ಮಂಗಳೂರು ಮಿಲಾಗ್ರಿಸ್: ಫೆಬ್ರವರಿ 15, ಸಂ. 6.00 ಘಂಟೆಗೆ, ನಡೆಯಲಿರುವ ಸಂತ ಆಂತೊನಿಯ ಸ್ಮರಣಿಕಾ ಹಬ್ಬಕ್ಕೆ ಅಹ್ವಾನ -ಫಾ. ಜೆ. ಬಿ. ಕ್ರಾಸ್ತ

ಮಂಗಳೂರು: ನಾಳೆ, ಫೆಬ್ರವರಿ 15 ರಂದು ಸಾಯಂಕಾಲ 6.00 ಘಂಟೆಗೆ, ಸಂತ ಆಂತೊನಿಯ ಸ್ಮರಣಿಕೆ ಹಬ್ಬದ ಮಹಾಪೂಜೆಯು ಮಿಲಾಗ್ರಿಸ್ ತೆರೆದ ಮೈದಾನಿನಲ್ಲಿ, ಅತೀ ವಂದನೀಯ ಎಲೊಶಿಯಸ್ ಪೌಲ್ ಡಿ’ಸೋಜ, ಮಂಗಳೂರು ಧರ್ಮಪ್ರಾಂತ್ಯದ, ನಿವೃತ್ತ ಧರ್ಮ ಅಧ್ಯಕ್ಷರು ನಡೆಸಿಕೊಡಲಿರುವರು. ಅಂದು ಘಂಟೆ 7.00 ಕ್ಕೆ ಇತ್ತೀಚಿಗೆ ಟರ್ಕಿ ಮತು ಸಿರಿಯಾ ದೇಶದಲ್ಲಿ ನಡೆದ ಭೀಕರ ಭೂಕಂಪಕ್ಕೆ ಸಿಲುಕಿ, ಮೃತಪಟ್ಟªರ ಆತ್ಮಕ್ಕೆ ಶಾಂತಿ ಕೋರಿ, ನಿರಾಶ್ರಿತರಾದ ಜನರಿಗೆ ನಮ್ಮ ಸಾಂತ್ವಾನದೊಂದಿಗೆ ಅನುಕಂಪ ತೋರಿಸಲು ಬೊಂಬತ್ತಿ ಬೆಳಗಿಸಿ ವಿಶೇಷ ಪ್ರಾರ್ಥನಾ ವಿಧಿಯನ್ನು ಅತೀ ವಂದನೀಯ ಎಲೋಶಿಯಸ್ ಪೌಲ್ ಡಿ’ಸೋಜರವರು ನಡೆಸಿಕೊಡುವರು ಎಂದು ಸಂತ ಆಂತೊನಿ ಆಶ್ರಮದ ನಿರ್ದೇಶರು ವಂ. ಜೆ. ಬಿ. ಕ್ರಾಸ್ತರವರು ತಿಳಿಸಿರುತ್ತಾರೆ
ವಂದನೆಗಳು: ಫಾ. ಜೆ. ಬಿ. ಕ್ರಾಸ್ತ, ನಿರ್ದೇಶಕರು