ಜೆಸಿಐ ಕುಂದಾಪುರ ಸಿಟಿಯ 2023 ನೇ ಸಾಲಿನ ಪದಪ್ರದಾನ ಸಮಾರಂಭ

ಕುಂದಾಪುರ: ವಲಯ 15 ರ ಪ್ರತಿಷ್ಠಿತ ಘಟಕ ಜೆಸಿಐ ಕುಂದಾಪುರ ಸಿಟಿಯ 2023 ನೇ ಸಾಲಿನ ಪದಪ್ರದಾನ ಸಮಾರಂಭವು ಇಲ್ಲಿನ ಸಹನ ಕನ್ವೆನ್ಷನ್ ಸುಮೇದ ಪಾರ್ಕ್ ನಲ್ಲಿ ನಡೆಯಿತು.

ಭಾರತೀಯ ರೆಡ್ ಕ್ರಾಸ್ ಕುಂದಾಪುರ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಡಾ. ಸೋನಿ ಡಿಕೋಸ್ಟ ರವರು ನೂತನ ಅಧ್ಯಕ್ಷರಾಗಿ ಪದ ಸ್ವೀಕಾರ ಮಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ 10 ಜನ ನೂತನ ಸದಸ್ಯರನ್ನು ಸೇರಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ವoದನೀಯ ಫಾದರ್ ಸ್ಟ್ಯಾನಿ ತಾವ್ರೊ, ವಲಯ 15ರ ವಲಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಕರ್ ಶೆಟ್ಟಿ, ಪೂರ್ವ ವಲಯ ಅಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷರಾದ ಅಭಿಲಾಶ್ ಬಿ ಎ, ನಿಕಟ ಪೂರ್ವ ಅಧ್ಯಕ್ಷರಾದ ವಿಜಯ ಭಂಡಾರಿ, ಪ್ರೇಮ ಡಿ ಕುನ್ಹಾ, ಲೋನಾ ಲುವಿಸ್, ಶೈಲಾ ಲುವಿಸ್, ಚಂದ್ರಿಕಾ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷರು ಗಳಾದ ಗಿರೀಶ್ ಹೆಬ್ಬಾರ್ ,ರಾಘವೇಂದ್ರ ಚರಣ ನಾವಡ ,ನಾಗೇಂದ್ರ ಪೈ, ಜಯಚಂದ್ರ ಶೆಟ್ಟಿ, ಚಂದ್ರಕಾಂತ್, ಶ್ರೀಧರ್ ಸುವರ್ಣ, ನಾಗೇಶ್ ನಾವಡ, ಪ್ರಶಾಂತ್ ಹವಲ್ದಾರ್, ಮಂಜುನಾಥ ಕಾಮತ್, ರಾಘವೇಂದ್ರ ಕುಲಾಲ್, ಕೆಕೆ ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.

ಡಾ. ಸರೋಜಾ, ಶಿಕ್ಷಕಿ ಸಹನಾ ನಾವಡ ಜಯಶೀಲಾ ಪೈ ಗಣ್ಯರನ್ನು ಪರಿಚಯಿಸಿದರು.