ಕುಂದಾಪುರ ವೈ.ಸಿ.ಎಸ್. ಸಂಘಟನೇಯ ನೂತನ ಪದಾಧಿಕಾರಿಗಳ ಪ್ರಮಾಣವಚನ

ಕುಂದಾಪುರ, ಜು.10: ಕುಂದಾಪುರ ಹೋಲಿ ರೋಜರಿ ಚರ್ಚಿನ ವೈ.ಸಿ.ಎಸ್. ಸಂಘಟನೇಯ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನೆಡೆದಿದ್ದು, ಭಾನುವಾರ ಜು.9 ರಂದು, ಹೋಲಿ ರೋಜರಿ ಚರ್ಚಿನಲ್ಲಿ ಸಂಘಟನೆ ಕ್ರತ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಿ, ಅಂದಿನ ಪ್ರಾರ್ಥನ ವಿಧಿಯನ್ನು ಸಂಘಟನಾ ಸದಸ್ಯರು ನಡೆಸಿಕೊಟ್ಟು, ಪ್ರಮಾಣವಚನವನ್ನು ಸ್ವೀಕರಿಸಿದರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಬಲಿದಾನವನ್ನು ಅರ್ಪಿಸಿ ಪ್ರಮಾಣ ವಚನ ಭೋದಿಸಿದರು. ಸಂಘಟನೇಯ ಸಚೇತಕಿ ಶೈಲಾ ಡಿಆಲ್ಮೇಡಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು

      ವೈ.ಸಿ.ಎಸ್. ಸಂಘಟನೇಯ ಅಧ್ಯಕ್ಷೆಯಾಗಿ ಶೈನಾ ಜೂಲಿಯಾ ವಾಜ್, ಉಪಾಧ್ಯಕ್ಷರಾಗಿ ಸ್ಯಾಮ್ಯುಯೆಲ್ ಕಾಲಿನ್ ಡಿ’ಮೆಲ್ಲೊ, ಕಾರ್ಯದರ್ಶಿಯಾಗಿ ಕ್ಲಾರಿಸ್ಸಾ ಸಿಕ್ವೇರ, ಸಹ ಕಾರ್ಯದರ್ಶಿಯಾಗಿ ಹೆವಿನ್ ಕೋತ್, ಯೂಕ್ಯಾಟ್ ಉಸ್ತುವಾರಿಯಾಗಿ ಜೆಸ್ಸೆಲ್ ರೂಬಿ ಕ್ರಾಸ್ಟಾ ವರದಿಗಾರ್ತಿಯಾಗಿ ಕ್ಲಾವಿಶಾ ಸಿಕ್ವೇರಾ ಖಜಾಂಚಿಯಾಗಿ, ಶೆರ್ಲಿನ್ ಗೊನ್ಸಾಲ್ವಿಸ್ ಆರಿಸಿ ಬಂದಿದ್ದಾರೆ.