ಕುಂದಾಪುರ : ಕಾಳಾವರದಲ್ಲಿ ಕಾರು – ಲೂನಾ ಡಿಕ್ಕಿ ಲೂನಾ ಸವಾರ ಸಾವು

ಕುಂದಾಪುರ, ಜು. ೩೦:ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ಮಾರ್ಗದ ಕಾಳಾವರ ಎಂಬಲ್ಲಿ ಭಾನುವಾರ ಸಂಜೆ ಕಾರು ಮತ್ತು ಲೂನಾ ನಡುವೆ ಅಪಘಾತಾವಾಗಿ ಲೂನಾ ಸವಾರ ನರಸಿಂಹ ಶೆಟ್ಟಿ (75) ಮ್ರತ ಪಟ್ಟಿದ್ದಾರೆ.  

 ಕಾಳಾವರ ಸರಕಾರಿ  ಶಾಲೆಯ ಸಮೀಪದ ಅಡ್ಡರಸ್ತೆಯಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ನರಸಿಂಹ ಶೆಟ್ಟಿ ಮುಖ್ಯ ರಸ್ತೆಗೆ ಹಠಾತ್ ಪ್ರವೇಶಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕೋಟೇಶ್ವರದಿಂದ ಹಾಲಾಡಿ ಕಡೆಗೆ ಸಾಗುತ್ತಿದ್ದ ಬೊಲೆರೋ ಕಾರಿನ ಚಾಲಕ ಲೂನಾ ಹಠಾತ್ ಅಡ್ಡ ಬಂದಿದ್ದರಿಂದ ಅಪಘಾತ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದರಿಂದ ಕಾರು ರಸ್ತೆ ಬದಿಯ ಕಲ್ಲು ಕಂಬಕ್ಕೆ ಗುದ್ದಿದೆ. ಈ ಸಂದರ್ಭದಲ್ಲಿ ಲೂನಾ ಸವಾರ  ಗಂಭೀರ ಗಾಯಗೊಂಡಿದ್ದು, ಸವಾರ ನರಸಿಂಹ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.