ಆದಿಪರಾಶಕ್ತಿ ದರ್ಶನಕ್ಕೆ ತೆರಳುವ ಭಕ್ತರಿಗೆ, ಕುಟ್ಂಬಕ್ಕೆ ಶಾಂತಿ, ಸಂತೋಷ ನೆಮ್ಮದಿ ಓಂ ಶಕ್ತಿ ತಾಯಿ ಶಕ್ತಿ ನೀಡಲಿ : ಜಿ.ಕೆ. ಶ್ರೀರಾಮರೆಡ್ಡಿ

ಶ್ರೀನಿವಾಸಪುರ:ಶ್ರದ್ದೆ ಭಕ್ತಿಗಳಿಂದ ಪೂಜೆ ಮಾಡುವ ಮೂಲಕ ಮೇಲ್‍ಮರವತ್ತುರ್ ಅದಿಪರಾಶಕ್ತಿಯನ್ನು ನೋಡಲು ಮತ್ತು ಹರಿಕೆ ತೀರಿಸಲು ಹೋಗುವ ಎಲ್ಲಾ ಭಕ್ತರಿಗೆ ಅವರ ಕುಟುಂಬಗಳಿಗೆ ಸುಖ, ಶಾಂತಿ, ಸಂತೋಷ ನೆಮ್ಮದಿ ಜೊತೆಗೆ ಅರ್ಥಿಕವಾಗಿ ಅಭಿವೃದ್ದಿಯಾಗಲು ಓಂ ಶಕ್ತಿ ತಾಯಿ ಶಕ್ತಿ ನೀಡಲಿ ಎಂದು ಸಮಾಜ ಸೇವಕ ಹಾಗೂ ಕಾಂಗ್ರೇಸ್ ಮುಖಂಡ ಜಿ.ಕೆ. ಶ್ರೀರಾಮರೆಡ್ಡಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದಲ್ಲಿ ಓಂ ಶಕ್ತಿ ದೇವರ ದರ್ಶನ ಪಡೆಯಲು ಬಸ್ ವ್ಯವಸ್ಥೆ ಮಾಡಿ ಮಾತನಾಡಿದ ಶ್ರೀರಾಮರೆಡ್ಡಿ ಇತ್ತೀಚಿನ ದಿನಗಳಲ್ಲಿ ಅನೇಕ ಗ್ರಾಮಗಳಿಂದ ಸಾವಿರಾರು ಜನ ಮೇಲ್ ಮರವತ್ತುರ್ ನಲ್ಲಿ ನೆಲಸಿರುವ ಓಂ ಶಕ್ತಿ ದೇವರ ದರ್ಶನಕ್ಕೆ ಸಾಕಷ್ಟು ಜನರು ಹೋಗುತ್ತಿದ್ದು, ಈ ತಾಯಿ ಅವರ ಕೋರಿಕೆಗಳನ್ನು ಈಡೇರಿಸಿ ಒಳ್ಳೆಯದು ಅಗಿದೆ ಎಂದು ಜನ ನಂಬಿದ್ದಾರೆ. ಇನ್ನಷ್ಟು ನಮ್ಮ ಗ್ರಾಮದ ಜನರಿಗೆ ಹಾಗೂ ಸುತ್ತಮುತ್ತಲಿನ ಜನತೆಗೆ ಒಳ್ಳೆಯ ಆರೋಗ್ಯ ಭಾಗ್ಯ, ಮಳೆ ಬೆಳೆ ಚನ್ನಾಗಿ ಆಗಲಿ ಎಂದ ಇವರು ಪ್ರಯಾಣ ಮಾಡುವಾಗ ಯಾತ್ರಸ್ಥಳಗಳಲ್ಲಿ ಓಡಾಡುವಾಗ ಸಾಕಷ್ಟು ಜಾಗೃತವಹಿಸಿ ಮಕ್ಕಳನ್ನು ಕರೆದ್ಯೊವಾಗ ಅವರ ಬಗ್ಗೆ ಗಮನಹರಿಸಬೇಕು ಯಾತ್ರೆ ಹೋಗುವ ಹಾದಿಯಲ್ಲಿ ಸಿಗುವ ಪ್ರವಾಸ ತಾಣಗಳನ್ನು ವಿಕ್ಷಣೆಮಾಡಿ ನಿಮ್ಮಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಈ ಸಮಯದಲ್ಲಿ ಕೇತಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಗೋಪಾಲರೆಡ್ಡಿ, ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ವಿ. ರಾಧಾಕೃಷ್ಣಾರೆಡ್ಡಿ. ಪತ್ರಕರ್ತ ಕೆ.ಎಂ. ಸೋಮಶೇಖರ್, ವಿಶ್ವನಾಥರೆಡ್ಡಿ, ಗುರುಸ್ವಾಮಿ ರಮೇಶ್, ಟೈಲರ್ ಶಂಕರಪ್ಪ, ಮನು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.