ಕುಂದಾಪುರ: ದಿ. ಎನ್. ಎಸ್. ಪರಮೇಶ್ವರಯ್ಯ ಪುತ್ರ ಎನ್. ಶ್ರೀಧರ ರಾವ್ ನಿಧನ


ಕುಂದಾಪುರದ ವಡೇರಹೋಬಳಿ ಗ್ರಾಮದಲ್ಲಿ ವಾಸಿಸುತ್ತಿದ್ದ ವಕೀಲರಾದ ದಿ. ಎನ್. ಎಸ್. ಪರಮೇಶ್ವರಯ್ಯ ಹಾಗೂ ಸಚ್ಚಿದೇವಿಯವರ ಪುತ್ರ 68 ವರ್ಷ ಪ್ರಾಯದ ಎನ್. ಶ್ರೀಧರ ರಾವ್ ಅವರು 02-04-2023ರಂದು ನಿಧನರಾದರು. ಇವರು ಹಿಂದೆ ವಿಜಯಾ ಬ್ಯಾಂಕ್‍ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದು, ನಿವೃತ್ತರಾಗಿದ್ದರು. ಇವರು ಭಂಡಾರ್‍ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಮೈಸೂರು ವಿಶ್ವ ವಿದ್ಯಾನಿಲಯದ ಬಾಲ್ ಬ್ಯಾಡ್ಮಿಂಟನ್ ತಂಡದಲ್ಲಿ ಆಟಗಾರನಾಗಿ ಆಯ್ಕೆಯಾಗಿದ್ದರು. ಇವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ.