ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಕ್ ಮತ್ತು ಶ್ರವಣ ಕೇಂದ್ರದಲ್ಲಿ ಅಗತ್ಯವಾದ ಅಲ್ಯೂಮಿನಿಯಂ ಪಾರ್ಟೀಶನ್ ಹಸ್ತಾಂತರ

ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಕ್ ಮತ್ತು ಶ್ರವಣ ಕೇಂದ್ರದಲ್ಲಿ ಅಗತ್ಯವಾದ ಅಲ್ಯೂಮಿನಿಯಂ ಪಾರ್ಟೀಶನ್ ಹಸ್ತಾಂತರ ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ನಡೆಸಿಕೊಟ್ಟರು. ಕುಂದಾಪುರ ರೋಟರಿ ದಕ್ಷಿಣ, ರೋಟರಿ ಜಿಲ್ಲಾ ನಿಧಿಯೊಂದಿಗೆ ಈ ಯೋಜನೆ ರೂಪಿಸಲು ಸಹಕರಿಸಿದುದಕ್ಕೆ ಅಭಿನಂದಿಸಿದರು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್,ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ರೋಟರಿ ಕುಂದಾಪುರ ದಕ್ಷಿಣದ ಸತ್ಯನಾರಾಯಣ ಪುರಾಣಿಕ ಮತ್ತು ಸಚಿನ್ ನಕ್ಕತ್ತಾಯ ಉಪಸ್ಥಿತರಿದ್ದರು.