಾನ ಒತ್ತುವರಿ ತೆರವುಗೊಳಿಸುವುದು ಮನೆ ಸಮೀಕ್ಷೆ ಈ ಎಲ್ಲಾ ಪ್ರಕರಣಗಳ ವಿಲೇವಾರಿಗೆ ತಹಸೀಲ್ದಾರ್‍ಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅದೇ ರೀತಿ ತಹಸೀಲ್ದಾರರು ತಮ್ಮ ಅಧೀನ ಕಚೇರಿಗಳ ಪ್ರಗತಿ ಪರಿಶೀಲನೆ ನಡೆಸಿ ಕಡತಗಳು ಬಾಕಿ ಇರದಂತೆ ಕ್ರಮವಹಿಸಲು ಸೂಚಿಸಿರುವ ಅವರು, ಜನಪರವಾಗಿ ಜನರ ಸೇವೆ ಮಾಡುವ ಬದ್ದತೆಯಿಂದ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಈ ಸಂಬಂಧ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಜನಪರ ಕೆಲಸಕ್ಕೆ ಕೈಹಾಕಿರುವ ಜಿಲ್ಲಾಧಿಕಾರಿಗಳ ನಡೆ ನಮಗೆ ಪ್ರೇರಣೆಯಾಗಿದ್ದು, ಎಲ್ಲಾ ಅಧಿಕಾರಿಗಳು,ಸರ್ಕಾರಿ ನೌಕರರು ಅವರ ಮಾರ್ಗದರ್ಶನದಲ್ಲಿ ಜನರ ಸಮಸ್ಯೆಗಳ ನಿವಾರಣೆಗೆ ಖುಷಿಯಿಂದ ಕೈಜೋಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಮುಕ್ತಿ ನೀಡುವ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿ ರೈತರು,ಸಾರ್ವಜನಿಕರ ಅಲೆದಾಟ ತಪ್ಪಿಸಲು ಜಿಲ್ಲಾಧಿಕಾರಿಗಳು ಕೈಗೊಂಡಿರುವ ಈ ಕಡತ ವಿಲೇವಾರಿ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪಿಯುಸ್ ನಗರ ಕೆಥೊಲಿಕ್ ಸಭಾದಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ

 ಕುಂದಾಪುರ, ಜು.೧೨: ಪಿಯುಸ್ ನಗರ್ ಚರ್ಚಿನ ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯು ದಿನಾಂಕ 10-7-2023 ರಂದು ಹಂಗಳೂರು ಬಡಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಶಾಲಾ ಮಕ್ಕಳ ಜೊತೆ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಪಿಯುಸ್ ನಗರ್ ಚರ್ಚಿನ ಧರ್ಮಗುರು ಹಾಗೂ ಪಿಯುಸ್ ನಗರ್ ಕೆಥೊಲಿಕ್ ಸಭಾದ  ಅಧ್ಯಾತ್ಮಿಕ ನಿರ್ದೇಶಕರಾದ ವಂ| ಆಲ್ಬರ್ಟ್ ಕ್ರಾಸ್ತಾ, ಮುಖ್ಯ ಅತಿಥಿಗಳಾಗಿ ಪಿಯುಸ್ ನಗರ್ ಕೆಥೊಲಿಕ್ ಸಭಾ ಸಂಘಟನೆಯ ಮಾರ್ಗದರ್ಶಕರಾದ ಡಾ| ಸೋನಿ ಡಿಕೋಸ್ತಾ, ಹಂಗಳೂರು ಬಡಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯೋಪಾಧ್ಯಾಯರಾದ  ಸೀತಾರಾಮ್ ಶೆಟ್ಟಿ, ಚರ್ಚಿನ ಉಪಾಧ್ಯಕ್ಷರು ಶ್ರೀ ಜೇಮ್ಸ್ ಡಿಮೆಲ್ಲೊ, ಕಾರ್ಯದರ್ಶಿ ಶ್ರೀಮತಿ ರೇಶ್ಮಾ ಡಿಸೋಜ, 20 ಆಯೋಗದ ಸಂಯೋಜಕಿ ಶ್ರೀಮತಿ ಲೀನಾ ತಾವ್ರೊ, ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯ ಅಧ್ಯಕ್ಷರಾದ ಅಲೆಕ್ಸಾಂಡರ್ ಲೂವಿಸ್, ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಡೆಸಾ ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಹಾಗೂ ಸಂಘಟನೆಯ ರಾಜಕೀಯ ಸಂಚಾಲಕರು ಶ್ರೀ ರೋಶನ್ ಬರೆಟ್ಟೊ, ಚರ್ಚಿನ ಧರ್ಮಗುರುಗಳು ಹಾಗೂ ಡಾಕ್ಟರ್ ಸೋನಿ ಡಿಕೋಸ್ತಾ  ಶಾಲಾ ಮುಖ್ಯೋಪದಾಯಕರಿಗೆ ಗಿಡವನ್ನು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿ ಪರಿಸರದ ಬಗ್ಗೆ ಮಕ್ಕಳಿಗೆ ಜಾಗ್ರತೆ ಮೂಡಿಸಿಸುವ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯಕರು ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಶಾಲಾ ಮಕ್ಕಳಿಗೆ ಗಿಡಗಳನ್ನು ನೀಡಲಾಯಿತು. ನಿಯೋಜಿತ ಅಧ್ಯಕ್ಷೆ ಶ್ರೀಮತಿ ನ್ಯಾನ್ಸಿ ವಾಜ್ ಧನ್ಯವಾದಗಳನ್ನು ಅರ್ಪಿಸಿದರು.

