ಕುಂದಾಪುರ : ಅಂಜನಿ ಶ್ಯಾನುಭಾಗ್ ನಿಧನ

ಕುಂದಾಪುರದ ಹಿರಿಯ ವ್ಯವಹಾರಸ್ಥರಾದ ರತ್ನಾಕರ ಶ್ಯಾನುಭಾಗ್-ವಸಂತಿ ದಂಪತಿಯ ಪುತ್ರಿ ಅಂಜನಿ ಶ್ಯಾನುಭಾಗ್ (51) ಹೃದಯಾಘಾತದಿಂದ ನ.24ರಂದು ಮಂಗಳೂರಿನ ಸಹೋದರಿಯ ಮನೆಯಲ್ಲಿ ನಿಧನರಾದರು. ಕುಂದಾಪುರದಲ್ಲಿ ತನ್ನ ಕುಟುಂಬದ ವ್ಯವಹಾರದಲ್ಲಿ ಕ್ರಿಯಾಶೀಲತೆಯಿಂದ ದುಡಿಯುತ್ತಿದ್ದ ಇವರು ಉತ್ತಮ ಜನಸಂಪರ್ಕ ಹೊಂದಿದ್ದರು. ತಂದೆ, ತಾಯಿ ಸಹೋದರ, ಸಹೋದರಿಯನ್ನು ಇವರು ಅಗಲಿದ್ದಾರೆ.