ಶ್ರೀನಿವಾಸಪುರ : ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನದವೂ ದೇಶಸೇವೆ : ಗುಂಜೂರು ಶ್ರೀನಿವಾಸರೆಡ್ಡಿ

ಶ್ರೀನಿವಾಸಪುರ : ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ವನ್ನು ಮಾಡುವುದರ ಮೂಲಕ ದೇಶ ಸೇವೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನರೇಂದ್ರ ಮೋದಿ ಜನ್ಮದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿ ಮಾತನಾಡಿದರು.
ಯುವಕರು ರಕ್ತದಾನವನ್ನು ಇನ್ನೂಬ್ಬರ ಜೀವವನ್ನು ಉಳಿಸಿ ನಿಟ್ಟಿನಲ್ಲಿ ರಕ್ತದಾನ ಮಾಡಿದ್ದಾರೆ. ದೇಶದ ಒಳಿತಿಗಾಗಿ ಒಂದು ದಿನವೂ ವಿಶ್ರಾಂತಿ ಪಡೆಯದೆ, ದೇಶದ ಏಳಿಗೆಗಾಗಿ ಹಗಲಿರಲು ದುಡಿಯವ ಮಹಾಚೇತನ ನರೇಂದ್ರಮೋದಿ ರವರ ಆರೋಗ್ಯವಾಗಲಿ ಇರಲಿ ಎನ್ನುವ ದೃಷ್ಟಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್‍ನ್ನು ಹಂಚಿದರು. ಮುಖಂಡ ರಾಜಶೇಖರರೆಡ್ಡಿ , ಬಂಗವಾದಿ ನಾಗರಾಜ್, ಪುರಸಭೆ ಮಾಜಿ ಸದಸ್ಯ ರಾಮಾಂಜಿ, ರಮೇಶ್, ಷೇಕ್‍ಷಫೀವುಲ್ಲಾ , ಮಂಜುನಾಥರೆಡ್ಡಿ , ಟಿ.ಎನ್.ನಾರಾಯಣಸ್ವಾಮಿ ಇದ್ದರು.