ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜ್ ಸಾಂಸ್ಕ್ರತಿಕ ಸಂಘದಿಂದ ಮಂಗಳೂರಿನ ಶ್ರಾವ್ಯಾ ಕಲ್ಬಾವಿ ರಾವ್‍ ಗೆ ಪ್ರತಿಭಾ ಸಮ್ಮಾನ

ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜ್ ಕುಂದಾಪುರ ಇಲ್ಲಿನ ಸಾಂಸ್ಕøತಿಕ ಸಂಘವು ಇತ್ತೀಚಿಗೆ ಮಂಗಳೂರಿನ ಕುಮಾರಿ ಶ್ರಾವ್ಯಾ ಕಲ್ಬಾವಿ ರಾವ್‍ರವರಿಗೆ ಅವರ ಪ್ರತಿಭೆಗಾಗಿ ಸಮ್ಮಾನ ಮಾಡಿತು. ಅವಳು ಕಳೆದ ಸಾಲಿನ ದ್ವೀತಿಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನವನ್ನು ಪಡೆದಿದ್ದರು, ಅದಲ್ಲದೆ ಸಂಗೀತ, ನೃತ್ಯ, ನಾಟಕ ಮುಂತಾದವುಗಳಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿರುತ್ತಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿರುವ ಇವರು ದ.ಕ. ನಿರ್ಮಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲ್ಬಾವಿ ಹಾಗೂ ಶ್ರೀಮತಿ ವಾಣಿ ರಾಜೇಂದ್ರರವರ ಸುಪುತ್ರಿಯಾದ ಅವಳು ತಮ್ಮದೇ ಆದ ಯೂಟ್ಯೂಬ್ ಚಾನಲ್ ಕೂಡಾ ಪ್ರಾರಂಭಿಸಿರುತ್ತಾರೆ.

ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೊ. ದೊಮಾ ಚಂದ್ರಶೇಖರ್ ಎಂಐಟಿಕೆಯ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಮ್ ಉಪಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿಸೋಜಾ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರಶಾಂತ್ ಹೆಗ್ಡೆ, ಐಎಂಜೆ ಎಸ್‍ಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಪಟೇಲ್ ಹಾಗೂ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕಷ್ಣ ಹೆಗಡೆ ಹಾಗೂ ಶ್ರಾವ್ಯಾರವರ ತಂದೆ ಶ್ರೀ ರಾಜೇಂದ್ರ ಕಲ್ಬಾವಿ ಉಪಸ್ಥಿತರಿದ್ದರು.