ಉಡುಪಿ ಶ್ರೀಗಳಿಂದ ಅನುಗ್ರಹ ಭಾಷಣನಗರದಲ್ಲಿ 10 ಪರ್ಯಾಯ ಸಂಚಾರ

ಕೋಲಾರ:- ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ 108 ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಣವರು ತಮ್ಮ ಕಿರಿಯ ಪಟ್ಟ ಶ್ರೀ ಶ್ರೀ 108 ಶ್ರೀ ಸುಶ್ರೀಂದ್ರ ತೀರ್ಥ ಶ್ರೀ ಪಾದಂಗಳವರೊಂದಿಗೆ ಪರ್ಯಾಯ ಸಂಚಾರದ ಅಂಗವಾಗಿ ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಜು.10 ರಂದು ಸೋಮವಾರ ಸಂಜೆ 6-00 ಗಂಟೆಗೆ ಆಗಮಿಸಲಿದ್ದಾರೆ.
ಶ್ರೀಗಳವರಿಂದ ಅನುಗ್ರಹ ಭಾಷಣ ನಡೆಯಲಿದೆ. ಕೋಟಿ ಗೀತ ಲೇಖನ ಯಜ್ಞ ಅಭಿಯಾನ ಮತ್ತು ಪರ್ಯಾಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದೆ.