ಜಿ. ಗೋಪಾಲಕೃಷ್ಣ ಭಟ್ (ಕಾಶೀನಾಥ) ನಿಧನ

ಕುಂದಾಪುರದಲ್ಲಿ ನೆಲೆಸಿದ್ದ ಕೆನರಾ ಬ್ಯಾಂಕ್‍ನ ನಿವೃತ್ತ ಅಧಿಕಾರಿ ಜಿ. ಗೋಪಾಲಕೃಷ್ಣ ಭಟ್ (ಕಾಶೀನಾಥ 64), ಜುಲೈ 31 ರಂದು ನಿಧನರಾದರು.
ಗಂಗೊಳ್ಳಿ ಅಂಬಿಕಾ ದೇವಸ್ಥಾನದ ಪ್ರಸಿದ್ಧ ಭಟ್ ಮನೆತನದವರಾಗಿದ್ದ ಇವರು ಬ್ಯಾಂಕ್ ನೌಕರರಾಗಿ ಹಲವು ಕಡೆ ಸೇವೆ ಸಲ್ಲಿಸಿ ನಿವೃತ್ತರಾಗಿ ಕುಂದಾಪುರದ ಪೇಟೆ ವೆಂಕಟರಮಣ ದೇವಸ್ಥಾನದ ಬಳಿ ಇರುವ ಪ್ರಥಮೇಶ ರೆಸಿಡೆನ್ಸಿಯಲ್ಲಿ ಮನೆ ಮಾಡಿಕೊಂಡಿದ್ದರು.
ಇವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಕಾಶೀನಾಥ ಎಂದೇ ಕರೆಯಲ್ಪಡುವ ಇವರು ಯುವಕರಾಗಿದ್ದಾಗಿಂದ ಕ್ರಿಯಾಶೀಲ ಸಮಾಜ ಸೇವಕರಾಗಿದ್ದು, ತುರ್ತು ಪರಿಸ್ಥಿತಿ ವಿರೋಧಿಸಿ ಯುವಕರೊಂದಿಗೆ ಸತ್ಯಾಗ್ರಹ ನಡೆಸಿದ್ದು ಬಂಧನಕ್ಕೊಳಗಾಗಿದ್ದರು.