ಪಿಯುಸ್ ನಗರ ಕಥೊಲಿಕ್ ಸಭಾದಿಂದ ಪರಿಸರ ಸಂರಕ್ಷಣೆ ಮತ್ತು ವನಮಹೋತ್ಸವ ಕಾರ್ಯಕ್ರಮ


ಕುಂದಾಪುರ, ಜು.12: ಕಥೊಲಿಕ್ ಸಭಾ ಪಿಯುಸ್ ನಗರ ಘಟಕವು ದಿನಾಂಕ 9 ರಂದು ಚರ್ಚಿನ ವಠಾರದಲ್ಲಿ ವನಮಹೋತ್ಸವವನ್ನು ಆಚರಿಸಿತು. ಚರ್ಚಿನ ಧರ್ಮಗುರುಗಳಾದ ವಂ|ಆಲ್ಬರ್ಟ್ ಕ್ರಾಸ್ತಾ, ಗೀಡವನ್ನು ನೆಟ್ಟು ಉದ್ಘಾಟಿಸಿ ಪರಿಸರ ಮತ್ತು ವನಮಹೋತ್ಸವದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಚರ್ಚಿನ ಪಾಲನಮಂಡಳಿ ಉಪಾಧ್ಯಕ್ಷ ಜೆಮ್ಸ್ ಡಿಮೆಲ್ಲೊ, ಕಾರ್ಯದರ್ಶಿ ರೆಶ್ಮಾ ಡಿಸೋಜಾ, ಆಯೋಗಗಳ ಸಂಚಾಲಕಿ ಲೀನಾ ತಾವ್ರೊ, ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಕಥೊಲಿಕ್ ಸಭಾ ಪದಾಧಿಕಾರಿಗಳು, ಸದಸ್ಯರು ಮತು ಧರ್ಮಸಭೆಯವರು ಹಾಜರಿದ್ದರು.
ಪಿಯುಸ್ ನಗರ ಕಥೊಲಿಕ್ ಸಭಾದ ಅಧ್ಯಕ್ಷರಾದ ಆಲೆಕ್ಸಾಂಡ ಲುವಿಸ್ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಮೀಳಾ ಡೆಸಾ ನಿರೂಪಿಸಿ ವಂದಿಸಿದರು. ಪಿಯುಸ್ ನಗರ ಚರ್ಚಿನ ಪ್ರತಿಯೊಂದು ಕುಟುಂಬಕ್ಕೆ ವಿತರಿಸಲಾಯಿತು.