ಕುಂದಾಪುರ ಚರ್ಚ್: ಇಂಟರ್‍ಲಾಕ್‍ಗಳಿಂದ ಸಜ್ಜುಗೊಳಿಸಿದ ಆವರಣದ ಆಶಿರ್ವಚನ

ಕುಂದಾಪುರ. ಎ.30: ಕುಂದಾಪುರ ಚರ್ಚಿನ ಬಲಭಾಗದಲ್ಲಿರುವ ಆವರಣಕ್ಕೆ ಇಂಟರ್‍ಲಾಕ್ ಆಳವಡಿಸುವ ಕಾಮಗಾರಿ ಸುಮಾರು ಒಂದು ತಿಂಗಳಿನಿಂದ ನಡೆಯುತ್ತ ಇದ್ದದ್ದು, ಇದೀಗ ಅದು ಪೂರ್ಣಗೊಂಡಿದ್ದು, ಇದು ಎರಡು ದ್ವಾರರಳನ್ನು ಒಳಗೊಂಡಿರುತ್ತದೆ, ಇದರ ಒಂದು ದ್ವಾರವನ್ನು ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಮತ್ತು ಕಾಮಾಗಾರಿಯ ಇಂಜಿನಿಯರ್ ವಾಲ್ಟರ್ ಡಿಸೋಜಾ ಮತ್ತೊಂದು ದ್ವಾರವನ್ನು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಮತ್ತು ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಉದ್ಘಾಟಿಸಿದರು. ಬಳಿಕ ಇಂಟರ್‍ಲಾಕ್ ಅಳವಡಿಸಿ ಸಜ್ಜುಗೊಳಿಸಿದ ಆವರಣವನ್ನು ಇಬ್ಬರೂ ಧರ್ಮಗುರುಗಳು ಆ ಪ್ರದೇಶವನ್ನು ಆಶಿರ್ವದಿಸಿ ಪ್ರಾರ್ಥನೆಯನ್ನು ನೆಡೆಸಿದರು. ಈ ಸಂದರ್ಭದಲ್ಲಿ ಪಾಲನಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಕಾಮಾಗಾರಿಯ ಸಹಾಯಕ ಆಶಿಸಿ ಡಿಸೋಜಾ, ಆರ್ಥಿಕ ಮಂಡಳಿ ಸದಸ್ಯರು, ವಾಳೆಯಗುರಿಕಾರರು, ಪಾಲನಮಂಡಳಿ ಸದಸ್ಯರು ಹಾಗೂ ಚರ್ಚಿನ ಭಕ್ತಾಧಿಗಳು ಹಾಜರಿದ್ದರು.