ಸಾಯಿಬಾಬಾ ದೇವಾಲಯ;ಸಡಗರ ಸಂಭ್ರಮದಿಂದ ಗುರು ಪೂರ್ಣಿಮೆ ಆಚರಣೆ

ಶ್ರೀನಿವಾಸಪುರ:  ಸಡಗರ ಸಂಭ್ರಮದಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ಜನರು ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಸರದಿಯ ಸಾಲಿನಲ್ಲಿ ನಿಂತು ಬಾಬಾ ದರ್ಶನ ಪಡೆದರು.

  ಗುರು ಪೂರ್ಣಿಮೆ ಪ್ರಯುಕ್ತ ಶಿರಿಡಿ ಸಾಯಿಬಾಬಾ ದೇವಾಲಯ ಹಾಗೂ ಬಾಬಾ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸಂಭ್ರಮಾಚಾರಣೆಯಲ್ಲಿ ಭಾಗವಹಿಸಿದ್ದರು.

  ದೇವಾಲಯಕ್ಕೆ ಆಗಮಿಸಿದ್ದ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಮಹಿಳೆಯರು ಬಾಬಾ ಗೀತೆಗಳನ್ನು ಹಾಡಿದರು. ಬಾಬಾ ದರ್ಶನ ಪಡೆದ ಭಕ್ತರಿಗೆ ಊಟದ ವ್ಯವಸ್ಥೆ  ಮಾಡಲಾಗಿತ್ತು. ದಾನಿಗಳು ವಿಶೇಷ ಪ್ರಸಾದ ವಿತರಿಸಿದರು. ಪಟ್ಟಣದಲ್ಲಿ ಬಾಬಾ ವಿಗ್ರಹ ಮೆರವಣಿಗೆ ಏರ್ಪಡಿಸಲಾಗಿತ್ತು.  ಗುರು ಪೂರ್ಣಿಮೆ ಪ್ರಯುಕ್ತ ವಿಶೇಷ ಕಾರ್ಯಕ್ರಮ.  ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

  ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ವಿಶೇಷ ಗೌರವಾರ್ಪಣೆ ಮಾಡಿ, ಗುರುಗಳಿಂದ ಆಶೀರ್ವಾದ ಪಡೆದರು. ಪೂಜಾ ಕಾರ್ಯಕ್ರಮ ದಲ್ಲಿ. ಕೆ .ಆರ್. ಕೇದಾರ್ ನಾಥ್,ವೈ.ಆರ್. ನಾಗೇಂದ್ರಬಾಬು, ಕೆ ಎಲ್ ರಾಮನಾಥ್, ಕೆ .ಟಿ.ಅಪ್ಪಿ ,ಡಿ.ಸಿ.ಬದ್ರಿನಾಥ್, ಬಿ.ಎಸ್. ಸುರೇಶ್, ಕೆ. ಶ್ರೇಯಸ್, ಪೃಥ್ವಿ ,ಕಾರ್ತಿಕ್,ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮ ವನ್ನು  ಹರೀಶ್, ನಾಗರಾಜಯ್ಯ,ನೆರವೆರಿಸಿದರು.