ಆರ್.ಎನ್. ಶೆಟ್ಟಿ‌ ಪದವಿ‌ ಪೂರ್ವ ಕಾಲೇಜ್: ಚಾರ್ಟರ್ಡ್ ಎಕೌಟಂಟ್ ಚಿತ್ತೂರು ಶ್ರೀ ಗುರುರಾಜ್ ಶೆಟ್ಟಿಯವರಿಂದ ಔದ್ಯೋಗಿಕ ಅವಕಾಶಗಳ ಮಾಹಿತಿ

ಕುಂದಾಪುರದ ಆರ್.ಎನ್. ಶೆಟ್ಟಿ‌ ಪದವಿ‌ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಬಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ  ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ  ಚಾರ್ಟರ್ಡ್ ಎಕೌಟಂಟ್ ಚಿತ್ತೂರು ಶ್ರೀ ಗುರುರಾಜ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ  ಮುಂದಿನ ವ್ಯಾಸಂಗದಲ್ಲಿ ಮತ್ತು ಔದ್ಯೋಗಿಕ ವಲಯಗಳಲ್ಲಿರುವ ವಿಫುಲವಾದ ಅವಕಾಶಗಳು ಮತ್ತು ಅವುಗಳನ್ನು ಲಭಿಸಿಕೊಳ್ಳುವುದರ ವಿವಿಧ ವಿಧಾನಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ದೀಪಾ ಶೆಟ್ಟಿ ಧನ್ಯವಾದ ಸಲ್ಲಿಸಿದರು.